Radhakrishna ಉವಾಚ!

ವಿಜ್ಞಾನ ದಿನ ರಾಮನ್ ಪರಿಣಾಮದ ಒಂದು ನೆನಪು

March 28, 2009 · 2 Comments

ಮೊನ್ನೆ ಮೊನ್ನೆ ಕಳೆಯಿತು ಫೆಬ್ರವರಿ 28, ವಿಜ್ಞಾನ ದಿನವೆಂದು ತಣ್ಣಗೆ ಆಚರಿಸಿದೆವು. ಸಿವಿ ರಾಮನ್ ಕುರಿತು ಉದಯವಾಣಿಯಲ್ಲಿ ನನ್ನ ಕಿರು ಬರಹ ಪ್ರಕಟವಾಯಿತು (ನೋಡಿ ಉದಯವಾಣಿ 27.2.2009). ಅದರ ವಿಸ್ತ್ರುತ ರೂಪ ಕೆಂಡ ಸಂಪಿಗೆಯಲ್ಲಿ ಮತ್ತು ಇನ್ನಷ್ಟು ಪರಿಷ್ಕರಿಸಿದ ಬರಹ ಇಲ್ಲಿದೆ. ರಾಮನ್ ಪರಿಣಾಮದ ಬಗ್ಗೆ ಬರೆದ ಈ ಲೇಖನ ನಿಮ್ಮ ಮೇಲೂ ಪರಿಣಾಮ ಬೀರಿತಾದರೆ ನನ್ನ ಪ್ರಯತ್ನ ಸಾರ್ಥಕ. ಓದಿ ಬರೆಯಿರಿ ನಿಮ್ಮ ಪ್ರತಿಕ್ರಿಯೆಯನ್ನು. ಕಾಯುತ್ತಿದ್ದೇನೆ ಅದಕ್ಕಾಗಿ …

1928, ಫೆಬ್ರವರಿ 28. ಕಲ್ಕತ್ತಾದ ಬೌಬಝಾರ್ ಓಣಿಯಲ್ಲಿದ್ದ “ದಿಇಂಡಿಯನ್ ಎಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್” ಸಂಸ್ಥೆಯ ಕಛೇರಿಯಲ್ಲಿ ಮುಸ್ಸಂಜೆ ಮುಸುಕುತ್ತಿತ್ತು.  ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಸಿ.ವಿ.ರಾಮನ್ (ಚಂದ್ರಶೇಖರ ವೆಂಕಟರಾಮನ್, (1888-1970) ಕರೆದಿದ್ದ  ಪತ್ರಿಕಾ ಗೋಷ್ಠಿಗಾಗಿ ವರದಿಗಾರರು ಅಲ್ಲಿ ಸೇರಿದ್ದಾರೆ. ರಾಮನ್ ಕರೆದ ಗೊಷ್ಠಿ ಅಂದ ಮೇಲೆ ಅಲ್ಲೇನೋ ವಿಶೇಷವಾದದ್ದು ಇರಲೇಬೇಕೆಂದು ಅವರಿಗೆ ಗೊತ್ತಿತ್ತು. ಆವರ ನಿರೀಕ್ಷೆ ಹುಸಿಯಾಗಲಿಲ್ಲ.

Keep reading →

→ 2 CommentsCategories: ವಿಜ್ಞಾನ ಲೇಖನಗಳು

ತಪ್ಪಾದ ನಿರ್ಣಯ

March 27, 2009 · Leave a Comment

“ನನ್ನ ಮರಣಾನಂತರ ನನ್ನ ಜೀವಮಾನದ ಎಲ್ಲ ಸಂಪತ್ತನ್ನು ಮೂಲಧನವಾಗಿಟ್ಟು ಅದರ ಬಡ್ಡಿಯಿಂದ ಭೌತ ವಿಜ್ಞಾನ, ರಸಾಯನ ವಿಜ್ಞಾನ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿ – ಈ ಐದು ಪ್ರಕಾರಗಳಲ್ಲಿ ಮಾನವ ಕಲ್ಯಾಣಕ್ಕೆ ಶ್ರಮಿಸಿದ ಶ್ರೇಷ್ಠ ಸಾಧಕರನ್ನು ಆರಿಸಿ ಅವರಿಗೆ ಪ್ರಶಸ್ತಿ ನೀಡಬೇಕು” ಇದು ಆಲ್ಫ್ರೆಡ್‌ನೊಬೆಲ್ ಬರೆದ ಉಯಿಲಿನ ಸಾರಾಂಶ. (೧೮೯೫,ನವೆಂಬರ್ ೨೭).

೧೮೯೬, ಡಿಸೆಂಬರ್ ೧೦ರಂದು ಇಟೆಲಿಯ ಸಾನ್‌ರೆಮೋ ಎಂಬಲ್ಲಿರುವ “ನೊಬೆಲ್ ವಿಲ್ಲಾ” ಎಂಬ ಭವ್ಯ ಬಂಗಲೆಯಲ್ಲಿ ನೊಬೆಲ್ ನಿಧನ ಹೊಂದಿದ. ಆದರೆ ಉಯಿಲು ಕಾರ್ಯರೂಪಕ್ಕೆ ಬರಲು ಮತ್ತೆ ನಾಲ್ಕು ವರ್ಷಗಳು ಬೇಕಾದುವು. ಸ್ವೀಡನ್ ಮತ್ತು ನಾರ್ವೇ ದೇಶದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕೇ? ಪ್ರಶಸ್ತಿಗೆ ಆರಿಸಲು ಅನುಸರಿಸಬೇಕಾದ ಮಾನದಂಡಗಳಾವುವು? ಪ್ರಶಸ್ತಿಯನ್ನು ಯಾವಾಗ ಮತ್ತು ಎಲ್ಲಿ ನೀಡಬೇಕು? ಇವೆಲ್ಲ ಚರ್ಚೆಗೆ ಬಂದ ವಿಷಯಗಳು. ಈ ನಡುವೆ ನೊಬೆಲ್ ಕುಟುಂಬದ ಕೆಲವರು ಈ ಉಯಿಲಿನ ವಿರುದ್ಧ ಕೋರ್ಟು ಮೆಟ್ಟಲೇರಿದರು. ಇಂಥ ಹಲವು ಅಡೆ ತಡೆಗಳನ್ನು ಹಿಂದಿಕ್ಕಿ ನೊಬೆಲ್ ಪ್ರಶಸ್ತಿ ನೀಡುವ ಪಧ್ಧತಿ ಇಪ್ಪತ್ತನೇ ಶತಮಾನದ ಅರುಣೋದಯದಂದು – ಅಂದರೆ ೧೯೦೧ರಿಂದ ಪ್ರಾರಂಭವಾಯಿತು.

Keep reading →

→ Leave a CommentCategories: ವಿಜ್ಞಾನ ಲೇಖನಗಳು · ವ್ಯಕ್ತಿ - ಜೀವನ

ಪೈಗಳ ದಿನ

March 27, 2009 · Leave a Comment

ಮಾರ್ಚ್ ೧೪ ಕಳೆದಿದೆ. ಕಾಲ ಯಾರಿಗೂ ಕಾಯುವುದಿಲ್ಲ. ಮಾರ್ಚ್ ೧೪ರ ವಿಶೇಷತೆಯ ಬಗ್ಗೆ ಉದಯವಾಣಿಯಲ್ಲಿ ನನ್ನ ಬರಹ ಪ್ರಕಟವಾಯಿತು. ಅದರ ವಿಸ್ತ್ರುತ ರೂಪ kendasampige.com ನಲ್ಲಿದೆ. ಎರಡನ್ನೂ ಸೇರಿಸಿದ ಬರಹ ಇದೀಗ ನನ್ನದೇ ತಾಣದಲ್ಲಿದೆ. ಆ ವಿಶೇಷ ಏನು ? ಗೊತ್ತುಂಟ ಮಾರಾಯ್ರೆ – ಅದು ನಮ್ಮ ಪೈಗಳ ದಿನ!

ನನಗೊಬ್ಬರು ಮಿಂಚಂಚೆಯ – ಅಂದರೆ ಇ-ಮೈಲ್ ಸ್ನೇಹಿತರು. ಅವರು ಉಡುಪಿಯ ರಮೇಶ ಅಡಿಗರು. ಇತ್ತೀಚೆಗೆ ಅಡಿಗರು ಎಚ್ಚರಿಸಿದರು “ಮಾರ್ಚ ೧೪ ಬರುತ್ತಿದೆ. ಪ್ರಪಂಚದ ಹಲವೆಡೆ  ಪೈ ಡೇ (ದಿನ) ಆಚರಣೆ ಮಾಡುತ್ತಿದ್ದಾರೆ.” ನಿಜ, ಈ ಆಚರಣೆ ನಮ್ಮಲ್ಲಿ ಇಲ್ಲ. ಆದರೆ ಅಮೇರಿಕ, ಆಸ್ಟ್ರೇಲಿಯಾ ಮೊದಲಾದೆಡೆ ಈ “ಪೈ ಡೇ”  ಅಂದರೆ “ಪೈ ದಿನ” ವನ್ನು ವಿಜೃಂಭಣೆಯಿಂದ ಆಚರಿಸುತ್ತಾರಂತೆ. ನಾವು ಯಾವ್ಯಾವುದೋ ದಿನವನ್ನು ಎರವಲು ಪಡೆದು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವಾಗ ಇದನ್ನೂ ಆಚರಿಸಿದರೆ ನಷ್ಟವೇನೂ ಆಗದು. ಅಷ್ಟಕ್ಕೂ ಈ  ಪೈ ಅಂದರೆ ಯಾರು?

ಅಪರಿಮೇಯ ಸಂಖ್ಯೆ

ಈ ಪೈ ಅಸಾಮಾನ್ಯ.  ಗಣಿತ ಮತ್ತು ಭೌತ ವಿಜ್ಞಾನದಲ್ಲಿ ಎಲ್ಲೆಲ್ಲಿ ವೃತ್ತ ಬರುತ್ತದೋ ಅಲ್ಲೆಲ್ಲ ಪೈ ಪ್ರತ್ಯಕ್ಷ. ಬೈಬಲ್‌ನಲ್ಲಿ ಇದರ ಕುರಿತು ಪ್ರಸ್ತಾಪವಿದೆಯಂತೆ. ಕ್ರಿಸ್ತ ಪೂರ್ವದ ದಿನಗಳ ಬೆಬಿಲೊನಿಯಾ,  ಈಜಿಪ್ಟ ಗಣಿತವಿದರಿಗೆ ಪೈಯ ಬೆಲೆ ಸರಿ ಸುಮಾರಾಗಿ ೩.೧ ಎಂದು ತಿಳಿದಿತ್ತು. ಆದರೆ ಪೈ ಎಂಬ ಮಾಯಾವಿ ಸಂಖ್ಯೆಯನ್ನು  ಶೋಧಿಸಿದವರು ಯಾರು? ಸ್ಪಷ್ಟವಾಗಿ ತಿಳಿಯದು ಯಾರಿಗೂ.

Keep reading →

→ Leave a CommentCategories: ವಿಜ್ಞಾನ ಲೇಖನಗಳು

ಭೂಮಿಯ ಚಲನೆ ಋತು ಬದಲಾವಣೆ

March 27, 2009 · 4 Comments

ತರಂಗ ಯುಗಾದಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನಕ್ಕೆ ಒಂದಷ್ಟು ಸೇರಿಸಿ ಇಲ್ಲಿರಿಸಿದ್ದೇನೆ. ಯುಗಾದಿಯ ಆಚರಣೆಯ ಹಿನ್ನೆಲೆಯ ಋತು ಬದಲಾವಣೆಯ ಬಗ್ಗೆ ನನ್ನ ಆಸಕ್ತಿ. ನಿಮಗೂ ಆಸಕ್ತಿ ಮೂಡಿಸಿದರೆ ನನ್ನ ಯುಗಾದಿ ಬೆಲ್ಲ ಸವಿಯಾಗುತ್ತದೆ!

ನೀವು www.whether.com ಎಂಬ ಅಂತರ್ಜಾಲ ನೋಡಿದ್ದೀರಾ? ಒಮ್ಮೆ  ಇಣುಕಿ ನೋಡಿ. ಪ್ರಪಂಚದ ಬೇರೆ ಬೇರೆ ದೇಶಗಳ ಸ್ಥಳಗಳ ಹವಾಮಾನ ಮಾಹಿತಿ ನಿಮ್ಮ ಕಂಪ್ಯೂಟರ್ ಪರದೆ ಮೇಲೆ ತೆರೆದುಕೊಳ್ಳುತ್ತದೆ. ಅಲ್ಲಿ ಎಲ್ಲೋ ಕೆಲವೆಡೆ ಬಿರು ಬೇಸಗೆ. ಇನ್ನೆಲ್ಲೋ ಹಿಮ ಪಾತ. ಮತ್ತೆಲ್ಲೋ ವರ್ಷಧಾರೆ. ಕೆಲವು ಪ್ರದೇಶಗಳಲ್ಲಿ ನಿರಭ್ರ ಬಾನು. ಮತ್ತೆ ಹಲವು  ಪ್ರದೇಶಗಳಲ್ಲಿ ಮೋಡ ಮುಸುಕಿದ ಬಿಗುಮಾನ. ಅಂದರೆ ಭೂ ಹವಾಮಾನ ಸ್ಥಾಯಿಯಲ್ಲ,  ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಕ್ರಿಯಾಶೀಲ ಪ್ರಕ್ರಿಯೆ.

ಹವಾಮಾನದ ಈ ವೈವಿದ್ಯತೆಗೆ ಋತುಗಳು (seasons) ಎನ್ನುತ್ತೇವೆ. ಭೂಮಿಯಲ್ಲಿ ಜೀವ ಕೋಟಿ ನಳನಳಿಸಲು ಇಂಥ ಋತು ವೈವಿದ್ಯತೆ ಅಗತ್ಯ. ನಮ್ಮ ಪೂರ್ವೀಕರು ಇಡೀ ವರ್ಷವನ್ನು ಆರು ಋತುಗಳಾಗಿ ವಿಂಗಡಿಸಿದರೆ (ವಸಂತ, ಗ್ರೀಷ್ಮ, ವರ್ಷ, ಶರದ್, ಹೇಮಂತ ಮತ್ತು ಶಿಶಿರ), ಜಾಗತಿಕವಾಗಿ ನಾಲ್ಕು ಮುಖ್ಯ ಋತು ಅಥವಾ ಕಾಲಗಳನ್ನು ಗುರುತಿಸಲಾಗುತ್ತದೆ – ಹೇಮಂತ, ಗ್ರೀಷ್ಮ (ಬೇಸಗೆ), ಶರದ್ ಮತ್ತು ಶಿಶಿರ (ಚಳಿ). ಋತುಗಳ ವೈವಿದ್ಯತೆ ಸೂರ್ಯನ ಸುತ್ತ ಭೂಮಿ ಸುತ್ತುವ ಬಗೆಯಲ್ಲಿದೆ. ಅಂದರೆ ಭೂಮಿಯ ಚಲನೆಯಲ್ಲಿದೆ.

Keep reading →

→ 4 CommentsCategories: ಖಗೋಳವಿಜ್ಞಾನ · ವಿಜ್ಞಾನ ಲೇಖನಗಳು

ಗುಳೇ ಹೊರಟ ಬಿಸಿಸಿಐ – ಮಾನ ಹರಾಜಿಗೆ

March 27, 2009 · 1 Comment

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೇಟ್  ಪಂದ್ಯಾಟ ನೂರಕ್ಕೆ ನೂರು ನಮ್ಮ ದೇಶದ ಉಸಾಬಾರಿ.  ಕಳೆದ ಬಾರಿ ಇದು ದೇಶದ ಉದ್ದಗಲಕ್ಕೆ ನಡೆದು ಅತ್ಯಂತ ಯಶಸ್ವಿಯಾಗಿ. ಹಣದ ಕೊಳ್ಳೆಯೇ ಹೊಡೆದುಕೊಂಡಿತು. ಆಟಗಾರರೆಲ್ಲರನ್ನು ಹರಾಜಿಗಿಡುವ ಹೊಸ ಬಗೆ ಆರಂಭವಾದದ್ದು ಎಲ್ಲರಿಗೂ ತಿಳಿದಿದೆ.

ಟೆಸ್ಟ್ ಕ್ರಿಕೇಟ್ ಮತ್ತು ಸೀಮಿತ ಓವರುಗಳ ಕ್ರಿಕೇಟಿನ ಹೊಸ ಅವತಾರವಾಗಿ ಉದಯಿಸಿದ ಈ ಇಪ್ಪತ್ತು ಓವರುಗಳ ಹೊಡಿ-ಬಡಿ ಹೋರಾಟದ ಕ್ರಿಕೇಟ್  ರೋಚಕವಾಗಿರುತ್ತವೆ  ಎನ್ನುವುದಕ್ಕೆ ಕಳೆದ ಬಾರಿಯ ಹಲವು ಪಂದ್ಯಗಳು ಸಾಕ್ಷಿಯಾದುವು. ಹಣದ ಬಲದ ಮಾಲಿಕತ್ವ,ಈಗಾಗಲೇ ಕ್ರಿಕೇಟಿನಲ್ಲಿ ಸ್ವಾಮ್ಯವನ್ನು ಸ್ಥಾಪಿಸಿದಂಥ ಅತಿರಥರು ಇರುವ ತಂಡ ಈ ಹೊಸ ಅವತರಣಿಕೆಯ ಕ್ರಿಕೇಟಿನಲ್ಲಿ ಗೆಲ್ಲಲೇಬೇಕೆನ್ನುವ ಖಾತರಿಯೇನೂ ಇಲ್ಲ – ಎನ್ನುವುದು ಪಂದ್ಯಗಳು ಸಾಗಿದಂತೇ ಸಾಬೀತಾಗುತ್ತ ಹೋದುವು.  ಇಂಥ ಇನ್ನಿಲ್ಲದಂಥ  ಅನಿಶ್ಚಿತತೆಯೇ ಪಂದ್ಯಾಟದ ಯಶಸ್ಸಿಗೆ ಕಾರಣವಾಯಿತು ಪ್ರಾಯಶ:!

ಇದರೊಡನೆ ಮದಿರೆ ಮತ್ತು ಮಾನಿನಿಯರ ಹುಚ್ಚು ಹಾರಾಟಗಳು ಕೂಡ ನಡೆದುವು.  ಅದರೊಡನೆ ತಳಕು ಹಾಕಿಕೊಂಡ ಜಾಹೀರಾತುಗಳ ಇನ್ನಿಲ್ಲದ ಭರಾಟೆ.    ಇವೆಲ್ಲ  – ಬೇಕೋ, ಬೇಡವೋ ಎನ್ನುವ ಆಯ್ಕೆ ನಮ್ಮ ನಿಮ್ಮದಲ್ಲ – ಅದೆಲ್ಲ ಈಗ ಬಿಸಿಸಿಐದ್ದು. ಅದು ಹೇಳುತ್ತದೆ ಪ್ರೇಕ್ಷಕರಿಗೆ ಇದು ಬೇಕೆಂದು – ಎಷ್ಟೋ ಬಾರಿ ಒಂದು ಪತ್ರಿಕೆ ಓದುಗರಿಗೆ ಇದುವೇ ಬೇಕೆಂದು ನಿರ್ಧರಿಸುವಂತೆ.

Keep reading →

→ 1 CommentCategories: ಸ್ವಗತಗಳು