ಬೆಳಕಿನ ವೇಗವ ಮೀರಲು ಹೊರಟ ಪೌಲಿಯ ದೆವ್ವ!
ವಿಜ್ಞಾನ ಸಂತತವಾಗಿ ಬದಲಾಗುತ್ತಲೇ ಇರುತ್ತದೆ. ಏಕೆಂದರೆ ಇದು ಜ್ಞಾನ ಪ್ರವಾಹ. ಇಂದಿನ ಪರಿಕಲ್ಪನೆ ನಾಳೆಯ ದಿನ ತಪ್ಪು ಎಂದು ಸಾಬೀತಾಗಬಹುದು ಅಥವಾ ಅದಕ್ಕೆ ಇನ್ನಷ್ಟು ಪರಿಷ್ಕರಣೆಯ ಅವಶ್ಯಕತೆ ಬರಬಹುದು. ವಿಜ್ಞಾನ ಅದನ್ನು ಒಪ್ಪುತ್ತದೆ. ವಾಸ್ತವವಾಗಿ ಸವಾಲುಗಳು ಬಂದಾಗಲೆಲ್ಲ ವಿಜ್ಞಾನದ ಪ್ರವರ್ಧನೆಗೆ ಇನ್ನಷ್ಟು ಚಾಲನೆ ಬರುತ್ತದೆ. ಅಂಥದೊಂದು ಸವಾಲು ಬಂದಿದೆ ಎನ್ನುತ್ತಿದ್ದಾರೆ ಕೆಲವು ವಿಜ್ಞಾನಿಗಳು. ೨೦೧೧, ಸಪ್ಟೆಂಬರ್ ೧೯ರಂದು ಸೆರ್ನ್ ಸಂಶೋಧನಾಲಯದ ವಿಜ್ಞಾನಿಗಳು ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿವೆ ಎಂದು ಘೋಷಿಸಿ ಅಚ್ಚರಿಯನ್ನು ತಂದರು. ಇದು ಸಾಧ್ಯವೇ? ಈ ನ್ಯೂಟ್ರಿನೋಗಳು ಅಂದರೆ ಏನು? ಅವುಗಳ ವೈಚಿತ್ರ್ಯ ಏನು? ಸೆರ್ನ್ ಪ್ರಯೋಗ ಏನು? ಪ್ರಯೋಗ ಫಲಿತಾಂಶ ಸರಿ ಎಂದಾದರೆ ಅದು ತರಬಹುದಾದ ಪರಿಣಾಮವೇನು? .. ಹೀಗೆ ಒಂದು ರೋಚಕ ಸುದ್ದಿಯ ಬೆಂಬತ್ತಿದಾಗ ರೂಪುಗೊಂಡಿತೊಂದು ಬರಹ. ಅದರ ಸಂಕ್ಷಿಪ್ತ ರೂಪ ಸುಧಾ ಪತ್ರಿಕೆಯಲ್ಲಿ (೨೪ ನವೆಂಬರ್ ೨೦೧೧), ನಂತರ ವಿಸ್ಟ್ರುತ ವಾಗಿ ಕೆಂಡ ಸಂಪಿಗೆಯಲ್ಲಿ (http://www.kendasampige.com/article.php?id=4918) ಬೆಳಕು ಕಂಡಿತು. ದಾಖಲೆಗಾಗಿ ಇಲ್ಲಿದೆ ನನ್ನ ಮನೆಯಲ್ಲಿ. ನೀವು ಓದಿ ಪ್ರತಿಕ್ರಿಯಿಸಿ.
Read more…
ಬಂದಿದೆ ಸೂಪರ್ನೋವಾ

ನಾವಿರುವ ವಿಶ್ವ ಅದ್ಭುತ. ಈ ಅದ್ಭುತ ವಿಶ್ವವನ್ನು ಇನ್ನಷ್ಟು ಅದ್ಭುತವಾಗಿ ಡಿವಿ ಗುಂಡಪ್ಪನವರು ವರ್ಣಿಸಿದ್ದಾರೆ
ಏನು ಭೈರವ ಲೀಲೆ ಈ ವಿಶ್ವವಿಭ್ರಮಣೆ
ಏನು ಭೂತಗ್ರಾಮ ನರ್ತನೋನ್ಮಾದ
ಏನಗ್ನಿಗೋಳಗಳು ಏನಂತರಾಳಗಳು
ಏನು ವಿಸ್ಮಯ ಸೃಷ್ಟಿ – ಮಂಕುತಿಮ್ಮ
ಇಂಥ ಅದ್ಭುತ ವಿಶ್ವದ ವಿಸ್ಮಯ ಸೂಪರ್ನೋವಾ. ಈ ಕುರಿತು ಬರೆದ ಬರಹ ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿದೆ. ದಾಖಲೆಗಾಗಿ ಇಲ್ಲಿ ಇದೀಗ ನನ್ನ ತಾಣದಲ್ಲಿ ಏರಿಸಿದ್ದೇನೆ. ಕೆಂಡ ಸಂಪಿಗೆಯಲ್ಲಿ ಆ ಲೇಖನದ ಕುರಿತು ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. ಸೂಪರ್ನೋವಾ ಕುರಿತು ಲೇಖನ ಅಗತ್ಯವಿರಲ್ಲ – ಅದಕ್ಕಿಂತ ಮುಖ್ಯ – ಬೇರೆ ದೈನಂದಿನ ಸಮಸ್ಯೆಗಳಿವೆ. ಆ ಕುರಿತು ಹೇಳಬಹುದಾಗಿತ್ತು, ವಿಜ್ಞಾನದ ಕರಾಳ ಮುಖದ ಚರ್ಚೆ ಇಂದಿನ ತುರ್ತು – ಇತ್ಯಾದಿ. ನೀವು ಒಮ್ಮೆ ಅಲ್ಲಿಗೆ ಹೋಗಿ ನಿಮ್ಮ ಪ್ರತಿಕ್ರಿಯೆ ಸೇರಿಸಬಹುದು. ಅಥವಾ ಇಲ್ಲಿಯೇ ದಾಖಲಿಸಬಹುದು. ಬನ್ನಿ ಸೂಪರ್ನೋವಾದ ಕುರಿತು ಒಂದಷ್ಟು ವಿಷಯ – ವಿವರ ಹಂಚಿಕೊಳ್ಳೋಣ
ಹಾರಾಟ ನಿಲ್ಲಿಸಿದ ಸ್ಪೇಸ್ಶಟಲ್
ಮನುಷ್ಯನಿಗೆ ಭೂಮಿ ಒಂದು ತೊಟ್ಟಿಲು. ಆದರೆ ಆತ ಅಲ್ಲೇ ಉಳಿಯಲಾರ 
- ಕಾನ್ಸ್ಟಂಟಿನ್ ಟ್ಸಿಯೊಲೊವಿಸ್ಕಿ, ರಷ್ಯನ್ ಖಗೋಳವಿದ.
ಕಳೆದ ಗುರುವಾರ – ಜುಲೈ ೨೧, ಬೆಳಗ್ಗಿನ ಜಾವ ಅಮೇರಿಕದ ಫ್ಲಾರಿಡಾದಲ್ಲಿರುವ ಕೆನ್ನೆಡಿ ಅಂತರಿಕ್ಷ ಉಡ್ಡಯನ ಕೇಂದ್ರದ ಇಳಿದಾಣದಲ್ಲಿ ಇನ್ನೂರು ಅಡಿಯಷ್ಟು ಉದ್ದದ – ನೋಡುವುದಕ್ಕೆ ವಿಮಾನದಂತಿದ್ದ ಬಿಳಿಯ ಹಕ್ಕಿ – ಅಟ್ಲಾಂಟಿಸ್ ಎಂಬ ಸ್ಪೇಸ್ಶಟಲ್ – ಕಿವಿಗಿಡಿಚುವ ಸದ್ದಿನೊಂದಿಗೆ ಬಂದಿಳಿದ ಹೊತ್ತು. ನೆರೆದಿದ್ದ ನೂರಾರು ಖಗೋಳಪ್ರಿಯರಿಗೆ ಭಾವುಕ ಕ್ಷಣ. ಈ ವ್ಯೋಮ ಯೋಜನೆಯ ಅವಿಭಾಜ್ಯ ಭಾಗವಾಗಿ ಬೆಳೆದ ಮಂದಿಯಲ್ಲಿ ಎಲ್ಲ ಕಳೆದುಕೊಂಡ ನಿರಾಸೆ ಕಣ್ಣಂಚಿನ ನೀರಾಗಿ ಪ್ರಕಟವಾಗುತ್ತಿತ್ತು.
ರುದರ್ಫರ್ಡ್ ಕಂಡ ಪರಮಾಣು ಅಂತರಂಗ
ನ್ಯೂಕ್ಲಿಯಸ್ ಎನ್ನುವುದು ಪರಮಾಣುವಿನ ಕೇಂದ್ರ. ಇದರ ಆವಿಷ್ಕಾರಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮ. ಆವಿಷ್ಕಾರವಾದದ್ದು ಇಂಗ್ಲೆಂಡಿನ ಮ್ಯಾಂಚೆಸ್ಟರ್
ವಿಶ್ವವಿದ್ಯಾಲಯದ ಭೌತವಿಜ್ಞಾನ ಪ್ರಯೋಗಾಲಯದಲ್ಲಿ ನೂರು ವರ್ಷಗಳ ಹಿಂದೆ – ಅರ್ನೆಸ್ಟ್ರುದರ್ಫರ್ಡ್ ಮತ್ತು ಅವರ ಸಹವರ್ತಿಗಳು ನಡೆಸಿದ ಐತಿಹಾಸಿಕ ಪ್ರಯೋಗಗಳಿಂದ.
ಗೋ ಸಾಕಣೆಯ ತಲ್ಲಣಗಳು
ಚಿಕ್ಕವನಾಗಿದ್ದಾಗಿನಿಂದ ಇಂದಿನ ತನಕ – ಅಂದರೆ ಸುಮಾರು ನಾಲ್ಕು ದಶಕಗಳಿಂದ ಜಾನುವಾರು ಅಥವಾ ಗೋಸಾಕಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬೆಳೆದವನು. ಗೋ ಸಾಕಣೆಯಲ್ಲಿ ಆಸಕ್ತಿ ಹುಟ್ಟಲು ಕಾರಣ ನನ್ನಮ್ಮ. ಬಾಲ್ಯವನ್ನು ಮುಂಬಯಿಯಂಥ ದೊಡ್ದ ಪೇಟೆಗಳಲ್ಲಿ ಕಳೆದ ಅವಳು ಮದುವೆಯಾಗಿ ಬಂದದ್ದು ಪುತ್ತೂರಿನ ಹಳ್ಳಿ ಮನೆಗೆ. ಪೇಟೆಯ ಬೆಡಗಿ ಹಳ್ಳಿಗೆ ಎಷ್ಟು ಹೊಂದಿಕೊಂಡಳೆಂದರೆ, ಬೆಳಗ್ಗೆ – ಸಂಜೆ ಹಾಲು ಕರೆಯುವುದರಿಂದ ಹಿಡಿದು ಹಸುಗಳನ್ನು ಪ್ರೀತಿಯಿಂದ ಸಾಕುವುದು ಸಾಹಿತ್ಯ ಬರವಣಿಗೆಯಷ್ಟೇ ಅವಳಿಗೆ ಪ್ರಿಯ ಹವ್ಯಾಸವಾಗಿ ಹೋಯಿತು. ಇಂಥ ಪ್ರೀತಿಯೇ ಪ್ರಾಯಶ: ನನ್ನಲ್ಲೂ ಗೋವುಗಳ ಬಗ್ಗೆ ಒಂದಿಷ್ಟು ಆಸಕ್ತಿ ಹುಟ್ಟಿಸಲು ಕಾರಣವಾಯಿತೇನೋ. Read more…
ರಂಗು ರಂಗಿನ ಕ್ರಿಕೆಟ್
ಭಾರತಕ್ಕೆ ವಿಶ್ವಕಪ್ ಒಲಿದಿದೆ. ಕ್ರಿಕೆಟಿನ ದೇವರಿಗೆ ದೇವರು ಕಣ್ಣು ಬಿಟ್ಟಿದ್ದಾನೆ. ಈ ಹೊತ್ತು ಅಯಾಚಿತವಾಗಿ ನೆನಪಿನ ಅಲೆಗಳು ಏಳುತ್ತಿವೆ.
ಹೇಳಿ ಕೇಳಿ ನಾನೂ ಕ್ರಿಕೆಟ್ ಪ್ರಿಯ. ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚು ಅಂಟಿಕೊಂಡಿತು. ನಡೆಯುತ್ತಿದ್ದಾಗಲೆಲ್ಲ ಬಲದ ಕೈಯ ಮಣಿಗಂಟನ್ನು ತಿರುಗಿಸುತ್ತ ಹೋಗುತ್ತಿದ್ದ ನನ್ನನ್ನು ತಮಾಷೆ ಮಾಡುತ್ತಿದ್ದುದುಂಟು ಮನೆ ಮಂದಿ – “ಅಗೋ ಅಲ್ಲಿ ಚಂದ್ರಶೇಖರ್ ಬಂದ”. ಆ ಕಾಲದಲ್ಲಿ ಚಂದ್ರಶೇಖರ್ ಬಲು ದೊಡ್ಡ ಲೆಗ್ ಸ್ಪಿನ್ನರ್, ಚಾಣಕ್ಷ್ಯ ಗೂಗ್ಲೀ ಬೌಲರ್.
ಬೆಳ್ಳುಳ್ಳಿ ಮಾಹಾತ್ಮೆ !
ಈ ದಿನ ಉದಯವಾಣಿಯಲ್ಲಿ ನೇಮಿಚಂದ್ರ ತಮ್ಮ ಅಂಕಣದಲ್ಲಿ ಬರೆದಿದ್ದಾರೆ “ಬೆಳ್ಳುಳ್ಳಿ ಔಷಧಿಗಳ ಸಹಜ ಸಾಗರ” ಓದಿ ಮೆಚ್ಚಿ ಅವರಿಗೆ ಅವರಿಗೆ ಪತ್ರ ಬರೆಯುತ್ತ ನನ್ನ ಅನುಭವವನ್ನು ತಿಳಿಸಿದೆ. ಮೆಚ್ಚುವುದಕ್ಕೆ ಕಾರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಆನುವಂಶಿಕವಾಗಿ ಬಂದ ಬಳುವಳಿ ಇರಬೇಕು. ಹೊಟ್ಟೆ ಉರಿ ಅಥವಾ ಎಸಿಡಿಟಿ ನನಗಿರುವ ತೊಂದರೆ. ಸುಮಾರು ದಶಕಗಳಿಂದ ಎಸಿಡಿಟಿಯಲ್ಲಿ ನರಳತ್ತಿದ್ದೆ. ಖಾರ ಉಂಡರೆ , ಎಣ್ಣೆಯಲ್ಲಿ ಕರಿದ ಗರಿ ಗರಿ ತಿನಿಸು ತಿಂದರೆ ಸಾಕು – ಒಂದೆರಡು ದಿನಗಳಲ್ಲಿ ಶುರು – ಉರಿ- ನೋವು ಇತ್ಯಾದಿ.
ಐದಾರು ವರ್ಷಗಳ ಹಿಂದೆ ಗಂಟಲಿನ ಮೂಲಕ ಉದರದರ್ಶಕ ನಳಿಗೆ ಇಳಿಸಿ ಅಲ್ಲೇನಾದರೂ ಹೊಸ ಒಕ್ಕಲು ಆರಂಭವಾಗಿದೆಯೇ ಎಂದು ನೋಡಬೇಕೆಂದು ಹೇಳಿದಾಗ ಹೌಹಾರಿದೆ. ಸಹಜವಾಗಿಯೇ ಹೆದರಿಕೆ – ಅಗೋಚರ ಹೊಟ್ಟೆಯೊಳಗೆ ಮತ್ತೇನಾದರೂ ಗಡ್ಡೆ ಇರಬಹದೆನ್ನುವ ಗುಮಾನಿ. ಈ ನಡುವೆ ಪ್ರಾಯಕ್ಕೆ ಸಹಜವಾಗಿ ಕೊಲೆಸ್ಟೆರಾಲ್ ಇತ್ಯಾದಿ ಪರೀಕ್ಷೆ ಮಾಡಿಸಬೇಕೆಂದು ಹಲವರ ಸಲಹೆ. ಸರಿ ಬೆಳಗ್ಗೆದ್ದು “ಹಾಸಿಗೆ ಚಾ” ಏರಿಸದೇ ನಿರಾಹಾರಿಯಾಗಿ ಪುತ್ತೂರಿಗೆ ಧಾವಿಸಿ ರಕ್ತ ಪರೀಕ್ಷೆ ಮಾಡಿಸಿದಾಗ ಎಲ್ಲವೂ ಒಂದಷ್ಟು ಏರಿದ್ದನ್ನು ಸಾರಿದುವು.
ಕೊಲೆಸ್ಟೆರಾಲ್ ಅನ್ನುವುದು ನಮ್ಮ ದೇಹದಲ್ಲಿರಬೇಕಂತೆ. ಇರಬೇಕಾದಷ್ಟೇ ಇದ್ದರೆ ಚಂದ ಮಾರಾಯ್ರೇ. ಹೆಚ್ಚಾದರೆ ಗಡಿಬಿಡಿ ಶುರುವಾಗುತ್ತದಂತೆ. ಪರೀಕ್ಷೆಯಲ್ಲಿ ನಾನು ಗಳಿಸಿದ ಅಂಕಗಳು ಹೀಗಿದ್ದುವು :
- ಒಟ್ಟು ಕೊಲೆಸ್ಟೆರಾಲ್ ಅಂಕಗಳು : ೨೬೫ (ಸಜವಾಗಿ ಇರಬೇಕಾದದ್ದು ೧೫೦ – ೨೫೦ ಮಿಲಿಗ್ರಾಂ/ಡೆಸಿಲೀಟರ್)
- ಟ್ರೈಗ್ಗ್ಲಿಸರೈಡ್ : ೨೩೦ (೧೯೦ರ ತನಕ ಹೋಗಬಹುದು – ವಾಹನಕ್ಕೆ ವೇಗ ಮಿತಿ ಇದ್ದ ಹಾಗೆ)
- ಹೆಚ್ ಡಿ ಎಲ್ ಕೊಲೆಸ್ಟೆರಾಲ್ : ೫೧.೫ (ಇದು ಹಿರೋ ಅಂತೆ, ಗಂಡಸರಲ್ಲಿ ಇದರ ಸಹಜ ಪ್ರಮಾಣ ೩೫-೫೫, ಹೆಂಗಸರಲ್ಲಿ ೪೫ -೬೫)
- ಎಲ್ ಡಿ ಎಲ್ ಕೊಲೆಸ್ಟೆರಾಲ್ : ೧೪೦.೫ ( ೧೦೦ಕ್ಕಿಂತ ಕಡಿಮೆ ಇದ್ದರೆ ಉತ್ತಮ)
ಪಡೆದ ಅಂಕಗಳೊಂದಿಗೆ ನಮ್ಮ ವೈದ್ಯರ ಬಳಿಗೆ ಹೋದೆ. ಅವರು ಅಂಕ ಪಟ್ಟಿಯನ್ನು ಗಮನಿಸುತ್ತ ಹೋದಂತೆ ಇಲ್ಲಿ ನನ್ನ ರಕ್ತದೊತ್ತಡ ಏರುತ್ತಿತ್ತು – ಅಧ್ಯಾಪಕ ಮಹಾಶಯ ವಿದ್ಯಾರ್ಥಿಯ ಉತ್ತರ ಪತ್ರವನ್ನು ಗಮನಿಸಿದರೆ ಹೇಗೋ ಹಾಗೆ.
ಕೊನೆಯಲ್ಲಿ ಅವರು ಹೇಳಿದರು” ನೋಡಿ ಇಡೀ ಕೊಲೆಸ್ಟೆರಾಲುಗಳಲ್ಲಿ ಟ್ರೈಗ್ಲಿಸರೈಡ್ ಇದ್ದಾನಲ್ಲ ಇವ ವಿಲನ್. ನಮ್ಮ ರಕ್ತವನ್ನು ಕೊಂಡೊಯ್ಯುವ ಪೈಪುಗಳಲ್ಲಿ ತುಂಬಿಕೊಳ್ಳುತ್ತ ತೊಂದರೆ ಕೊಡುವ ಇವನ ಬಗ್ಗೆ ಎಚ್ಚರ ಬೇಕು ಅಂತ ನೀವು ಪಡೆದಿರುವ ಕೊಲೆಸ್ಟೆರಾಲ್ ಮಾರ್ಕುಗಳು ಹೇಳುತ್ತವೆ. ಈ ಮಾತ್ರೆ ತೆಗೆದುಕೊಳ್ಳಿ. ಯಾವುದೇ ದುಷ್ಪರಿಣಾಮ ಇಲ್ಲ”.
ನಾನು ಅಪ್ಪಟ ಸಸ್ಯಹಾರಿ. ಆಹಾರದಲ್ಲಿ ಕಟ್ಟು ನಿಟ್ಟು – ತಿಂದದ್ದು ಜೀರ್ಣ ಆಗದಿದ್ದರೆ ಕಟ್ಟುನಿಟ್ಟು ಆಗದೇ ಬೇರೇನು ಮಾಡಬೇಕು? ಹೇಳಿ ಕೇಳಿ ಕೃಷ್ಣ – ತುಸು ಬೆಣ್ಣೆ ಮತ್ತು ಮೊಸರು ಪ್ರಿಯ. ಅವೆರಡನ್ನು ಪೂರ್ಣ ಬಿಟ್ಟೆ.
ಸರಿ ಮಾತ್ರೆ ತೆಗೆದುಕೊಳ್ಳುವುದಕ್ಕೆ ಆರಂಭಿಸಿದೆ ದಿನದೊಳಗೆ ಅದು ತನ್ನ ಕೆಲಸ ಆರಂಭಿಸಿತೋ ತಿಳಿಯದು – ತಲೆ ಸುತ್ತತೊಡಗಿತು. ಮೈಕೈ ನೋವು. ಮತ್ತೆ ಓಡಿದೆ ವೈದ್ಯರ ಬಳಿಗೆ. ಆ ಮಾತ್ರೆಯನ್ನು ಮತ್ತರ್ಧ ಮಾಡಿ ತೆಗೆದುಕೊಳ್ಳುವುದಕ್ಕೆ ಸೂಚಿಸಿದರು. ಧೈರ್ಯ ಬರಲಿಲ್ಲ. ಪೂರ್ಣ ಬಿಟ್ಟೆ.
ಇದು ಮಾಹಿತಿ ಯುಗ. ಜಾಲಾಡತೊಡಗಿದೆ – ಮಾಹಿತಿ ಸಾಗರದಲ್ಲಿ – ಸಹಜ ಪರಿಹಾರಕ್ಕೆ. ಆಗ ನನಗೆ ಸಿಕ್ಕಿದ್ದು ಬೆಳ್ಳುಳ್ಳಿ. ಬಹು ಸಂಖ್ಯಾತರು ಸೂಚಿಸಿದ್ದು ಬೆಳ್ಳುಳ್ಳಿಯನ್ನು. ಎಸಿಡಿಟಿ ಮತ್ತು ಕೊಲೆಸ್ಟೆರಾಲ್ ಶೇಖರಣೆಯ ತಡೆಗೆ ಬೆಳ್ಳುಳ್ಳಿ ರಾಮ ಬಾಣವೆನ್ನುವ ಸಂಶೋಧನ ಲೇಖನಗಳು ಕೂಡ ಸಿಕ್ಕಿತು. ಇದರೊಂದಿಗೆ ಮೀನಿನೆಣ್ಣೆಯ ಮಾತ್ರೆ – cod lever tablet – ಅತ್ಯುತ್ತಮ.
ಪ್ರಯೋಗ ಆರಂಭಿಸಿದೆ. ಪ್ರತಿ ದಿನ ಬೆಳಗ್ಗೆಎದ್ದೊಡನೆ ಮೂರು ಎಸಳು ಹಸಿ ಹಸಿ ಬೆಳ್ಳುಳ್ಳಿ ಜಗಿದು ನುಂಗಿ ನೀರು ಕುಡಿದೆ!. ರಾತ್ರೆ ಒಂದು cod lever ಮಾತ್ರೆ. ಅಪ್ಪಟ ಸಸ್ಯಹಾರಿ ಮಾಂಸಹಾರಿಯಾದೆ! ಇದರೊಂದಿಗೆ ಹಸಿರು ತರಕಾರೀ ಸೇವನೆ ಹೆಚ್ಚಿಸಿದೆ.

ಬೆಳ್ಳುಳ್ಳಿ ಅದೆಂಥ ಖಾರ ಘಾಟು ಮಾರಾಯ್ರೇ. ಆದರೂ ಆ ಮಾತ್ರೆಗಿಂತ ಇದು ವಾಸಿ. ಹತ್ತಿರ ಬಿಡಿ – ಸುದೂರ ಇದ್ದವರಿಗೂ ತೊಂದರೆ. ವಾಸನೆ ಕಡಿಮೆ ಮಾಡಲು ಲವಂಗ ಸೇವನೆ. ಲವಂಗ ಕೂಡ ಎಸಿಡಿಟಿ ಹರ ತಾನೇ! ವಾರ ಕಳೆಯುವುದರೊಳಗೆ ಎಸಿಡಿಟಿಯ ತೊಂದರೆಗಳು ಕಡಿಮೆಯಾಗುತ್ತ ಬಂದ ಅನುಭವ. ತಿಂಗಳೊಳಗೆ ಮಂಗ ಮಾಯ. ದಶಕಗಳಿದ ಕಾಡುತ್ತಿದ್ದ ಹೊಟ್ಟೆ ಉರಿ-ನೋವು ಈಗ ಲವಲೇಶವೂ ಇಲ್ಲ.
ಎರಡೆರಡು ಬಾರಿ ರಕ್ತ ಪರೀಕ್ಷೆ ಮಾಡಿಸಿದೆ. ಈ ಬಾರಿ ದೊರೆತ ಅಂಕಗಳು ಹೀಗಿವೆ
- ಒಟ್ಟು ಕೊಲೆಸ್ಟೆರಾಲ್ ಅಂಕಗಳು : ೧೫೫, ಟ್ರೈಗ್ಗ್ಲಿಸರೈಡ್ : ೧೪೫, ಹೆಚ್ ಡಿ ಎಲ್ ಕೊಲೆಸ್ಟೆರಾಲ್ : ೪೫, ಎಲ್ ಡಿ ಎಲ್ ಕೊಲೆಸ್ಟೆರಾಲ್ : ೯೬
ಸ್ಪಷ್ಟವಾಗಿ ಕಡಿಮೆಯಾಗಿ ಎಲ್ಲವೂ ಇಂದು ಮಾಮೂಲಿಗೆ ಬಂದು ಸದ್ಯಕ್ಕೆ ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣನಾಗಿ ಜಗವ ಗೆದ್ದ ಖುಷಿಯಲ್ಲಿದ್ದೇನೆ.
ಈಗ ಬೆಳ್ಳುಳ್ಳಿ ಸೇವಿಸುವುದನ್ನು ಬಿಟ್ಟಿದ್ದೇನೆ – ತಪ್ಪೋ ಸರಿಯೋ ತಿಳಿಯದು. ಹೊಟ್ಟೆಯ ತಳಮಳವಾದಾಗ ಮತ್ತೆ ಸೇವಿಸಿದೊಡನೆ ಎಲ್ಲ ನಿರಾಳವಾದ ಅನುಭವ. ಎಂದೇ ಇದೆಲ್ಲವೂ ಬೆಳ್ಳುಳ್ಳಿಯ ಮಹಿಮೆ ಎಂಬ ನಂಬಿಕೆ ನನಗೆ. ಸರಿಯೇ? – ತಿಳಿಯದು.
ನಿಮ್ಮ ಅನುಭವ ಏನು?
ರಾಧಾಕೃಷ್ಣ

ಇತ್ತೀಚೆಗಿನ ಪ್ರತಿಕ್ರಿಯೆಗಳು…