<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	xmlns:georss="http://www.georss.org/georss" xmlns:geo="http://www.w3.org/2003/01/geo/wgs84_pos#" xmlns:media="http://search.yahoo.com/mrss/"
	>

<channel>
	<title>Radhakrishna ಉವಾಚ!</title>
	<atom:link href="http://apkrishna.wordpress.com/feed/" rel="self" type="application/rss+xml" />
	<link>http://apkrishna.wordpress.com</link>
	<description>ವಿಜ್ಞಾನ ಅಧ್ಯಾಪನ ಸಾಹಿತ್ಯ ಅಧ್ಯಯನ</description>
	<lastBuildDate>Thu, 01 Dec 2011 15:17:44 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.com/</generator>
<cloud domain='apkrishna.wordpress.com' port='80' path='/?rsscloud=notify' registerProcedure='' protocol='http-post' />
<image>
		<url>http://0.gravatar.com/blavatar/4b45841fc35ef324dee104992cec0cae?s=96&#038;d=http%3A%2F%2Fs2.wp.com%2Fi%2Fbuttonw-com.png</url>
		<title>Radhakrishna ಉವಾಚ!</title>
		<link>http://apkrishna.wordpress.com</link>
	</image>
	<atom:link rel="search" type="application/opensearchdescription+xml" href="http://apkrishna.wordpress.com/osd.xml" title="Radhakrishna ಉವಾಚ!" />
	<atom:link rel='hub' href='http://apkrishna.wordpress.com/?pushpress=hub'/>
		<item>
		<title>ಬೆಳಕಿನ ವೇಗವ ಮೀರಲು ಹೊರಟ ಪೌಲಿಯ ದೆವ್ವ!</title>
		<link>http://apkrishna.wordpress.com/2011/12/01/%e0%b2%ac%e0%b3%86%e0%b2%b3%e0%b2%95%e0%b2%bf%e0%b2%a8-%e0%b2%b5%e0%b3%87%e0%b2%97%e0%b2%b5-%e0%b2%ae%e0%b3%80%e0%b2%b0%e0%b2%b2%e0%b3%81-%e0%b2%b9%e0%b3%8a%e0%b2%b0%e0%b2%9f-%e0%b2%aa%e0%b3%8c/</link>
		<comments>http://apkrishna.wordpress.com/2011/12/01/%e0%b2%ac%e0%b3%86%e0%b2%b3%e0%b2%95%e0%b2%bf%e0%b2%a8-%e0%b2%b5%e0%b3%87%e0%b2%97%e0%b2%b5-%e0%b2%ae%e0%b3%80%e0%b2%b0%e0%b2%b2%e0%b3%81-%e0%b2%b9%e0%b3%8a%e0%b2%b0%e0%b2%9f-%e0%b2%aa%e0%b3%8c/#comments</comments>
		<pubDate>Thu, 01 Dec 2011 15:16:07 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=600</guid>
		<description><![CDATA[ವಿಜ್ಞಾನ ಸಂತತವಾಗಿ ಬದಲಾಗುತ್ತಲೇ ಇರುತ್ತದೆ. ಏಕೆಂದರೆ ಇದು ಜ್ಞಾನ ಪ್ರವಾಹ. ಇಂದಿನ ಪರಿಕಲ್ಪನೆ ನಾಳೆಯ ದಿನ ತಪ್ಪು ಎಂದು ಸಾಬೀತಾಗಬಹುದು ಅಥವಾ ಅದಕ್ಕೆ ಇನ್ನಷ್ಟು ಪರಿಷ್ಕರಣೆಯ ಅವಶ್ಯಕತೆ ಬರಬಹುದು. ವಿಜ್ಞಾನ ಅದನ್ನು ಒಪ್ಪುತ್ತದೆ. ವಾಸ್ತವವಾಗಿ ಸವಾಲುಗಳು ಬಂದಾಗಲೆಲ್ಲ ವಿಜ್ಞಾನದ ಪ್ರವರ್ಧನೆಗೆ ಇನ್ನಷ್ಟು ಚಾಲನೆ ಬರುತ್ತದೆ. ಅಂಥದೊಂದು ಸವಾಲು ಬಂದಿದೆ ಎನ್ನುತ್ತಿದ್ದಾರೆ ಕೆಲವು ವಿಜ್ಞಾನಿಗಳು. ೨೦೧೧, ಸಪ್ಟೆಂಬರ್ ೧೯ರಂದು ಸೆರ್ನ್ ಸಂಶೋಧನಾಲಯದ ವಿಜ್ಞಾನಿಗಳು ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿವೆ ಎಂದು ಘೋಷಿಸಿ ಅಚ್ಚರಿಯನ್ನು ತಂದರು. [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=600&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p style="text-align:left;">ವಿಜ್ಞಾನ ಸಂತತವಾಗಿ ಬದಲಾಗುತ್ತಲೇ ಇರುತ್ತದೆ. ಏಕೆಂದರೆ ಇದು ಜ್ಞಾನ ಪ್ರವಾಹ. ಇಂದಿನ ಪರಿಕಲ್ಪನೆ ನಾಳೆಯ ದಿನ ತಪ್ಪು ಎಂದು ಸಾಬೀತಾಗಬಹುದು ಅಥವಾ ಅದಕ್ಕೆ ಇನ್ನಷ್ಟು ಪರಿಷ್ಕರಣೆಯ ಅವಶ್ಯಕತೆ ಬರಬಹುದು. ವಿಜ್ಞಾನ ಅದನ್ನು ಒಪ್ಪುತ್ತದೆ. ವಾಸ್ತವವಾಗಿ ಸವಾಲುಗಳು ಬಂದಾಗಲೆಲ್ಲ ವಿಜ್ಞಾನದ ಪ್ರವರ್ಧನೆಗೆ ಇನ್ನಷ್ಟು ಚಾಲನೆ ಬರುತ್ತದೆ. ಅಂಥದೊಂದು ಸವಾಲು ಬಂದಿದೆ ಎನ್ನುತ್ತಿದ್ದಾರೆ ಕೆಲವು ವಿಜ್ಞಾನಿಗಳು. ೨೦೧೧, ಸಪ್ಟೆಂಬರ್ ೧೯ರಂದು ಸೆರ್ನ್ ಸಂಶೋಧನಾಲಯದ ವಿಜ್ಞಾನಿಗಳು ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿವೆ ಎಂದು ಘೋಷಿಸಿ ಅಚ್ಚರಿಯನ್ನು ತಂದರು. ಇದು ಸಾಧ್ಯವೇ? ಈ ನ್ಯೂಟ್ರಿನೋಗಳು ಅಂದರೆ ಏನು? ಅವುಗಳ ವೈಚಿತ್ರ್ಯ ಏನು? ಸೆರ್ನ್ ಪ್ರಯೋಗ ಏನು? ಪ್ರಯೋಗ ಫಲಿತಾಂಶ ಸರಿ ಎಂದಾದರೆ ಅದು ತರಬಹುದಾದ ಪರಿಣಾಮವೇನು? .. ಹೀಗೆ ಒಂದು ರೋಚಕ ಸುದ್ದಿಯ ಬೆಂಬತ್ತಿದಾಗ ರೂಪುಗೊಂಡಿತೊಂದು ಬರಹ. ಅದರ ಸಂಕ್ಷಿಪ್ತ ರೂಪ ಸುಧಾ ಪತ್ರಿಕೆಯಲ್ಲಿ  (೨೪ ನವೆಂಬರ್ ೨೦೧೧), ನಂತರ ವಿಸ್ಟ್ರುತ ವಾಗಿ ಕೆಂಡ ಸಂಪಿಗೆಯಲ್ಲಿ  (<a href="http://www.kendasampige.com/article.php?id=4918">http://www.kendasampige.com/article.php?id=4918</a>) ಬೆಳಕು ಕಂಡಿತು. ದಾಖಲೆಗಾಗಿ ಇಲ್ಲಿದೆ ನನ್ನ ಮನೆಯಲ್ಲಿ.  ನೀವು ಓದಿ ಪ್ರತಿಕ್ರಿಯಿಸಿ. <a href="http://apkrishna.files.wordpress.com/2011/12/cosmic-rays.jpg"><img class=" wp-image-601 alignleft" title="cosmic-rays" src="http://apkrishna.files.wordpress.com/2011/12/cosmic-rays.jpg?w=232&#038;h=232" alt="" width="232" height="232" /></a><span id="more-600"></span></p>
<blockquote>
<p style="text-align:left;">&#8220;ಸಿದ್ಧಾಂತ ಮತ್ತು ಪ್ರಯೋಗಗಗಳೆಂಬ ಎರಡು ಪಾದಗಳಿಂದ ವಿಜ್ಞಾನ ಪ್ರವರ್ಧಿಸುತ್ತದೆ. ಒಮ್ಮೆ ಒಂದು ಪಾದವನ್ನು ಮುಂದಿಟ್ಟರೆ, ಇನ್ನೊಮ್ಮೆ ಮತ್ತೊಂದು ಪಾದವನ್ನು ಮುಂದಿಡುತ್ತದೆ. ಆದರೆ ವಿಜ್ಞಾನದ ಅಭಿವರ್ಧನೆಯಾಗುವುದು ಎರಡು ಪಾದಗಳನ್ನು ಬಳಸುವಲ್ಲಿ ಹೊಂದಾಣಿಕೆ ಇದ್ದಾಗ &#8211; ಸೈಧ್ಧಾಂತಿಕವಾಗಿ ಊಹಿಸಿದ್ದನ್ನು ಪ್ರಾಯೋಗಿಕವಾಗಿ ಪರೀಕ್ಷಿಸುವುದರಿಂದ ಅಥವಾ ಪ್ರಯೋಗ ಫಲಿತಾಂಶಗಳಿಗೆ ನೂತನ ಸೈಧ್ಧಾಂತಿಕ ನೆಲೆಗಟ್ಟನ್ನು ನಿರ್ಮಿಸುವ ಮೂಲಕ ಸೈದ್ಧಾಂತಿಕ ಪಾದವನ್ನು ಮತ್ತಷ್ಟು ಮುಂದಕ್ಕೆ ಇಡುವುದರಿಂದ&#8221; ಹೀಗೆ ಹೇಳಿದವರು ಅಮೇರಿಕದ ನೊಬೆಲ್ ವಿಜ್ಞಾನಿ ರಾಬರ್ಟ್ ಆಂಡ್ರೂಸ್ ಮಿಲಿಕನ್ (೧೮೬೮-೧೯೫೩).</p>
</blockquote>
<p style="text-align:left;">ಈ ಹೇಳಿಕೆಯನ್ನು ಸಮರ್ಥಿಸುವ ಅವೆಷ್ಟೋ ನಿದರ್ಶನಗಳು ವಿಜ್ಞಾನ ಇತಿಹಾಸದಲ್ಲಿವೆ. ಅವುಗಳ ಸಾಲಿಗೆ ತೀರ ಇತ್ತೀಚೆಗೆ ಸೇರ್ಪಡೆಯಾದದ್ದು -   ನ್ಯೂಟ್ರಿನೊ ಎಂಬ ಕಣಗಳು ಬೆಳಕಿನ ವೇಗವನ್ನೂ ಮೀರಿ ಧಾವಿಸುತ್ತಿವೆ ಎಂಬ ಪ್ರಯೋಗ ಫಲಿತಾಂಶವನ್ನು ಮೊನ್ನೆ ಸಫ್ಟೆಂಬರ್ ೧೯ ರಂದು ಸೆರ್ನ್ (CERN) ಸಂಶೋಧನಾಲಯದ ವಿಜ್ಞಾನಿಗಳು ಪ್ರಕಟಿಸಿದಾಗ.</p>
<p style="text-align:left;">ಸೆರ್ನ್ ಇರುವುದು ಸ್ವಿಝರ್ಲೆಂಡಿನಲ್ಲಿ.  ನ್ಯೂಕ್ಲಿಯರ್ ಮತ್ತು ಕಣ ಭೌತ ವಿಜ್ಞಾನದಲ್ಲಿ ಇದು ಮುಂಚೂಣಿಯ ಸಂಶೋಧನ ಕೇಂದ್ರ. ಯುರೋಪಿನ ಹಲವು ರಾಷ್ಟ್ರಗಳು ಕೈಜೋಡಿಸಿ ಸ್ಥಾಪನೆಗೊಂಡ ಕೇಂದ್ರದಲ್ಲಿ ಬೃಹತ್ ಕಣವೇಗವರ್ಧಕಗಳು (particle accelerator) ಇವೆ. ಲಾರ್ಜ್ ಹಡ್ರಾನ್ ಕೊಲೈಡರ್ (LHC) ಎಂಬ ದೈತ್ಯ ಉಪಕರಣದಿಂದ ವಿಶ್ವ ಸೃಷ್ಟಿಯ ದಿನಗಳ ಅನಾವರಣದ ಪ್ರಯತ್ನಗಳು ನಡೆಯುತ್ತಿವೆ.  <a href="http://apkrishna.files.wordpress.com/2011/12/lhc-cern-over.jpg"><img class="alignright size-medium wp-image-602" title="lhc-cern-over" src="http://apkrishna.files.wordpress.com/2011/12/lhc-cern-over.jpg?w=300&#038;h=300" alt="" width="300" height="300" /></a></p>
<p style="text-align:left;">ಇಂಥ ಅಗ್ರಮಾನ್ಯ ಸಂಶೋಧನ ಕೇಂದ್ರದ  ವಿಜ್ಞಾನಿಗಳ ಗಡಣವು  ನ್ಯೂಟ್ರಿನೊಗಳು ಬೆಳಕಿನ ವೇಗವನ್ನೂ ಮೀರಿ ಧಾವಿಸುತ್ತಿರುವುದನ್ನು ಗಮನಿಸಿದ್ದೇವೆ ಎಂಬ ಹೇಳಿಕೆ ಇತ್ತಾಗ ವಿಜ್ಞಾನ ಪ್ರಪಂಚದಲ್ಲೊಂದು ಅಭೂತಪೂರ್ವ ಸಂಚಲನ ಹುಟ್ಟಿತು. ಅಲ್ಲ, ನ್ಯೂಟ್ರಿನೊ ಎಂಬ ಸೂಕ್ಷ್ಮದಲ್ಲಿ ಅತಿ ಸೂಕ್ಷ್ಮ ಕಣಗಳು ಬೆಳಕಿನ ವೇಗವನ್ನೂ ಮೀರಿ ಚಲಿಸಿದರೇನಾಯಿತು? ಚಲಿಸಬಾರದೇಕೆ? ರೋಚಕತೆ ಇರುವುದೇ ಇಲ್ಲಿ.</p>
<p style="text-align:left;">ಇಪ್ಪತ್ತನೇ ಶತಮಾನದ ಮೊದಲ ದಶಕ. ೧೯೦೫.  ಜರ್ಮನಿಯ ಭೌತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ (೧೮೭೯-೧೯೫೫) ಅನೆಲಿನ್ ಡರ್‌ಫಿಸಿಕ್ (Annalen der Physik  ) ಎಂಬ ಪ್ರತಿಷ್ಟಿತ ಸಂಶೋಧನ ಪತ್ರಿಕೆಯಲ್ಲಿ ಮೂವತ್ತು ಪುಟಗಳ ತನ್ನ ವಿಶೇಷಸಾಪೇಕ್ಷತಾ ಸಿದ್ಧಾಂತವನ್ನು (Special Theory of Relativity) ಪ್ರಕಟಿಸುವ ಮೂಲಕ ಬೆಳಕಿನ ವೇಗಕ್ಕೆ ದಿವ್ಯತ್ವವನ್ನು ನೀಡಿದರು. ಸಾಪೇಕ್ಷತಾ ಸಿದ್ಧಾಂತ ಹೇಳುವಂತೆ ಬೆಳಕಿನ ವೇಗ ನಿರಪೇಕ್ಷವಾದದ್ದು. ಉಳಿದೆಲ್ಲವೂ ಸಾಪೇಕ್ಷ. ವೆಳಕಿನ ವೇಗ ಆಕರ ಅಥವಾ ವೀಕ್ಷಕನ ನೆಲೆಯನ್ನು  ಅವಲಂಬಿಸಿಲ್ಲ. ನಿರ್ವಾತದಲ್ಲಿ ಬೆಳಕಿನದು  ಗರಿಷ್ಠ ವೇಗ. ಸೆಕುಂಡಿಗೆ ೨೯೯,೭೯೨,೪೫೮ ಮೀಟರ್  ವೇಗದಲ್ಲಿ ಬೆಳಕಿನ ಕಿರಣ ಧಾವಿಸುತ್ತದೆ. ಯಾವುದೇ ಕಣವಿರಲಿ, ವಿಕಿರಣವಿರಲಿ -  ಈ ವೇಗವನ್ನು ಮೀರಲಾರದು. ಒಂದು ರೀತಿಯಲ್ಲಿ ಇದು ವೇಗಕ್ಕೆ ಸಂಬಂಧಿಸಿದ ಹಾಗೆ ನಿಸರ್ಗದ ಲಕ್ಷ್ಮಣ ರೇಖೆ!</p>
<p style="text-align:left;"><a href="http://apkrishna.files.wordpress.com/2011/12/albert-einstein-self-improvement.jpg"><img class="alignright size-medium wp-image-603" title="albert einstein self improvement" src="http://apkrishna.files.wordpress.com/2011/12/albert-einstein-self-improvement.jpg?w=300&#038;h=178" alt="" width="300" height="178" /></a></p>
<p style="text-align:left;">ಬೆಳಕಿನ ವೇಗದಲ್ಲಿ ವಸ್ತು ಚಲಿಸುವಾಗ ವಸ್ತುವಿನ ಆಯಾಮ ಚಲನ ದಿಶೆಯಲ್ಲಿ ಸಂಕೋಚನ ಹೊಂದುತ್ತದೆ, ಅದರ ದ್ರವ್ಯರಾಶಿ ಹೆಚ್ಚುತ್ತದೆ, ಕಾಲ ಕುಂಠಿತವಾಗುತ್ತದೆ, ಕಣಗಳು ಶಕ್ತಿಯನ್ನು ವಿಕಿರಿಸುತ್ತವೆ &#8211; ಒಟ್ಟಾರೆ ನಿತ್ಯದ ನಮ್ಮ ಊಹೆಗಳೆಲ್ಲ ತಲೆಕೆಳಗಾಗುತ್ತವೆ.  ಸಾಪೇಕ್ಷತಾ ಸಿದ್ಧಾಂತದ ಪರಿಕಲ್ಪನೆಗಳು ನೂರಾರು ಬಾರಿ ಇನ್ನಿಲ್ಲದ ಹಾಗೆ ಪರೀಕ್ಷೆಗೆ ಒಳಪಟ್ಟು ತೇರ್ಗಡೆಗೊಂಡಿವೆ.  ಅಣು, ಪರಮಾಣು ರಂಗದ ಸೂಕ್ಷ್ಮ ಪ್ರಪಂಚದಲ್ಲಿ ಸಾಪೇಕ್ಷತಾ ಸಿದ್ಧಾಂತ ಅನಿವಾರ್ಯ.  ಅದಿಲ್ಲದೇ ನೂತನ ಭೌತವಿಜ್ಞಾನವಿಲ್ಲ.  ಅಂಥ ಸಾಪೇಕ್ಷತಾ ಸಿದ್ಧಾಂತದ ಮೂಲಭೂತ ಅಭಿಗೃಹೀತಕ್ಕೆ ಇಂದು ನ್ಯೂಟ್ರಿನೋ ಸಡ್ಡು ಹೊಡೆಯುತ್ತಿವೆಯೇ?</p>
<p style="text-align:left;">ಹಾಗೆ ನೋಡಿದರೆ  ಯಾವ ಸಿದ್ಧಾಂತವೂ ಪರಿಪೂರ್ಣವಲ್ಲ. ಪ್ರತಿಯೊಂದಕ್ಕೂ ಒಂದು ಮಿತಿ ಇದೆ. ನಾಲ್ನೂರು ವರ್ಷಗಳಷ್ಟು ಹಿಂದೆ ಲಂಡನ್ ಸಮೀಪದ ತನ್ನ ಹಳ್ಳಿ ಮನೆಯಲ್ಲಿ ಐಸಾಕ್ ನ್ಯೂಟನ್ (೧೬೪೨-೧೭೨೭) ಎಂಬ ಇಪ್ಪತ್ತಮೂರರ ತರುಣ,  ದಂತ ಕಥೆ ಹೇಳುವ ಹಾಗೆ, ತೊಟ್ಟು ಕಳಚಿಕೊಂಡ ಸೇಬು ಭೂಮಿಗೆ ಬೀಳುವುದನ್ನು ಕಂಡ. ಅರೇ, ಅದೇತಕ್ಕೆ ಮೇಲೆ ಹೋಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಅರಸುತ್ತ ಹೊರಟು ಗುರುತ್ವಾಕರ್ಷಣ ಸಿದ್ಧಾಂತವನ್ನು ನಿಗಮಿಸಿದ; ಗೋಚರ ಪ್ರಪಂಚದಲ್ಲಿ ವಸ್ತುಗಳ ಚಲನೆ ಮತ್ತು ಶಕ್ತಿಯ ಸಂಬಂಧವನ್ನು  ವಿವರಿಸುವ ಬಲವಿಜ್ಞಾನವನ್ನು (mechanics) ಕೊಟ್ಟ.  ನ್ಯೂಟನ್ ನೀಡಿದ ಈ ಸೈದ್ಧಾಂತಿಕ ಹತ್ಯಾರನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ವಿಜ್ಞಾನ ಮತ್ತು ನಾಗರೀಕತೆ ಪ್ರವರ್ಧಿಸಿದ ಬಗೆಯೇ  ಒಂದು ಅದ್ಭುತ.</p>
<p style="text-align:left;">ಸಾಮಾನ್ಯ ವೇಗಗಳಲ್ಲಿ &#8211; ಬೈಕು, ಬಸ್ಸು, ರಾಕೇಟ್ ಮುಂತಾದವು ಚಲಿಸುವ ವೇಗಗಳಲ್ಲಿ &#8211; ನ್ಯೂಟನ್ ಬಲವಿಜ್ಞಾನ ಯಶಸ್ವಿ. ಆದರೆ ಅಣು ಪರಮಾಣುಗಳ ಲೋಕಗಳಲ್ಲಿ ಅಲ್ಲ. ಅಲ್ಲಿ ಕಣಗಳು ಬೆಳಕಿನ ವೇಗದಲ್ಲಿ ಸಾಗುತ್ತವೆ. ನ್ಯೂಟನ್ ಸಿದ್ಧಾಂತಕ್ಕೆ ಪರಿಷ್ಕರಣೆ ಅಗತ್ಯವಾಗುತ್ತದೆ. ಅಂಥ ಪರಿಷ್ಕರಣೆಯನ್ನು ನೀಡಿದ ಹಿರಿಮೆ ಐನ್ ಸ್ಟೈನ್ ಅವರದ್ದು.</p>
<p style="text-align:left;">ಗೆಲಿಲಿಯೋ ಬಗ್ಗೆ ಐನ್‌ಸ್ಟೈನ್ ನುಡಿದ ಮಾತು &#8221; ಗೆಲಿಲಿಯೊನ ವೈಜ್ಞಾನಿಕ ಸಂಶೋಧನೆಗಳು ಪ್ರಭುತ್ವ ಹೇರಿದ ನಂಬುಗೆ, ಸಂಪ್ರದಾಯ ಪೇರಿಸಿದ ಕಂದಾಚಾರಗಳ ವಿರುದ್ಧ ಮಾಡಿದ ಹೋರಾಟ. ಅನುಭವ ಮತ್ತು ಅತ್ಯಂತ ಎಚ್ಚರಿಕೆಯ ವೀಕ್ಷಣೆಗಳಿಂದ ಕಂಡ ಸತ್ಯವನ್ನು ಒಪ್ಪುವುದು ಅವನ ರೀತಿಯಾಗಿತ್ತು&#8221; ವಾಸ್ತವವಾಗಿ ಇದು ಐನ್‌ಸ್ಟೈನ್ ನಂಬಿದ ಮತ್ತು ಬಾಳಿದ ರೀತಿಯೂ ಹೌದು.  ಹಾಗಾಗಿಯೇ ಅವರು ನ್ಯೂಟನ್ ಸಿದ್ಧಾಂತಕ್ಕೆ ಸಡ್ಡು ಹೊಡೆಯಲು ಸಾಧ್ಯವಾಯಿತು.</p>
<p style="text-align:left;">ಸೆರ್ನ್‌ನಲ್ಲಿ ಮಾಡಿದ ಪ್ರಯೋಗ ಫಲಿತಾಂಶಗಳು ಅಂದು ಐನ್‌ಸ್ಟೈನ್ ಯಾವ ಬಗೆಯಲ್ಲಿ ಜ್ಞಾನ ಸೀಮೆಯನ್ನು ವಿಸ್ತರಿಸಿದರೋ, ಅದೇ ಬಗೆಯಲ್ಲಿ ಇನ್ನೊಂದು ಆಯಾಮಕ್ಕೆ ವಿಸ್ತರಿಸಲು ಶಕ್ತ &#8211; ಅವು  ನಿಜವೆಂದಾದರೆ! ಹಾಗಾಗಿಯೇ ವಿಜ್ಞಾನರಂಗ ಸೆರ್ನ್ ವಿಜ್ಞಾನಿಗಳ ಘೋಷಣೆಯನ್ನು ಅಚ್ಚರಿ, ಕುತೂಹಲ ಮತ್ತು ಎಚ್ಚರಿಕೆಯಿಂದ ಗಮನಿಸುತ್ತಿದೆ.</p>
<p style="text-align:left;">ಇಲ್ಲ, ಪ್ರಯೋಗದಲ್ಲಿಯೇ ಅದೆನೋ ಐಬು ಇರಬಹುದೆಂದು ಹಲವರ ಅಭಿಮತವಾದರೆ, ಇರಬಹುದೇನೋ ಎಂಬ ಸಂಶಯ ಇನ್ನು ಕೆಲವರಿಗೆ. ವೈಜ್ಞಾನಿಕ ಸಂಶೋಧನ ಲೇಖನಗಳು  ತಜ್ಞರ ಪರಿಶೀಲನೆಗೆ ಒಳಪಟ್ಟು (peer review), ಅರ್ಹವೆಂದಾದರೆ ಮತ್ತೆ  ಸಂಶೋಧನ ಪತ್ರಿಕೆಯಲ್ಲಿ ಪ್ರಕಟವಾಗುವುದು ಜಾಯಮಾನ. ಆದರೆ ಇಂದಿನ  ಮಾಹಿತಿ ಯುಗದಲ್ಲಿ ಆ ಮೊದಲೇ ಇತರ ವಿಜ್ಞಾನಿಗಳಿಂದ ಪ್ರತಿಕ್ರಿಯೆ ನಿರೀಕ್ಷಿಸಿ, ಅದರ ಮೇಲೆ ಲೇಖನಕ್ಕೆ ಅಂತಿಮ ರೂಪ ಕೊಡುವ ಒಂದು ಬಗೆಯ ಸಾಮೂಹಿಕ ಪ್ರಯತ್ನದ ಫಲವಾಗಿ ಕರಡು ಅಥವಾ ಕಚ್ಚಾ ಪ್ರತಿಯ ಅಸಂಖ್ಯ ಲೇಖನಗಳು ಅಮೇರಿಕದ ಕೊರ್ನೆಲ್ ವಿಶ್ವವಿದ್ಯಾಲಯದ <a href="http://archxiv.org">ArXiv.org </a>  ತಾಣದಲ್ಲಿ ಲಭ್ಯ &#8211; ಇದು ಒಂದು ಬಗೆಯಲ್ಲಿ ವಿಕಿಪೆಡಿಯಾ ಇದ್ದ ಹಾಗೆ.</p>
<p style="text-align:left;">ArXiv.org ನಲ್ಲಿ ಈಗಾಗಲೇ ಬೆಳಕಿನ ವೇಗವನ್ನು ಮೀರಿದ ನ್ಯೂಟ್ರಿನೋ ಬಗ್ಗೆ ಇನ್ನೂರಕ್ಕೂ ಮಿಕ್ಕಿ ಲೇಖನಗಳು ಬಂದಿವೆ. Journal of Physical Review of Letters ಪತ್ರಿಕೆಯಲ್ಲಿ ನೊಬೆಲ್ ವಿಜ್ಞಾನಿ ಶೆಲ್ಡೆನ್‌ಗ್ಲಾಷೊ ಮತ್ತು ಕೊಹೆನ್ ಅವರ ಲೇಖನ ಪ್ರಕಟವಾಗುವ ಮುನ್ನ ArXiv.org ತಾಣದಲ್ಲಿ ಮೊದಲು ಬಂದದ್ದು <a href="http://arxiv.org/abs/1109.6562">(http://arxiv.org/abs/1109.6562)</a>. ಗಮನೀಯ.</p>
<p style="text-align:left;">ಸರ್ನೆ ಪ್ರಯೋಗದ ಹೀರೋ ಆಗಿರುವ ಈ ನ್ಯೂಟ್ರಿನೋ ಅಂದರೆ ಯಾರು?</p>
<p style="text-align:left;">ವಿಕಿರಣಪಟುತ್ವ ಸಮಸ್ಯೆ</p>
<p style="text-align:left;">ಪ್ರೋಟಾನ್, ಎಲೆಕ್ಟ್ರಾನ್, ನ್ಯೂಟ್ರಾನುಗಳು ಪರಮಾಣುವಿನ ಪ್ರಾಥಮಿಕ ಅಥವಾ ಮೂಲಭೂತ ಕಣಗಳೆಂದು (elementary particles) ಪ್ರಾಥಮಿಕ ಶಾಲೆಯ ಹುಡುಗನಿಗೂ ಇಂದು ಗೊತ್ತು. ಆದರೆ ಕೇವಲ ನೂರು ವರ್ಷಗಳ ಹಿಂದೆ.  ವಿಜ್ಞಾನ ದಿಗ್ಗಜರಿಗೂ ಈ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ.!  ಮೊದಲಿಗೆ ಎಲೆಕ್ಟ್ರಾನುಗಳು ಆವಿಷ್ಕಾರಗೊಂಡುವು(೧೮೯೭), ನಂತರ ಪ್ರೊಟಾನ್ (೧೯೦೯), ಆಮೇಲೆ ನ್ಯೂಟ್ರಾನುಗಳು (೧೯೩೨)  ಪತ್ತೆಯಾದುವು. ವಾಸ್ತವವಾಗಿ ಪ್ರೊಟಾನ್, ನ್ಯೂಟ್ರಾನುಗಳಿಗೆ ಕ್ವಾರ್ಕ್ ಎಂಬ ಇನ್ನಷ್ಟು ಸೂಕ್ಷ್ಮ ಘಟಕಗಳಿವೆಯಂತೆ. ಇದು ತನಕ ತಿಳಿದಿರುವ ಹಾಗೆ ಎಲೆಕ್ಟ್ರಾನಿಗೆ ಪ್ರತ್ಯೇಕ ಘಟಕವಿಲ್ಲ. ಅಂದರೆ ನಿಜಕ್ಕೂ ಇದು ಪ್ರಾಥಮಿಕ ಕಣವೇ. ಇಂಥ ಕಣಗಳ ಮಾಲೆಯಲ್ಲಿ ಎಲೆಕ್ಟ್ರಾನಿಗಿಂತಲೂ ಹಗುರದ, ಪ್ರತ್ಯೇಕ ಘಟಕಗಳಿಲ್ಲದ  ಪ್ರಾಥಮಿಕ ಕಣಗಳೇ ನ್ಯೂಟ್ರಿನೊ. ನ್ಯೂಟ್ರಿನೊ ಅಸ್ತಿತ್ವದ ಬಗ್ಗೆ ಮಾಡಿದ ಊಹೆ, ನಂತರ ಪತ್ತೆಗೆ ನಡೆದ ಪ್ರಯತ್ನಗಳು ಭೌತ ವಿಜ್ಞಾನದ ರಮ್ಯ ಕಥಾನಕ. ಈ ಕಥೆ ಆರಂಭವಾಗುವುದು ರೇಡಿಯೋಎಕ್ಟಿವಿಟಿ ಅಥವಾ ವಿಕಿರಣಪಟುತ್ವ ವಿದ್ಯಮಾನದಲ್ಲಿ.</p>
<p style="text-align:left;">ಹತ್ತೊಂಬತ್ತನೇ ಶತಮಾನದ ಕೊನೆಯ ದಿನಗಳು. ಯುರೇನಿಯಮ್, ಥೋರಿಯಮ್ ಮೊದಲಾದ ಮೂಲವಸ್ತುಗಳ ಪರಮಾಣುವಿನ ಅಂತರಾಳದಿಂದ ಆಲ್ಫಾ, ಬೀಟಾ, ಗ್ಯಾಮಾ ಎಂಬ ವಿಕಿರಣ ಉತ್ಸರ್ಜನೆಯಾಗುವ ವಿದ್ಯಮಾನವನ್ನು ಪ್ರೆಂಚ್  ಭೌತ ವಿಜ್ಞಾನಿ ಹೆನ್ರಿಬೆಕೆರಲ್ (೧೮೫೨-೧೯೦೮) ತೀರ ಅಚಾನಕ್ಕಾಗಿ ಆವಿಷ್ಕರಿಸಿದರು (೧೮೯೭). ವಾಸ್ತವವಾಗಿ ಬೆಕೆರೆಲ್ ಹೊರಟದ್ದು ಯುರೇನಿಯಮ್ ಧಾತುವಿನ ಸಂದೀಪ್ತಿಯನ್ನು ಅಧ್ಯಯನಿಸಲು. ಆದರೆ ಅಂತಿಮವಾಗಿ ಆವಿಷ್ಕರಿಸಿದ್ದು ಯುರೇನಿಯಮ್ ಪರಮಾಣುವಿನಿಂದ ಶಕ್ತಿಶಾಲೀ ಕಿರಣಗಳ ಉತ್ಸರ್ಜನೆಯನ್ನು. ಈ ವಿದ್ಯಮಾನ  ಕೇವಲ ಯುರೇನಿಯಮ್ ಪರಮಾಣುವಿನ  ಗುಣವಲ್ಲ;  ಯುರೇನಿಯಮ್ ಅದಿರಿನಿಂದ ಪಡೆದ ಹೊಸ  ಧಾತುಗಳಾದ ರೇಡಿಯಮ್, ಪೊಲೋನಿಯಮ್ ಪರಮಾಣುಗಳು ಕೂಡ ಇದೇ ಬಗೆಯಲ್ಲಿ ಶಕ್ತಿಶಾಲೀ ವಿಕಿರಣವನ್ನು ಉತ್ಸರ್ಜಿಸುತ್ತವೆಂದು ಮೇರೀಕ್ಯೂರಿ (೧೮೬೭-೧೯೩೪) ಆವಿಷ್ಕರಿಸಿದರು ಮತ್ತು ಒಟ್ಟು  ವಿದ್ಯಮಾನವನ್ನು radioactivity &#8211; ವಿಕಿರಣಪಟುತ್ವ ಎಂದು ಕರೆದರು. ವಿಕಿರಣಪಟುತ್ವವೆಂದರೆ ಪರಮಾಣು ಗರ್ಭದ ಅನೈಚ್ಛಿಕ ಪ್ರಕ್ರಿಯೆ.  ಇಲ್ಲಿ ಪರಮಾಣು ಗರ್ಭದಿಂದ ಧನಾವಿಷ್ಟ ಆಲ್ಫಾ, ಋಣಾವಿಷ್ಟ ಎಲೆಕ್ಟ್ರಾನ್ ಅಥವಾ ಬಿಟಾ ಮತ್ತು ವಿದ್ಯುತ್ಕಾಂತ ಅಲೆಗಳಾದ ಗ್ಯಾಮಾ ವಿಕಿರಣ ಉತ್ಸರ್ಜನೆಗೊಳ್ಳುತ್ತವೆ.</p>
<p style="text-align:left;">ನಂತರದ ಪ್ರಯೋಗಗಳಿಂದ   ಬೀಟಾ ಕಣಗಳೆಂದರೆ  ಎಲೆಕ್ಟ್ರಾನುಗಳೆಂದು ಸ್ಪಷ್ಟವಾಯಿತು. ಸಿನಿಮೀಯವಾಗಿ ಹೇಳುವುದಾದರೆ, ಅದೆಲ್ಲ ಓಕೆ -  ನ್ಯೂಕ್ಲಿಯಸ್ಸಿನೊಳಗಿಂದ ಎಲೆಕ್ಟ್ರಾನುಗಳು ಬರುವುದು ಯಾಕೆ? ಹಾಗಿದ್ದರೆ ಅವು ಅಲ್ಲಿರಬಹುದೇ &#8211; ನ್ಯೂಟಾನ್, ಪ್ರೋಟಾನುಗಳ ಜತೆ ಜತೆ ಹಾಯಾಗಿ? ಆದರೆ ನಂತರ ಸ್ಪಷ್ಟವಾಯಿತು &#8211; ಎಲೆಕ್ಟ್ರಾನುಗಳಿಗೆ ಪರಮಾಣು ಕೇಂದ್ರದಲ್ಲಿ ಜಾಗವಿಲ್ಲ. ಅಂದ ಮೇಲೆ, ನಾವು ಗಮನಿಸುವ ಬೀಟಾ ಕಣಗಳು &#8211; ಅಂದರೆ ಎಲೆಕ್ಟ್ರಾನುಗಳು -  ಸೃಷ್ಟಿಯಾಗುವ ಪರಿ ಹೇಗೆ? ಇಪ್ಪತ್ತನೇ ಶತಮಾನದ ಆರಂಭದಲ್ಲಿ ಎದ್ದ ಪ್ರಶ್ನೆಗೆ ಉತ್ತರ ದೊರೆಯಲು ದಶಕಗಳ ಕಾಲ ಹೆಣಗಾಡಬೇಕಾಯಿತು.</p>
<p style="text-align:left;">ವಿಕಿರಣಪಟು ಪರಮಾಣುವಿನಲ್ಲಿ ನ್ಯೂಟ್ರಾನ್ ಸಂಖ್ಯೆ ಹೆಚ್ಚಿದ್ದರೆ ನಿಸರ್ಗ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ &#8211; ನ್ಯೂಟ್ರಾನ್ ಕ್ಷಯದ ಮೂಲಕ. ಇಲ್ಲಿ ಒಂದು ನ್ಯೂಟ್ರಾನ್ ಇನ್ನೊಂದು ಪ್ರೋಟಾನ್ ಆಗಿ ಪರಿವರ್ತನೆಯಾಗುತ್ತದೆ ಮತ್ತು ಆ ಕ್ರಿಯೆಯಲ್ಲಿ ಋಣಾವಿದ್ಯುದಾವಿಷ್ಟ ಎಲೆಕ್ಟ್ರಾನ್ ಸೃಷ್ಟಿಯಾಗುತ್ತದೆ. ಹೀಗೆ ಸೃಷ್ಟಿಯಾದ ಎಲೆಕ್ಟ್ರಾನಿಗೆ ನ್ಯೂಕ್ಲಿಯಸ್ಸಿನಲ್ಲಿ  ಜಾಗವಿಲ್ಲ. ಅದು ಅಲ್ಲಿಂದ ಹೊರ ರಟ್ಟಲೇ ಬೇಕು. ಹೊರ ಚಿಮ್ಮಿದ  ಈ ಎಲೆಕ್ಟ್ರಾನೇ ಬೀಟಾಕಣ. ಅಧಿಕ ದ್ರವ್ಯರಾಶಿಯ ನ್ಯೂಟ್ರಾನ್, ತುಸು ಕಡಿಮೆ ದ್ರವ್ಯರಾಶಿಯ  ಪ್ರೋಟಾನ್ ಆಗುವ ಇಂಥ ಕ್ರಿಯೆಯಲ್ಲಿ ನಷ್ಟವಾಗುವ ದ್ರವ್ಯರಾಶಿಯು ಶಕ್ತಿ ರೂಪದಲ್ಲಿ  ಬೀಟಾ ಕಣಕ್ಕಿರಬೇಕು. ಇದು ಸಿದ್ಧಾಂತದ ನಿರೀಕ್ಷೆ. ಆದರೆ ಪ್ರಯೋಗಗಳು ಹೇಳಿದ್ದೇ ಬೇರೆ. ಅವುಗಳ ಶಕ್ತಿ ಮೂರನೇ ಒಂದಂಶವಷ್ಟೇ ಇತ್ತು. ಹಾಗಿದ್ದರೆ ಉಳಿದದ್ದು ಏನಾಯಿತು? ಕೊರತೆಗೆ ವಿವರಣೆ ಏನು?</p>
<p style="text-align:left;">ಶಕ್ತಿಯನ್ನು ಸ್ಥೂಲವಾಗಿ ಚಲನಶಕ್ತಿ (kinetic energy) ಮತ್ತು ವಿಭವಶಕ್ತಿ (potential energy) ಎಂದು ವಿಂಗಡಿಸಬಹುದು. ವಸ್ತುವಿನ ಚಲನೆಯಿಂದ ಚಲನಶಕ್ತಿ ಬಂದರೆ, ಸ್ಥಾನದಿಂದ ವಿಭವಶಕ್ತಿ ಒದಗುತ್ತದೆ. ಉದಾಹರಣೆಗೆ, ಮರದಲ್ಲಿರುವ ಹಣ್ಣು ವಿಭವಶಕ್ತಿ ಹೊಂದಿದೆ. ಆದರೆ ಅದಕ್ಕೆ ಚಲನ ಶಕ್ತಿ ಇಲ್ಲ. ಅದೇ ಹಣ್ಣು ತೊಟ್ಟಿನಿಂದ ಕಳಚಿ ಭೂಮಿಗೆ ಬೀಳುವಾಗ ಚಲನೆಯ ಕಾರಣದಿಂದ ಚಲನಶಕ್ತಿ ಪ್ರಾಪ್ತವಾಗುತ್ತದೆ. ಕೆಳಕ್ಕೆ ಬಂದಂತೆ ಅದರ ವೇಗ ಹೆಚ್ಚುತ್ತದೆ &#8211; ಚಲನ ಶಕ್ತಿಯೂ ಕೂಡ. ಭೂಮಿಯನ್ನು ತಲಪುವಾಗ ಚಲನ ಶಕ್ತಿ ಗರಿಷ್ಠವಾಗುತ್ತದೆ. ವಿಭವಶಕ್ತಿ ಕನಿಷ್ಠವಾಗುತ್ತದೆ. ಆದರೆ ಒಟ್ಟು ಶಕ್ತಿ ಮೊದಲಿನಷ್ಠೇ ಇರುತ್ತದೆ. ಇದಕ್ಕೆ  ಶಕ್ತಿ ನಿತ್ಯತೆ ನಿಯಮ (law of conservation of energy) ಎಂದು ಹೆಸರು.</p>
<p style="text-align:left;">ಶಕ್ತಿ ನಿತ್ಯತೆ ನಿಯಮ ನಿಸರ್ಗದ ಇನ್ನೊಂದು ರಹಸ್ಯವನ್ನು ಕೂಡ ಹೇಳುತ್ತದೆ. ಶಕ್ತಿಯ ರೂಪಗಳು ಹಲವು. ಇದಕ್ಕೆ ಸರಿಯಾಗಿ ಬೇರೆ ಬೆರೆ ನಾಮಗಳು &#8211; ವಿದ್ಯುತ್ತು, ಬೆಳಕು, ಉಷ್ಣ, ಶಬ್ದ, ರೇಡಿಯೋ ಅಲೆಗಳು, ಎಕ್ಸ್ ವಿಕಿರಣಗಳು &#8211; ಇತ್ಯಾದಿ.   ಒಂದು ಪ್ರಕಾರದ ಶಕ್ತಿಯನ್ನು ಇನ್ನೊಂದಾಗಿ ಪರಿವರ್ತಿಸಲು ಸಾಧ್ಯ. ಆದರೆ ಒಟ್ಟು ಶಕ್ತಿ ಮೊದಲಿನಷ್ಟೇ ಇರುತ್ತದೆ. ಎಲ್ಲ ಭೌತಿಕ ಮತ್ತು ರಾಸಾಯನಿಕ ಕ್ರಿಯೆಗಳೆಲ್ಲವೂ ಶಕ್ತಿ ನಿತ್ಯತೆ ನಿಯಮಕ್ಕೆ ಒಳಪಟ್ಟೇ ನಡೆಯುತ್ತದೆ ಮತ್ತು ನಡೆಯತಕ್ಕದ್ದು. ಶೂನ್ಯದಿಂದ ವಸ್ತುವನ್ನು ಎಂಥ ದೇವಮಾನವನೂ ಸೃಷ್ಟಿಸಲಾರ.</p>
<p style="text-align:left;">ಆಲ್ಫಾಕಣಗಳ ಉತ್ಸರ್ಜನೆಯಲ್ಲಿ ಶಕ್ತಿ ನಿತ್ಯತೆ ನಿಯಮ ಅನುಸರಣೆಯಾಗುತ್ತಿತ್ತು. ಹಾಗಿದ್ದರೆ ಬೀಟಾ ಕಣಗಳ ಉತ್ಸರ್ಜನೆಯಲ್ಲಿ ಮಾತ್ರ ನಿಸರ್ಗದ ಮೂಲಭೂತ ನಿಯಮ ಉಲ್ಲಂಘನೆಯಾಗುತ್ತಿದೆಯೇ? ಭೌತ ವಿಜ್ಞಾನಿಗಳಿಗೆ ತಲೆಬಿಸಿಯ ಹೊತ್ತು. ಕೆಲವರು ಆ ಹೊತ್ತಿಗೆ ಸಮಸ್ಯೆಯನ್ನು ಸರಳಗೊಳಿಸಲು ಬೀಟಾ ವಿಕಿರಣಪಟುತ್ವವು ಶಕ್ತಿನಿತ್ಯತೆ ನಿಯಮಕ್ಕೊಂದು ಅಪವಾದ ಎಂದರು.  ಗೊಂದಲದ ನಿವಾರಣೆಗೆ ವಿಜ್ಞಾನಿಗಳು ಹೆಣಗಾಡತೊಡಗಿದರು.  ಸರಿ ಉತ್ತರ ದೊರೆಯಲು ಮತ್ತೆ ಹಲವು ವರ್ಷಗಳು  ಬೇಕಾದುವು -  ನ್ಯೂಟ್ರಿನೋ ಪರಿಕಲ್ಪನೆಯನ್ನು ಪೌಲಿ ಮಂಡಿಸುವ  ತನಕ (೧೯೩೧).</p>
<p style="text-align:left;">ಪೌಲಿಯ ದೆವ್ವ!</p>
<p style="text-align:left;">ವೂಲ್ಫ್ ಗಾಂಗ್ ಪೌಲಿ (೧೯೦೦ &#8211; ೧೯೫೮) ಇಪ್ಪತ್ತನೇ ಶತಮಾನ ಕಂಡ ಒಬ್ಬ ಪ್ರಖರ ಸೈದ್ಧಾಂತಿಕ ಭೌತವಿಜ್ಞಾನಿ.  ಹುಟ್ಟಿದ್ದು ಆಸ್ಟ್ರಿಯಾದ ರಾಜಧಾನಿಯಾದ ವಿಯೆನ್ನಾದಲ್ಲಿ. ಇವರ ತಂದೆ ವೂಲ್ಫ್ ಗಾಂಗ್‌ಪಾಶ್ಚೇಲಿಸ್ ಒಬ್ಬ ವೈದ್ಯ. ತನ್ನ ಸಹಪಾಠಿಯಾಗಿದ್ದ ಶ್ರೇಷ್ಠ ಭೌತವಿಜ್ಞಾನಿ ಅರ್ನ್ಸ್ಟ್ ಮಾಕ್ (೧೮೩೮-೧೯೧೬) ಬಗ್ಗೆ ಅತಿಶಯ ಪ್ರೀತಿ ಮತ್ತು ಅಭಿಮಾನ. ಹಾಗಾಗಿ ತನ್ನ ಮಗನಿಗೆ ವೂಲ್ಫ್ ಗಾಂಗ್ ಅರ್ನ್ಸ್ಟ್ ಪೌಲಿ ಎಂದು ಹೆಸರಿಟ್ಟ!.</p>
<p style="text-align:left;"><a href="http://apkrishna.files.wordpress.com/2011/12/pauli.jpg"><img class="alignright size-medium wp-image-604" title="Pauli" src="http://apkrishna.files.wordpress.com/2011/12/pauli.jpg?w=214&#038;h=300" alt="" width="214" height="300" /></a></p>
<p style="text-align:left;">ಪೌಲಿ ಅಂದರೆ ಗಣಿತ ಮತ್ತು ಭೌತ ವಿಜ್ಞಾನದಲ್ಲಿ ಪ್ರಚಂಡ ಪ್ರೌಢಿಮೆಯನ್ನು ತೋರಿ ಗಮನ ಸೆಳೆದ ಬಾಲ್ಯ ಪ್ರತಿಭೆ. ಹದಿನೆಂಟರ ಹರೆಯದಲ್ಲಿಯೇ ಜರ್ಮನಿಯ ಮ್ಯುನಿಕ್ ವಿಶ್ವವಿದ್ಯಾಲಯದ ಮೆಟ್ಟಲೇರಿ ಘನಸ್ಥಿತಿ ಭೌತ ವಿಜ್ಞಾನಕ್ಕೆ ಅನನ್ಯ ಕೊಡುಗೆ ನೀಡಿದ ಶ್ರೇಷ್ಠ ಸೈದ್ಧಾಂತಿಕಭೌತ ವಿಜ್ಞಾನಿ ಅರ್ನಾಲ್ಡ್ ಸಾಮರ್‌ಫೇಲ್ಡ್ (೧೮೬೮-೧೯೫೧) ಬಳಿ ಸಂಶೋಧನೆಗೆ ತೊಡಗುವ ಹೊತ್ತಿಗೇ  ಐನ್‌ಸ್ಟೈನರ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದ ಕುರಿತು ಸ್ವತಂತ್ರವಾಗಿ ಸಂಶೋಧನ ಲೇಖನವನ್ನು ಬರೆದು ಬೆರಗು ಮೂಡಿಸಿದ. ಅಯಾನೀಕೃತ ಹೈಡ್ರೋಜನ್ ಅಣುಗಳ ಕ್ವಾಂಟಮ್ ಸಿದ್ಧಾಂತವೆಂಬ ಘನ ಪ್ರಬಂಧಕ್ಕೆ ಪೌಲಿಗೆ ಡಾಕ್ಟರೇಟ್ ಪದವಿ ಬಂದಾಗ ಇನ್ನೂ ಇಪ್ಪತ್ತೊಂದರ ಹರೆಯ.  ಬೈಜಿಕ ವಿದಳನ ಕ್ರಿಯೆಯ ಆವಿಷ್ಕಾರದಲ್ಲಿ ಪಾತ್ರವಹಿಸಿದ ಲಾಮೈಟ್ನರ್ (೧೮೭೮-೧೯೬೮) ಪೌಲಿ ಬಗ್ಗೆ ಹೇಳಿದ್ದಾರೆ &#8220;ಸಾಮ್ಮರ್‌ಫೇಲ್ಡ್ ಹೇಳುತ್ತಿದ್ದರು &#8211; ನನಗೊಬ್ಬ ಪೌಲಿ ಅನ್ನುವ ಶಿಷ್ಯನಿದ್ದಾನೆ. ಆತ  ಅದೆಂಥ ಪ್ರಖರಮತಿ ಎಂದರೆ ಅವನಿಗೆ ಏನನ್ನೂ ಹೇಳಿಕೊಡುವ ಅಗತ್ಯವಿಲ್ಲ. ಆದರೂ ವಿಶ್ವವಿದ್ಯಾಲಯದ ನಿಯಮಾನುಸಾರ ಆತ ತನ್ನ ಡಾಕ್ಟರೇಟ್ ಪದವಿಗೆ ಆರು ಸೆಮೆಸ್ಟರುಗಳ ಕೋರ್ಸವರ್ಕ್ ಮಾಡಲೇಬೇಕಾಗಿದೆ&#8221;</p>
<p style="text-align:left;">ತನ್ನ ಶಿಷ್ಯೋತ್ತಮ ಪೌಲಿಗೆ ಐನ್‌ಸ್ಟೈನರ ಸಾಪೇಕ್ಷತಾ ಸಿದ್ಧಾಂತದ ಬಗೆಗೆ ವಿಸ್ತಾರವಾದ ಒಂದು ಪ್ರಬಂಧ  ಬರೆದುಕೊಡಲು ಸಾಮ್ಮರ್‌ಫೇಲ್ಡ್ ಸೂಚಿಸಿದರೆ,  ಪೌಲಿ ಸಲ್ಲಿಸಿದ.  ಆ ಪ್ರಬಂಧವಾದರೋ ೨೩೭ ಪುಟಗಳಿಗೆ ವಿಸ್ತರಿಸಿ, ಕಿರು ಹೊತ್ತಗೆಯ ರೂಪ ಪಡೆಯಿತು.  ಸ್ವಯಂ ಐನ್‌ಸ್ಟೈನ್ ಆ ಪ್ರಬಂಧವನ್ನು ಓದಿ ಶ್ಲಾಘಿಸಿದರು &#8221; ಅದ್ಭುತವಾಗಿ ಮೂಡಿರುವ ಈ ರಚನೆಯನ್ನು ಓದಿದ ಯಾರೇ ಆದರೂ ಇದರ ಕರ್ತೃ ಇಪ್ಪತ್ತೊಂದರ ತರುಣನೆಂದು ಊಹಿಸಲಾರರು!&#8221;  ಜರ್ಮನ್ ಭಾಷೆಯಲ್ಲಿರುವ ಈ ಪ್ರಬಂಧ ಮುಂದೆ ಇಂಗ್ಲೀಷಿಗೆ ಅನುವಾದಗೊಂಡು  ಸಾಪೇಕ್ಷತಾಸಿದ್ಧಾಂತದ ಬಗ್ಗೆ ಮುಖ್ಯ ಆಕರ ಗ್ರಂಥವಾಯಿತು. ಇದು ಪೌಲಿ.</p>
<p style="text-align:left;">ಪರಮಾಣುವಿನ ಕಕ್ಷೆಯಲ್ಲಿ  ಎಷ್ಟು ಎಲೆಕ್ಟ್ರಾನುಗಳು ಹಿಡಿಯುತ್ತವೆನ್ನುವುದು ಸ್ಪಷ್ಟವಾದದ್ದು ಪೌಲಿ ಮಂಡಿಸಿದ ಮೂಲಭೂತ ನಿಯಮದ ನಂತರವೇ (೧೯೨೪). ಪರಮಾಣು ಕೇಂದ್ರದ ಸುತ್ತ ಸುತ್ತುತ್ತಿರುವ ಎಲೆಕ್ಟ್ರಾನುಗಳ ಶಕ್ತಿ, ಸಂವೇಗ, ದೂರ  ಇತ್ಯಾದಿಗಳನ್ನು ವಿವರಿಸಲು ಬೇಕಾಗುತ್ತವೆ &#8211; ಬೇರೆ ಬೇರೆ ಕ್ವಾಂಟಮ್ ಸಂಖ್ಯೆಗಳು &#8211; ಮನೆಗಳ ಗುರುತಿಗೆ ದಾರಿ, ಗಲ್ಲಿ, ಮನೆನಂಬ್ರ, ಅಂಚೆನಂಬ್ರ ಇರುವಂತೆ. ಪೌಲಿ ಹೇಳಿದರು &#8220;ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಇರುವ ಎರಡು ಎಲೆಕ್ಟ್ರಾನುಗಳಿಗೆ ಒಂದೇ ನಮೂನೆಯ ಕ್ವಾಂಟಮ್ ಸಂಖ್ಯೆಗಳು ಇರಲು ಸಾಧ್ಯವಿಲ್ಲ&#8221;  ಇದುವೇ &#8220;ಪೌಲಿ ಎಕ್ಸ್‌ಕ್ಲೂಷನ್ ಪ್ರಿನ್ಸಿಪಲ್&#8221; (paulis exclusion principle ) ಎಂದೇ ಸುಪ್ರಸಿದ್ಧ &#8211; ವಿಜ್ಞಾನ ಇರುವ ತನಕ ಅಜರಾಮರ.  ಸಿನೆಮಾ ಥಿಯೇಟರಿನಲ್ಲಿ ಪ್ರತಿಯೊಂದು ಸೀಟಿನಲ್ಲಿ ಒಬ್ಬನಿಗಷ್ಟೇ ಜಾಗ  ಇರುವ ಹಾಗೆ ಪ್ರೇಕ್ಷಕರು ತುಂಬುತ್ತ ಹೋಗುವ ಹಾಗೆ, ಪರಮಾಣುವಿನ ಕಕ್ಷೆಯಲ್ಲಿ ಎಲೆಕ್ಟ್ರಾನುಗಳ ವಿತರಣೆಯಾಗುತ್ತದೆ  ಪೌಲಿಯ ನಿಯಮವನ್ನನುಸರಿಸಿ. ಪರಮಾಣು ಕೇಂದ್ರದ ಸುತ್ತ ಎಲೆಕ್ಟ್ರಾನ್ ಪರಿಭ್ರಮಿಸುತ್ತದಷ್ಟೇ ಅಲ್ಲ, ಎಲೆಕ್ಟ್ರಾನಿಗೆ ಅದರದ್ದೇ ಆದ ಗಿರಕಿ (spin) ಗುಣವಿದೆ ಎಂಬ ಸೂಚನೆ ದೊರೆತದ್ದು ಪೌಲಿಯಿಂದ. ಆಧುನಿಕ ಕ್ವಾಂಟಮ್ ಸಿದ್ಧಾಂತದ ಜನಕರಲ್ಲಿ ಪೌಲಿ ಕೂಡ ಒಬ್ಬರು. ಈ ಒಟ್ಟು ಕೊಡುಗೆಗಾಗಿ ೧೯೪೫ರಲ್ಲಿ ಪೌಲಿಗೆ ಬಂತು ನೊಬೆಲ್ ಪ್ರಶಸ್ತಿ. ಯುದ್ಧದ ಕಾರಣದಿಂದ ಸ್ವೀಡನ್ನಿಗೆ ಹೋಗಿ ಪ್ರಶಸ್ತಿ ಸ್ವೀಕರಿಸದ ಪೌಲಿಗೆ ಅಮೇರಿಕದ ಪ್ರಿನ್ಸ್‌ಟನ್ನಿನಲ್ಲಿ ಸನ್ಮಾನ ಸಮಾರಂಭ ನಡೆಯಿತು. ಅಭಿನಂದಿಸುತ್ತ ಐನ್‌ಸ್ಟೈನ್ ಹೇಳಿದರು &#8220;ಪೌಲಿ ನನ್ನ ಉತ್ತರಾಧಿಕಾರಿ!&#8221;.</p>
<p style="text-align:left;">ಸೈದ್ಧಾಂತಿಕ ಪ್ರಖರ ಪೌಲಿ, ಪ್ರಯೋಗ ಉಪಕರಣದ ಬಳಿ ಬಂದರೆ ಸಾಕು ಆ ಉಪಕರಣಗಳು ಎಕ್ಕೆಟ್ಟುಹೋಗುತ್ತಿದ್ದುವೆಂದು ತಮಾಷೆಯ ಮಾತುಗಳು ಅಂದು ಜನಜನಿತವಾಗಿತ್ತು. ಹಾಗಾಗಿ ವಿಜ್ಞಾನಿಗಳ ವಲಯದಲ್ಲಿ ಇದಕ್ಕೆ ಪೌಲಿಪರಿಣಾಮ (Pauli Effect) ಅನ್ನುತ್ತಿದ್ದರು! ಒಮ್ಮೆ ಜರ್ಮನಿಯ ಗಾಟ್ಟಿಂಗೆನ್ ವಿಶ್ವವಿದ್ಯಾಲಯದಲ್ಲಿ ಒಟ್ಟೊಸ್ಟೆರ್ನ್ (೧೮೮೮ -೧೯೬೯) ನಡೆಸುತ್ತಿದ್ದ ಪ್ರಯೋಗ ಉಪಕರಣಗಳು ಹಟಾತ್ತನೆ ಕೆಟ್ಟು ಹೋದುವು. ತನ್ನ ಗೆಳೆಯ ಪೌಲಿಗೆ ಈ ವಿಚಾರವನ್ನು ಪತ್ರ ಮುಖೇನ ತಿಳಿಸಿದಾಗ ಪೌಲಿ ಮರು ಉತ್ತರ ಬರೆದರಂತೆ &#8220;ಆ ದಿನ ನಾನು ಡೆನ್ಮಾರ್ಕಿನಲ್ಲಿರುವ ನೀಲ್ಸ್ ಬೋರ್ ಭೇಟಿಗೆ ಹೋಗುವಾಗ ನಾನಿದ್ದ ರೈಲು ಗಾಟ್ಟಿಂಗೆನ್ ರೈಲು ನಿಲ್ದಾಣದಲ್ಲಿ ತುಸು ಹೊತ್ತು ನಿಂತಿತ್ತು. ಕ್ಷಮಿಸು ! &#8220;</p>
<p style="text-align:left;">ಧಡೂತಿ ದೇಹದ ಪೌಲಿ, ಅತ್ತ ಇತ್ತ ತೊನೆಯುತ್ತ ಗಂಭೀರ ಸ್ವರದಲ್ಲಿ ತನ್ನ  ವಿಚಾರ ಮಂಡಿಸಲು ಸಂಕಿರಣದಲ್ಲಿ ಎದ್ದರೆ ಸಾಕು &#8211; ಉಪನ್ಯಾಸಕನ ಬೆವರು ಬಿಚ್ಚುತ್ತಿತ್ತಂತೆ. ತಪ್ಪು ಅನಿಸಿದ್ದನ್ನು ಮುಲಾಜಿಲ್ಲದೇ ಟೀಕಿಸುತ್ತಿದ್ದ  ಪೌಲಿಯನ್ನು &#8220;ಭೌತವಿಜ್ಞಾನದ ಅಂತ:ಸ್ಸಾಕ್ಷಿ&#8221; ಎನ್ನುತ್ತಿದ್ದರು. ಇಂಥ ಪೌಲಿ ವಿಕಿರಣಪಟುತ್ವದ ಸಮಸ್ಯೆಯ ನಿವಾರಣೆಗೆ ತುಳಿದದ್ದು ಹೊಸ ಹಾದಿ.</p>
<p style="text-align:left;"><a href="http://apkrishna.files.wordpress.com/2011/12/pauli_bohr_tippetop.jpg"><img class="alignright size-medium wp-image-605" title="ಪೌಲಿ ಮತ್ತು ಬೋರ್ - ಇಬ್ಬರು ಮಹಾನ್ ದಾರ್ಶನಿಕ ವಿಜ್ಞಾನಿಗಳು ಬುಗರಿಯ ಸುತ್ತ ! " src="http://apkrishna.files.wordpress.com/2011/12/pauli_bohr_tippetop.jpg?w=300&#038;h=267" alt="" width="300" height="267" /></a></p>
<p style="text-align:left;">ವಿಕಿರಣಪಟುತ್ವದಲ್ಲಿ ಬೀಟಾ ಕಣದೊಂದಿಗೆ ಹೊಸದೊಂದು  ಕಣ ಉತ್ಸರ್ಜನೆಯಾಗುತ್ತಿದೆ   ಮತ್ತು ಯಾವ ಶಕ್ತಿ ಮತ್ತು ಸಂವೇಗ  ನಷ್ಟವಾಗಿದೆಯೆಂದು ಹೇಳುತ್ತಿದ್ದೇವೆಯೋ, ಅವನ್ನು  ಈ ಕಣಗಳು ಹೊಂದಿವೆ ಎಂಬ ಊಹೆಯನ್ನು ಪೌಲಿ ಮಾಡಿದರು. ಇಂಥದೊಂದು ದಿಟ್ಟ ಊಹೆ ಮಾಡಲು ಸಾಧ್ಯವಾಗುವುದು ಅಭಿಜಾತ ಪ್ರತಿಭೆಗೆ ಮಾತ್ರ.  ಝೆಕೊಸ್ಲೊವಾಕಿಯಾದ  ಪ್ರಾಗಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮೂವತ್ತರ ತರುಣ ಪೌಲಿ ತಮ್ಮ  ಸಿದ್ಧಾಂತ ಮಂಡಿಸುತ್ತ ಹೇಳಿದರು &#8220;ನಾನು ವಿಕಿರಣಪಟುತ್ವ ಕ್ರಿಯೆಯಲ್ಲಿ ಶಕ್ತಿ ನಿತ್ಯತೆ ನಿಯಮ ಉಳಿಸಲಿಕ್ಕೆಂದೇ ಈ ಹೊಸ ಕಣವನ್ನು ಪರಿಚಯಿಸುತ್ತಿದ್ದೇನೆ. ಇವಿಲ್ಲದೇ ಸಮಸ್ಯೆಯ ಪರಿಹಾರ ಆಗದು&#8221;. ಆರಂಭದಲ್ಲಿ ಪೌಲಿ ತನ್ನ ಹೊಸ ಕಣವನ್ನು ನ್ಯೂಟ್ರಾನ್ ಎಂದು ಹೆಸರಿಸಿದರು (೧೯೩೧). ಆದರೆ ಸರಿಸುಮಾರು ಆದೇ ಸಮಯದಲ್ಲಿ ಪರಮಾಣು ಕೇಂದ್ರದಲ್ಲಿರುವ ವಿದ್ಯುದಂಶವಿಲ್ಲದ ಕಣಗಳನ್ನು ಬ್ರಿಟಿಷ್ ಭೌತ ವಿಜ್ಞಾನಿ ಜೇಮ್ಸ್ ಛಾಡ್ವಿಕ್ ಆವಿಷ್ಕರಿಸಿದರು ಮತ್ತು  ಆ ಕಣಗಳನ್ನು  ನ್ಯೂಟ್ರಾನ್ ಎಂದು ಕರೆದರು. (೧೯೩೨). ಹಾಗಾಗಿ ಪೌಲಿಯ ಕಣಗಳಿಗೆ ಹೊಸ ಹೆಸರು ನೀಡಬೇಕಾದದ್ದು ಅನಿವಾರ್ಯವಾಯಿತು.</p>
<p style="text-align:left;">ಪೌಲಿಯ ಕಣಗಳಿಗೆ ಹೊಸ ಹೆಸರು ಟಂಕಿಸಿದವರು ಇನ್ನೊಬ್ಬ ನ್ಯೂಕ್ಲಿಯರ್ ದಿಗ್ಗಜ ಎನ್ರಿಕೋ ಫರ್ಮಿ (೧೯೦೧-೧೯೫೪); ಪೌಲಿಯ ಪರಮಾಪ್ತ ಮಿತ್ರ. ಪೌಲಿ ಕಣಗಳನ್ನು ನ್ಯೂಟ್ರಿನೋ ಎಂದು ತಮ್ಮ ಸಂಶೋಧನ ಲೇಖನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಫರ್ಮಿ ಹೆಸರಿಸುವುದರೊಂದಿಗೆ ನ್ಯೂಟ್ರಿನೊ ಎಂಬ ಹೆಸರು ಚಾಲ್ತಿಗೆ ಬಂತು.</p>
<p style="text-align:left;">ಪೌಲಿಯ ಜೀವನ ಪ್ರಕ್ಷುಬ್ದವಾಗಿತ್ತು. ತಾಯಿಯ ಆತ್ಮಹತ್ಯೆ, ವರ್ಷದೊಳಗೆ ದಾಂಪತ್ಯದಲ್ಲಿ ವಿರಸ ಮತ್ತು ವಿಚ್ಛೇದನ ನಡೆದು ಮನದ ಶಾಂತಿ ಕದಡಿ ಸುಪ್ರಸಿದ್ಧ ಮನೋವಿಜ್ಞಾನಿ ಕಾರ್ಲ್‌ಝಂಗ್ (೧೮೭೫-೧೯೬೧) ಅವರ ಮೊರೆ ಹೋದದ್ದು ಪೌಲಿಯ ಬದುಕಿನ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿ. ಸಿಗಾರ್ ಮತ್ತು ಮದಿರೆಯ ಪಾನ ಕೂಡ ಧಡೂತಿ ಪೌಲಿಯ ದೇಹದ ಮೇಲೆ ಪರಿಣಾಮ ಬೀರಿರಬೇಕು.  ೫೮ರ ಹರೆಯದಲ್ಲೇ ಮೆದೋಜೀರಕ ಗ್ರಂಥಿಯ ಕ್ಯಾನ್ಸರಿಗೆ ಬಲಿಯಾದರು. ಆಸ್ಪತ್ರೆಯಲ್ಲಿ ಮಲಗಿದ್ದ ಪೌಲಿ ಅಲ್ಲಿಂದಲೇ ಸಂಶೋಧನ ಲೇಖನಗಳನ್ನು ಬರೆಯುತ್ತ ಸಾವನ್ನು ಎದುರಿಸಿದ ದಿಟ್ಟ.  ಪೌಲಿ ತಮ್ಮ ಗೆಳೆಯರೊಂದಿಗೆ ಹೇಳುತ್ತಿದ್ದರಂತೆ &#8220;ನನಗೆ ಮಕ್ಕಳಿಲ್ಲ. ಇರುವುದಿದ್ದರೆ ಆತ ಒಬ್ಬ ಶತಮೂರ್ಖ &#8211; ಪತ್ತೆಯಾಗದೇ ಉಳಿದಿರುವ ನ್ಯೂಟ್ರಿನೊ&#8221;</p>
<p style="text-align:left;">ನಿಜ, ನ್ಯೂಟ್ರಿನೊ ಇತರ ಪ್ರಾಥಮಿಕ ಕಣಗಳಿಗಿಂತ ಬಲು ವಿಚಿತ್ರ. ಇವುಗಳಿಗೆ ವಿದ್ಯುದಂಶವಿಲ್ಲ. ಶೂನ್ಯವೋ ಎನ್ನುವಷ್ಟು ಅಲ್ಪ ದ್ರವ್ಯರಾಶಿ. ಕಾಂತಶಕ್ತಿ ಇಲ್ಲ.  ಬೆಳಕಿನ ಸನಿಹದ ವೇಗದಲ್ಲಿ ಸಾಗುವ ಇವು ದ್ರವ್ಯದೊಂದಿಗೆ ಕಿಂಚಿತ್ತೂ ವರ್ತಿಸಲಾರವು. ಬೆಳಕಿಗೆ ಅಪಾರದರ್ಶಕವಾದ ಮರ, ಗೋಡೆ, ಲೋಹದ ಹಾಳೆಗಳೆಲ್ಲವೂ ಇವುಗಳಿಗೆ ಪಾರದರ್ಶಕ &#8211; ಲೀಲಾಜಾಲವಾಗಿ ತೂರಿ ಸಾಗುತ್ತವೆ &#8211; ಅವ್ಯಾವುವೂ ಅಲ್ಲಿ ಇಲ್ಲವೆನ್ನುವಂತೆ. ಒಂದು ವಿಕಿರಣಪಟು ರಾಸಾಯನಿಕದಿಂದ ಬರುವ ಅತ್ಯಂತ ಶಕ್ತಿಶಾಲಿಯಾದ ಗ್ಯಾಮಾ ಕಿರಣವನ್ನು ತಡೆಯಲು ಕೆಲವು ಸೆಂಟಿಮೀಟರ್ ದಪ್ಪದ ಸೀಸ (lead) ಸಾಕು. ಆದರೆ ನ್ಯೂಟ್ರಿನೋಗಳನ್ನು ತಡೆಯಲು ಜ್ಯೋತಿರ್ವರ್ಷಗಳಷ್ಟು ದಪ್ಪದ ಸೀಸ ಬೇಕು.  ಹಾಗಾಗಿಯೇ ಈ ಕಣಗಳ ಪತ್ತೆ  ಅತ್ಯಂತ ಪ್ರಯಾಸದ್ದು.</p>
<p style="text-align:left;">ನ್ಯೂಟ್ರಿನೊಗಳ ಪತ್ತೆಯಾಗದೇ ಅವುಗಳ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಹೇಗೆ? ಪೌಲಿಯದು ಬರಿದೇ ರಮ್ಯ ಕಥೆಯಾಗದೇ?. ಹಾಗಾಗಿ ನ್ಯೂಟ್ರಿನೊ ಪತ್ತೆಗೆ ಅಹರ್ನಿಶಿ ಪ್ರಯತ್ನ ಆರಂಭವಾಯಿತು.  ಆದರೆ ದಕ್ಕಿದ್ದು ಶೂನ್ಯ ಫಲಿತಾಂಶ. ಕಣ್ಣಿಗೆ ಕಾಣದ, ಅಸ್ತಿತ್ವವೇ ಇಲ್ಲದ ಹಾಗೆ ವರ್ತಿಸುತ್ತಿರುವ   ನ್ಯೂಟ್ರಿನೊಗಳೆಂದರೆ  &#8220;ಪೌಲಿಯ ದೆವ್ವಗಳು&#8221; ಎಂಬ ತಮಾಷೆಯ ಹೇಳಿಕೆಗಳು ಕೂಡ ಹುಟ್ಟಿಕೊಂಡುವು.</p>
<p style="text-align:left;">ನ್ಯೂಟ್ರಿನೋ ಪತ್ತೆಯ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿತು.  ನ್ಯೂಕ್ಲಿಯರ್ ರಿಯಾಕ್ಟರಿನಿಂದ ಹೊರ ಚಿಮ್ಮುವ ನ್ಯೂಟ್ರಿನೊಗಳು ಕ್ಷಯಿಸಿದಾಗ ಸೃಷ್ಟಿಯಾಗುವ ಎಲೆಕ್ಟ್ರಾನ್ ಮತ್ತು ಪಾಸಿಟ್ರಾನ್ ಕಣಗಳು ದರ್ಶಕದ (detector) ರಾಸಾಯನಿಕ ದ್ರವದಲ್ಲಿ ಸಾಗುವಾಗ ಉದ್ಭವಿಸುವ ಸೆರೆಂಕೋವ್ ವಿಕಿರಣವನ್ನು ಅಮೇರಿಕದ ಭೌತ ವಿಜ್ಞಾನಿಗಳಾದ ಫ್ರೆಡ್ರಿಕ್‌ರಿಯಾನ್ಸ್ (೧೯೧೮-೧೯೯೮) ಮತ್ತು ಕ್ಲೈಡ್‌ಲಾರೆನ್ಸ್ ಕೊವಾನ್ಸ್ (೧೯೧೯-೧೯೭೪) ಪತ್ತೆ ಮಾಡಿದರು (೧೯೫೬). ಇಲ್ಲಿ ಗಮನಿಸಬೇಕಾದದ್ದು ಇದು ನ್ಯೂಟ್ರಿನೊಗಳ ನೇರ ಪತ್ತೆಯಲ್ಲ &#8211; ಪರೋಕ್ಷವಾದ ಪತ್ತೆ. ಈ ಆವಿಷ್ಕಾರಕ್ಕೆ ರಿಯಾನ್ಸ್ ನೊಬೆಲ್ ಪ್ರಶಸ್ತಿ ಕೂಡ ಪಡೆದರು (೧೯೯೫), ಸಂತಸದಲ್ಲಿ ಭಾಗಿಯಾಗಬೇಕಾದ ಕೊವಾನ್ಸ್ ಅದಾಗಲೇ ನಿಧನರಾಗಿದ್ದರು.</p>
<p style="text-align:left;">ಸೂರ್ಯ ಸೇರಿದ ಹಾಗೆ ಎಲ್ಲ ನಕ್ಷತ್ರಗಳು, ಸೂಪರ್ನೊವಾಗಳು ನ್ಯೂಟ್ರಿನೊ ಆಕರಗಳು. ಸೂರ್ಯ ಗರ್ಭದಲ್ಲಿ ನಡೆಯುವ ಹೈಡ್ರೋಜನ್ ಪರಮಾಣುಗಳ ಬೈಜಿಕಸಂಲಯನ ಕ್ರಿಯೆಯಲ್ಲಿ (nuclear fusion reaction )  ಸೆಕುಂಡಿಗೆ ಕೋಟಿ ಕೋಟಿ ನ್ಯೂಟ್ರಿನೊಗಳು ಸೃಷ್ಟಿಯಾಗಿ ಸರ್ವ ದಿಕ್ಕುಗಳಿಗೆ ಎರಚಿ ಹೋಗುತ್ತಿವೆ. ಸೂರ್ಯ ಕೇಂದ್ರದಿಂದ ಮೂರು ಸೆಕುಂಡಿನೊಳಗೆ ಬಾಹ್ಯಾವರಣ ತಲುಪಿ, ಅಲ್ಲಿಂದ ಜಿಗಿದು ಎಂಟು ನಿಮಿಷಗಳೊಳಗೆ ಭೂಮಿ ಸೇರಿ, ಕ್ಷಣ ಮಾತ್ರದಲ್ಲಿ ಭೂಮಿಯನ್ನು ತೂರಿ, ಮತ್ತೆ ಆ ಬದಿಯಿಂದ  ಬಾಹ್ಯಾಕಾಶಕ್ಕೆ ನೆಗೆದು ವಿಶ್ವದಂತರಾಳದ ಅನೂಹ್ಯ ಲೋಕದತ್ತ ಇವು ಪಯಣಿಸುತ್ತವೆ. ಕಂಪ್ಯೂಟರ್ ಎದುರು ಕುಳಿತು ಈ ಲೇಖನ ನೀವು ಓದುತ್ತಿರುವ ಈ ಹೊತ್ತಿನಲ್ಲಿ ನಿಮ್ಮ ಮೇಲೆ  ಹಲವು ಸಾವಿರ ಕೋಟಿ ನ್ಯೂಟ್ರಿನೊಗಳು ಅಪ್ಪಳಿಸಿ ಸಾಗುತ್ತಿವೆ  &#8211; ಅದೃಷ್ಟ, ಅರಿವಿಗೆ ಮಾತ್ರ ಬರುತ್ತಿಲ್ಲ! ಹಾಗೆ ನೋಡಿದರೆ ನ್ಯೂಟ್ರಿನೊ ಮಾತ್ರವಲ್ಲ, ಇನ್ನಿತರ ಕಣಗಳು, ವಿಕಿರಣಗಳು ಅಗೋಚರ. ವಿದ್ಯುತ್ಕಾಂತ ವಿಕಿರಣದಲ್ಲಿ ಕೇವಲ ಶೇಕಡಾ ನಾಲ್ಕಂಶ ಮಾತ್ರ ನಮಗೆ ದೃಷ್ಟಿ ನೀಡುತ್ತವೆ &#8211; ಅದುವೇ ಬೆಳಕು. ಎಲ್ಲ ವಿಕಿರಣಗಳು, ಕಣಗಳನ್ನು ನೋಡುವ ದಿವ್ಯ  ದೃಷ್ಟಿ  ನಮಗಿದ್ದಿದ್ದರೆ!?</p>
<p style="text-align:left;">ನ್ಯೂಟ್ರಿನೊಗಳ ಅಧ್ಯಯನ ವಿಶ್ವದ ಕುರಿತಂತೆ ನಮಗೆ ಹೊಸ ಅರಿವು ನೀಡಬಲ್ಲವು. ಎಂದೇ ನ್ಯೂಟ್ರಿನೊ ಖಗೋಳ ವಿಜ್ಞಾನ ಇಂದು ಮುಂಚೂಣಿಯ ಅಧ್ಯಯನ ಕ್ಷೇತ್ರ. ಅಮೇರಿಕದ ರೇಮಂಡ್ ಡೇವಿಸ್ (೧೯೧೪-೨೦೦೬) ನೊಬೆಲ್ ಪ್ರಶಸ್ತಿ ಪಡೆದದ್ದು ನ್ಯೂಟ್ರಿನೊ ಅಧ್ಯಯನಕ್ಕೆ (೨೦೦೨). ಸೌರನ್ಯೂಟ್ರಿನೋಗಳನ್ನು  ಪತ್ತೆ ಮಾಡಿದ ಡೇವಿಸ್ ತಮ್ಮ ಜೀವನವನ್ನೇ ನ್ಯೂಟ್ರಿನೊ ಅಧ್ಯಯನಕ್ಕೆ ಮುಡಿಪಾಗಿಟ್ಟವರು. ೨೦೦೧ರ ತನಕ ಸೌರ ನ್ಯೂಟ್ರಿನೊ ಸಂಖ್ಯೆ ದೊಡ್ದ ಸವಾಲಿನದ್ದಾಗಿತ್ತು. ಪ್ರಾಯೋಗಿಕವಾಗಿ ಅಳೆದ ನ್ಯೂಟ್ರಿನೊಗಳ ಸಂಖ್ಯೆ ಸೈದ್ಧಾಂತಿಕವಾಗಿ ಲೆಕ್ಕ ಹಾಕಿದ ನ್ಯೂಟ್ರಿನೋಗಳ ಸಂಖ್ಯೆಯೊಂದಿಗೆ ತಾಳೆ ಹೊಂದುತ್ತಿರಲಿಲ್ಲ. <a href="http://apkrishna.files.wordpress.com/2011/12/2002101000020203.jpg"><img class="alignright size-medium wp-image-606" title="ರೇಮಂಡ್ ಡೇವಿಸ್" src="http://apkrishna.files.wordpress.com/2011/12/2002101000020203.jpg?w=300&#038;h=275" alt="" width="300" height="275" /></a></p>
<p style="text-align:left;">ಹಾಗಾಗಿಯೇ ಡೇವಿಸ್ ೧೯೯೫ರಲ್ಲಿ ಹೇಳಿದರು</p>
<blockquote>
<p style="text-align:left;">&#8221; ಪ್ರಯೋಗ ಫಲಿತಾಂಶಗಳು ಮತ್ತು ಸಿದ್ಧಾಂತದ ನಿರೀಕ್ಷೆಗಳು ತಾಳೆ ಹೊಂದುತ್ತಿಲ್ಲವೆಂದಾದರೆ ಸೂರ್ಯಗರ್ಭದ ಸಂಲಯನ ಕ್ರಿಯೆಯ ವಿವರಣೆಗೆ ಇನ್ನಷ್ಟು ನವುರಾದ ಸಿದ್ಧಾಂತಗಳು ಬೇಕಾಗಿವೆ ಎಂದರ್ಥ&#8221;</p>
</blockquote>
<p style="text-align:left;">ಅದು ನಿಜವಾಯಿತು. ನ್ಯೂಟ್ರಿನೊಗಳಲ್ಲಿ ತರಹೇವಾರಿಗಳಿವೆ &#8211; ಎಲೆಕ್ಟ್ರಾನ್ ನ್ಯೂಟ್ರಿನೊ, ಮ್ಯೂ ನ್ಯೂಟ್ರಿನೊ, ಟೌ ನ್ಯೂಟ್ರಿನೋ, ಇತ್ಯಾದಿ. ಸೂರ್ಯನಿಂದ ಉತ್ಸರ್ಜನೆಯಾಗುವ ನ್ಯೂಟ್ರಿನೊಗಳಲ್ಲಿ ಮೂವತ್ತು ಶೆಕಡಾದಷ್ಟು ಮಾತ್ರ ಎಲೆಕ್ಟ್ರಾನ್ ನ್ಯೂಟ್ರಿನೋ ಮತ್ತು ಉಳಿದಂಶ ಇನ್ನಿತರ ಬಗೆಯವು. ಡೆವಿಸ್ ಪ್ರಯೋಗಗಳು ಎಲೆಕ್ಟ್ರಾನ್ ನ್ಯೂಟ್ರಿನೋಗಳನ್ನಷ್ಟೇ ಪತ್ತೆ ಮಾಡಲು ಶಕ್ತವಾಗಿದ್ದುವು. ಯಾವಾಗ  ಇನ್ನುಳಿದ ನ್ಯೂಟ್ರಿನೋಗಳನ್ನು ಪತ್ತೆ ಮಾಡಲು ಸಾಧ್ಯವಾಯಿತೋ,  ಸೌರ ನ್ಯೂಟ್ರಿನೊ ಸಮಸ್ಯೆ ಪರಿಹಾರವಾಯಿತು.</p>
<p style="text-align:left;">ಒಪೆರಾ ಪ್ರಯೋಗ</p>
<p style="text-align:left;">ನ್ಯೂಟ್ರಿನೊಗಳ ವೇಗದ ಕುರಿತಾಗಿ ಇತ್ತೀಚೆಗೆ ಸುದ್ದಿ ತಂದ ಪ್ರಯೋಗದ ಸಂಕ್ಷಿಪ್ತ ಹೆಸರು ಒಪೆರಾ (OPERA , Oscillation Project with Emulsion tracking Apparatus). ಸ್ವಿಟ್ಜರ್ಲೆಂಡಿನ ಸೆರ್ನ್ ಸಂಶೋಧನ ಕೇಂದ್ರದಿಂದ ಹೊರಟ ನ್ಯೂಟ್ರಿನೊಗಳ ದಂಡು ಆಲ್ಫ್ಸ್ ಪರ್ವತ ಶ್ರೇಣಿಯ ನೆಲದಾಳದಲ್ಲಿ ೭೩೦ಕಿಮೀ ದೂರ ಕ್ರಮಿಸಿ,  ಇಟೆಲಿಯ  ಗ್ರಾನ್‌ಸಾಸ್ಸೋ ಎಂಬಲ್ಲಿ ಸ್ಥಾಪಿಸಲಾದ ನ್ಯೂಟ್ರಿನೊ ದರ್ಶಕದ ಮೇಲೆ ಪಾತವಾಗುತ್ತವೆ.</p>
<p style="text-align:left;">ಬೆಳಕಿನ ವೇಗದಲ್ಲಿ  ಸಾಗುವ ನ್ಯೂಟ್ರಿನೊಗಳಿಗೆ ಪ್ರಯೋಗ ದೂರವನ್ನು ಕ್ರಮಿಸಲು ಕೇವಲ ೨.೪೩ ಮಿಲಿ ಸೆಕುಂಡುಗಳು ಸಾಕು.  ಅಂದರೆ ಸೆರ್ನ್‌ನಿಂದ ಹೊರಟ ನ್ಯೂಟ್ರಿನೊಗಳು ಇಟೆಲಿಯ ಒಪೆರಾ ದರ್ಶಕವನ್ನು ತಲುಪುವ ಕಾಲಾವಧಿಯನ್ನು ಉಪಗ್ರಹ ಆಧಾರಿತ (GPS) ವ್ಯವಸ್ಥೆಯನ್ನು ಬಳಸಿಕೊಂಡು ಅತ್ಯಂತ ಕರಾರುವಾಕ್ಕಾಗಿ ನಿಗದಿಪಡಿಸಲಾಗಿತ್ತು. ಆದರೆ ಆಶ್ಚರ್ಯವೆಂದರೆ ನ್ಯೂಟ್ರಿನೋಗಳು ೬೦ನ್ಯಾನೊ ಸೆಕುಂಡುಗಳಷ್ಟು (ನ್ಯಾನೋ ಅಂದರೆ ಸೆಕುಂಡಿನ ಬಿಲಿಯನೇ ಒಂದು ಪಾಲು) ಮೊದಲೇ ಬಂದುವು. ಇದೀಗ  ವಿಜ್ಞಾನಿಗಳಿಗೆ ಗಡಿಬಿಡಿ &#8211; ಕರಾರುವಾಕ್ಕಾಗಿ ಇಷ್ಟೇ   ಹೊತ್ತಿಗೆ ಬರಬೇಕಾದ ಅಭ್ಯಾಗತ ಮೊದಲೆ ಬಂದರೆ ಆಗುವ ಗಡಿಬಿಡಿಯ ಹಾಗೆ! ಇದು ಕೇವಲ ಒಂದೆರದು ನ್ಯೂಟ್ರಿನೊಗಳ ಕಥೆಯಲ್ಲ. ಸುಮಾರು ೧೫,೦೦೦ ನ್ಯೂಟ್ರಿನೊಗಳು ಹೀಗೆ ಬೆಳಕಿಗಿಂತ ಅಧಿಕ ಅವಸರದಲ್ಲಿ ಗುರಿ ತಲುಪಿವೆ. ವಿಜ್ಞಾನಿಗಳು ಆರು ತಿಂಗಳ ಕಾಲ ಮತ್ತೆ ಮತ್ತೆ ಪ್ರಯೋಗ, ಗಣನೆ ಮಾಡಿ, ಅಂತಿಮವಾಗಿ ಫಲಿತಾಂಶವನ್ನು ವಿಜ್ಞಾನ ಪ್ರಪಂಚಕ್ಕೆ ಪ್ರಕಟಿಸಿ ಇತರ ವಿಜ್ಞಾನಿಗಳಿಂದ ವಿವರಣೆ ಕೋರಿದ್ದಾರೆ;  ಪ್ರಯೋಗ ಸಂದರ್ಭದಲ್ಲಿ ತಾವು ಎಸಗಿರುವ ತಪ್ಪನ್ನು ಸೂಚಿಸಲು ವಿನಂತಿಸಿದ್ದಾರೆ.</p>
<p style="text-align:left;"><a href="http://apkrishna.files.wordpress.com/2011/12/110923084425-large.jpg"><img class="alignright size-medium wp-image-607" title="ಒಪೆರಾ ಪ್ರಯೋಗ " src="http://apkrishna.files.wordpress.com/2011/12/110923084425-large.jpg?w=300&#038;h=187" alt="" width="300" height="187" /></a></p>
<p style="text-align:left;">ಬೆಲಕಿನ ವೇಗವನ್ನು ಮೀರುವ ಕಣಗಳು ಇವೆಯೇ? ಇರಬಹುದೆಂದು ಪೌಲಿಯ ಗುರು ಸಾಮ್ಮರ್‌ಫೇಲ್ಡ್ (೧೮೬೮-೧೯೫೧) ಐನ್‌ಸ್ಟೈನರಿಗೆ ಸವಾಲು ಎಸೆದಿದ್ದರು. ಇವರ ಪರಿಕಲ್ಪನೆಗೆ ಸ್ಪಷ್ಟ ಸೈದ್ಧಾಂತಿಕ ರೂಪವನ್ನು ಭಾರತೀಯ ಭೌತವಿಜ್ಞಾನಿ ಮತ್ತು ಟೆಕ್ಸಾಸ್ ವಿವಿಯ ಪ್ರಾಧ್ಯಾಪಕ ಇಸಿಜಿ ಸುದರ್ಶನ್ (೧೯೩೧ -)  ನೀಡಿ ಅಂಥ ಕಣಗಳನ್ನು ಟೆಕಿಯಾನ್ ಎಂದು ಹೆಸರಿಸಿದರು. ಗ್ರೀಕ್ ಭಾಷೆಯಲ್ಲಿ ಟೆಕಿಯಾನ್ ಎಂದರೆ ಅಸಾಧಾರಣ ವೇಗ ಎಂಬ ಅರ್ಥವಿದೆಯಂತೆ. ಆದರೆ ಟೆಕಿಯಾನ್ ಬಗ್ಗೆ ವಿಜ್ಞಾನ ರಂಗ ಅಂಥ ಗಮನ ಕೊಡಲಿಲ್ಲ. ಸುದರ್ಶನ್ ಕ್ವಾಂಟಮ್ ಭೌತವಿಜ್ಞಾನದಲ್ಲಿ ಅಗಾಧ ಕೆಲಸ ಮಾಡಿದವರು. ಅವರ ಸಿದ್ಧಾಂತವನ್ನು ಅನುಸರಿಸಿದ ಇಬ್ಬರಿಗೆ ನೊಬೆಲ್ ಬಹುಮಾನ ಬಂತೆನ್ನುವುದನ್ನು ಗಮನಿಸಬೇಕು. ಇಂದಿನ ನ್ಯೂಟ್ರಿನೊ ಸಮಸ್ಯೆ ಟೆಕಿಯಾನುಗಳ ಬಗ್ಗೆ ಮತ್ತೆ ಆಸಕ್ತಿಯನ್ನು ಕುದುರಿಸಬಹುದು.</p>
<p style="text-align:left;">ಒಪೆರಾ ಪ್ರಯೋಗದ ವಕ್ತಾರ  ಎಂಟೊನಿಯೋ ಎರ್ಡಿಟೋ ಹೇಳುತ್ತಾರೆ &#8220;ನಾವು ಯಾವುದೋ ಚಿಕ್ಕ ತಪ್ಪು ಮಾಡಿರಬಹುದು. ಹಾಗಾಗಿ ಎಲ್ಲ ಕೋನಗಳಿಂದ ಪ್ರಯೋಗವನ್ನು ಮತ್ತೆ ಮತ್ತೆ ಪುನರಾವರ್ತಿಸಿ, ಮೂರು ವರ್ಷದ ಬಳಿಕವಷ್ಟೇ ಅಂತಿಮ ತೀರ್ಮಾನಕ್ಕೆ ಬಂದು ವಿಜ್ಞಾನ ಪ್ರಪಂಚಕ್ಕೆ ಫಲಿತಾಂಶ ಒಪ್ಪಿಸಿ, ಸೂಕ್ತ ವಿವರಣೆಯನ್ನು ಬಯಸಿದ್ದೇವೆ. ಇದೇ ಬಗೆಯ ಪ್ರಯೋಗವನ್ನು ಇನ್ನೊಂದೆಡೆ ಬೇರೆ ವಿಜ್ಞಾನಿಗಳ ತಂಡ ಮಾಡಿ ನಮ್ಮ ಫಲಿತಾಂಶವನ್ನು ಸ್ಥಿರೀಕರಿಸಿದಾಗಲಷ್ಟೇ ನಮಗೆ ನೆಮ್ಮದಿ. ಹಾಗೆ ಆಗುತ್ತದೆನ್ನುವ ಭರವಸೆ ನಮಗಿದೆ&#8221;.</p>
<p style="text-align:left;">ನ್ಯೂಟ್ರಿನೊಗಳು ಬೆಳಕಿನ ವೇಗವನ್ನು ಮೀರಿ ಧಾವಿಸುತ್ತಿರುವ ಫಲಿತಾಂಶ ಪ್ರಕಟವಾದದ್ದು ಕಳೆದ ಸಪ್ಟೆಂಬರ್ ೨೧ರಂದು. ಪರ, ವಿರೋಧ ಅಭಿಪ್ರಾಯಗಳ ನಡುವೆ ಇನ್ನಷ್ಟು ಎಚ್ಚರಿಕೆಯಿಂದ ಮತ್ತೊಮ್ಮೆ ಪ್ರಯೋಗವನ್ನು ಪುನರಾವರ್ತಿಸಿದ ವಿಜ್ಞಾನಿಗಳ ತಂಡ  ಕೆಲವು  ದಿನಗಳ ಹಿಂದೆ ಇನ್ನೊಂದು ಫಲಿತಾಂಶ ಪ್ರಕಟಿಸಿದೆ.  ಈ ಬಾರಿ ಕೂಡ ಫಲಿತಾಂಶ ಅದೇ &#8211; ಬೆಳಕಿನ ವೇಗಕ್ಕಿಂತ ತುಸು ಅಧಿಕ ವೇಗದಲ್ಲಿಯೇ ನ್ಯೂಟ್ರಿನೋಗಳು ಧಾವಿಸುತ್ತಿದ್ದಾವೆ.</p>
<p style="text-align:left;">ನ್ಯೂಟ್ರಿನೋಗಳು ಬೆಳಕಿಗಿಂತ ವೇಗದಲ್ಲಿ ಚಲಿಸುವುದಾದರೆ, ಆ ನ್ಯೂಟ್ರಿನೊಗಳು ಎಲೆಕ್ಟ್ರಾನ್ ಮತ್ತು ಪಾಸಿಟ್ರಾನ್ ಎಂಬ ಕಣಗಳಾಗಿ ಕ್ಷಯಿಸುವುದರೊಂದಿಗೆ ಸೆರೆಂಕೋವ್ ವಿಕಿರಣವನ್ನು ವಿಕಿರಿಸುತ್ತ  ಅವುಗಳ ವೇಗ ಹಂತಹಂತವಾಗಿ ಕಡಿಮೆಯಾಗುತ್ತ ಅಂತಿಮವಾಗಿ ಬೆಳಕಿನ ವೇಗಕ್ಕಿಂತ ಕಡಿಮೆಯಾಗಬೇಕೆಂದು ನೊಬೆಲ್ ವಿಜ್ಞಾನಿ ಗ್ಲಾಷೋ ಮತ್ತು ಕೊಹೆನ್ ತಮ್ಮ ಪ್ರಕಟಿತ ಲೇಖನದಲ್ಲಿ ಸೂಚಿಸಿದರು. ಅವರ ಸೂಚನೆಯನ್ನು ಕೂಡಲೇ ಅನುಸರಿಸಿದ ಒಪೆರಾ ತಂಡದ ಕೆಳ ಅಂತಸ್ತಿನಲ್ಲಿರುವ ಇನ್ನೊಂದು ವಿಜ್ಞಾನಿಗಳ ತಂಡ ICARUS ( <strong>Imaging Cosmic And Rare Underground Signal </strong> ) ನ್ಯೂಟ್ರಿನೊಗಳಲ್ಲಿ ಶಕ್ತಿಯ ವ್ಯತ್ಯಾಸವಾಗಿದೆಯೇ ಎಂಬ ತಪಾಸಣೆ ಮಾಡಿತು. ಆದರೆ ಅವರಿಗೆ   ನ್ಯೂಟ್ರಿನೊಗಳ ಶಕ್ತಿಯಲ್ಲಿ ಯಾವ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಈ ಕುರಿತು ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ ಅಂತರ್ಜಾಲವೆಂಬ ಸಾಗರದಲ್ಲಿ.</p>
<p style="text-align:left;"><a href="http://apkrishna.files.wordpress.com/2011/12/cerenkov.jpg"><img class="alignleft size-medium wp-image-608" title="ಸೆರೆಂಕೋವ್ ವಿಕಿರಣ - ರಷ್ಯನ್ ಭೌತವಿದ ಸೆರೆಂಕೋವ್ ಆವಿಷ್ಕರ್ತ " src="http://apkrishna.files.wordpress.com/2011/12/cerenkov.jpg?w=300&#038;h=225" alt="" width="300" height="225" /></a></p>
<p style="text-align:left;">ಹಾಗೆ ನೋಡಿದರೆ ನ್ಯೂಟ್ರಿನೊಗಳು ಬೆಳಕಿಗಿಂತ ತುಸು ಹೆಚ್ಚಿನ ವೇಗದಲ್ಲಿ ಚಲಿಸುತ್ತಿವೆಯೋ ಎಂಬ ಗುಮಾನಿ ೨೦೦೭ರಲ್ಲಿಯೇ ಬಂದಿತ್ತಂತೆ. ಇದು ನಡೆದದ್ದು ಅಮೇರಿಕದ ಫರ್ಮಿ ಪ್ರಯೋಗಾಲಯದಲ್ಲಿ. ಇಲಿನಾಯ್ಸ್ ಪ್ರಾಂತ್ಯದಲ್ಲಿರುವ  ಫರ್ಮಿ ಪ್ರಯೋಗಾಲಯದಿಂದ ಹೊರಟ ನ್ಯೂಟ್ರಿನೋಗಳ ದಂಡು  ೭೩೨ ಕಿಮೀ ದೂರ ಕ್ರಮಿಸಿ ಮಿನಿಸೋಟಾದಲ್ಲಿರುವ ಗಣಿಯಾಳದ ದರ್ಶಕವನ್ನು ತಲುಪುತ್ತವೆ. ನ್ಯೂಟ್ರಿನೊಗಳ ಆಂದೋಲನವನ್ನು ಯಶಸ್ವಿಯಾಗಿ ಪತ್ತೆ ಮಾಡಿದ ಆ ಪ್ರಯೋಗದ ಸಂದರ್ಭದಲ್ಲಿ ನ್ಯೂಟ್ರಿನೊ ವೇಗ ಬೆಳಕಿಗಿಂತ ತುಸು ಹೆಚ್ಚಿರುವುದನ್ನು ಗಮನಿಸಿದರೂ, ಆ ಕುರಿತು ಹೆಚ್ಚಿನ ಗಮನ ಕೊಡಲಿಲ್ಲವಂತೆ &#8211; ಪ್ರಾಯಶ: ತಮ್ಮ ಪ್ರಯೋಗದಲ್ಲಿ ಒಂದಿಷ್ಟು ತಪ್ಪುಗಳು ನುಸುಳಿರಬಹುದೆನ್ನುವ ಭಾವದಿಂದ. ಇದೀಗ ಆ ಹಳೆಯ ಫಲಿತಾಂಶಗಳ ದಫ್ತರವನ್ನು ಮತ್ತೆ ತೆರೆದಿದ್ದಾರೆ ; ಕೂಲಂಕಷವಾಗಿ ಪರಿಶೀಲನೆಗೆ ತೊಡಗಿದ್ದಾರೆ. ಇದರೊಂದಿಗೆ ಇನ್ನಷ್ಟು ನಿಖರ ಉಪಕರಣಗಳನ್ನು ಬಳಸಿಕೊಂಡು ನ್ಯೂಟ್ರಿನೊ ವೇಗವನ್ನು ಅಳೆಯಲು ಫರ್ಮಿ ಪ್ರಯೋಗಾಲಯದ ವಿಜ್ಞಾನಿಗಳು  ಸಜ್ಜಾಗುತ್ತಿದ್ದಾರೆ. ವರ್ಷದೊಳಗೆ  ನ್ಯೂಟ್ರಿನೋ ವೇಗದ ಕುರಿತು ಫರ್ಮಿ ಪ್ರಯೋಗಾಲಯ ತನ್ನ ಫಲಿತಾಂಶವನ್ನು ಘೋಷಿಸಲಿದೆ.</p>
<p style="text-align:left;">ಇತ್ತ ಜಪಾನಿನಲ್ಲಿ ಮತ್ತೊಂದು ತಂಡ ನ್ಯೂಟ್ರಿನೊ ವೇಗವನ್ನು ಅಳೆಯುವುದಕ್ಕೆ ಸಿದ್ಧವಾಗಿದೆ. ಜಪಾನಿನ ಹಿಡಾ ಪ್ರಾಂತ್ಯದಲ್ಲಿರುವ ಕಾಮಿಯೋಕಾ ಎಂಬ ಪರ್ವತದ ಕೆಳಗೆ ಒಂದು ಕಿಮೀ ಆಳದಲ್ಲಿ ನ್ಯೂಟ್ರಿನೋ ಆಧ್ಯಯನಕ್ಕೆ ಅತ್ಯಾಧುನಿಕ ಸಂಶೋಧನಕೇಂದ್ರವಿದೆ. ಇದನ್ನು ಬಳಸಿಕೊಂಡು ನ್ಯೂಟ್ರಿನೊ ವೇಗವನ್ನು  ಅಳೆಯಲು ಉದ್ಧೇಶಿಸಲಾಗಿದೆ.  ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ನ್ಯೂಟ್ರಿನೊ ಕುರಿತು ರೋಚಕ ಸುದ್ದಿಗಳು ಬರುವುದಂತೂ ನಿಜ.</p>
<p style="text-align:left;">ಪ್ರಬಲ ಗುರುತ್ವ ಕ್ಷೇತ್ರದ ಸನಿಹದಲ್ಲಿ ಬೆಳಕಿನ ಕಿರಣ ಬಾಗುತ್ತದೆಂದು ಐನ್‌ಸ್ಟೈನ್ ಸೈದ್ಧಾಂತಿಕವಾಗಿ ಹೇಳಿದರು ತಮ್ಮ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದಲ್ಲಿ (೧೯೧೫). ಇದು ನಿಜವೇ? ದ್ರವ್ಯರಾಶಿ ಇಲ್ಲದ ಫೋಟಾನುಗಳ ದಂಡು ಗುರುತ್ವ ಕ್ಷೇತ್ರದಲ್ಲಿ ಬಾಗುತ್ತದೆಯೇ? ಬೆಳಕಿನ ಈ ಬಾಗುವಿಕೆಯನ್ನು  ಸಂಪೂರ್ಣ ಸೂರ್ಯಗ್ರಹಣ ಸಂದರ್ಭದಲ್ಲಿ (೧೯೧೯) ಬ್ರಿಟಿಷ್ ಖಗೋಲವಿದ ಎಡಿಂಗ್ಟನ್ ಮತ್ತು ಸಂಗಡಿಗರು ದಕ್ಷಿಣ ಆಫ್ರಿಕಾದ ಪ್ರಿನ್ಸಿಪೀ ಎಂಬಲ್ಲಿ ಪ್ರಯೋಗ ಮೂಲಕ ದಾಖಲಿಸಿದರು. ಇದು ಸಿದ್ಧಾಂತಕ್ಕೆ ದಕ್ಕಿದ ಪ್ರಾಯೋಗಿಕ ಸಮರ್ಥನೆ. ಅಂದು ಪತ್ರಿಕೆಗಳು ಸಾರಿದುವು &#8220;ವಿಜ್ಞಾನದಲ್ಲಿ ರಕ್ತಪಾತವಿಲ್ಲದ ಕ್ರಾಂತಿ &#8211; ವಿಶ್ವದ ಬಗ್ಗೆ ಹೊಸ ಸಿದ್ಧಾಂತ &#8211; ನ್ಯೂಟನ್ ಪರಿಕಲ್ಪನೆಗಳು ಬುಡಮೇಲಾಗಿವೆ&#8221; ಇಂದು ಒಪೆರಾ ಪ್ರಯೋಗ ಫಲಿತಾಂಶಗಳು &#8220;ಐನ್‌ಸ್ಟೈನ್ ಪರಿಕಲ್ಪನೆಗಳು ಬುಡಮೇಲಾಗಿವೆ&#8221; ಎನ್ನುವ ಸೂಚನೆ ಕೊಡತೊಡಗಿವೆಯೇ?.</p>
<p style="text-align:left;">ಒಂದು ವೇಳೆ ವರ್ಷದೊಳಗೆ ಒಪೆರಾ ಪ್ರಯೋಗದ ಇಂದಿನ ಫಲಿತಾಂಶಗಳು ಬೇರೆ ಬೇರೆ ಪ್ರಯೋಗಾಲಯಗಳಿಂದ ಸ್ಥಿರೀಕೃತಗೊಂಡರೆ, ನ್ಯೂಟನ್ ಸಿದ್ಧಾಂತಕ್ಕೆ ಕ್ರಾಂತೀಕಾರೀ ಬದಲಾವಣೆಯನ್ನು ಅಂದು ಐನ್‌ಸ್ಟೈನ್ ಹೇಗೆ ತಂದರೋ ಅಂಥದೇ ಬದಲಾವಣೆಯನ್ನು ಇಂದು ಐನ್‌ಸ್ಟೈನ್  ಸಿದ್ಧಾಂತಕ್ಕೆ ರೂಪಿಸಬೇಕಾಗುತ್ತದೆ.  ಆದರೆ ಒಂದು ಮುಖ್ಯ ವ್ಯತ್ಯಾಸವೆಂದರೆ ಐನ್‌ಸ್ಟೈನ್ ನಿಸರ್ಗದ ಸತ್ಯದ ಬಗ್ಗೆ ಚಿಂತಿಸುತ್ತ ಸಿದ್ಧಾಂತವನ್ನು ಮೊದಲು ಕಟ್ಟಿದರು, ಆ ಸಿದ್ಧಾಂತದ ನಿರೀಕ್ಷೆಗಳನ್ನು ಮತ್ತೆ ಪ್ರಯೋಗಗಳು ಸಾಬೀತು ಮಾಡಿದುವು. ಆದರೆ ಇಲ್ಲಿ? ಪ್ರಯೋಗ ಫಲಿತಾಂಶಗಳು ಮೊದಲು. ಅವುಗಳಿಗೆ ಹೊಸ ವಿವರಣೆಗಳು, ಸಿದ್ಧಾಂತಗಳು ಮತ್ತೆ ರೂಪುಗೊಳ್ಳಬೇಕಾಗುತ್ತದೆ.</p>
<p style="text-align:left;">ಹಾಗೆಯೇ ಆಗಲಿ. ಓಹ್, ವಿಜ್ಞಾನದ ಮುನ್ನಡೆಗೆ ಮತ್ತು ಎಳೆಯ ಪ್ರತಿಭೆಯ ಕನಸುಗಳಿಗೆ ಆಗ ಅದೆಂಥ ಅದ್ಭುತ ಅವಕಾಶ ತೆರೆದುಕೊಳ್ಳುತ್ತದೆ!</p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/600/"><img alt="" border="0" src="http://feeds.wordpress.com/1.0/comments/apkrishna.wordpress.com/600/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/600/"><img alt="" border="0" src="http://feeds.wordpress.com/1.0/delicious/apkrishna.wordpress.com/600/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/600/"><img alt="" border="0" src="http://feeds.wordpress.com/1.0/facebook/apkrishna.wordpress.com/600/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/600/"><img alt="" border="0" src="http://feeds.wordpress.com/1.0/twitter/apkrishna.wordpress.com/600/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/600/"><img alt="" border="0" src="http://feeds.wordpress.com/1.0/stumble/apkrishna.wordpress.com/600/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/600/"><img alt="" border="0" src="http://feeds.wordpress.com/1.0/digg/apkrishna.wordpress.com/600/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/600/"><img alt="" border="0" src="http://feeds.wordpress.com/1.0/reddit/apkrishna.wordpress.com/600/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=600&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/12/01/%e0%b2%ac%e0%b3%86%e0%b2%b3%e0%b2%95%e0%b2%bf%e0%b2%a8-%e0%b2%b5%e0%b3%87%e0%b2%97%e0%b2%b5-%e0%b2%ae%e0%b3%80%e0%b2%b0%e0%b2%b2%e0%b3%81-%e0%b2%b9%e0%b3%8a%e0%b2%b0%e0%b2%9f-%e0%b2%aa%e0%b3%8c/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2011/12/cosmic-rays.jpg" medium="image">
			<media:title type="html">cosmic-rays</media:title>
		</media:content>

		<media:content url="http://apkrishna.files.wordpress.com/2011/12/lhc-cern-over.jpg?w=300" medium="image">
			<media:title type="html">lhc-cern-over</media:title>
		</media:content>

		<media:content url="http://apkrishna.files.wordpress.com/2011/12/albert-einstein-self-improvement.jpg?w=300" medium="image">
			<media:title type="html">albert einstein self improvement</media:title>
		</media:content>

		<media:content url="http://apkrishna.files.wordpress.com/2011/12/pauli.jpg?w=214" medium="image">
			<media:title type="html">Pauli</media:title>
		</media:content>

		<media:content url="http://apkrishna.files.wordpress.com/2011/12/pauli_bohr_tippetop.jpg?w=300" medium="image">
			<media:title type="html">ಪೌಲಿ ಮತ್ತು ಬೋರ್ - ಇಬ್ಬರು ಮಹಾನ್ ದಾರ್ಶನಿಕ ವಿಜ್ಞಾನಿಗಳು ಬುಗರಿಯ ಸುತ್ತ ! </media:title>
		</media:content>

		<media:content url="http://apkrishna.files.wordpress.com/2011/12/2002101000020203.jpg?w=300" medium="image">
			<media:title type="html">ರೇಮಂಡ್ ಡೇವಿಸ್</media:title>
		</media:content>

		<media:content url="http://apkrishna.files.wordpress.com/2011/12/110923084425-large.jpg?w=300" medium="image">
			<media:title type="html">ಒಪೆರಾ ಪ್ರಯೋಗ </media:title>
		</media:content>

		<media:content url="http://apkrishna.files.wordpress.com/2011/12/cerenkov.jpg?w=300" medium="image">
			<media:title type="html">ಸೆರೆಂಕೋವ್ ವಿಕಿರಣ - ರಷ್ಯನ್ ಭೌತವಿದ ಸೆರೆಂಕೋವ್ ಆವಿಷ್ಕರ್ತ </media:title>
		</media:content>
	</item>
		<item>
		<title>ಬಂದಿದೆ ಸೂಪರ್ನೋವಾ</title>
		<link>http://apkrishna.wordpress.com/2011/11/15/%e0%b2%ac%e0%b2%82%e0%b2%a6%e0%b2%bf%e0%b2%a6%e0%b3%86-%e0%b2%b8%e0%b3%82%e0%b2%aa%e0%b2%b0%e0%b3%8d%e0%b2%a8%e0%b3%8b%e0%b2%b5%e0%b2%be/</link>
		<comments>http://apkrishna.wordpress.com/2011/11/15/%e0%b2%ac%e0%b2%82%e0%b2%a6%e0%b2%bf%e0%b2%a6%e0%b3%86-%e0%b2%b8%e0%b3%82%e0%b2%aa%e0%b2%b0%e0%b3%8d%e0%b2%a8%e0%b3%8b%e0%b2%b5%e0%b2%be/#comments</comments>
		<pubDate>Tue, 15 Nov 2011 17:11:07 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=592</guid>
		<description><![CDATA[&#160; &#160; ನಾವಿರುವ ವಿಶ್ವ ಅದ್ಭುತ. ಈ ಅದ್ಭುತ ವಿಶ್ವವನ್ನು ಇನ್ನಷ್ಟು ಅದ್ಭುತವಾಗಿ ಡಿವಿ ಗುಂಡಪ್ಪನವರು ವರ್ಣಿಸಿದ್ದಾರೆ ಏನು ಭೈರವ ಲೀಲೆ ಈ ವಿಶ್ವವಿಭ್ರಮಣೆ ಏನು ಭೂತಗ್ರಾಮ ನರ್ತನೋನ್ಮಾದ ಏನಗ್ನಿಗೋಳಗಳು ಏನಂತರಾಳಗಳು ಏನು ವಿಸ್ಮಯ ಸೃಷ್ಟಿ &#8211; ಮಂಕುತಿಮ್ಮ ಇಂಥ ಅದ್ಭುತ ವಿಶ್ವದ ವಿಸ್ಮಯ ಸೂಪರ್ನೋವಾ. ಈ ಕುರಿತು ಬರೆದ ಬರಹ ಕೆಂಡ ಸಂಪಿಗೆಯಲ್ಲಿ  ಪ್ರಕಟವಾಗಿದೆ. ದಾಖಲೆಗಾಗಿ ಇಲ್ಲಿ ಇದೀಗ ನನ್ನ ತಾಣದಲ್ಲಿ ಏರಿಸಿದ್ದೇನೆ. ಕೆಂಡ ಸಂಪಿಗೆಯಲ್ಲಿ ಆ ಲೇಖನದ ಕುರಿತು ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. ಸೂಪರ್ನೋವಾ [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=592&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p>&nbsp;</p>
<p>&nbsp;</p>
<p><img class="alignright size-medium wp-image-593" title="IDL TIFF file" src="http://apkrishna.files.wordpress.com/2011/11/1138_xray_opt.jpg?w=300&#038;h=295" alt="" width="300" height="295" /></p>
<p>ನಾವಿರುವ ವಿಶ್ವ ಅದ್ಭುತ. ಈ ಅದ್ಭುತ ವಿಶ್ವವನ್ನು ಇನ್ನಷ್ಟು ಅದ್ಭುತವಾಗಿ ಡಿವಿ ಗುಂಡಪ್ಪನವರು ವರ್ಣಿಸಿದ್ದಾರೆ</p>
<blockquote><p>ಏನು ಭೈರವ ಲೀಲೆ ಈ ವಿಶ್ವವಿಭ್ರಮಣೆ</p>
<p>ಏನು ಭೂತಗ್ರಾಮ ನರ್ತನೋನ್ಮಾದ</p>
<p>ಏನಗ್ನಿಗೋಳಗಳು ಏನಂತರಾಳಗಳು</p>
<p>ಏನು ವಿಸ್ಮಯ ಸೃಷ್ಟಿ &#8211; ಮಂಕುತಿಮ್ಮ</p></blockquote>
<p>ಇಂಥ ಅದ್ಭುತ ವಿಶ್ವದ ವಿಸ್ಮಯ ಸೂಪರ್ನೋವಾ. ಈ ಕುರಿತು ಬರೆದ ಬರಹ <a title="ಕೆಂಡ ಸಂಪಿಗೆಯಲ್ಲಿ ಲೇಖನ" href="http://www.kendasampige.com/article.php?id=4879">ಕೆಂಡ ಸಂಪಿಗೆಯಲ್ಲಿ </a> ಪ್ರಕಟವಾಗಿದೆ. ದಾಖಲೆಗಾಗಿ ಇಲ್ಲಿ ಇದೀಗ ನನ್ನ ತಾಣದಲ್ಲಿ ಏರಿಸಿದ್ದೇನೆ. ಕೆಂಡ ಸಂಪಿಗೆಯಲ್ಲಿ ಆ ಲೇಖನದ ಕುರಿತು ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. ಸೂಪರ್ನೋವಾ ಕುರಿತು ಲೇಖನ ಅಗತ್ಯವಿರಲ್ಲ &#8211; ಅದಕ್ಕಿಂತ ಮುಖ್ಯ &#8211; ಬೇರೆ ದೈನಂದಿನ ಸಮಸ್ಯೆಗಳಿವೆ. ಆ ಕುರಿತು ಹೇಳಬಹುದಾಗಿತ್ತು, ವಿಜ್ಞಾನದ ಕರಾಳ ಮುಖದ ಚರ್ಚೆ ಇಂದಿನ ತುರ್ತು &#8211; ಇತ್ಯಾದಿ. ನೀವು ಒಮ್ಮೆ ಅಲ್ಲಿಗೆ ಹೋಗಿ ನಿಮ್ಮ ಪ್ರತಿಕ್ರಿಯೆ ಸೇರಿಸಬಹುದು. ಅಥವಾ ಇಲ್ಲಿಯೇ ದಾಖಲಿಸಬಹುದು. ಬನ್ನಿ ಸೂಪರ್ನೋವಾದ ಕುರಿತು ಒಂದಷ್ಟು ವಿಷಯ &#8211; ವಿವರ ಹಂಚಿಕೊಳ್ಳೋಣ</p>
<p><span id="more-592"></span></p>
<p>ಹೊಸ ಸುದ್ದಿ</p>
<p>ಖಗೋಳಪ್ರಿಯರಿಗೆ ಇದೀಗ ಸಂಭ್ರಮ. ಅವಸಾನದ ಆಕ್ರಂದನವೋ ಎಂಬಂತೆ  ನಕ್ಷತ್ರವೊಂದು ಅಸಾಧಾರಣ ಬಗೆಯಲ್ಲಿ ಆಸ್ಫೋಟಿಸುವ ಅಪರೂಪದ ವಿದ್ಯಮಾನವಾದ ಸೂಪರ್ನೋವಾ ಕಾಣಿಸುತ್ತಿದೆಯೆಂಬ ಸುದ್ದಿ ಬಂದಿದೆ.</p>
<p>ಬರಿಗಣ್ಣಿಗೆ ಬಿಡಿ, ಅತ್ಯಂತ ಪ್ರಬಲ ದೂರದರ್ಶಕಕ್ಕೂ ನಿಲುಕದಷ್ಟು ದೂರದಲ್ಲಿರುವ ಬ್ರಹ್ಮಾಂಡದಾಳದಲ್ಲಿ ನಕ್ಷತ್ರವೊಂದು ಆಸ್ಫೋಟಿಸಿದಾಗ ಅದರ ಉಜ್ವಲತೆ ಅಥವಾ ಕಾಂತಿ ಮಾಮೂಲಿಗಿಂತ ಹಲವು ಲಕ್ಷ ಪಟ್ಟು ಹೆಚ್ಚುತ್ತದೆ. ಅಲ್ಲಿಂದ ಹೊರಟ ಬೆಳಕಿನ ಕಂಬಿ ಅನಂತ ವ್ಯೋಮವನ್ನು ದಾಟಿ, ಇಳೆಯ ದಟ್ಟ ವಾಯುಮಂಡಲವನ್ನು ತೂರಿ ನಮ್ಮ ಕಣ್ಣು ಸೇರಿದಾಗ ರಾತ್ರೆಯ ಆಗಸದಲ್ಲಿ ಚೆಲ್ಲಿ ಹೋಗಿರುವ ಅಸಂಖ್ಯ ತಾರೆಗಳ ನಡುವೆ ಹೊಸದೊಂದು ಬೆಳಕಿನ ಮಚ್ಚೆ ಗೋಚರಿಸುತ್ತದೆ. ಅಂಥದೊಂದು  ಸೂಪರ್ನೋವಾ ಇದೀಗ ಕಾಣಿಸತೊಡಗಿದೆ. ಆದರೆ ಬರಿಗಣ್ಣಿಗೆ ಇದು ಗೋಚರಿಸದು. ದುರ್ಬೀನು ಅಥವಾ ದೂರದರ್ಶಕ ಅನಿವಾರ್ಯ.</p>
<p>ದೂರದರ್ಶಕಗಳಿಂದ ಖಗೋಳವಿದರು ಆಕಾಶವನ್ನು ನಿರಂತರ ಗಮನಿಸುತ್ತಲೇ ಇರುತ್ತಾರೆ &#8211; ನಿತ್ಯ ಚಿರಂತನವೆಂಬಂತಿರುವ ಆಕಾಶದಲ್ಲಿ ಹೊಸದೇನಾದರೂ ಗೋಚರಿಸುತ್ತದೆಯೇ ಎಂಬ ಕುತೂಹಲ ಅವರಿಗೆ. ನಿಸರ್ಗ ನಿರಾಸೆ ಮಾಡಲಿಲ್ಲ. ಅಮೇರಿಕದ ಲಾರೆನ್ಸ್ ಬರ್ಕ್ಲೀ ಸಂಶೋಧನಾಲಯದ ಖಗೋಳ ವಿಜ್ಞಾನಿಗಳು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕಾಣಿಸಿಕೊಡ ಸೂಪರ್ನೋವಾಗಳಲ್ಲಿಯೇ ಅತ್ಯುಜ್ವಲವಾದದ್ದನ್ನು ಪತ್ತೆ ಮಾಡಿದ್ದಾರೆ.  ಈ ಸೂಪರ್ನೋವಾ ಇರುವುದು ಸಪ್ತರ್ಷಿ ಮಂಡಲದ ದಿಶೆಯಲ್ಲಿ.</p>
<p>ಆಕಾಶ ಕಾಲ ಮತ್ತು ಎಲ್ಲ ದ್ರವ್ಯಗಳನ್ನು ಒಳಗೊಂಡ ಈ ವಿಶ್ವ ಅದೆಷ್ಟು ಅಗಾಧವೆಂದರೆ ಅಲ್ಲಿ ಸುಮಾರು ಕೋಟಿ ಕೋಟಿ ಬ್ರಹ್ಮಾಂಡಗಳಿವೆ ಮತ್ತು ಪ್ರತಿಯೊಂದು ಬ್ರಹ್ಮಾಂಡಲ್ಲಿಯೂ ಮತ್ತೆ ಹಲವು ಸಾವಿರ ಕೋಟಿ ನಕ್ಷತ್ರಗಳಿವೆ. ಅಂಥ ಬ್ರಹ್ಮಾಂಡಗಳ ಸಮುಚ್ಚಯಗಳಲ್ಲಿ ನಾವಿರುವ ಬ್ರಹ್ಮಾಂಡವೇ ಆಕಾಶಗಂಗೆ (Galaxy). ಆಕಾಶಗಂಗೆಯಲ್ಲಿ ಯಾದೃಚ್ಛಿಕವಾಗಿ ಹರಡಿ ಹೋಗಿರುವ ನಕ್ಷತ್ರಗಳಲ್ಲಿ ನಮಗೆ ಗೋಚರಿಸುತ್ತವೆ ಬಗೆ ಬಗೆಯ ವಿನ್ಯಾಸಗಳು.  ಕಂಡ ವಿನ್ಯಾಸಗಳಲ್ಲಿ ಹುಟ್ಟಿಕೊಂಡಿವೆ ಕಥೆಗಳು, ಐತಿಹ್ಯಗಳು ಸಂಸ್ಕೃತಿ ಮತ್ತು ಇತಿಹಾಸದ ಭಾಗಗಳಾಗಿ. ಸಪ್ತರ್ಷಿ ಮಂಡಲ ಅಂಥದೊಂದು ನಕ್ಷತ್ರ ಪುಂಜ. ಉತ್ತರಾಕಾಶದಲ್ಲಿ ಗೋಚರಿಸುವ ಈ ನಕ್ಷತ್ರ ಪುಂಜಗಳಲ್ಲಿರುವ  ಏಳು ನಕ್ಷತ್ರಗಳು &#8211; ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ಅಂಗೀರಸ್ಸು ಮರೀಚಿ, ವಸಿಷ್ಠ  &#8211; ಪ್ರಶ್ನಾರ್ಥಕ ಚಿಹ್ನೆಯಾಗಿ ಕಾಣಿಸುತ್ತವೆ. ಇವೆಲ್ಲವೂ ನಮ್ಮ ಬ್ರಹ್ಮಾಂಡದ ನಕ್ಷತ್ರಗಳು &#8211; ಎಂದೇ ಬರಿಗಣ್ಣಿಗೆ ಗೋಚರಿಸುತ್ತವೆ. ಹೊಸದಾಗಿ ಕಂಡ ಸೂಪರ್ನೋವಾ ಈ ದಿಶೆಯಲ್ಲಿಯೇ ಇದೆ &#8211; ಹೊರತು ನಮ್ಮ ಬ್ರಹ್ಮಾಂಡಕ್ಕೆ ಸೇರಿದ್ದಲ್ಲ.</p>
<p>ಸಪ್ತರ್ಷಿ ಮಂಡಲದಲ್ಲಿ ಮೊದಲ ನಾಲ್ಕು ನಕ್ಷತ್ರಗಳು ದೊಡ್ದ ತ್ರಾಪಿಜ್ಯವನ್ನು ನಿರ್ಮಿಸಿದರೆ, ಉಳಿದವು ಕೆಳಭಾಗದಲ್ಲಿ ಅದರ ಕೈ ಎನ್ನುವಂತೆ ಚಾಚಿಕೊಂಡಿದೆ. ಈ ಕೈಯ ಕೆಳ  ಭಾಗವನ್ನು ನಿಟ್ಟಿಸಿದರೆ ಅಲ್ಲಿ ಸೂಪರ್ನೋವಾ ನಕ್ಷತ್ರ ಕಾಣಿಸುತ್ತದೆಂದು ಖಗೋಳವಿದರು ತಿಳಿಸಿದ್ದಾರೆ.<a href="http://apkrishna.files.wordpress.com/2011/11/supernova.jpg"><img class="alignright size-medium wp-image-594" title="ಸಪ್ತರ್ಷಿಮಂಡಲ" src="http://apkrishna.files.wordpress.com/2011/11/supernova.jpg?w=300&#038;h=216" alt="" width="300" height="216" /></a></p>
<p>PTF 11  ಎಂದು ಹೆಸರಿಸಿದ ಈ ಸೂಪರ್ನೋವಾ ಇರುವುದು ಪಿನ್ವ್ಹೀಲ್ ಅಥವಾ ಗಾಲಿ ಬ್ರಹ್ಮಾಂಡದಲ್ಲಿ. ನೋಡುವುದಕ್ಕೆ ಸುರುಳಿಯಾಕಾರದ ಈ ಬ್ರಹ್ಮಾಂಡ ನಮ್ಮಿಂದ ೨೧ ಮಿಲಿಯ ಜ್ಯೋತಿರ್ವರ್ಷ ದೂರದಲ್ಲಿದೆ. ಸೆಕುಂಡಿಗೆ ಮೂರುಲಕ್ಷ ಕಿಮೀನಂತೆ ಧಾವಿಸುವ ಬೆಳಕಿನ ಕಿರಣ ಒಂದು ವರ್ಷದಲ್ಲಿ ಕ್ರಮಿಸುವ ಒಂಬತ್ತೂವರೆ ಸಾವಿರ ಬಿಲಿಯ ಕಿಮೀ ದೂರವೇ ಜ್ಯೋತಿರ್ವರ್ಷ.</p>
<p>ರಾತ್ರೆಯ ಆಕಾಶದಲ್ಲಿ ಗೋಚರಿಸುವ ತಾರೆಗಳ ಅದ್ಭುತ ಚಿತ್ರ ವಾಸ್ತವವಾಗಿ ಭೂತಕಾಲದ್ದು. ಅವೆಲ್ಲವೂ ನಮ್ಮಿಂದ ಹಲವು ಲಕ್ಷ ಕಿಮೀ ದೂರದಲ್ಲಿವೆ. ಅಲ್ಲಿಂದ ಹೊರಟ ಬೆಳಕಿನ ಕಿರಣ ಸೆಕುಂಡಿಗೆ ಮೂರುಲಕ್ಷ ಕಿಮೀನಂತೆ ಸಾಗುತ್ತ ಒಂದು ವರ್ಷದಲ್ಲಿ ಸುಮಾರು ಒಂಬತ್ತೂವರೆ ಸಾವಿರ ಬಿಲಿಯ ಕಿಮೀ ಕ್ರಮಿಸಿ (ಜ್ಯೋತಿರ್ವರ್ಷ) ನಮ್ಮ ಕಣ್ಣು ಸೇರಿದಾಗ ಆ ನಕ್ಷತ್ರಗಳು ನಮಗೆ ಗೋಚರಿಸುತ್ತವೆ.  ವಾಸ್ತವವಾಗಿ ಈಗ ನಮಗೆ ಕಾಣಿಸುವ ಸೂರ್ಯ ಎಂಟು ನಿಮಿಷಗಳಷ್ಟು ಹಿಂದಿನದು.</p>
<p>ಅಂದರೆ PTF 11  ಸೂಪರ್ನೋವಾ ಸಂಭವಿಸಿದ್ದು ಇಂದು ನಿನ್ನೆಯಲ್ಲ. ೨೧ ಮಿಲಿಯ ಅಥವಾ ೨೧೦ ಲಕ್ಷ ವರ್ಷಗಳ ಹಿಂದೆ. ಅಂದು ಸಂಭವಿಸಿದ ನಕ್ಷತ್ರ ಆಸ್ಫೋಟ ಇಂದು ಅನಾವರಣಗೊಳ್ಳುತ್ತಿದೆ.</p>
<p>ಅತಿಥಿ ನಕ್ಷತ್ರ</p>
<p>ಕ್ರಿಸ್ತಪೂರ್ವ ಎರಡನೇ ಶತಮಾನ. ಗ್ರಿಕ್ ಖಗೋಳವಿದ ಹಿಪ್ಪಾರ್ಕಸ್ (ಕ್ರಿ.ಪೂ ೧೪೬ -೧೨೭) ಅದೊಂದು ದಿನ ಬದಲಾಗದ ಆಕಾಶದಲ್ಲಿ ಪ್ರಕಾಶಮಾನವಾದ ಬೆಳಕಿನ ಪುಂಜವನ್ನು  ಕಂಡ. ಹಿಪ್ಪಾರ್ಕಸ್ ಅಂದು ನೋಡಿದ್ದು ವಾಸ್ತವವಾಗಿ ನಕ್ಷತ್ರದ ಮಹಾಸ್ಪೋಟವನ್ನು &#8211; ಅಂದರೆ ಸೂಪರ್ನೋವಾವನ್ನು. ಹಟಾತ್ತನೆ ಅನಾವರಣಗೊಂಡ ಈ ಹೊಸ ನಕ್ಷತ್ರವನ್ನು &#8220;ಅತಿಥಿ ನಕ್ಷತ್ರ&#8221; ಎಂದು ಕರೆದ. ಮುಂದಿನ ದಿನಗಳಲ್ಲಿ ಚೀನಾ, ಅರೇಬಿಯಾ, ಈಜಿಪ್ಟ್ ಮತ್ತು ಯುರೋಪಿನ ಕೆಲವು ದೇಶಗಳಲ್ಲಿ ಕೂಡ ಇಂಥ ಅತಿಥಿ ತಾರೆಗಳನ್ನು ಗಮನಿಸಿದ್ದಕ್ಕೆ ದಾಖಲೆಗಳಿವೆ.</p>
<p>ಕ್ರಿಸ್ತಶಕ ೧೦೫೪ರಲ್ಲಿ ವೃಷಭ ರಾಶಿಯಲ್ಲಿ ಸಂಭವಿಸಿದ ಸೂಪರ್ನೋವಾ ಆಸ್ಪೋಟದ ಬಳಿಕ ಅಳಿದುಳಿದದ್ದು ನಿಹಾರಿಕೆಯಾಯಿತು.   ಯದ್ವಾತದ್ವ ಚಾಚಿಕೊಂಡ ಅಂಚುಗಳನ್ನು ಹೊಂದಿರುವ ಈ ನಿಹಾರಿಕೆ ಏಡಿಯ ನೆನಪನ್ನು ತರುತ್ತದೆ. ಹಾಗಾಗಿ ಇದು ಕ್ರ್ಯಾಬ್ ನೆಬ್ಯೂಲಾ (ಏಡಿ ನಿಹಾರಿಕೆ) ಎಂದೇ  ಸುಪ್ರಸಿಧ್ಧವಾಯಿತು.</p>
<p><a href="http://apkrishna.files.wordpress.com/2011/11/crab-nebula.jpeg"><img class="alignright size-medium wp-image-595" title="Crab Nebula" src="http://apkrishna.files.wordpress.com/2011/11/crab-nebula.jpeg?w=300&#038;h=275" alt="" width="300" height="275" /></a></p>
<p>೧೫೭೨. ಡೆನ್ಮಾರ್ಕಿನಲ್ಲಿ ೨೬ರ ತರುಣ &#8211; ಟೈಕೋ ಬ್ರಾಹೆ (೧೫೪೬-೧೬೦೧) ತನ್ನ ಚಿಕ್ಕಪ್ಪನ ರಾಸಾಯನಿಕ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಮನೆಗೆ ಮರಳುವಾಗ ರಾತ್ರೆ ಗಂಟೆ ಹತ್ತಾಗಿತ್ತು. ನಕ್ಷತ್ರ ಸೌಂದರ್ಯವನ್ನು ಸವಿಯುವುದು ಟೈಕೋನಿಗೆ ಬಲು ಆಸಕ್ತಿಯ ವಿಷಯ. ಉತ್ತರಾಕಾಶದಲ್ಲಿ ಇಂಗ್ಲೀಷಿನ ಒ ಆಕ್ಷರ ವಿನ್ಯಾಸವನ್ನುಂಟು ಮಾಡುವ ಐದು ಪ್ರಕಾಶಮಾನ ನಕ್ಷತ್ರಗಳುಳ್ಳ ಕ್ಯಾಸಿಯೋಪಿಯಾ (ಕುಂತೀ) ನಕ್ಷತ್ರಪುಂಜದಲ್ಲಿ ಆತ ಹೊಸದೊಂದು ನಕ್ಷತ್ರವನ್ನು ಕಂಡ. ಅರೇ, ಇದೆಲ್ಲಿಂದ ಬಂತು? ಆತ ಬರೆಯುತ್ತಾನೆ ದಿಗ್ಭ್ರಮೆಗೊಂಡೆ.ಅಚ್ಚರಿಯಿಂದ ಅಚಲನಾಗಿ ನಿಂತೆ &#8211; ಆ ಬೆಳಕಿನ ಪುಂಜವನ್ನೆ ನಿಟ್ಟಿಸುತ್ತ. ಅದು ಕೂಡ ನನ್ನನ್ನೇ ನಿಟ್ಟಿಸುವಂತೆ ನನಗನ್ನಿಸುತ್ತಿತ್ತು! ನನಗೆ ಮನವರಿಕೆಯಾಯಿತು &#8211; ಅದೊಂದು ಹೊಸ ನಕ್ಷತ್ರ. ಆದರೆ ನಂಬುವುದಾದರೂ ಹೇಗೆ?</p>
<p>ಸುಮಾರು ಒಂದೂವರೆ ವರ್ಷ ಪ್ರಕಾಶಮಾನವಾಗಿ ಬೆಳಗಿದ ಈ ಅತಿಥಿ ತಾರೆಯನ್ನು ನಿತ್ಯ ವೀಕ್ಷಿಸಿದ ಟೈಕೋ, ಒಂದು ಚಿಕ್ಕ ಪುಸ್ತಕವನ್ನೇ  ಪ್ರಕಟಿಸಿದ. ಲ್ಯಾಟಿನ್ ಭಾಷೆಯಲ್ಲಿದ್ದ ಅದರ ಹೆಸರು “De Nova Stella”  ಅಂದರೆ ನವ ತಾರೆಯ ಬಗ್ಗೆ. ಹಟಾತ್ತನೆ ಗೋಚರಿಸಿ ಕೆಲವು ತಿಂಗಳುಗಳ ಕಾಲ ಪ್ರಕಾಶಮಾನವಾಗಿ ಗೋಚರಿಸಿ ಕಣ್ಮರೆಯಾಗುವ ಇಂಥ ನವ ನಕ್ಷತ್ರಕ್ಕೆ  ನೋವಾ (Nova) ಎಂಬ ಹೆಸರು ರೂಢಿಗೆ ಬಂತು.</p>
<p>೧೬೦೪ರಲ್ಲಿ ಇನ್ನೊಂದು ನೋವಾ ಅತ್ಯುಜ್ವಲವಾಗಿ ಬೆಳಗಿತು &#8211; ಕಾರಿರುಳಿನಲ್ಲೂ ಅದರ ಬೆಳಕಿನಲ್ಲಿ ವಸ್ತುಗಳು ಮಸುಕಾಗಿ ಗೋಚರಿಸುವಷ್ಟು. ಖಗೋಳವಿದ ಯೊಹಾನ್ ಕೆಪ್ಲರ್ (೧೫೭೧-೧೬೩೦)ಈ ನೋವಾ ತಾರೆಯನ್ನು ಕೂಲಂಕಷವಾಗಿ ಅಧ್ಯಯನಿಸಿದ.</p>
<p>ನೋವಾಗಳಲ್ಲಿ ಕೆಲವೇ ಕೆಲವು ಮಹೋಜ್ವಲ. ಹೆಚ್ಚಿನವು ಮಸುಕು. ಈ ಬಗ್ಗೆ ವಿಸ್ತ್ರತ ಅಧ್ಯಯನವನ್ನು ಮಾಡಿದ ಸ್ವಿಜರ್ಲೆಂಡಿನ ಖಗೋಳ ವಿಜ್ಞಾನಿಗಳಾದ ಫ್ರಿಟ್ಜ್ ಝ್ವಿಕ್ಕಿ (೧೮೯೮-೧೯೭೪) ಮತ್ತು ಜರ್ಮನಿಯ ವಾಲ್ಟರ್ ಬಾಡೆ (೧೮೩೯-೧೯೬೦), ಮಹೋಜ್ವಲ ನೋವಾಗಳನ್ನು ಸೂಪರ್ನೋವಾ ಎಂದು ಕರೆದರು. ಹಿಪ್ಪಾರ್ಕಸ್, ಟೈಕೋ ಮತ್ತು ಕೆಪ್ಲರ್ ವೀಕ್ಷಿಸಿದ್ದು ಸೂಪರ್ನೋವಾಗಳನ್ನು. ಇವು ಸಂಭವಿಸಿದ್ದು ನಮ್ಮ ಬ್ರಹ್ಮಾಂಡದಲ್ಲಿಯೇ.</p>
<p><a href="http://apkrishna.files.wordpress.com/2011/11/fz_froehlich.jpg"><img class="alignright size-medium wp-image-596" title="ಜ಼್ವಿಕ್ಕಿ " src="http://apkrishna.files.wordpress.com/2011/11/fz_froehlich.jpg?w=300&#038;h=225" alt="" width="300" height="225" /></a></p>
<p>ನಮ್ಮ ಬ್ರಹ್ಮಾಂಡದಲ್ಲಿಯೇ ಸೂಪರ್ನೋವಾ ಆಸ್ಫೋಟದ ಸಂಭಾವ್ಯತೆ ತೀರ ಸನಿಹದಲ್ಲಿದೆಯೇ? ಹೌದು ಅನ್ನುತ್ತಿದ್ದಾರೆ ಖಗೋಳವಿಜ್ಞಾನಿಗಳು. ಮಹಾವ್ಯಾಧ  (Orion)  ನಕ್ಷತ್ರ ಪುಂಜದ ಆರ್ದ್ರಾ ನಕ್ಷತ್ರ ಸೂಪರ್ನೋವಾ ಹಂತದಲ್ಲಿದೆಯಂತೆ. ನೀವು ನೋಡಿರಬಹುದು ಮಹಾವ್ಯಾಧನನ್ನು. ಅದು ತ್ರಾಪಿಜ್ಯಾಕಾರದ ನಕ್ಷತ್ರ ಪುಂಜ. ತ್ರಾಪಿಜ್ಯದ ನಾಲ್ಕು ಭುಜಗಳ ಕೊನೆಗಳಲ್ಲಿ ನಕ್ಷತ್ರಗಳು. ನಡುವೆ ಮೂರು ನಕ್ಷತ್ರಗಳು &#8211; ಈ ಮೂರು ನಕ್ಷತ್ರಗಳ ಮಧ್ಯೆ &#8211; ದೂರದರ್ಶಕಕ್ಕಷ್ಟೇ ಗೋಚರಿಸುವ ನಿಹಾರಿಕೆ. ನಮ್ಮ ಪೂರ್ವೀಕರು ಈ ನಕ್ಷತ್ರಪುಂಜದಲ್ಲಿ ಒಬ್ಬ ನುರಿತ ಬೇಟೆಗಾರನನ್ನು ಕಂಡರು. ವೀಕ್ಷಕನನ್ನು ಥಟ್ಟನೆ ಸೆಳೆಯುವ ಸುಂದರ ವಿನ್ಯಾಸದ ಈ ನಕ್ಷತ್ರ ಪುಂಜ ಸುಪ್ರಸಿದ್ಧ.</p>
<p>ಮಹಾವ್ಯಾಧನ ನಾಲ್ಕು ನಕ್ಷತ್ರಗಳಲ್ಲಿ ಎಡ ಬಾಹುವಿನಲ್ಲಿದೆ ಕೆಂಬಣ್ಣದಿಂದ ಹೊಳೆವ ಆರ್ದ್ರಾ ((Betelgeuse). ೨೦೧೨ರಲ್ಲಿ ಈ ನಕ್ಷತ್ರವು ಸೂಪರ್ನೋವಾ ಆಸ್ಫೋಟನೆಯಾಗುವ ಸಾಧ್ಯತೆಯನ್ನು ಕೆಲವು ಖಗೋಳವಿದರು ಊಹಿಸಿದ್ದಾರೆ. ಅಂದು ಅದು ಎಷ್ಟು ಉಜ್ವಲವಾಗುತ್ತದೆಂದರೆ ಹಗಲಿನಲ್ಲಿಯೂ ಗೊಚರಿಸುತ್ತದಂತೆ. ಹಾಗಿದ್ದರೆ ನಮಗೆ ಎರಡು ಸೂರ್ಯರು! ಆದರೆ ಹಾಗಾಗುತ್ತದೆಯೇ? &#8211; ನಿಖರವಾಗಿ ಹೇಳುವುದಕ್ಕೆ ಪುರಾವೆ ಸಾಕಾಗದು.</p>
<p><a href="http://apkrishna.files.wordpress.com/2011/11/orion_spinelli_c1.jpg"><img class="alignright size-medium wp-image-597" title="ಮಹಾವ್ಯಾಧ" src="http://apkrishna.files.wordpress.com/2011/11/orion_spinelli_c1.jpg?w=300&#038;h=256" alt="" width="300" height="256" /></a></p>
<p>ಸುಮಾರು ೧೩೦೦ ಖಗೋಳಮಾನ (ಒಂದು ಖಗೋಳಮಾನವೆಂದರೆ ಭೂಮಿ-ಸೂರ್ಯರ ನಡುವಣ ದೂರ, ೧೫೦ಮಿಲಿಯ ಕಿಮೀ) ವ್ಯಾಸದ ದೈತ್ಯ ನಕ್ಷತ್ರವಾದ ಆರ್ದ್ರಾವನ್ನು ಸೂರ್ಯನಿರುವಲ್ಲಿ ಪ್ರತಿಷ್ಠಾಪಿಸಿದರೆ  ಗುರುಗ್ರಹದ ತನಕ ಚಾಚಿಕೊಳ್ಳುತ್ತದೆ. ಉಜ್ವಲ ನಕ್ಷತ್ರಗಳಲ್ಲಿ ಇದಕ್ಕಿದೆ ಒಂಬತ್ತನೇ ಸ್ಥಾನ. ನಮ್ಮಿಂದ ಸುಮಾರು ೬೪೦ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವುದರಿಂದ ಇಂದು ನಮಗೆ ಗೋಚರಿಸುವ ಆರ್ದ್ರಾ ವಾಸ್ತವಾಗಿ ೬೪೦ ವರ್ಷಗಳಷ್ಟು ಹಿಂದಿನದು. ಅಂದರೆ ಅಲ್ಲಿ ಈಗಾಗಲೇ ಆರ್ದ್ರಾ ಸ್ಫೋಟವಾಗಿ ಹೋಗಿರಬಹುದು. ಅಂದು ಈ ಭೂಮಿಯಲ್ಲಿ ವಿದ್ಯುತ್ತಿರಲಿಲ್ಲ. ಖಗೋಳ ವಿಜ್ಞಾನ ಅಂಬೆಗಾಲಿಕ್ಕುತ್ತಿದ್ದ ಆರಂಭದ ದಿನಗಳು. ನ್ಯೂಟನ್ ಇನ್ನೂ ಹುಟ್ಟಿರಲಿಲ್ಲ!</p>
<p>ಆರ್ದ್ರಾ ನಕ್ಷತ್ರ ಹದಿನೈದು ವರ್ಷಗಳಲ್ಲಿ ಹದಿನೈದು ಶೇಕಡಾದಷ್ಟು ಕುಗ್ಗಿರುವುದನ್ನು ಅಮೇರಿಕದ ಬರ್ಕ್ಲೀ ವಿಶ್ವವಿದ್ಯಾಲಯದಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈ ಕುಗ್ಗುವಿಕೆ ಹೀಗೆಯೇ ಮುಂದುವರಿಯುತ್ತಿದೆಯೇ ? ಅಥವಾ ಪುನ: ಮೊದಲಿನ ಗಾತ್ರಕ್ಕೆ ಬರಬಹುದೇ? &#8220;ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ&#8221; &#8211; ಎನ್ನುತ್ತಾರೆ ಖಭೌತ ವಿಜ್ಞಾನಿ ಚಾರ್ಲ್ಸ್‌ಟೌನ್ಸ್. ಚಾರ್ಲ್ಸ್‌ಟೌನ್ಸ್ ಇನ್ನೂ ವಿಜ್ಞಾನದಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿರುವುದೇ ವಿಶೇಷ. ಲೇಸರ್ ಆವಿಷ್ಕಾರದಲ್ಲಿ ಮಹತ್ತರ ಪಾತ್ರ ವಹಿಸಿದ, ೯೪ವರ್ಷ ಪ್ರಾಯದ ಈ ಹಿರಿಯನಿಗೆ ಇನ್ನೂ ಇಪ್ಪತ್ತನಾಲ್ಕರ ಉತ್ಸಾಹ. ಆರ್ದ್ರಾ ನಕ್ಷತ್ರದ ಕುರಿತು ವಿಶೇಷ ಸಂಶೋಧನೆಯಲ್ಲಿ ಅವರು ನಿರತರಾಗಿದ್ದಾರೆ.</p>
<p>ಮಹಾಸ್ಫೋಟ</p>
<p>ಈ ಅಗಾಧ ವಿಶ್ವದ ಮೂಲದ್ರವ್ಯ &#8211; ಹ್ಯೆಡ್ರೋಜನ್ ಅಥವಾ ಜಲಜನಕ. ವಿಶ್ವದ ಅಸೀಮ ವಿಸ್ತಾರದಲ್ಲಿ ಹೈಡ್ರೋಜನ್ ಸಮಾನವಾಗಿ ಪಸರಿಸಿಲ್ಲ. ಬಾನಿನಲ್ಲಿ ಮೋಡಗಳು ಒಟ್ಟೈಸಿದ೦ತೆ ಕೆಲವೆಡೆ ಹೆಚ್ಚು ದಟ್ಟೈಸಿದೆ. ಇ೦ಥ ಹೈಡ್ರೋಜನ್ ಅನಿಲ ಮೋಡಕ್ಕೆ ನಿಹಾರಿಕೆ (ಓebuಟಚಿ) ಎನ್ನುತ್ತಾರೆ. ಬರಿಗಣ್ಣಿಗೆ ಕೆಲವು ನಿಹಾರಿಕೆಗಳು  ಮ೦ದಪ್ರಕಾಶದ ಮಚ್ಚೆಗಳಾಗಿ ಗೋಚರಿಸುತ್ತವೆ. ನಿಹಾರಿಕೆಯಲ್ಲಿ ದಟ್ಟೈಸಿದ ಹೈಡ್ರೋಜನ್ ಅನಿಲ ರಾಶಿಯು ತನ್ನ ಅಗಾಧ ದ್ರವ್ಯರಾಶಿಯ ಕಾರಣದಿ೦ದ  ಗುರುತ್ವ ಬಲದ ಒತ್ತಡಕ್ಕೆ ಸಿಲುಕಿ ಕುಗ್ಗಲಾರ೦ಭಿಸುತ್ತದೆ. ಪರಿಣಾಮವಾಗಿ ಅದರ ಉಷ್ಣತೆ ಏರುತ್ತದೆ. ಒಂದು ಹಂತದಲ್ಲಿ  ಹೈಡ್ರೋಜನ್ ಪರಮಾಣುಗಳ ಬೀಜ ಅಥವಾ ನ್ಯೂಕ್ಲಿಯಸ್ಸುಗಳು ಪರಸ್ಪರ ಡಿಕ್ಕಿಯಾಗಿ ಒಟ್ಟಾಗುವ &#8221; ಬೈಜಿಕ ಸ೦ಲಯನ ಕ್ರಿಯೆ &#8220;  (Nuclear Fusion Reaction)  ಆರಂಭವಾಗುತ್ತದೆ.</p>
<p>ಸೆಕು೦ಡಿಗೆ ಹಲವು ಕೋಟಿ ಟನ್ ಪ್ರಮಾಣದಲ್ಲಿ  ಹ್ಯೆಡ್ರೋಜನ್ ಹೀಲಿಯಮ್ ಆಗಿ ಪರಿವರ್ತನೆ ಹೊ೦ದುವ  ಬೈಜಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಶಕ್ತಿ ಅನಿಲರಾಶಿಯನ್ನು ವ್ಯಾಕೋಚಿಸಿದರೆ, ಗುರುತ್ವಬಲ ಸ೦ಕೋಚಿಸುತ್ತದೆ. ಈ ಎರಡು ವಿರುದ್ಢ  ಬಲಗಳ ನಡುವೆ ಸಮತೋಲನ ಏಪ೯ಟ್ಟಾಗ ಅಲ್ಲಿ ಮೈದಳೆಯುತ್ತದೊ೦ದು ನಕ್ಷತ್ರ. ನಮ್ಮ ಸೂರ್ಯ ಜನಿಸಿದ್ದು ಹೀಗೆಯೇ &#8211; ೫ ಬಿಲಿಯ ಅಥವಾ ೫೦೦ ಕೋಟಿ ವರ್ಷಗಳ ಹಿ೦ದೆ. ಸೂರ್ಯ ಮಾತ್ರವಲ್ಲ, ಎಲ್ಲ ನಕ್ಷತ್ರಗಳು ಜನಿಸಿದ್ದು ಮತ್ತು ಜನಿಸುವುದು ಹೀಗೆಯೇ.</p>
<p>ಕಾಲಾ೦ತರದಲ್ಲಿ ಹೆಚ್ಚಿನ ಹೈಡ್ರೋಜನ್ ಹೀಲಿಯಮ್ ಆಗಿ ಪರಿವರ್ತಿತವಾದಾಗ ಆ ತಾರೆಯಲ್ಲಿ ಅಸ್ಥಿರತೆ ಹಣಿಕುತ್ತದೆ. ಇದರ ತಿರುಳಿನಲ್ಲಿ ಹೀಲಿಯಮ್ ಸಾ೦ದ್ರೀಕೃತವಾಗಿದ್ದರೆ, ಹೊರ ಆವರಣದಲ್ಲಿ ಹೈಡ್ರೋಜನ್ನಿನ ಆಧಿಕ್ಯ. ತಿರುಳು ತನ್ನ ದ್ರವ್ಯ ರಾಶಿಯ ಪರಿಣಾಮವಾಗಿ ಇನ್ನಷ್ಟು ಕುಗ್ಗುತ್ತದೆ ಮತ್ತು ಉಷ್ಣತೆ ಮತ್ತಷ್ಟು ಹೆಚ್ಚುತ್ತದೆ. ಇದೀಗ ಸುಮಾರು ಹತ್ತು ಕೋಟಿ ಡಿಗ್ರಿಗಳಾದಾಗ ಹೀಲಿಯಮ್ ನ್ಯೂಕ್ಲಿಯಸ್ಸುಗಳ ಬೈಜಿಕ ಸಂಲಯನ ಕ್ರಿಯೆ ಪ್ರಾರ೦ಭವಾಗುತ್ತದೆ. ಪರಿಣಾಮವಾಗಿ ಒಟ್ಟು ನಕ್ಷತ್ರ ಅಸಾಧಾರಣವಾಗಿ ಹಿಗ್ಗುತ್ತದೆ &#8211; ಗಾಳಿಯೂದಿದ ಬುಗ್ಗೆಯ೦ತೆ. ಲ೦ಬಿತ ಗಾತ್ರದಿ೦ದ ನಕ್ಷತ್ರದ ಉಷ್ಣತೆ ಬಹಳಷ್ಟು ಕಡಿಮೆಯಾಗಿ ಅದು ಕೆ೦ಪು ಬಣ್ಣದಿ೦ದ ಹೊಳೆಯಲಾರಂಭಿಸುತ್ತದೆ. ಇಂಥ ದೈತ್ಯ ಗಾತ್ರದ ಮತ್ತು ಕೆಂಬಣ್ಣದ ನಕ್ಷತ್ರಕ್ಕೆ ರಕ್ತ ದೈತ್ಯ (Red Giant) ಎ೦ಬ ಕಾವ್ಯಾತ್ಮಕ ಹೆಸರಿದೆ.</p>
<p>ಹೀಲಿಯಮ್ ಸ೦ಲಯನ ಕ್ರಿಯೆ ಮು೦ದುವರಿಯುತ್ತ, ರಕ್ತ ದೈತ್ಯನ ಒಡಲಲ್ಲಿ ಅಪಾರ ಒತ್ತಡ ಸ೦ಜನಿಸಿ ಹೊರ ಆವರಣ ಸಿಡಿದು ಹಾರಿ ಹೋಗುತ್ತದೆ. ಅಲ್ಲಿ ಉಳಿಯುವುದೇನಿದ್ದರೂ ಬಹುಪಾಲು ಕಾರ್ಬನ್ ಅಥವಾ ಇ೦ಗಾಲದ ಪರಮಾಣುಗಳ ಚಿಕ್ಕ ತಾರೆ.  ತನ್ನ ಅಧಿಕ ಉಷ್ಣತೆಯ ಕಾರಣವಾಗಿ ಬಿಳಿ ಬಣ್ಣದಿ೦ದ ಗೋಚರಿಸುವ ಈ ಪುಟ್ಟ  ತಾರೆಯೇ  ಶ್ವೇತ ಕುಬ್ಜ (White dwarf ).</p>
<p>ಶ್ವೇತ ಕುಬ್ಜದ ಮುಂದಿನ ಹಂತದ ಕಥೆಯನ್ನು ನಿರೂಪಿಸಿದವರು  ಭಾರತೀಯ ಸ೦ಜಾತ ಮತ್ತು ನೊಬೆಲ್ ವಿಜ್ಞಾನಿ ಸುಬ್ರಹ್ಮಣ್ಯನ್ ಚ೦ದ್ರಶೇಖರ್ (೧೯೧೦-೧೯೯೫). ಇಪ್ಪತ್ತೈದರ ತರುಣ ಚ೦ದ್ರಶೇಖರ್ ೧೯೩೫ ರಲ್ಲಿ ಹೇಳಿದರು &#8221; ಶ್ವೇತಕುಬ್ಜ ತಾರೆಯ ದ್ರವ್ಯರಾಶಿಯು ಸೂರ್ಯನ ರಾಶಿಗಿ೦ತ ೧.೪ ಪಟ್ಟು ಅಥವಾ ಅದಕ್ಕಿ೦ತ ಹೆಚ್ಚಾದರೆ ಆ ತಾರೆ ಶ್ವೇತ ಕುಬ್ಜ ಸ್ಥಿತಿಯಲ್ಲೇ ಇರಲಾರದು. ಅದು ಮತ್ತೂ ಮು೦ದಿನ ಹ೦ತಗಳನ್ನು ಕಾಣುತ್ತದೆ. &#8220;.   ಶ್ವೇತಕುಬ್ಜಕ್ಕೆ ಸ೦ಬ೦ಧಿಸಿದ೦ತೆ ದ್ರವ್ಯರಾಶಿಯ ಈ ಪರಿಮಿತಿಗೆ &#8220;ಚ೦ದ್ರಶೇಖರ್ ಪರಿಮಿತಿ&#8221; (Chandrashekhar Limit)  ಎ೦ದು ಹೆಸರು.</p>
<p>ಚ೦ದ್ರಶೇಖರ್ ಪರಿಮಿತಿಯನ್ನು ಮೀರಿದ ಶ್ವೇತಕುಬ್ಜ  ಇನ್ನಷ್ಟು ತೀವ್ರ ಗುರುತ್ವ ಕುಸಿತಕ್ಕೆ ಒಳಗಾಗುತ್ತ, ಒ೦ದು ಹ೦ತದಲ್ಲಿ ಒತ್ತಡ ಸಹಿಸಿಕೊಳ್ಳಲಾಗದೇ ಭೀಕರವಾಗಿ ಸ್ಫೋಟಿಸುತ್ತದೆ. ಲಕ್ಷ ವರ್ಷಗಳಲ್ಲಿ ಸೂರ್ಯ ಬಿಡುಗಡೆಮಾಡುವ ಶಕ್ತಿಯು ಕೆಲವೇ ಕೆಲವು ಸೆಕು೦ಡುಗಳಲ್ಲಿ ಉತ್ಪಾಟನೆಯಾಗುವ ಅಸಾಮಾನ್ಯ ಆಸ್ಫೋಟವಿದು. ಇದುವೇ ಸೂಪರ್ನೋವಾ.</p>
<p>೧೯೮೭, ಫೆಬ್ರವರಿ ೨೩. ಚಿಲಿಯ ಲಾಸ್‌ಕಂಪಾನಸ್ ಖಗೋಳಾಲಯದಲ್ಲಿ ಖಗೋಳ ವಿಜ್ಞಾನಿ ಇಯಾನ್ ಶೆಲ್ಟನ್ ಲಾರ್ಜ್‌ಮೆಜೆಲಾನಿಕ್‌ಕ್ಲೌಡ್ ಎಂಬ ಬ್ರಹ್ಮಾಂಡವನ್ನು ದೂರದರ್ಶಕದಲ್ಲಿ ವೀಕ್ಷಿಸುತ್ತಿದ್ದಾಗ ಈ ಹಿಂದೆಂದೂ ಕಾಣದೇ ಇದ್ದ ಪ್ರಕಾಶಮಾನ ಬೆಳಕಿನ ಮಚ್ಚೆಯನ್ನುಗುರುತಿಸಿದರು. ಮುಂದಿನ ಒಂದೆರಡು ಗಂಟೆಗಳಲ್ಲಿ ಅದು ಉಜ್ವಲವಾಗುತ್ತ ಬರಿಗಣ್ಣಿಗೆ ಗೋಚರಿಸಿತು. ಅದೊಂದು ಸೂಪರ್ನೋವಾ.  ಮೆಜಾಲಾನಿಕ್ ಬ್ರಹ್ಮಾಂಡ ನಮ್ಮಿಂದ ಸುಮಾರು ಎರಡು ಲಕ್ಷ ಜ್ಯೋತಿರ್ವರ್ಷ ದೂರದಲ್ಲಿದೆ. ಅಂದರೆ ಅಲ್ಲಿಂದ ಹೊರಟ ಬೆಳಕು ನಮಗೆ ಗೋಚರಿಸಲು ತಗಲುವ ಅವಧಿ ಎರಡು ಲಕ್ಷ ವರ್ಷಗಳು. ಶೆಲ್ಟನ್ ಗುರುತಿಸಿದ್ದು ಎರಡು ಲಕ್ಷ ವರ್ಷಗಳಷ್ಟು ಹಿಂದೆ ಸಂಭವಿಸಿದ ಮಹಾ ಆಸ್ಫೋಟವನ್ನು.</p>
<p><a href="http://apkrishna.files.wordpress.com/2011/11/supernova-1987a.jpg"><img class="alignright size-medium wp-image-598" title="Supernova-1987a" src="http://apkrishna.files.wordpress.com/2011/11/supernova-1987a.jpg?w=300&#038;h=272" alt="" width="300" height="272" /></a></p>
<p>ಬಾಹ್ಯಾಕಾಶದಲ್ಲಿ ಭೂಮಿ ಸುತ್ತ ಪರಿಭ್ರಮಿಸುತ್ತ ವಿಶ್ವವನ್ನು ನಿರಂರವಾಗಿ ನಿಟ್ಟಿಸುತ್ತಿರುವ ಹಬಲ್, ಚಂದ್ರ, ಸ್ಪಿಟ್ಜರ್ ಮೊದಲಾದ ಅತ್ಯಾಧುನಿಕ ಪ್ರಬಲ ದೂರದರ್ಶಕವನ್ನು ಬಳಸಿಕೊಂಡು  PTF 11 ಸೂಪರ್ನೊವಾವನ್ನು ತಪಾಸಿಸುತ್ತ  ಮಾಹಿತಿ ಕಲೆ ಹಾಕುತ್ತಿದ್ದಾರೆ.</p>
<p>ಸೂಪರ್ನೋವಾ ನಂತರ ಇನ್ನೇನು? ಉಳಿದ ಶೇಷ ನ್ಯೂಟ್ರಾನ್ ನಕ್ಷತ್ರವಾಗಬಹುದು, ವಿದ್ಯುತ್ಕಾಂತೀಯ ಸಂಜ್ಞೆಗಳನ್ನು ನಿಯತವಾಗಿ ಉತ್ಸರ್ಜಿಸುವ ಪಲ್ಸಾರ್ ಆಗಬಹುದು, ಮತ್ತು ಅಂತಿಮವಾಗಿ ಎಲ್ಲವನ್ನು ನುಂಗಿ ನೊಣೆಯುವ  ಆದರೆ ತನ್ನಿಂದ ಬೆಳಕೂ ಸೇರಿದ ಹಾಗೆ ಯಾವುದನ್ನೂ ಬಿಡಲೊಲ್ಲದ ಕೃಷ್ಣವಿವರವಾಗಬಹುದು (Black Hole).</p>
<p>ಭೌತವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಾಗಿ ೨೦೧೧ರ ನೊಬೆಲ್ ಪ್ರಶಸ್ತಿ ಇತ್ತೀಚೆಗೆ ಘೋಷಣೆಯಾದಾಗ  ಮತ್ತೆ ಸೂಪರ್ನೋವಾ ಸುದ್ದಿಗೆ ಬಂತು. ಸೂಪರ್ನೋವಾಗಳ ಉಜ್ವಲತೆಯನ್ನು ಅಧ್ಯಯನಿಸಿ ಆ ಮೂಲಕ ಅಗೋಚರ ದ್ರವ್ಯ &#8211; ಡಾರ್ಕ್ ಮ್ಯಾಟರ್ -  ಅಸ್ತಿತ್ವವನ್ನು ಸ್ಥಿರೀಕರಿಸಿದ ಸಂಶೋಧನೆಗಾಗಿ ಅಮೇರಿಕದ ಅಡಮ್ ರೀಸ್, ಬ್ರಿಯಾನ್ ಸ್ಮಿಟ್ಜ್ ಮತ್ತು ಸೌಲ್ ಪರ್ಲ್‌ಮ್ಯುಟರ್  ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಅಂದ ಹಾಗೆ ಸೂಪರ್ನೋವಾ ಎಂಬ ಹೆಸರು ಟಂಕಿಸಿದ   ಫ್ರಿಟ್ಜ್‌ಝ್ವಿಕ್ಕಿಗೂ ಡಾರ್ಕ್ ಮ್ಯಾಟರಿಗೂ ಸಂಬಂಧವಿದೆ. ಡಾರ್ಕ್ ಮ್ಯಾಟರ್ ಎಂಬ ಅನೂಹ್ಯ ದ್ರವ್ಯವಿದೆ ಎಂಬ ಊಹೆಯನ್ನು ಮಾಡಿದ ಹಿರಿಮೆ ಈತನದು.  ಈ ಎಲ್ಲ ವಿವರಗಳದ್ದು ಬೇರೆಯೇ ಕಥೆ.   ಮುಂದಿನ ದಿನಗಳಲ್ಲಿ ಬಿತ್ತರಿಸುತ್ತೇನೆ.</p>
<p>ನೊಬೆಲ್ ವಿಜ್ಞಾನಿ ರಿಚರ್ಡ್‌ಫೈನ್ಮನ್ ಹೇಳುತ್ತಾನೆ  &#8221;ನಿಸರ್ಗ ಎಷ್ಟೊಂದು ವಿಸ್ಮಯ. ಅದನರಿಯಲು ಪಡುವ ಮನುಷ್ಯ ಸಾಹಸ ಮತ್ತಷ್ಟು ವಿಸ್ಮಯ!&#8221;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<p>&nbsp;</p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/592/"><img alt="" border="0" src="http://feeds.wordpress.com/1.0/comments/apkrishna.wordpress.com/592/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/592/"><img alt="" border="0" src="http://feeds.wordpress.com/1.0/delicious/apkrishna.wordpress.com/592/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/592/"><img alt="" border="0" src="http://feeds.wordpress.com/1.0/facebook/apkrishna.wordpress.com/592/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/592/"><img alt="" border="0" src="http://feeds.wordpress.com/1.0/twitter/apkrishna.wordpress.com/592/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/592/"><img alt="" border="0" src="http://feeds.wordpress.com/1.0/stumble/apkrishna.wordpress.com/592/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/592/"><img alt="" border="0" src="http://feeds.wordpress.com/1.0/digg/apkrishna.wordpress.com/592/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/592/"><img alt="" border="0" src="http://feeds.wordpress.com/1.0/reddit/apkrishna.wordpress.com/592/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=592&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/11/15/%e0%b2%ac%e0%b2%82%e0%b2%a6%e0%b2%bf%e0%b2%a6%e0%b3%86-%e0%b2%b8%e0%b3%82%e0%b2%aa%e0%b2%b0%e0%b3%8d%e0%b2%a8%e0%b3%8b%e0%b2%b5%e0%b2%be/feed/</wfw:commentRss>
		<slash:comments>0</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2011/11/1138_xray_opt.jpg?w=300" medium="image">
			<media:title type="html">IDL TIFF file</media:title>
		</media:content>

		<media:content url="http://apkrishna.files.wordpress.com/2011/11/supernova.jpg?w=300" medium="image">
			<media:title type="html">ಸಪ್ತರ್ಷಿಮಂಡಲ</media:title>
		</media:content>

		<media:content url="http://apkrishna.files.wordpress.com/2011/11/crab-nebula.jpeg?w=300" medium="image">
			<media:title type="html">Crab Nebula</media:title>
		</media:content>

		<media:content url="http://apkrishna.files.wordpress.com/2011/11/fz_froehlich.jpg?w=300" medium="image">
			<media:title type="html">ಜ಼್ವಿಕ್ಕಿ </media:title>
		</media:content>

		<media:content url="http://apkrishna.files.wordpress.com/2011/11/orion_spinelli_c1.jpg?w=300" medium="image">
			<media:title type="html">ಮಹಾವ್ಯಾಧ</media:title>
		</media:content>

		<media:content url="http://apkrishna.files.wordpress.com/2011/11/supernova-1987a.jpg?w=300" medium="image">
			<media:title type="html">Supernova-1987a</media:title>
		</media:content>
	</item>
		<item>
		<title>ಹಾರಾಟ ನಿಲ್ಲಿಸಿದ ಸ್ಪೇಸ್‌ಶಟಲ್</title>
		<link>http://apkrishna.wordpress.com/2011/08/02/%e0%b2%b9%e0%b2%be%e0%b2%b0%e0%b2%be%e0%b2%9f-%e0%b2%a8%e0%b2%bf%e0%b2%b2%e0%b3%8d%e0%b2%b2%e0%b2%bf%e0%b2%b8%e0%b2%bf%e0%b2%a6-%e0%b2%b8%e0%b3%8d%e0%b2%aa%e0%b3%87%e0%b2%b8%e0%b3%8d%e2%80%8c%e0%b2%b6/</link>
		<comments>http://apkrishna.wordpress.com/2011/08/02/%e0%b2%b9%e0%b2%be%e0%b2%b0%e0%b2%be%e0%b2%9f-%e0%b2%a8%e0%b2%bf%e0%b2%b2%e0%b3%8d%e0%b2%b2%e0%b2%bf%e0%b2%b8%e0%b2%bf%e0%b2%a6-%e0%b2%b8%e0%b3%8d%e0%b2%aa%e0%b3%87%e0%b2%b8%e0%b3%8d%e2%80%8c%e0%b2%b6/#comments</comments>
		<pubDate>Tue, 02 Aug 2011 17:17:18 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=573</guid>
		<description><![CDATA[ಮನುಷ್ಯನಿಗೆ ಭೂಮಿ ಒಂದು ತೊಟ್ಟಿಲು. ಆದರೆ ಆತ ಅಲ್ಲೇ ಉಳಿಯಲಾರ  -    ಕಾನ್‌ಸ್ಟಂಟಿನ್ ಟ್ಸಿಯೊಲೊವಿಸ್ಕಿ, ರಷ್ಯನ್ ಖಗೋಳವಿದ. ಕಳೆದ ಗುರುವಾರ &#8211; ಜುಲೈ ೨೧, ಬೆಳಗ್ಗಿನ ಜಾವ ಅಮೇರಿಕದ ಫ್ಲಾರಿಡಾದಲ್ಲಿರುವ ಕೆನ್ನೆಡಿ  ಅಂತರಿಕ್ಷ ಉಡ್ಡಯನ ಕೇಂದ್ರದ ಇಳಿದಾಣದಲ್ಲಿ ಇನ್ನೂರು ಅಡಿಯಷ್ಟು ಉದ್ದದ  &#8211; ನೋಡುವುದಕ್ಕೆ  ವಿಮಾನದಂತಿದ್ದ ಬಿಳಿಯ ಹಕ್ಕಿ &#8211; ಅಟ್ಲಾಂಟಿಸ್ ಎಂಬ ಸ್ಪೇಸ್‌ಶಟಲ್ &#8211; ಕಿವಿಗಿಡಿಚುವ ಸದ್ದಿನೊಂದಿಗೆ  ಬಂದಿಳಿದ ಹೊತ್ತು. ನೆರೆದಿದ್ದ ನೂರಾರು ಖಗೋಳಪ್ರಿಯರಿಗೆ ಭಾವುಕ ಕ್ಷಣ. ಈ ವ್ಯೋಮ ಯೋಜನೆಯ ಅವಿಭಾಜ್ಯ ಭಾಗವಾಗಿ ಬೆಳೆದ [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=573&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p>ಮನುಷ್ಯನಿಗೆ ಭೂಮಿ ಒಂದು ತೊಟ್ಟಿಲು. ಆದರೆ ಆತ ಅಲ್ಲೇ ಉಳಿಯಲಾರ  <a href="http://apkrishna.files.wordpress.com/2011/08/s14_s125s035.jpg"><img class="alignright size-medium wp-image-574" title="s14_s125s035" src="http://apkrishna.files.wordpress.com/2011/08/s14_s125s035.jpg?w=220&#038;h=300" alt="" width="220" height="300" /></a><br />
-    ಕಾನ್‌ಸ್ಟಂಟಿನ್ ಟ್ಸಿಯೊಲೊವಿಸ್ಕಿ, ರಷ್ಯನ್ ಖಗೋಳವಿದ.</p>
<p>ಕಳೆದ ಗುರುವಾರ &#8211; ಜುಲೈ ೨೧, ಬೆಳಗ್ಗಿನ ಜಾವ ಅಮೇರಿಕದ ಫ್ಲಾರಿಡಾದಲ್ಲಿರುವ ಕೆನ್ನೆಡಿ  ಅಂತರಿಕ್ಷ ಉಡ್ಡಯನ ಕೇಂದ್ರದ ಇಳಿದಾಣದಲ್ಲಿ ಇನ್ನೂರು ಅಡಿಯಷ್ಟು ಉದ್ದದ  &#8211; ನೋಡುವುದಕ್ಕೆ  ವಿಮಾನದಂತಿದ್ದ ಬಿಳಿಯ ಹಕ್ಕಿ &#8211; ಅಟ್ಲಾಂಟಿಸ್ ಎಂಬ ಸ್ಪೇಸ್‌ಶಟಲ್ &#8211; ಕಿವಿಗಿಡಿಚುವ ಸದ್ದಿನೊಂದಿಗೆ  ಬಂದಿಳಿದ ಹೊತ್ತು. ನೆರೆದಿದ್ದ ನೂರಾರು ಖಗೋಳಪ್ರಿಯರಿಗೆ ಭಾವುಕ ಕ್ಷಣ. ಈ ವ್ಯೋಮ ಯೋಜನೆಯ ಅವಿಭಾಜ್ಯ ಭಾಗವಾಗಿ ಬೆಳೆದ ಮಂದಿಯಲ್ಲಿ ಎಲ್ಲ ಕಳೆದುಕೊಂಡ ನಿರಾಸೆ ಕಣ್ಣಂಚಿನ ನೀರಾಗಿ ಪ್ರಕಟವಾಗುತ್ತಿತ್ತು.</p>
<p><span id="more-573"></span><br />
ಮೂವತ್ತು ವರ್ಷಗಳಿಂದ ಬಾಹ್ಯಾಕಾಶಕ್ಕೆ ಬೇಕೆಂದಾಗ ಖಗೋಳಯಾನಿಗಳನ್ನು, ಬಗೆ ಬಗೆಯ ಉಪಗ್ರಹಗಳನ್ನು, ಪ್ರಾಯೋಗಿಕ ಉಪಕರಣಗಳನ್ನು ಹೊತ್ತೊಯ್ದ ಅದ್ಭುತ ವ್ಯೋಮನೌಕೆ -  ಸ್ಪೇಸ್ ಶಟಲ್ (ಆಕಾಶ ಲಾಳಿ). ಇವುಗಳಿಗೆ ಅಂದು ಅಂತಿಮ ವಿದಾಯವನ್ನು ನಾಸಾ ಘೋಷಿಸಿತು;  ಅಂದರೆ ಇನ್ನೆಂದೂ ಸ್ಪೇಸ್‌ಶಟಲ್ ಎಂಬ ವ್ಯೋಮನೌಕೆಗಳು ಕೆಂಪಗಿನ ಬೆಂಕಿ ಮತ್ತು ಬಿಳಿಯ ಧೂಮರಾಶಿಯನ್ನು ಉಗುಳುತ್ತ ನಭಕ್ಕೆ ನೆಗೆಯಲಾರವು. ತಾನಿರುವ ವಿಶ್ವವನ್ನು ಅರಿಯಲು ಹೊರಟ ಮನುಕುಲದ ವ್ಯೋಮ ಸಾಹಸದ ಘಟ್ಟವೊಂದು ಹೀಗೆ ಇತಿಹಾಸಕ್ಕೆ ಸಂದಿತು.</p>
<p>ಬಾನಾಡಿ ಕನಸು<br />
ಕಳೆದ ಶತಮಾನದ ಆದಿ ಭಾಗ.  ಅಮೇರಿಕದಲ್ಲಿ ರೈಟ್ ಸಹೋದರರಿಂದ  ನೆಲ ಬಿಟ್ಟು ಗಗನದಲ್ಲಿ ಹಾರುವ ವಿಮಾನವೆಂಬ ವಾಹನಗಳ ಸೃಷ್ಟಿ. ಬಾನಾಡಿ ತಾನಾಗಬೇಕೆಂಬ ಮಾನವನ ಕನಸು ಅಂದು ನನಸಾಗುವುದರೊಂದಿಗೆ (೧೯೦೩, ಡಿಸೆಂಬರ್೩),  ಇನ್ನಷ್ಟು, ಮತ್ತಷ್ಟು ಎತ್ತರಕ್ಕೆ ಸಾಗುತ್ತ ಭೂ ಗುರುತ್ವಾಲಿಂಗನದಿಂದ ಪಾರಾಗಿ  ಬಾಹ್ಯಾಕಾಶಕ್ಕೆ ಸಾಗುವ ಮತ್ತು ಭೂಮಿ ಸುತ್ತ ಸುತ್ತುವ, ಚಂದ್ರನ ಮೇಲೆ ಕಾಲೂರುವ ಕನಸಿಗೆ ರೆಕ್ಕೆ ಪುಕ್ಕಗಳೆಲ್ಲ ಹುಟ್ಟಿಕೊಂಡುವು. ಅತ್ತ ರಷ್ಯಾದಲ್ಲಿ ಟ್ಸಿಯೊಲೊವಿಸ್ಕಿ, ಇತ್ತ ಅಮೇರಿಕದಲ್ಲಿ ಹಚಿ೦ಗ್ಸನ್‌ಗೊಡ್ಡಾಡ್೯ ಹಲವು  ಮಹತ್ವದ ಪ್ರಯೋಗಗಳನ್ನು ಕೈಗೊಂಡರು. ಈ ಮಹಾನ್ ಪ್ರಯೋಗಶೀಲರ ಪ್ರಯತ್ನಗಳ ಫಲವಾಗಿ ರಾಕೆಟುಗಳು  ಗಗನದಲ್ಲಿ ಎತ್ತರೆತ್ತರಕ್ಕೆ ಏರಿದುವು. ಒಂದೊಂದೂ ಹೊಸ ಮಜಲುಗಳು.  ಪ್ರಥಮ ಮತ್ತು ದ್ವಿತೀಯ ಮಹಾಯುಧ್ದ ಕಾಲದಲ್ಲಿ &#8211; ಅ೦ದರೆ ೧೯೧೫ &#8211; ೧೯೪೫ ರ ಅವಧಿಯಲ್ಲಿ ರಾಕೇಟ್ ಸಂಬ೦ಧೀ ಪ್ರಯೋಗಗಳು ಮತ್ತಷ್ಟು ಚುರುಕಾದುವು. ಒಂದು ಬಗೆಯಲ್ಲಿ ಅನುದಿನವೂ ದೀಪಾವಳಿ!</p>
<p>ಆ ಐತಿಹಾಸಿಕ ದಿನ ಬಂದೇ ಬಂತು. ಸೊವಿಯತ್ ರಷ್ಯದಿಂದ ಫುಟ್ಬಾಲ್ ಗಾತ್ರದ ಸ್ಪುಟ್ನಿಕ್ ಎಂಬ ಆಕಾಶನೌಕೆಯು  ೧೯೫೭, ಅಕ್ಟೋಬರ್ ೪ ರಂದು  ಯಶಸ್ವಿಯಾಗಿ ಗಗನಕ್ಕೇರಿ ಭೂಮಿ ಸುತ್ತ ಪರಿಭ್ರಮಿಸಿತು.  ೧೯೬೧, ಎಪ್ರಿಲ್ ೧೨. ರಷ್ಯಾದ ಯೂರಿ ಗಾಗರಿನ್ ವಾಸ್ಟಾಕ್ ಎ೦ಬ ಆಕಾಶ ನೌಕೆಯಲ್ಲಿ ಬಾಹ್ಯಕಾಶಕ್ಕೇರಿ, ಭೂಮಿಗೆ ೧೦೮ ನಿಮಿಷಕ್ಕೊ೦ದರ೦ತೆ ೧೭ ಪ್ರದಕ್ಷಿಣೆ ಹಾಕಿದ &#8211; ೨೫ ಘ೦ಟೆಗಳ ಕಾಲ ಅಲ್ಲಿದ್ದು ಸುರಕ್ಷಿತವಾಗಿ ಮರಳಿ ದಾಖಲೆ ನಿಮಿ೯ಸಿದ.</p>
<p>ಈ ನಡುವೆ ಸ್ಥಾಪನೆಗೊಂಡದ್ದು ನಾಸಾ &#8211; ಅಮೇರಿಕದಲ್ಲಿ ಖಗೋಳ ಸಂಶೋಧನೆಗೆ ಮೀಸಲಾದ ಸ್ವತಂತ್ರ<a href="http://apkrishna.files.wordpress.com/2011/08/first-man-in-space-yuri-gagarin-wiki-and-pictures.jpeg"><img class="alignright size-medium wp-image-575" title="First man in space Yuri Gagarin " src="http://apkrishna.files.wordpress.com/2011/08/first-man-in-space-yuri-gagarin-wiki-and-pictures.jpeg?w=300&#038;h=243" alt="" width="300" height="243" /></a> ಸಂಸ್ಥೆ (೧೯೫೮).  ಇದರೊಂದಿಗೆ ವ್ಯೋಮ ಸಂಶೋಧನೆ ಇನ್ನಷ್ಟು  ಬಿರುಸುಗೊಂಡಿತು. ೧೯೬೨ರಲ್ಲಿ  ಅಮೇರಿಕದ ಅಲೆನ್‌ಶೆಪಡ್೯ ಎಂಬ ಖಗೋಳಯಾನಿ ಗಾಗರಿನ್ ಸಾಹಸವನ್ನು ಪುನರಾವತಿ೯ಸಿದ. ಆ ಬಗ್ಗೆ ಏರ್ಪಡಿಸಲಾದ ಸ೦ತೋಷ ಕೂಟದಲ್ಲಿ ಅ೦ದಿನ ಅಮೇರಿಕನ್ ಅಧ್ಯಕ್ಷ ಜಾನ್‌ಆಫ್ ಕೆನ್ನಡಿ ಘೋಷಿಸಿದರು &#8221; ಈ ದಶಕ ಮುಗಿಯುವುದರೊಳಗೆ ಚ೦ದ್ರನ ಮೇಲೆ ಮಾನವನನ್ನು ಇಳಿಸಿ ಪುನ: ಸುರಕ್ಷಿತವಾಗಿ ನೆಲಕ್ಕೆ ಕರೆತರುವ ಗುರಿಯನ್ನು ಈ ರಾಷ್ಟ್ರ ಸಾಧಿಸುವ ಭರವಸೆ ನನಗಿದೆ. ಆ ದಿಸೆಯಲ್ಲಿ ನಾಸಾ ಸಾಗಲಿದೆ.&#8221;</p>
<p>ಇದು ಬರಿದೇ ಘೋಷಣೆಯಾಗಲಿಲ್ಲ. ಅಮೇರಿಕ ಯಶಸ್ವಿಯಾಯಿತು ಕೂಡ. ದಶಕದೊಳಗೆ, ಅಂದರೆ ೧೯೬೯, ಜುಲೈ ೨೦ರಂದು ಅಪೊಲೋ ಆಕಾಶನೌಕೆ ಚಂದ್ರನೆಡೆಗೆ ಸಾಗಿತು, ನೀಲ್ ಅರ್ಮಸ್ತ್ರಾಂಗ್ ಮತ್ತು ಎಡ್ವಿನ್ ಕಾಲ್ಡ್ರಿನ್ ಚಂದ್ರನ ಮೇಲೆ ಕಾಲೂರಿಯೇ ಬಿಟ್ಟರು. ಆರ್ಮಸ್ಟ್ರಾಂಗನ ಅಂದಿನ ಭಾವೋದ್ವೇಗದ ಉದ್ಗಾರ ಇಂದಿಗೂ ಜಗತ್ಪ್ರಸಿದ್ಧ &#8220;That&#8217;s one small step for a man, one giant leap for mankind.&#8221;   -  ಒಬ್ಬ ಮನುಷ್ಯನಿಗೆ ಪುಟ್ಟ ಹೆಜ್ಜೆ, ಮಾನವ ಜನಾಂಗಕ್ಕೆ ದೈತ್ಯ ನೆಗೆತ!<br />
ಶಟಲ್ ಯುಗ<br />
ಅಂದು ಹೇಗಿತ್ತೆಂದರೆ, ಭೂಮಿಗೆ ಮರಳುವ ಸಂ<a href="http://apkrishna.files.wordpress.com/2011/08/man_on_moon.jpg"><img class="alignright size-medium wp-image-576" title="man_on_moon" src="http://apkrishna.files.wordpress.com/2011/08/man_on_moon.jpg?w=276&#038;h=207" alt="" width="276" height="207" /></a>ದರ್ಭದಲ್ಲಿ ಆಕಾಶನೌಕೆ ಉರಿದು ನಾಶವಾಗುವ ಮುನ್ನ ನೌಕೆಗೆ ಜೋಡಣೆಯಾದ ಅವತರಣಕೋಶ ಆಕಾಶನೌಕೆಯಿಂದ ಕಳಚಿಕೊಂಡು ದೊಡ್ಡ ಪ್ಯಾರಾಚ್ಯೂಟನ್ನು  ಅರಳಿಸಿಕೊಂಡು ಸಾಗರದಲ್ಲಿ ನಿಧಾನವಾಗಿ ಇಳಿಯುತ್ತಿತ್ತು. ಅಂದರೆ ಪ್ರತಿ ಬಾರಿಯೂ ಬಾಹ್ಯಾಕಾಶಕ್ಕೆ ತೆರಳಲು ಆಕಾಶನೌಕೆಯನ್ನು ನಿರ್ಮಿಸುವುದು ಅನಿವಾರ್ಯ. ಮಂಗಳೂರಿಂದ ಬೆಂಗಳೂರಿಗೆ ಪಯಣಿಸಲು ಪ್ರತಿ ಬಾರಿಯೂ ಹೊಸ ಟ್ರೈನ್ ನಿರ್ಮಿಸಿದರೆ ಹೇಗೋ ಹಾಗೆ!</p>
<p>ಇದರ ಬದಲಿಗೆ, ಇಂಧನ ತುಂಬಿಸಿಕೊಂಡು ಬಾಹ್ಯಾಕಾಶಕ್ಕೇರಿ,  ಭೂಮಿ ಸುತ್ತ ಪರಿಭ್ರಮಿಸಿದ ಬಳಿಕ ವಿಮಾನದಂತೆ ಬಂದಿಳಿಯುವ,  ಪುನರಪಿ ಬಳಸಬಹುದಾದ ನೌಕೆಯನ್ನು ಸೃಷ್ಟಿಸಿದರೆ ಹೇಗೆ?  ಇಪ್ಪತ್ತು ವರ್ಷಗಳ ಪ್ರಯತ್ನದಲ್ಲಿ ಅಂಥ ವ್ಯೋಮನೌಕೆಗಳು ಸಿದ್ಧಗೊಂಡುವು. ಇದುವೇ ಸ್ಪೇಸ್‌ಶಟಲ್ ಅಥವಾ ಆಕಾಶಲಾಳಿ. ಇದು ಮಾಮೂಲಿ ನೌಕೆಗಿಂತ ಭಿನ್ನ.</p>
<p>ನೋಡುವುದಕ್ಕೆ ಸ್ಪೇಸ್‌ಶಟಲ್ ವಿಮಾನದ ತದ್ವತ್ತು. ಬಾಹ್ಯಾಂತರಿಕ್ಷಕ್ಕೆ ಇದನ್ನು ಹೊತ್ತೊಯ್ಯುವ ಜವಾಬ್ದಾರಿ ಘನ ಇಂಧನ ಭರ್ತಿಗೊಂಡ</p>
<p>ಮೂರು ರಾಕೆಟ್‌ಗಳಿಗೆ. ಅಂದರೆ ರಾಕೆಟಿನ ಬೆನ್ನ ಮೇಲೆ ಇದರ ಸವಾರಿ!.  ಬಾಹ್ಯಾಕಾಶಕ್ಕೆ ರಾಕೆಟ್‌ಗಳು ನೌಕೆಯನ್ನು ಒಯ್ಯುತ್ತವೆ.</p>
<p><img class="alignright size-medium wp-image-577" title="Apollo13Splashdown" src="http://apkrishna.files.wordpress.com/2011/08/apollo13splashdown.jpg?w=300&#038;h=225" alt="" width="300" height="225" /></p>
<p>ಸ್ಪೇಸ್‌ಶಟಲ್ಲಿನ  ಇಂಧನ ಕೋಶದಲ್ಲಿ ದ್ರವರೂಪೀ ಹೈಡ್ರೋಜನ್ ಮತ್ತು ಆಕ್ಸಿಜನ್ ಮಿಶ್ರಣವಿರುತ್ತದೆ. ಭೂಮಿಯಿಂದ ಸುಮಾರು ಎಂಟುನೂರು ಕಿಮೀ ಎತ್ತರದ ಬಾಹ್ಯಾಕಾಶದಲ್ಲಿ  ಶಟಲ್ ಪರಿಭ್ರಮಿಸುತ್ತ, ನಂತರ  ಭೂ ವಾಯುಮಂಡಲದೊಳಕ್ಕೆ ಪ್ರವೇಶಿಸಿ ಗಂಟೆಗೆ ಸುಮಾರು ಮೂವತ್ತು ಸಾವಿರ ಕಿಮೀ ವೇಗದಲ್ಲಿ ಧಾವಿಸುತ್ತ ವಿಮಾನದಂತೆ &#8211; ನಿರ್ದಿಷ್ಟ ತಂಗುದಾಣದಲ್ಲಿ ಬಂದಿಳಿಯುತ್ತದೆ.</p>
<p>ಸ್ಪೇಸ್‌ಶಟಲ್ ಯೋಜನೆಯಲ್ಲಿ ಕೊಲಂಬಿಯಾ, ಚ್ಯಾಲೆಂಜರ್, ಡಿಸ್ಕವರಿ, ಅಟ್ಲಾಂಟಿಸ್, ಎಂಡೆವರ್ ಎಂಬ ಐದು ವ್ಯೋಮನೌಕೆಗಳನ್ನು ನಾಸಾ ನಿರ್ಮಿಸಿತು.  ಕೊಲಂಬಿಯಾ ೧೯೮೧, ಎಪ್ರಿಲ್೧೨ರಂದು ಬಾಹ್ಯಾಕಾಶಕ್ಕೆ ಏರುವುದರೊಂದಿಗೆ ಶಟಲ್‌ಯುಗ ಅಧಿಕೃತವಾಗಿ ಆರಂಭಗೊಂಡಿತು. ಚ್ಯಾಲೆಂಜರ್ ೧೯೮೨ ಜುಲೈ ತಿಂಗಳಲ್ಲಿ,  ಡಿಸ್ಕವರಿ ೧೯೮೩ ಸಪ್ಟೆಂಬರಿನಲ್ಲಿ, ಅಟ್ಲಾಂಟಿಸ್ ೧೯೮೫ ಎಪ್ರಿಲ್‌ನಲ್ಲಿ, ಎಂಡೆವರ್ ೧೯೯೨ ಮೇ ತಿಂಗಳಿನಲ್ಲಿ  ತಮ್ಮ ಯಾನವನ್ನು ಯಶಸ್ವಿಯಾಗಿ ಆರಂಭಿಸಿದುವು.</p>
<p>ಇದು ತನಕ ೧೩೫ ಬಾರಿ ಬಾಹ್ಯಾಕಾಶಕ್ಕೆ ಪಯಣಿಸಿದ ಸ್ಪೇಸ್‌ಶಟಲ್‌ಗಳಲ್ಲಿ ಮುನ್ನೂರ ಐವತ್ತೈದು ಮಂದಿ ವ್ಯೋಮ ಯಾನ ಮಾಡಿದ್ದಾರೆ; ನೂರೆಂಬತ್ತು ಉಪಗ್ರಹಗಳು ಕಕ್ಷೆಗೆ ಸೇರಿವೆ. ಐವತ್ತೆರಡು ಉಪಗ್ರಹಗಳನ್ನು ಕಕ್ಷೆಯಿಂದ  ಭೂಮಿಗೆ ತಂದು ದುರಸ್ತಿ ಮಾಡಿ ಮತ್ತೆ ಕಕ್ಷೆಗೆ ಸೇರಿಸಲಾಗಿದೆ.  ಶೂನ್ಯ ಗುರುತ್ವದಲ್ಲಿ ಮತ್ತು ನಿರ್ವಾತದಲ್ಲಿ ದ್ರವ್ಯಗಳು ತೋರ್ಪಡಿಸುವ ವಿಶೇಷ ಗುಣಲಕ್ಷಣಗಳನ್ನು ವಿಸ್ತ್ರುತ ಅಧ್ಯಯನ ನಡೆದಿದೆ.</p>
<p>ಇಂದು ಭೂ ವಾಯುಮಂಡಲದಾಚೆಗೆ ನೆಲೆನಿಂತು ವಿಶ್ವದಂತರಾಳವನ್ನು ತಪಾಸಿಸುತ್ತ ವಿಶ್ವ ಸೃಷ್ಟಿಯ ಅನೂಹ್ಯ ವಿಸ್ಮಯಗಳನ್ನು ಅನಾವರಣಗೊ</p>
<p>ಳಿಸುತ್ತ ಖಗೋಲ ವಿಜ್ಞಾನಕ್ಕೆ ನೂತನ ಆಯಾಮವನ್ನು ಕಲ್ಪಿಸಿರುವ ಹಬಲ್ ದೂರದರ್ಶಕವನ್ನು  ಸ್ಪೇಸ್‌ಶಟಲ್ ಡಿಸ್ಕವರಿಯಲ್ಲಿ ಒಯ್ದು ನೆಲೆಗೊಳಿಸಿದ್ದು ಇಪ್ಪತ್ತು ವರ್ಷಗಳಷ್ಟು ಹಿಂದೆ (ಎಪ್ರಿಲ್ ೨೫,೧೯೯೦). ಹಬಲ್ ದೂರದರ್ಶಕಕ್ಕೆ ಬಂದಿತ್ತು ಬಾಲ್ಯದಲ್ಲೇ ತೊಂದರೆ!. ಅಸಮರ್ಪಕ ಮಸೂರ. ಹಾಗಾಗಿ ಅದು ರವಾನಿಸಿದ ಚಿತ್ರಗಳು ಅಸ್ಪಷ್ಟ.  ದೂರದರ್ಶಕವನ್ನು ಮತ್ತೆ ಭೂಮಿಗೆ ತರುವಂತಿಲ್ಲ. ಯೋಜನೆ ಟುಸ್ ಆಗುವ ಭಯ.<br />
ಆದರೆ ನಾಸಾ ಧೃತಿಗೆಡಲಿಲ್ಲ. ನೆರವಿಗೆ ಬಂದದ್ದು ಸ್ಪೇಸ್‌ಶಟಲ್ ಎಂಡೆವರ್ (೧೯೯೩). ಅಂದು ಖಗೋಳಯಾನಿಗಳು ಹಬಲ್ ಬಳಿ ಸಾಗಿ, ದೂರದರ್ಶಕವ</p>
<p>ನ್ನು ಶಟಲ್ ಒಳಗಡೆ ತಂದು,  ಐದು ದಿನಗಳ ಪ್ರಯತ್ನದಲ್ಲಿ ಮಸೂರವನ್ನು ದುರಸ್ತಿ ಮಾಡಿ ಮತ್ತೆ ಕಕ್ಷೆಯಲ್ಲಿ ನೆಲೆಗೊಳಿಸಿದರು. ಅಲ್ಲಿಂದ ಸತತವಾಗಿ ಮಾಹಿತಿಯ ಮಹಾಪೂರವನ್ನೇ ಒದಗಿಸುತ್ತಿರುವ ಹಬಲ್ ದೂರದರ್ಶಕದ ಗೈರೊಸ್ಕೋಪುಗಳು, ಇತರ ಭಾಗಗಳು ಸಹಜವಗಿಯೇ ದುರ್ಬಲ ಸ್ಥಿತಿಗೆ ಬಂದಿದ್ದುವು. ಕೊನೆಯ ಪ್ರಯತ್ನವಾಗಿ ಸ್ಪೇಸ್‌ಶಟಲ್ ಅಟ್ಲಾಂಟಿಸ್‌ನಲ್ಲಿ ಹಬಲ್ ಸನಿಹಕ್ಕೆ ಬಂದ ಖಗೋಳಯಾನಿಗಳು ದೂರದರ್ಶಕದ ಬಳಿಗೆ ಸಾಗಿ ವ್ಯೋಮನಡುಗೆಯಲ್ಲಿ ದುರಸ್ತಿ ಮಾಡಿದರು (೨೦೦೩). ಇದೊಂದು ಪರಮಾದ್ಭುತ ವ್ಯೋಮ ಸಾಹಸ. ಪರಿಣಾಮವಾಗಿ ಹಬಲ್ ಆಯುಷ್ಯ ಇನ್ನೊಂದು ದಶಕಕ್ಕೆ ವಿಸ್ತರಿಸಿದೆ.</p>
<p><a href="http://apkrishna.files.wordpress.com/2011/08/upgrading_hubble_during_sm1.jpg"><img class="alignleft size-medium wp-image-578" title="upgrading_hubble_during_sm1" src="http://apkrishna.files.wordpress.com/2011/08/upgrading_hubble_during_sm1.jpg?w=300&#038;h=298" alt="" width="300" height="298" /></a></p>
<p>ಕೇವಲ ಹಬಲ್ ಮಾತ್ರವಲ್ಲ, ಚಂದ್ರ ಎನ್ನುವ ಎಕ್ಸ್ ಕಿರಣ ದೂರದರ್ಶಕ, ಕಾಂಪ್ಟನ್ ಎಂಬ ಗ್ಯಾಮಾ ವಿಕಿರಣ ದರ್ಶಕ, ಅಂತಾರಾಷ್ಟ್ರೀಯ ವ್ಯೋಮ ನಿಲ್ದಾಣಗಳ ನಿರ್ಮಾಣಗಳಲ್ಲಿಯೂ  ಸ್ಪೇಸ್ ಶಟಲ್‌ಗಳದು ಮಹತ್ವದ ಪಾತ್ರವಿದೆ.  ಬುಧ ಗ್ರಹದ ಅಧ್ಯಯನಕ್ಕೆ ಕಳುಹಿಸಲಾದ ಮೆಜೆಲಾನ್ ದರ್ಶಕ, ಗುರು ಗ್ರಹದ ಅಧ್ಯಯನಕ್ಕೆ ರವಾನಿಸಲ್ಪಟ್ಟ ಗೆಲಿಲಿಯೋ,  ಸೌರ ಮಾಹಿತಿಗಾಗಿ ಹೋದ ಯೂಲಿಸಿಸ್ &#8230;.</p>
<p>ಇವೆಲ್ಲವೂ ಸ್ಪೇಸ್ ಶಟಲ್ ಮೂಲಕ ಬಾಹ್ಯಾಕಾಶ ಸೇರಿದಂಥವು. ಈ ಎಲ್ಲ ವೈಜ್ಞಾನಿಕ ಯಶೋಗಾಥೆಗಳ ನಡುವೆ ಮರೆಯಲಾಗದ ದುರಂತಗಳ ನೆನಪೂ ಇದೆ.<br />
ಮರೆಯಾದ ಕಲ್ಪನಾ<br />
೧೯೮೬, ಜನವರಿ ೨೮, ಸ್ಪೇಸ್‌ಶಟಲ್ ಚ್ಯಾಲೆಂಜರ್ ಉಡ್ಡಯನಗೊಂಡು, ಕೇವಲ ಒಂದು ನಿಮಿಷ ಕಳೆದಿರಬಹುದಷ್ಟೇ, ಭೀಕರವಾಗಿ ಆಸ್ಫೋಟಿಸಿ ಉರಿದೇ ಹೋಯಿತು &#8211; ಏಳು ಮಂದಿ ಖಗೋಳಯಾನಿಗಳ ಸಹಿತ. ಅಮೇರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ದು:ಖಿಸಿದರು &#8220;ನಾವು ಆ ಖಗೋಳ</p>
<p>ಯಾನಿಗಳನ್ನು ಎಂದಿಗೂ ಮರೆಯಲಾರೆವು. ಈ ದಿನ</p>
<p>&nbsp;</p>
<p>ಬೆಳಗ್ಗೆ ಕೈಬೀಸುತ್ತ ನಗು ನಗುತ್ತ ಹೋದ ಅವರನ್ನು ಮರೆಯುವುದಾದರೂ ಹೇಗೆ? ಈ ಭುವಿಯ ಬಂಧದಿಂದ ಪಾರಾಗಿ ಹೋಗುವುದಕ್ಕೆ ಹೊರಟವರು ದೇವರ ಪಾದದೆಡೆಗೆ ತೆರಳಿದರು. ಮತ್ತೆ ಬರದ ಕಡೆಗೆ ತೆರಳಿದರು&#8221;</p>
<p>&nbsp;</p>
<p>ಚ್ಯಾಲೆಂಜರ್ ದುರ್ಘಟನೆ ಯಾಕೆ ಮತ್ತು ಹೇಗೆ ಸಂಭವಿಸಿತೆನ್ನುವುದನ್ನು  ತಪಾಸಿಸಲು ರೋಜರ್ ಎಂಬ ಖಗೋಳವಿದನ ನೇತೃತ್ವದಲ್ಲಿ ಒಂದು ಸಮಿತಿಯ ರಚನೆಯಾಯಿತು. ಘಟಾನುಘಟಿಗಳಿದ್ದ ಆ ಸಮಿತಿಯ ಒಬ್ಬ ಸದಸ್ಯ &#8211; ನೊಬೆಲ್ ವಿಜ್ಞಾನಿ ರಿಚರ್ಡ್ ಫೈನ್ಮನ್, ಇಪ್ಪತ್ತನೇ ಶತಮಾನ ಕಂಡ ಪರಮೋತ್ಕೃಷ್ಟ ಪ್ರಾಧ್ಯಾಪಕ. ಉಡ್ಡಯನ ಸಂದರ್ಭದಲ್ಲಿ  ಘನ ಇಂಧನ ರಾಕೇಟಿನ ಒಂದು ವಾಷರ್ ಕೆಟ್ಟುಹೋಗಿ ಇಂಧನ ಕೋಶಕ್ಕೆ ಬೆಂಕಿ ತಗಲಿತೆಂದು ಸಮಿತಿಯ ವರದಿ ತಿಳಿಸಿತು.  ವಾತಾವರಣದ ಉಷ್ಣತೆ ತೀರ ಕಡಿಮೆ ಇದ್ದಾಗ ವಾಷರ್ ತನ್ನ ಗುಣವನ್ನು ಕಳೆದುಕೊಳ್ಳುತ್ತದೆಂದು ಹೇಳಿದ ರಿಚರ್ಡ್‌ಫೈನ್ಮನ್,  ವ್ಯೋಮ ನೌಕೆಯಲ್ಲಿ ಬಳಸುವ ವಾಷರನ್ನು ಬರ್ಫದ ನೀರಿನಲ್ಲಿ ಮುಳುಗಿಸಿ ತೆಗೆದು, ಅದು ತನ್ನ ಸ್ಥಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುವುದನ್ನು ಪ್ರಾಯೋಗಿಕವಾಗಿ ನಿರೂಪಿಸಿದರು.  ತನಗನಿಸಿದ್ದನ್ನು ಮುಲಾಜಿಲ್ಲದೇ ಹೇಳುವ ಜಾಯಮಾನದ ಫೈನ್ಮನ್,  ಶಟಲ್ ಉಡ್ಡಯನ ಸಂದರ್ಭಗಳಲ್ಲಿ ನಾಸಾ ತೆಗೆದುಕೊಳ್ಳಬೇಕಾದ ಎಚ್ಚರಿಕೆಯ ಕ್ರಮಗಳು ಸಾಕಾಗುತ್ತಿಲ್ಲವೆಂದು ಸಾರ್ವಜನಿಕವಾಗಿ ಟೀಕಿಸಿದರು;  ಹಲವರ ವಿರೋಧ ಕಟ್ಟಿಕೊಂಡರು.</p>
<p><a href="http://apkrishna.files.wordpress.com/2011/08/richard-feynman-ot0004h.jpg"><img class="alignright size-medium wp-image-587" title="Richard-Feynman-OT0004H" src="http://apkrishna.files.wordpress.com/2011/08/richard-feynman-ot0004h.jpg?w=300&#038;h=200" alt="" width="300" height="200" /></a></p>
<p>ಚ್ಯಾಲೆಂಜರ್ ದುರ್ಘಟನೆಯಿಂದ ಹೊರಬರಲು ನಾಸಾ ಸಂಸ್ಥೆಗೆ  ಮತ್ತೆರಡು ವರ್ಷಗಳು ಬೇಕಾಯಿತು &#8211; ಸಪ್ಟೆಂಬರ್ ೨೯, ೧೯೮೮ರಂದು ಸ್ಪೇಸ್‌ಶಟಲ್ ಡಿಸ್ಕವರಿಯ ಉಡ್ಡಯನದೊಂದಿಗೆ ಮತ್ತೆ ಈ</p>
<p>ಅಸಾಧಾರಣ ನೌಕೆಗಳ ಯಾನ ಆರಂಭವಾಯಿತು. ಆದರೆ..</p>
<p>ಹದಿನೈದು ವರ್ಷಗಳ ಬಳಿಕ. ೨೦೦೩ ಫೆಬ್ರವರಿ೧. ಇಪ್ಪತ್ತೇಳು ಬಾರಿ ವ್ಯೋಮ ಯಾನ ಮಾಡಿದ ಅನುಭವೀ ಸ್ಪೇಸ್‌ಶಟಲ್ ಕೊಲಂಬಿಯಾ, ಹೊರಟಿತ್ತು ಇಪ್ಪತ್ತೆಂಟನೇಯ ಯಾನಕ್ಕೆ. ಭಾರತೀಯರಾದ ನಮಗೆ ಸಂಭ್ರಮವೋ ಸಂಭ್ರಮ. ಏಕೆಂದರೆ ನಮ್ಮ ಹುಡುಗಿ ಅದರಲ್ಲಿದ್ದಳು. ಅವಳ ಹೆಸರು ಕಲ್ಪನಾ ಚಾವ್ಲಾ. ಹರ್ಯಾನಾದಲ್ಲಿ ಹುಟ್ಟಿದ (೧೯೬೧, ಜುಲೈ೧) ಕಲ್ಪನಾ, ಚಂಡೀಗಢದ ಎಂಜನೀಯರಿಂಗ್ ಕಾಲೇಜಿನಿಂದ ಎರೋನ್ಯಾಟಿಕಲ್ ಎಂಜನೀಯರಿಂಗ್ ಮುಗಿಸಿ, ನಾಸಾಕ್ಕೆ ತೆರಳಿ ಖಗೋಳಯಾನಿಯಾದ ಪ್ರತಿಭಾವಂತೆ. ೧೯೯೮ರಲ್ಲಿ ಪ್ರಥಮ ಬಾರಿ ಬಾಹ್ಯಾಕಾಶಕ್ಕೆ ಯಾನ ಮಾಡಿದ ಅನುಭವವಿದ್ದ ಈಕೆಗೆ ಈ ಬಾರಿ ಹಲವು ವೈಜ್ಞಾನಿಕ ಪ್ರಯೋಗಗಳನ್ನು ಕೈಗೊಳ್ಳುವ ಜವಾಬ್ದಾರಿ ಇತ್ತು.</p>
<p>ಕರಾರುವಾಕ್ಕಾಗಿ ನಾಜೂಕಿನಿಂದ ನಭಕ್ಕೆ ಏರಿದ ಕೊಲಂಬಿಯಾ ಹದಿನಾರು ದಿನಗಳ ಕಾಲ  ಬಾಹ್ಯಾಕಾಶ ಯಾನ ಮುಗಿಸಿ ತವರಿಗೆ ಮರಳುವ ಹೊತ್ತು ಬಂತು. ಭೂ ವಾಯುಮಂಡಲವನ್ನು ಪ್ರವೇಶಿಸುತ್ತಲೇ ಅದರ ಹೊರಮೈ ಬಿಸಿಯೇರತೊಡಗಿತು. ಇದು ಸಹಜವೇ. ಆದರೆ ದುರದೃಷ್ಟದಿಂದ, ಉಡ್ಡಯನ ಸಂದರ್ಭದಲ್ಲಿಯೇ ಅದರ ಮೇಲ್ಮೈಯಲ್ಲಿ ತಾಪವನ್ನು ತಡೆಯುವ ಕೆಲವು ಫಲಕಗಳು ಕಿತ್ತೆದ್ದು ಬಂದಿದ್ದುವು. ಅದು ಗೊತ್ತಾಗುವಾಗ ಕಾಲ ಮಿಂಚಿತ್ತು. ಕೊಲಂಬಿಯಾದ  ಉಷ್ಣತೆ ಹೆಚ್ಚುತ್ತ ಹೆಚ್ಚುತ್ತ ಅದು  ಬಾನಂಗಳದಲ್ಲಿ ಉರಿದೇ ಹೋಯಿತು.     ನಗುಮುಖದ ಚಾವ್ಲಾ ನಡೆದಳು ಅನೂಹ್ಯ ಲೋಕಕ್ಕೆ &#8211; ಲಕ್ಷೋಪಲಕ್ಷ ಎಳೆಯ ಭಾರತೀಯರಲ್ಲಿ ವ್ಯೋಮ ವಿಜ್ಞಾನದ ಕನಸನ್ನು ಬಿತ್ತಿ. <a href="http://apkrishna.files.wordpress.com/2011/08/sts-107_kalpana_chawla_formal.jpg"><img class="alignright size-medium wp-image-580" title="STS-107_Kalpana_Chawla_Formal" src="http://apkrishna.files.wordpress.com/2011/08/sts-107_kalpana_chawla_formal.jpg?w=209&#038;h=243" alt="" width="209" height="243" /></a></p>
<p>ಖಗೋಳ ವಿಜ್ಞಾನದ ಪ್ರವರ್ಧನೆಯಲ್ಲಿ ಅವಿಭಾಜ್ಯ ಅಂಗವೇ ಆಗಿದ್ದ ಸ್ಪೇಸ್‌ಶಟಲ್ ಯೋಜನೆ ಇಂದು ಅದಿಕೃತವಾಗಿ ಬರ್ಖಾಸ್ತಾಗಿದೆ. ಅಮೇರಿಕದ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ದುರ್ಭರವಾಗುತ್ತಿದೆ. ಎಂದೇ ನಾಸಾ ವ್ಯೋಮ ಯೋಜನೆಗಳಷ್ಟೇ ಅಲ್ಲ, ವೈಜ್ಞಾನಿಕ ಸಂಶೋಧನೆಗಳನ್ನು ಕೈಬಿಡುತ್ತಿದೆ. ಹಬಲ್ ದೂರದರ್ಶಕದ ಸ್ಥಾನವನ್ನು ತುಂಬಲು ಜೇಮ್ಸ್‌ವೆಬ್ ಎಂಬ ದೂರದರ್ಶಕದ ನಿರ್ಮಾಣವಾಗುತ್ತಿತ್ತು. ಒಬಾಮಾ ಸರಕಾರ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಸ್ಥಾಪನೆಯಾಗಬೇಕಾಗಿದ್ದ ಗುರುತ್ವದೂರದರ್ಶಕದ ಯೋಜನೆಯನ್ನು ಮುಂದೂಡಿದೆ. ಹೊಸ ಬಗೆಯ ವ್ಯೋಮ ನೌಕೆಗಳು ಇನ್ನು ಬರಲು ದಶಕಗಳು ಬೇಕಾಗಬಹುದು. ಅಥವಾ ಬದಲಾದ ಸನ್ನಿವೇಶದಲ್ಲಿ ಅವು  ಬರದೇ ಹೋಗಬಹುದೆಂದು ಆರ್ಥಿಕ ವಿಶ್ಲೇಷಕರ ಅಭಿಮತ.</p>
<p>ಸ್ಪೇಸ್ ಶಟಲ್ ಮತ್ತು ವ್ಯೋಮ ಸಂಶೋಧನೆಗಳು ದುಬಾರಿ ಎನ್ನುವುದು ನಿಜ. ಬಿಲಿಯಗಟ್ಟಲೆ ಡಾಲರ್ ಖರ್ಚಾಗಿದೆ ಮತ್ತು ಆಗುತ್ತಿದೆ ಎನ್ನುವುದೂ ನಿಜ. ಆದರೆ ನಮಗೆ ಕನಸುಗಳು ಬೇಕು. ಆ ಕನಸುಗಳನ್ನು ನನಸಾಗಿಸುವ ಪ್ರಯತ್ನಗಳೂ ಬೇಕು. ಇತಿಹಾಸದಲ್ಲಿ ನಡೆದ ಇಂಥ ಪ್ರಯತ್ನಗಳು ಇಂದು ನಮ್ಮನ್ನು ಮುನ್ನಡೆಸುತ್ತಿವೆ ಎನ್ನುವುದನ್ನು ಮರೆಯಬಾರದು. ಸ್ಪೇಸ್‌ಶಟಲ್ ಶಾಶ್ವತವಾಗಿ ನಿಲುಗಡೆಯಾಗದಿರಲಿ!</p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/573/"><img alt="" border="0" src="http://feeds.wordpress.com/1.0/comments/apkrishna.wordpress.com/573/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/573/"><img alt="" border="0" src="http://feeds.wordpress.com/1.0/delicious/apkrishna.wordpress.com/573/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/573/"><img alt="" border="0" src="http://feeds.wordpress.com/1.0/facebook/apkrishna.wordpress.com/573/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/573/"><img alt="" border="0" src="http://feeds.wordpress.com/1.0/twitter/apkrishna.wordpress.com/573/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/573/"><img alt="" border="0" src="http://feeds.wordpress.com/1.0/stumble/apkrishna.wordpress.com/573/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/573/"><img alt="" border="0" src="http://feeds.wordpress.com/1.0/digg/apkrishna.wordpress.com/573/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/573/"><img alt="" border="0" src="http://feeds.wordpress.com/1.0/reddit/apkrishna.wordpress.com/573/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=573&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/08/02/%e0%b2%b9%e0%b2%be%e0%b2%b0%e0%b2%be%e0%b2%9f-%e0%b2%a8%e0%b2%bf%e0%b2%b2%e0%b3%8d%e0%b2%b2%e0%b2%bf%e0%b2%b8%e0%b2%bf%e0%b2%a6-%e0%b2%b8%e0%b3%8d%e0%b2%aa%e0%b3%87%e0%b2%b8%e0%b3%8d%e2%80%8c%e0%b2%b6/feed/</wfw:commentRss>
		<slash:comments>4</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2011/08/s14_s125s035.jpg?w=220" medium="image">
			<media:title type="html">s14_s125s035</media:title>
		</media:content>

		<media:content url="http://apkrishna.files.wordpress.com/2011/08/first-man-in-space-yuri-gagarin-wiki-and-pictures.jpeg?w=300" medium="image">
			<media:title type="html">First man in space Yuri Gagarin </media:title>
		</media:content>

		<media:content url="http://apkrishna.files.wordpress.com/2011/08/man_on_moon.jpg?w=300" medium="image">
			<media:title type="html">man_on_moon</media:title>
		</media:content>

		<media:content url="http://apkrishna.files.wordpress.com/2011/08/apollo13splashdown.jpg?w=300" medium="image">
			<media:title type="html">Apollo13Splashdown</media:title>
		</media:content>

		<media:content url="http://apkrishna.files.wordpress.com/2011/08/upgrading_hubble_during_sm1.jpg?w=300" medium="image">
			<media:title type="html">upgrading_hubble_during_sm1</media:title>
		</media:content>

		<media:content url="http://apkrishna.files.wordpress.com/2011/08/richard-feynman-ot0004h.jpg?w=300" medium="image">
			<media:title type="html">Richard-Feynman-OT0004H</media:title>
		</media:content>

		<media:content url="http://apkrishna.files.wordpress.com/2011/08/sts-107_kalpana_chawla_formal.jpg?w=278" medium="image">
			<media:title type="html">STS-107_Kalpana_Chawla_Formal</media:title>
		</media:content>
	</item>
		<item>
		<title>ರುದರ್ಫರ್ಡ್ ಕಂಡ ಪರಮಾಣು ಅಂತರಂಗ</title>
		<link>http://apkrishna.wordpress.com/2011/07/05/%e0%b2%b0%e0%b3%81%e0%b2%b0%e0%b3%8d%e0%b2%a6%e0%b2%b0%e0%b3%8d%e0%b2%ab%e0%b2%b0%e0%b3%8d%e0%b2%a1%e0%b3%8d-%e0%b2%95%e0%b2%82%e0%b2%a1-%e0%b2%aa%e0%b2%b0%e0%b2%ae%e0%b2%be%e0%b2%a3%e0%b3%81/</link>
		<comments>http://apkrishna.wordpress.com/2011/07/05/%e0%b2%b0%e0%b3%81%e0%b2%b0%e0%b3%8d%e0%b2%a6%e0%b2%b0%e0%b3%8d%e0%b2%ab%e0%b2%b0%e0%b3%8d%e0%b2%a1%e0%b3%8d-%e0%b2%95%e0%b2%82%e0%b2%a1-%e0%b2%aa%e0%b2%b0%e0%b2%ae%e0%b2%be%e0%b2%a3%e0%b3%81/#comments</comments>
		<pubDate>Tue, 05 Jul 2011 01:46:44 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=559</guid>
		<description><![CDATA[ನ್ಯೂಕ್ಲಿಯಸ್ ಎನ್ನುವುದು ಪರಮಾಣುವಿನ ಕೇಂದ್ರ. ಇದರ ಆವಿಷ್ಕಾರಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮ. ಆವಿಷ್ಕಾರವಾದದ್ದು ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಭೌತವಿಜ್ಞಾನ ಪ್ರಯೋಗಾಲಯದಲ್ಲಿ ನೂರು ವರ್ಷಗಳ ಹಿಂದೆ &#8211; ಅರ್ನೆಸ್ಟ್‌ರುದರ್ಫರ್ಡ್ ಮತ್ತು ಅವರ ಸಹವರ್ತಿಗಳು ನಡೆಸಿದ ಐತಿಹಾಸಿಕ ಪ್ರಯೋಗಗಳಿಂದ. ನ್ಯೂಝಿಲ್ಯಾಂಡಿನ ಮೊಸಳೆ ರುದರ್ಫರ್ಡ್ ಅವರನ್ನು ನ್ಯೂಕ್ಲಿಯರ್ ಭೌತವಿಜ್ಞಾನದ ಜನಕ ಎನ್ನುವುದುಂಟು. ಇವರ ಸಂಶೋಧನೆಗಳ ಹರವು ಆ ಬಗೆಯದ್ದು.  ನೊಬೆಲ್ ವಿಜ್ಞಾನಿ ಒಟ್ಟೋಹ್ಯಾನ್ (೧೮೭೯ &#8211; ೧೯೬೮) ಬಣ್ಣಿಸುವಂತೆ  ರುದರ್ಫರ್ಡ್ ಅಂದರೆ ಜ್ವಾಲಾಮುಖಿ ಸದೃಶ ಪ್ರಚಂಡ ಶಕ್ತಿಯ ಮಹಾ ಊಟೆ. ಹತ್ತು ಪ್ರಯೋಗಗಳನ್ನು [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=559&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p>ನ್ಯೂಕ್ಲಿಯಸ್ ಎನ್ನುವುದು ಪರಮಾಣುವಿನ ಕೇಂದ್ರ. ಇದರ ಆವಿಷ್ಕಾರಕ್ಕೆ ಇದೀಗ ಶತಮಾನೋತ್ಸವದ ಸಂಭ್ರಮ. ಆವಿಷ್ಕಾರವಾದದ್ದು ಇಂಗ್ಲೆಂಡಿನ ಮ್ಯಾಂಚೆಸ್ಟರ್<a href="http://apkrishna.files.wordpress.com/2011/07/rutherford.jpg"><img class="alignright size-full wp-image-560" title="ರುದರ್ಫರ್ಡ್ ನ್ಯೂಕ್ಲಿಯರ್   ವಿಜ್ಞಾನದ ಜನಕ  " src="http://apkrishna.files.wordpress.com/2011/07/rutherford.jpg?w=600" alt=""   /></a> ವಿಶ್ವವಿದ್ಯಾಲಯದ ಭೌತವಿಜ್ಞಾನ ಪ್ರಯೋಗಾಲಯದಲ್ಲಿ ನೂರು ವರ್ಷಗಳ ಹಿಂದೆ &#8211; ಅರ್ನೆಸ್ಟ್‌ರುದರ್ಫರ್ಡ್ ಮತ್ತು ಅವರ ಸಹವರ್ತಿಗಳು ನಡೆಸಿದ ಐತಿಹಾಸಿಕ ಪ್ರಯೋಗಗಳಿಂದ.</p>
<p><span id="more-559"></span></p>
<p>ನ್ಯೂಝಿಲ್ಯಾಂಡಿನ ಮೊಸಳೆ</p>
<p>ರುದರ್ಫರ್ಡ್ ಅವರನ್ನು ನ್ಯೂಕ್ಲಿಯರ್ ಭೌತವಿಜ್ಞಾನದ ಜನಕ ಎನ್ನುವುದುಂಟು. ಇವರ ಸಂಶೋಧನೆಗಳ ಹರವು ಆ ಬಗೆಯದ್ದು.  ನೊಬೆಲ್ ವಿಜ್ಞಾನಿ ಒಟ್ಟೋಹ್ಯಾನ್ (೧೮೭೯ &#8211; ೧೯೬೮) ಬಣ್ಣಿಸುವಂತೆ <span class="Apple-style-span" style="font-family:georgia, serif;font-style:italic;font-weight:bold;"> ರುದರ್ಫರ್ಡ್ ಅಂದರೆ ಜ್ವಾಲಾಮುಖಿ ಸದೃಶ ಪ್ರಚಂಡ ಶಕ್ತಿಯ ಮಹಾ ಊಟೆ. ಹತ್ತು ಪ್ರಯೋಗಗಳನ್ನು ಒಮ್ಮೆಲೇ ಮುನ್ನಡೆಸುತ್ತಿದ್ದರೂ, ಪ್ರತಿಯೊಂದರಲ್ಲೂ ಅತ್ಯುತ್ಕೃಷ್ಟತೆಯ ಛಾಪನ್ನು ಸಾಧಿಸುತ್ತಿದ್ದ ಅದ್ವಿತೀಯ&#8221;</span></p>
<p><span class="Apple-style-span" style="font-family:georgia, serif;font-style:italic;font-weight:bold;">ರಷ್ಯದ ನೊಬೆಲ್ ಭೌತವಿಜ್ಞಾನಿ ಪೀಟರ್ ಕಪಿಟ್ಜಾ (೧೮೯೪-೧೯೮೪) ಪ್ರಕಾರ </span></p>
<p><span class="Apple-style-span" style="font-family:georgia, serif;font-style:italic;font-weight:bold;">ಶ್ರೇಷ್ಠ ಪ್ರಯೋಗಗಳು ಶ್ರೇಷ್ಠ ಕಾದಂಬರಿ, ಚಿತ್ರ ಅಥವಾ ಸಂಗೀತಮೇಳವನ್ನು ರೂಪಿಸುವುದಕ್ಕಿಂತ ಸುಲಭದ್ದಲ್ಲ.   ಕಲಾವಿದನ ಚಿತ್ರದಲ್ಲಿ  ಆರಂಭದ ತಪ್ಪುಗಳು, ಅಡೆತಡೆಗಳು ಮಾಯವಾಗಿ ಕೊನೆಯಲ್ಲಿ ಚಿತ್ರವಷ್ಟೇ ಪ್ರದರ್ಶನಕ್ಕೆ ಬರುವಂತೆ ಇದ್ದುವು ರುದರ್ಫರ್ಡ್ ಪ್ರಯೋಗಗಳು. ಅವು ಪರಿಪೂರ್ಣ ಸೌಂದರ್ಯದ ಪ್ರತೀಕಗಳು.&#8221;</span></p>
<p>ರುದರ್ಫರ್ಡ್  ಭೌತ ವಿಜ್ಞಾನದ ದೈತ್ಯ ಪ್ರತಿಭೆ. ನೋಡುವುದಕ್ಕೂ ದೈತ್ಯ. ಆರೂವರೆ ಅಡಿ ಎತ್ತರ. ಪೊದೆ ಮೀಸೆ. ಗಡಸು  ಸ್ವರ &#8211; ಹಂಡೆಯೊಳಗಿನ ಧ್ವನಿ.  ಸರಳ, ಉತ್ಸಾಹಿ, ಎಲ್ಲರೊಂದಿಗೆ ಬೆರೆಯುವ, ಎಲ್ಲರನ್ನು ಹುರಿದುಂಬಿಸುತ್ತಿದ್ದ ಸ್ನೇಹಪರ ವ್ಯಕ್ತಿತ್ವ. ಅವರ ನೆಗೆಗೆ ಪ್ರಯೋಗಾಲಯವೇ ಅದುರುತ್ತಿತ್ತಂತೆ! ಹಗಲಿರುಳು ಭೌತ ವಿಜ್ಞಾನದ ಬಗ್ಗೆಯೇ ಚಿಂತಿಸುತ್ತಿದ್ದ ಇವರನ್ನು ಆತ್ಮೀಯ ಸ್ನೇಹಿತ ಮತ್ತು ಶಿಷ್ಯ ವರ್ಗ ಪ್ರೀತಿಯಿಂದ ನ್ಯೂಜಿಲ್ಯಾಂಡಿನ ಮೊಸಳೆ ಎನ್ನುತ್ತಿದ್ದುದುಂಟು. ಆದರೆ ಮೊಸಳೆಯಂತೆ ಕಣ್ಣೀರು ಸುರಿಸುತ್ತಿರವ ಸ್ವಭಾವ ಇವರದ್ದಾಗಿರಲಿಲ್ಲ. ಮೊಸಳೆಯ ಅಗಾಧ ಸಾಮರ್ಥ್ಯ,  ತಲೆ ತಿರುಗಿಸದೇ ತನ್ನ ಗುರಿಯತ್ತ ಸಾಗುವ ಸ್ವಭಾವಕ್ಕೆ ಸಂವಾದಿಯಾಗಿದ್ದರು. ಗುರಿ ಹಿಡಿದರೆ ತಲುಪುವ ತನಕ ಅವಿಶ್ರಾಂತ &#8211; ಅರ್ಜುನ ಲಕ್ಷ್ಯ.  ಎಂದೇ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಭೌತ ವಿಜ್ಞಾನ ವಿಭಾಗದ ಹೊರ ಗೋಡೆಯ ಮೇಲೊಂದು  ದೈತ್ಯ ಮೊಸಳೆಯ ಉಬ್ಬು ಚಿತ್ರವಿದೆ &#8211; ರುದರ್ಫರ್ಡ್ ಪ್ರತೀಕವಾಗಿ!.<a href="http://apkrishna.files.wordpress.com/2011/07/180px-rutherford_crocodile.jpg"><img class="alignright size-full wp-image-561" title="180px-Rutherford_crocodile" src="http://apkrishna.files.wordpress.com/2011/07/180px-rutherford_crocodile.jpg?w=600" alt=""   /></a></p>
<p>ಜನಿಸಿದ್ದು  ಉತ್ತರ ನ್ಯೂಝಿಲ್ಯಾಂಡಿನ ನೆಲ್ಸನ್ ಎಂಬ ಪುಟ್ಟ ಪಟ್ಟಣದ ಬಳಿಯ ಬ್ರೈಟ್‌ವಾಟರ್ ಎಂಬ  ಚಿಕ್ಕ ಹಳ್ಳಿಯಲ್ಲಿ, ಅಗೋಸ್ಟ್ ೩೦, ೧೮೭೧ರಂದು. ತಂದೆ ಜೇಮ್ಸ್ ರುದರ್ಫರ್ಡ್ ; ತಾಯಿ ಮಾರ್ಥಾ ಥಾಮ್ಸನ್. ಏಳು ಗಂಡು ಮತ್ತು ಐದು ಹೆಣ್ಣು ಮಕ್ಕಳ ದೊಡ್ಡ ಕುಟುಂಬ. ರುದರ್ಫರ್ಡ್  ನಾಲ್ಕನೇಯವರು. ಕೃಷಿಯೊಂದೇ ಕುಟುಂಬದ ನಿಭಾವಣೆಗೆ ದುಸ್ತರವಾಗುತ್ತಿತ್ತು. ಹಾಗಾಗಿ ಜೇಮ್ಸ್‌ರುದರ್ಫರ್ಡ್ ಕಟ್ಟಡ ಕಾಮಗಾರಿ, ಸಣ್ಣ ಪುಟ್ಟ ವ್ಯಾಪಾರ ವಹಿವಾಟನ್ನೂ ನಡೆಸುತ್ತಿದ್ದ.   ಶಾಲಾ ಉಪಧ್ಯಾಯಿನಿಯಾಗಿದ್ದ ಮಾರ್ಥಾ ಗಟ್ಟಿ ಹೆಂಗಸು. &#8220;ನಮ್ಮೆಲ್ಲ ಸಂಕಷ್ಟಗಳ ನಿವಾರಣೆಗೆ ಕಷ್ಟಪಟ್ಟು ದುಡಿಯುವೊದೊಂದೇ ದಾರಿ&#8221; ಅನ್ನುತ್ತಿದ್ದಳು. ತಾಯಿಗೋ  ರುದರ್ಫರ್ಡ್  ಬಗ್ಗೆ  ಎಲ್ಲಿಲ್ಲದ ಮಮತೆ, ಅಭಿಮಾನ. ರುದರ್ಫರ್ಡಿಗೆ  ತಾಯಿ ಅಂದರೆ ಅತಿಶಯ ಪ್ರೀತಿ. ೧೯೩೧ರಲ್ಲಿ ರುದರ್ಫರ್ಡ್ ಅವರಿಗೆ ಬಾರನ್ ಪದವಿ ಪ್ರದಾನವಾಗಿ, ಅವರ ಹೆಸರಿನೊಂದಿಗೆ ಲಾರ್ಡ್ ಸೇರಿಕೊಂಡು &#8220;ಲಾರ್ಡ್ ರುದರ್ಫರ್ಡ್&#8221; ಆದ ಸಂದರ್ಭ.  ತಾಯಿಗೆ ಟೆಲಿಗ್ರಾಮ್ ಕಳುಹಿಸಿದರು &#8221; ಇನ್ನು ಮುಂದೆ ನಾನು ಲಾರ್ಡ್ ರುದರ್ಫರ್ಡ್, ಇದು ನನಗಿಂತ ನಿನಗೇ ಸಂದ ಗೌರವ&#8221; !</p>
<p>೧೮೯೩ರಲ್ಲಿ ಗಣಿತ ಮತ್ತು ಭೌತ ವಿಜ್ಞಾನಗಳಲ್ಲಿ ಸುವರ್ಣ ಪದಕ ಪಡೆದ ರುದರ್ಫರ್ಡ್ ಉನ್ನತ ಅಧ್ಯಯನಕ್ಕೆ ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರತಿಷ್ಟಿತ ಕ್ಯಾವೆಂಡಿಶ್ ಸಂಶೋಧನಾಲಯದಲ್ಲಿ ಪ್ರವೇಶ ಇಚ್ಛಿಸಿ ಅರ್ಜಿ ಗುಜರಾಯಿಸಿದರು. ಅದೊಂದು ದಿನ. ತನ್ನ ತಂದೆಯೊಂದಿಗೆ ರುದರ್ಫರ್ಡ್ ಹೊಲದಲ್ಲಿ ಬಟಾಟೆ ಕೀಳುತ್ತಿದ್ದರಂತೆ.  ಆಗ ತಂತಿ ಬಂತು &#8211; ಕ್ಯಾವೆಂಡಿಶಿನ ಶಿಷ್ಯ ವೇತನಕ್ಕೆ ಆಯ್ಕೆಯಾದ ಸಿಹಿ ಸುದ್ದಿ  ಹೊತ್ತು. ಹುರ್ರೇ ಎನ್ನುತ್ತ ಹಾರೆ ಕೆಳಗಿಟ್ಟು ರುದರ್ಫರ್ಡ್ ಹೇಳಿದರಂತೆ  ಹೊಲದಲ್ಲಿ ನನ್ನ ಕೊನೆಯ ದಿನವಿದು. ಇನ್ನು ಮುಂದೆ ಬಟಾಟೆ ಕೀಳುವುದಕ್ಕೆ ನನಗೆಂದೂ ಅವಕಾಶ ಸಿಗದು ನಿಜ, ಅವರಿಗೆ ಗುರಿ ಸ್ಪಷ್ಟವಿತ್ತು. ಹಿಂದೆ ತಿರುಗಲಿಲ್ಲ.</p>
<p>ವಿಕಿರಣಪಟುತ್ವದೆಡೆಗೆ</p>
<p>೧೮೯೫ ಸಪ್ಟೆಂಬರ್ ತಿಂಗಳಿನಲ್ಲಿ ಕ್ಯಾವೆಂಡಿಶಿಗೆ ಆಗಮಿಸಿದ ರುದರ್ಫರ್ಡ್ ಅವರಿಗೆ  ಸಂಶೋಧನೆಗೆ ಅವಕಾಶ ದೊರೆತದ್ದು  ನಿರ್ದೇಶಕರಾದ ಶ್ರೇಷ್ಠ ಭೌತವಿದ ಜೆಜೆಥಾಂಸನ್ (೧೮೫೬-೧೯೪೦) ಅವರೊಂದಿಗೆ.<a href="http://apkrishna.files.wordpress.com/2011/07/thompson.jpg"><img class="alignright size-medium wp-image-566" title="ಜೆಜೆ ಥಾಮ್ಸನ್ ಪ್ರಯೋಗ ನಿರತ " src="http://apkrishna.files.wordpress.com/2011/07/thompson.jpg?w=300&#038;h=223" alt="" width="300" height="223" /></a></p>
<p>ಯುರೇನಿಯಮ್ ರಾಸಾಯನಿಕದಿಂದ ವಿಕಿರಣ ಉತ್ಸರ್ಜನೆಯ ವಿಕಿರಣಪಟುತ್ವ (Radioactivity ) ಎಂಬ ವಿದ್ಯಮಾನ ಆವಿಷ್ಕರಿಸಿಲ್ಪಟ್ಟ ರೋಚಕ ದಿನಗಳು. ಕ್ಯೂರಿ ದಂಪತಿಗಳು ಈ ನೂತನ ವಿದ್ಯಮಾನದ ಬೆನ್ನು ಹಿಡಿದಿದ್ದರು  &#8211; ಹೊಸ ಹೊಸ ವಿಕಿರಣ ಪಟು ಧಾತುಗಳನ್ನು ಅನ್ವೇಷಿಸುತ್ತ.  ತರುಣ ರುದರ್ಫರ್ಡ್ ತಾನೂ ವಿಕಿರಣಪಟುತ್ವದ ಸಂಶೋಧನೆಗೆ ಧುಮುಕಿದರು.</p>
<p>ಈ ನಡುವೆ, ಕೆನೆಡಾದ ಮಾಂಟ್ರಿಯಲ್‌ನ ಮೆಗ್ಗಿಲ್ ವಿಶ್ವವಿದ್ಯಾಲಯದಲ್ಲಿ ಭೌತ ವಿಜ್ಞಾನ ಪಾಧ್ಯಾಪಕ ಹುದ್ದೆಗೆ ರುದರ್ಫರ್ಡ್ ಆಯ್ಕೆಯಾದರು (೧೮೯೮). ಅಲ್ಲಿ ಅವರು ನಡೆಸಿದ ಸಂಶೋಧನೆಗಳು ವಿಕಿರಣಪಟುತ್ವದ ಬಗ್ಗೆ ಹೊಸ ವ್ಯಾಖ್ಯೆ ಬರೆದುವು. ವಿಕಿರಣಪಟುತ್ವ ಕ್ರಿಯೆಯಲ್ಲಿ ಪರಮಾಣುಗಳ ಅಂತರಾಳದಿಂದ ಮೂರು ಬಗೆಯ ವಿಕಿರಣಗಳು &#8211; ಆಲ್ಫಾ, ಬೀಟಾ ಮತ್ತು ಗ್ಯಾಮಾ &#8211; ಉತ್ಸರ್ಜನೆಯಾಗುತ್ತವೆಂದು ರುದರ್ಫರ್ಡ್ ಸಾದರಪಡಿಸಿದರು.  ಇಲ್ಲಿ ಬೀಟಾ ಕಣಗಳೆಂದರೆ  ಋಣ ವಿದ್ಯುದಂಶವಿರುವ ಎಲೆಕ್ಟ್ರಾನುಗಳು.  ಆಲ್ಫಾ ಕಣಗಳು  ಬೀಟಾ ಕಣಗಳಿಂತ ಸುಮಾರು ೮೦೦೦ ಪಟ್ಟು ಅಧಿಕ ದ್ರವ್ಯರಾಶಿಯ, ಧನವಿದ್ಯುದಂಶ ಹೊಂದಿರುವ ಧಡೂತಿಗಳು.  ಗ್ಯಾಮಾ ವಿಕಿರಣವೆಂದರೆ ವಿದ್ಯುತ್ಕಾಂತೀಯ ಅಲೆಗಳು. ಇವೆಲ್ಲವೂ ಸ್ಪಷ್ಟವಾದದ್ದು ರುದರ್ಫರ್ಡ್ ನಡೆಸಿದ ಸರಣೀ ಪ್ರಯೋಗಗಳಿಂದ. ವಿಕಿರಣಪಟುತ್ವ ಪ್ರಕ್ರಿಯೆಯಲ್ಲಿ  ಅಧಿಕ ದ್ರವ್ಯರಾಶಿಯ ಪರಮಾಣುಗಳು ಇನ್ನಷ್ಟು ಕಡಿಮೆ ದ್ರವ್ಯರಾಶಿಯ ಹೊಸ ಪರಮಾಣುಗಳಾಗಿ  ಪರಿವರ್ತನೆಯಾಗುತ್ತವೆ. ವಿಕಿರಣಪಟುತ್ವದ ಪ್ರಮಾಣವನ್ನು ಅಳೆಯುವ ಮೂಲಭೂತ ಗಣಿತೋಕ್ತಿಯೊಂದನ್ನು ರುದರ್ಫರ್ಡ್ ನಿಗಮಿಸಿದರು.</p>
<p>ಅಚ್ಚರಿಯ ಫಲಿತಾಂಶ</p>
<p>೧೯೦೭ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ರುದರ್ಫರ್ಡ್ ಅವರಿಗೆ ಕರೆ ಬಂತು. ಮತ್ತೆ ಮರಳಿದ ಅವರಿಗೆ ಮ್ಯಾಂಚೆಸ್ಟರ್ ಸಂಶೋಧನಾಲಯದಲ್ಲಿ ಏನೆಲ್ಲ ನಿರೀಕ್ಷಿಸಿದ್ದರೋ ಅವೆಲ್ಲವೂ ಲಭ್ಯವಿತ್ತು &#8211; ವಿಕಿರಣಪಟುತ್ವ ರಾಸಾಯನಿಕವೊಂದರ ಹೊರತಾಗಿ! ಈ ತೊಡಕು ಕೂಡ ಬಹು ಬೇಗನೆ ನಿವಾರಣೆಯಾಯಿತು. ವಿಯೆನ್ನಾದಲ್ಲಿದ್ದ ಅವರ ಗೆಳೆಯರು ಆಸ್ತ್ರೀಯಾ ಸರಕಾರವನ್ನು ಸಂಪರ್ಕಿಸಿದರು. ಮಾತುಕತೆಯ ಬಳಿಕ ಒಂದಿಷ್ಟು ರೇಡಿಯಮ್ ಬಂದಿಳಿಯಿತು ಮ್ಯಾಂಚೆಸ್ಟರಿಗೆ.</p>
<p>ಇದೀಗ ಅವರ ಸಂಶೋಧನೆಗೆ ಹೊಸ  ಹುರುಪು ಬಂತು. ಚಿನ್ನದ ತೆಳ್ಳಗಿನ ಹಾಳೆಯಲ್ಲಿ ಆಲ್ಫಾ ಕಣಗಳು ಯಾವ ಬಗೆಯಲ್ಲಿ ಚದರಿಸಲ್ಪಡುತ್ತದೆನ್ನುವ ಅಧ್ಯಯನಕ್ಕೆ ರುದರ್ಫರ್ಡ್ ತೊಡಗಿದರು  ತಮ್ಮ ಸಹವರ್ತಿಗಳಾದ ಜರ್ಮನಿಯ ಹ್ಯಾನ್ಸ್‌ಗೀಗರ್ (೧೮೮೨-೧೯೪೫) ಮತ್ತು ನ್ಯೂಝಿಲ್ಯಾಂಡಿನ ಅರ್ನೆಸ್ಟ್‌ಮಾರ್ಸ್ಡೆನ್ (೧೮೮೯-೧೯೭೦) ಅವರೊಂದಿಗೆ.  ಪ್ರಯೋಗಕ್ಕೆ ಅಗತ್ಯವಾದ ವಿಕಿರಣ ದರ್ಶಕವನ್ನು ಸ್ವಯಂ ಗೀಗರ್ ರೂಪಿಸುವುದರೊಂದಿಗೆ ಪ್ರಯೋಗ ಆರಂಭವಾಯಿತು.  ಅಗೋಚರ ಆಲ್ಫಾ ಕಣಗಳು ಲೋಹದ ಹಾಳೆಯ ಮೇಲೆ ಪಾತವಾಗಿ, ಅಲ್ಲಿಂದ ಚದರಿಸಲ್ಪಟ್ಟು  ವಿಕಿರಣದರ್ಶಕದ ಪರದೆ ಮೇಲೆ ಬಿದ್ದಾಗ ಬೆಳಕಿನ ಕಿಡಿ ಹೊಮ್ಮುತ್ತಿತ್ತು. ಈ ಬೆಳಕಿನ ಕಿಡಿಯನ್ನು ಗುರುತಿಸುವ ಮೂಲಕ ನಿರ್ದಿಷ್ಟ ಕೋನದಲ್ಲಿ ಎಷ್ಟು ಸಂಖ್ಯೆಯಲ್ಲಿ ಆಲ್ಫಾ ಕಣಗಳು ಚದರಿಸಲ್ಪಡುತ್ತಿವೆ ಎಂಬುದನ್ನು ಅಳೆಯಬಹುದಿತ್ತು. <a href="http://apkrishna.files.wordpress.com/2011/07/geigerrutherford.jpg"><img class="alignright size-medium wp-image-562" title="ರುದರ್ಫರ್ಡ್ ಮತ್ತು ಹ್ಯಾನ್ಸ್ ಗೀಗರ್ " src="http://apkrishna.files.wordpress.com/2011/07/geigerrutherford.jpg?w=300&#038;h=215" alt="" width="300" height="215" /></a></p>
<p>ನಿರೀಕ್ಷೆಯಂತೆ ಹೆಚ್ಚಿನ  ಎಲ್ಲ ಆಲ್ಫಾ  ಕಣಗಳು ಅತ್ಯಂತ ಕಡಿಮೆ ಕೋನಗಳಲ್ಲಿ (ನಾಲ್ಕೈದು ಡಿಗ್ರಿಗಳೊಳಗೆ) ಚದರಿದುವು. ಇದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆದರೆ ಕೆಲವು ಮಾತ್ರ  ತೊಂಬತ್ತು ಡಿಗ್ರಿಗಳಿಗಿ೦ತಲೂ ಹೆಚ್ಚಿನ ಕೋನಗಳಲ್ಲಿ ಚದರಿಯಾಕೆಯಾದುವು. ಇದು ಮಾತ್ರ ಅಚ್ಚರಿ.  ಲೋಹದ ಹಾಳೆ ಮೇಲೆ ಪಾತವಾಗುತ್ತಿದ್ದ ಸುಮಾರು ೮೦೦೦ ಆಲ್ಫಾ ಕಣಗಳಲ್ಲಿ ಐದಾರು ಕಣಗಳು ನೂರಎಂಬತ್ತು ಡಿಗ್ರಿಗಳಷ್ಟು  ಅಧಿಕ ಕೋನದಲ್ಲಿ ಚದರಿಸಲ್ಪಟ್ಟುವು &#8211; ಲೋಹದ ಹಾಳೆಯಿ೦ದ  ಪ್ರತಿಫಲಿಸಲ್ಪಟ್ಟಂತೆ &#8212; ಗೋಡೆಗೆಸೆದ ಚೆಂಡು ಪುನ: ಮರಳಿ ಬಂದಂತೆ.</p>
<p><a href="http://apkrishna.files.wordpress.com/2011/07/ruther.gif"><img class="alignright size-medium wp-image-563" title="ಆಲ್ಫಾ ಚದರಿಕೆ ಪ್ರಯೋಗ  " src="http://apkrishna.files.wordpress.com/2011/07/ruther.gif?w=300&#038;h=125" alt="" width="300" height="125" /></a></p>
<p>ಅಲ್ಲ, ಇದು ಹೇಗೆ ಸಾಧ್ಯ ? ರುದರ್ಫರ್ಡ ಹೇಳುವಂತೆ  &#8221; ನಾನು ಬೆರಗಾದೆ. ಇದು ಅನಿರೀಕ್ಷಿತ ಫಲಿತಾಂಶ. ನನ್ನ  ಜೀವನದಲ್ಲಿ ಎಂದಿಗೂ ಮರೆಯಲಾಗದ ಅಸಾಮಾನ್ಯ ಘಟನೆ. ಹದಿನೈದು ಇಂಚುಗಳ ಗುಂಡನ್ನು ಕಾಗದದ ಹಾಳೆಗೆ ಗುರಿ ಹೊಡೆದರೆ ಅದು ಮರಳಿ ಪುನ: ಈಡುಗಾರನಾದ ನಿಮಗೇ ಪುನ: ತಾಗಿದರೆ ಹೇಗೋ ಹಾಗೆ&#8221;.</p>
<p>ಪರಮಾಣು ಪ್ರತಿರೂಪ</p>
<p>ಎಲೆಕ್ಟ್ರಾನಿಗಿ೦ತ  ಸುಮಾರು ೭೩೫೦  ಪಟ್ಟು ಅಧಿಕ ತೂಕವಿರುವ ಆಲ್ಫಾ ಕಣವು ಚಿನ್ನದ ಹಾಳೆಯ ಎಲೆಕ್ಟ್ರಾನಿಗೆ ಡಿಕ್ಕಿಯಾದರೆ &#8211; ಆಲ್ಫಾ ಕಣದ ಮೂಲ ದಿಶೆಯಲ್ಲಿ ಬದಲಾವಣೆ ನಗಣ್ಯ; ಅದೇನೇ ಇದ್ದರೂ ಎಲೆಕ್ಟ್ರಾನಿನ ದಿಶೆಯಲ್ಲಿ ಮಾತ್ರ ಗೋಚರಿಸಬೇಕು. ಧಡೂತಿ ಆಲ್ಫಾ ಕಣಗಳು ಹೆಚ್ಚಿನ ಕೋನದಲ್ಲಿ ಚದುರಿಸಲ್ಪಡುತ್ತಿವೆ ಎಂದಾದರೆ, ಲೋಹದ  ಹಾಳೆಯ ಪರಮಾಣುವಿನ ಕೇಂದ್ರದಲ್ಲಿ ಧನ ವಿದ್ಯುದಂಶವಿರುವ  ಮತ್ತು ಆಲ್ಫಾ ಕಣಕ್ಕೆ ಸಮನಾದ ದ್ರವ್ಯರಾಶಿಯ  ಏನೋ ಒಂದು ಇರಬೇಕೆಂದು ರುದರ್ಫರ್ಡ್ ಊಹಿಸಿದರು. ಈ ಪರಮಾಣು ಕೇಂದ್ರವನ್ನು  ನ್ಯೂಕ್ಲಿಯಸ್ ಎಂದು ಕರೆದರು. ಪರಮಾಣುವಿನ ಬೀಜಕೇಂದ್ರ ಅಥವಾ ನ್ಯೂಕ್ಲಿಯಸ್ ಎನ್ನುವ ರೋಚಕ ಕಲ್ಪನೆ ಮೊಳೆದದ್ದು ಹೀಗೆ.<a href="http://apkrishna.files.wordpress.com/2011/07/images.jpg"><img class="alignright size-full wp-image-564" title="images" src="http://apkrishna.files.wordpress.com/2011/07/images.jpg?w=600" alt=""   /></a></p>
<p>ಇಂದು ಶಾಲೆಗೆ ಹೋಗುವ ಚಿಕ್ಕ ಮಗುವೂ ಪರಮಾಣುವಿನ ಕೇಂದ್ರದಲ್ಲಿ ನ್ಯೂಕ್ಲಿಯಸ್ ಇದೆ  ಎಂದು ತಿಳಿದಿದೆ.  ಆದರೆ ಅಂದು ಹಾಗಲ್ಲ. ಅಗೋಚರ ಪರಮಾಣುವಿನ ಬಗೆಗೇ ಅಸ್ಪಷ್ಟ ಕಲ್ಪನೆ ಮತ್ತು ವಿವರಗಳು.  ಅಂದ ಮೇಲೆ ಅದಕ್ಕೊಂದು ಕೇಂದ್ರಭಾಗವಿದೆ ಎಂಬ ಕಲ್ಪನೆ &#8211; ದ್ರಷ್ಟಾರನಿಗಷ್ಟೇ ತಿಳಿದೀತು. ಸ್ವಯಂ  ರುದರ್ಫರ್ಡ್ ಹೇಳಿದ್ದಾರೆ &#8220;ಆ ದಿನಗಳು ನನ್ನ ಜೀವನದ ಗಾಢ ತಪಸ್ಸಿನ ದಿನಗಳು&#8221;</p>
<p>ಅಗೋಚರ ಪರಮಾಣು ಹೇಗಿರಬಹುದು ಎನ್ನುವುದಕ್ಕೆ ನಾವೊಂದು ಸೈದ್ಧಾಂತಿಕ ಕಲ್ಪನೆಯನ್ನು ಮಾಡಬೇಕಾಗುತ್ತದೆ. ಇದಕ್ಕೆ ಪರಮಾಣು ಪ್ರತಿರೂಪ (Atomic Model) ಎಂದು ಹೆಸರು &#8211; ಕಾಣದ ದೇವರು ಹೀಗಿರಬಹುದೆನ್ನುವ ಹಾಗೆ. ಅದಾಗಲೇ ಜೆಜೆಥಾಂಸನ್ ಪರಮಾಣು ಪ್ರತಿರೂಪವೊಂದನ್ನು ಮಂಡಿಸಿದ್ದರು (೧೯೦೪). ಪ್ರಾಯಶ: ಪರಮಾಣುವೆಂದರೆ ಕುಂಬಳಕಾಯಿಯ ಅಥವಾ ಬಚ್ಚಂಗಾಯಿಯ ಹಾಗೆ ಇರಬಹುದು, ಅದರಲ್ಲಿ ಧನ ವಿದ್ಯುದಂಶ  ಹೊಂದಿರುವ ದ್ರವ್ಯ ಇರಬಹುದು, ಆ ದ್ರವ್ಯದಲ್ಲಿ ಋಣ ವಿದ್ಯುದಾವಿಷ್ಟ ಎಲೆಕ್ಟ್ರಾನುಗಳು ಅಳ್ಳಕವಾಗಿರಬಹುದು .. ಹೀಗೆ ಸಾಗುತ್ತದೆ ಥಾಂಸನ್ ಮಂಡಿತ ಪರಮಾಣುವಿನ ವಿವರಣೆ. ಆದರೆ ರುದರ್ಫರ್ಡ್ ಅವರ ಪ್ರಯೋಗ ಫಲಿತಾಂಶಗಳನ್ನು ವಿವರಿಸುವಲ್ಲಿ ಜೆಜೆಯವರ ಪರಮಾಣು ಪ್ರತಿರೂಪ ಸಂಪೂರ್ಣ ವಿಫಲವಾಗಿತ್ತು.</p>
<p>ಇದೀಗ ರುದರ್ಫರ್ಡ ತುಳಿದರು ಹೊಸ ಹಾದಿಯನ್ನು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಫಿಲಸಾಫಿಕಲ್ ಸೊಸೈಟಿಯ ತಮ್ಮ ಉಪನ್ಯಾಸದಲ್ಲಿ  (೧೯೧೧, ಮಾರ್ಚ್ ೭), ರುದರ್ಫರ್ಡ್ ತಮ್ಮ ಹೊಸ ಪರಮಾಣು  ಸಿದ್ಧಾಂತವನ್ನು  ಮಂಡಿಸಿದರು.  ರುದರ್ಫರ್ಡ ಹೇಳುವಂತೆ ಪರಮಾಣುವಿಗೊಂದು ಧನವಿದ್ಯುದಂಶ ಕೇಂದ್ರವಿದೆ. ಇದರ ಸುತ್ತ ವಿವಿಧ ಕಕ್ಷೆಗಳಲ್ಲಿ ಋಣಾವಿಷ್ಟ ಎಲೆಕ್ಟ್ರಾನುಗಳು ಪರಿಭ್ರಮಿಸುತ್ತಿವೆ &#8211; ಸೂರ್ಯನ ಸುತ್ತ ಸುತ್ತುತ್ತಿರುವ ಗ್ರಹಗಳ೦ತೆ. ಹೇಗೆ ಸೂರ್ಯ ಮತ್ತು ಗ್ರಹ ಪರಿವಾರಗಳ ನಡುವೆ ಗುರುತ್ವ ಬಲವಿರುತ್ತದೋ, ಅದೇ ಬಗೆಯಲ್ಲಿ ನ್ಯೂಕ್ಲಿಯಸ್ ಮತ್ತು ಎಲೆಕ್ಟ್ರಾನುಗಳ ನಡುವೆ ವಿದ್ಯುತ್ಕಾಂತೀಯ ಬಲವಿರುತ್ತದೆ ಮತ್ತು ಆ ಬಲ ಒಟ್ಟು  ಪರಮಾಣುವಿನ ಸೃಷ್ಟಿಗೆ ಕಾರಣವಾಗುತ್ತದೆ. ಲೋಹದ ಹಾಳೆಯಲ್ಲಿರುವ ಪರಮಾಣುಗಳ ಕೇಂದ್ರ ಭಾಗವನ್ನು ಸಮೀಪಿಸಿದಂತೆ ಆಲ್ಫಾಕಣಗಳ ಮೇಲೆ ವಿಕರ್ಷಣ ಬಲ ಹೆಚ್ಚುತ್ತ ಅವು ಚದರಿಸಲ್ಪಡುತ್ತವೆ ಹೆಚ್ಚು ಸನಿಹಕ್ಕೆ ಬಂದಷ್ಟೂ ಚದರಿಕೆಯ ಪ್ರಮಾಣ ಹೆಚ್ಚುತ್ತದೆಂದು  ರುದರ್ಫರ್ಡ್ ವಿವರಿಸಿದ ಬಗೆ ಅಧ್ಬುತ. ರಾಯಲ್ ಸೊಸೈಟಿಯ ಫಿಲಸಾಫಿಕಲ್ ಮ್ಯಾಗಝೀನಿನ ೧೯೧೧ ಮೇ ತಿಂಗಳಿನ ಸಂಚಿಕೆಯಲ್ಲಿ &#8220;ಪರಮಾಣುವಿನ ರಚನೆ&#8221; ಎಂಬ ಶೀರ್ಷಿಕೆಯಲ್ಲಿ ನ್ಯೂಕ್ಲಿಯಸ್ಸಿನ ಕುರಿತಾದ ಸುದೀರ್ಘ ಲೇಖನ ಪ್ರಕಟವಾಗುವದರೊಂದಿಗೆ ನ್ಯೂಕ್ಲಿಯರ್ ಭೌತವಿಜ್ಞಾನದ ಉದಯವಾಯಿತು.</p>
<p>ರುದರ್ಫರ್ಡ್ ಮಂಡಿತ ಪರಮಾಣುಪ್ರತಿರೂಪವೂ ಪರಿಪೂರ್ಣವಲ್ಲ. ಅದರಲ್ಲಿಯೂ ಹಲವು ಲೋಪಗಳಿದ್ದುವು. ಹಾಗೆ ನೋಡಿದರೆ ವಿಜ್ಞಾನದಲ್ಲಿ ಪರಿಪೂರ್ಣತೆ ಎನ್ನುವುದೇ ಇಲ್ಲ!. ಮತ್ತೆರಡು ವರ್ಷಗಳ ಬಳಿಕ &#8211; ಅಂದರೆ ೧೯೧೩ರಲ್ಲಿ &#8211; ರುದರ್ಫರ್ಡ್ ಅವರ ಶಿಷ್ಯೋತ್ತಮ ನೀಲ್ಸ್ ಬೋರ್ (೧೮೮೫-೧೯೬೨) ಬಂದರು; ಪರಿಷ್ಕತ ಪ್ರತಿರೂಪವನ್ನು ಮಂಡಿಸಿದರು.</p>
<p>ನ್ಯೂಕ್ಲಿಯಸ್ಸಿನ  ಆವಿಷ್ಕಾರವಾಗಿ ಸಂದು ಹೋಗಿರುವ ನೂರು ವರ್ಷಗಳಲ್ಲಿ ನ್ಯೂಕ್ಲಿಯರ್ ಭೌತವಿಜ್ಞಾನದ ಪ್ರವರ್ಧನೆ ಅಭೂತಪೂರ್ವ.  ಧನವಿದ್ಯುದಂಶವಿರುವ ಮತ್ತು ವಿದ್ಯುದಂಶವಿಲ್ಲದ ಕಣಗಳಿಂದ ನ್ಯೂಕ್ಲಿಯಸ್ ಸೃಷ್ಟಿಯಾಗುತ್ತದೆಂದು ರುದರ್ಫರ್ಡ್  ಊಹೆಯಾಗಿತ್ತು(೧೯೨೧).  ಅವರ ಊಹೆ ದಶಕದೊಳಗೆ ನಿಜವಾಯಿತು &#8211; ಪ್ರೋಟಾನ್ ಮತ್ತು ನ್ಯೂಟ್ರಾನುಗಳ ಆವಿಷ್ಕಾರದೊಂದಿಗೆ. ಪರಮಾಣುವಿನ ಹೃದಯಕ್ಕೆ ಶಕ್ತಿಶಾಲೀ ಕಣಗಳಿಂದ ಗುರಿ ಹೊಡೆದು ಹೊಸ ಬಗೆಯ ನ್ಯೂಕ್ಲಿಯಸ್ಸುಗಳನ್ನು ಸೃಷ್ಟಿಸುವ ನ್ಯೂಕ್ಲಿಯರ್ ಕ್ರಿಯೆಯಲ್ಲಿ ರುದರ್ಫರ್ಡ್ ಯಶಸ್ಸು ಕಂಡರು. ಇದಕ್ಕಾಗಿಯೇ  ರುದರ್ಫರ್ಡ್ ನೇತೃತ್ವದಲ್ಲಿ ಕಣವೇಗವರ್ಧಕಗಳು  (Partcile Accelerators)  ನಿರ್ಮಾಣಗೊಂಡುವು.  ಅಂದಿನವು ವಾಮನರೂಪೀ ಕಣವೇಗವರ್ಧಕಗಳಾದರೆ, ಅವುಗಳ ದೈತ್ಯ ಸ್ವರೂಪವನ್ನು  ನಾವು  ಇಂದಿನ ಲಾರ್ಜ್ ಹಡ್ರಾನ್ ಕೊಲೈಡರುಗಳಂಥ ಬೃಹದ್‌ಯಂತ್ರಗಳಲ್ಲಿ ಕಾಣುತ್ತೇವೆ.    ಇವುಗಳ ಮೂಲಕ ಪ್ರೋಟಾನ್, ನ್ಯೂಟ್ರಾನುಗಳಂಥ ಕಣಗಳ ಇನ್ನಷ್ಟು ಪ್ರಾಥಮಿಕ ರಚನೆಗಳಾಗಿರುವ ಕ್ವಾರ್ಕ್‌ಗಳ ರಚನೆಯನ್ನು  ಅಧ್ಯಯನಿಸಿತ್ತಿದ್ದಾರೆ;  ವಿಶ್ವ ಸೃಷ್ಟಿಯ ಒಗಟಿಗೆ ಉತ್ತರದ ಹುಡುಕಾಟ ಸಾಗಿದೆ.<a href="http://apkrishna.files.wordpress.com/2011/07/the-future-of-particle-accelerators-2.jpg"><img class="alignright size-medium wp-image-565" title="The-Future-of-Particle-Accelerators-2" src="http://apkrishna.files.wordpress.com/2011/07/the-future-of-particle-accelerators-2.jpg?w=300&#038;h=195" alt="" width="300" height="195" /></a></p>
<p>ನಕ್ಷತ್ರಗಳ ಅಗಾಧ ಶಕ್ತಿಯ ವಿಸ್ಮಯ ಬಯಲಾದದ್ದು ಈ ಅವಧಿಯಲ್ಲಿಯೇ (೧೯೨೫). ತೂಕದ ಯುರೇನಿಯಮ್ ನ್ಯೂಕ್ಲಿಯಸ್ಸಗಳನ್ನು ವಿಭಜಿಸುವ ಬೈಜಿಕ ವಿದಳನದಿಂದ  ಶಕ್ತಿಯನ್ನು ಬಸಿಯುವ ಹೊಸ ತಂತ್ರಜ್ಞಾನ ಬೆಳಕಿಗೆ ಬಂತು (೧೯೩೯). ಇದು ವಿನಾಶಕಾರೀ ನ್ಯೂಕ್ಲಿಯರ್  ಬಾಂಬುಗಳ  ಸೃಷ್ಟಿಗೆ,   ವಿದ್ಯುದುತ್ಪಾದನೆಯ ರಿಯಾಕ್ಟರುಗಳಿಗೆ, ವೈದ್ಯಕೀಯ ರಂಗದ ಅವಿಭಾಜ್ಯ ಅಂಗವಾದ ವಿಕಿರಣ ಚಿಕಿತ್ಸೆಗೆ  ಕಾರಣವಾಯಿತು.</p>
<p>ಸೂಕ್ಷ್ಮಾತಿಸೂಕ್ಷ್ಮ ಪ್ರೋಟಾನ್, ನ್ಯೂಟ್ರಾನುಗಳನ್ನು ಹಿಡಿದಿಟ್ಟು ನ್ಯೂಕ್ಲಿಯಸ್ಸುಗಳ ಸೃಷ್ಟಿಗೆ ಕಾರಣವಾಗುವ ಬಲ ಯಾವುದು? ಆ ಬಲದ ಗುಣಲಕ್ಷಣಗಳೇನು? ಕಣಗಳಿಗೂ ಸಂಕೀರ್ಣ ರಚನೆ ಇದೆಯೇ? ಕಣಗಳ ನಡುವಣ ಅಂತರ್ ಕ್ರಿಯೆಗಳು ಯಾವುವು? ವಿಶ್ವ ಸೃಷ್ಟಿಯಲ್ಲಿ ಪಾತ್ರ ವಹಿಸುವ ಈ ಕಣಗಳ ಸೃಷ್ಟಿಯಾದದ್ದು ಹೇಗೆ? &#8211; ಇಂಥ ನೂರಾರು ಪ್ರಶ್ನೆಗಳಿಗೆ ಕಳೆದ ನೂರು ವರ್ಷಗಳುದ್ದಕ್ಕೂ  ಉತ್ತರದ ಹುಡುಕಾಟ ನಡೆದಿದೆ.  ಇದರಲ್ಲಿದೆ ನ್ಯೂಕ್ಲಿಯರ್ ಭೌತ ವಿಜ್ಞಾನದ ಬೆಳವಣಿಗೆಯ ರೋಚಕ ಕಥೆ.</p>
<p>ಸಂಶೋಧನೆಯಲ್ಲಿ ಇನ್ನಿಲ್ಲದಂತೆ ಸಕ್ರಿಯರಾಗಿದ್ದ ನ್ಯೂಕ್ಲಿಯರ್ ಭೌತ ವಿಜ್ಞಾನದ ಜನಕ ರುದರ್ಫರ್ಡ್, ತಮ್ಮ ಅರುವತ್ತಾರರ  ಹರೆಯದಲ್ಲಿ ಹಟಾತ್ತನೆ ನಿಷ್ಕ್ರಮಿಸಿದರು (೧೯೩೭, ಅಕ್ಟೋಬರ್ ೧೯). ಅವರಿಗೆ ಆದದ್ದು ಹರ್ನಿಯಾ. ಆದರೆ ಅದು ಕರುಳಿನೊಂದಿಗೆ ಗಂಟು ಕಟ್ಟಿಕೊಂಡು ಸಮಸ್ಯೆಗೆ ಕಾರಣವಾಯಿತು.  ಈ ಚಿಕ್ಕ ಸಂಗತಿ ವಿಜ್ಞಾನರಂಗದ ದೊಡ್ಡ ವ್ಯಕ್ತಿಯನ್ನು ಬಲಿ ತೆಗೆದುಕೊಂಡದ್ದು ದುರಂತ.</p>
<p>ಭೌತವಿಜ್ಞಾನಿ ರುದರ್ಫರ್ಡ್  ನೊಬೆಲ್ ಪಡೆದದ್ದು ರಸಾಯನ ವಿಜ್ಞಾನದಲ್ಲಿ!. ಭೌತವಿಜ್ಞಾನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ರುದರ್ಫರ್ಡ್ ಹೇಳುತ್ತಿದ್ದುದುಂಟು ಎಲ್ಲವೂ ಭೌತ ವಿಜ್ಞಾನ; ಅದಿಲ್ಲದೇ ಹೋದದ್ದೆಲ್ಲವೂ ಬರಿದೇ ಅಂಚೆ ಚೀಟಿ ಸಂಗ್ರಹ!  ನೊಬೆಲ್ ಪ್ರಶಸ್ತಿ ಸ್ವೀಕರಿಸುತ್ತ ತಮ್ಮ ನೊಬೆಲ್ ಉಪನ್ಯಾಸದಲ್ಲಿ ರುದರ್ಫರ್ಡ್ ವಿನೋದದಿಂದ ಹೇಳಿದ್ದಾರೆ</p>
<blockquote><p> ವಿಕಿರಣಪಟುತ್ವ ವಿದ್ಯಮಾನದಲ್ಲಿ ಒಂದು ಧಾತು ಇನ್ನೊಂದು ಧಾತು ಆಗುವ ಪರಿವರ್ತನೆಯ ಪ್ರಕ್ರಿಯೆ ಅತ್ಯಂತ ಕಷ್ಟದಲ್ಲಿ ಸಂಭವಿಸುತ್ತದೆ. ಆದರೆ ಭೌತ ವಿಜ್ಞಾನಿಯೊಬ್ಬ ರಸಾಯನ ವಿಜ್ಞಾನಿಯಾಗುವುದು ಬಹು ಸುಲಭ. ಭೌತ ವಿಜ್ಞಾನಿಯಾದ ನಾನು ದಿನ ಬೆಳಗಾಗುವುದರೊಳಗಾಗಿ ರಸಾಯನ ವಿಜ್ಞಾನಿಯಾಗಿದ್ದೇನೆ!</p></blockquote>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/559/"><img alt="" border="0" src="http://feeds.wordpress.com/1.0/comments/apkrishna.wordpress.com/559/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/559/"><img alt="" border="0" src="http://feeds.wordpress.com/1.0/delicious/apkrishna.wordpress.com/559/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/559/"><img alt="" border="0" src="http://feeds.wordpress.com/1.0/facebook/apkrishna.wordpress.com/559/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/559/"><img alt="" border="0" src="http://feeds.wordpress.com/1.0/twitter/apkrishna.wordpress.com/559/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/559/"><img alt="" border="0" src="http://feeds.wordpress.com/1.0/stumble/apkrishna.wordpress.com/559/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/559/"><img alt="" border="0" src="http://feeds.wordpress.com/1.0/digg/apkrishna.wordpress.com/559/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/559/"><img alt="" border="0" src="http://feeds.wordpress.com/1.0/reddit/apkrishna.wordpress.com/559/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=559&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/07/05/%e0%b2%b0%e0%b3%81%e0%b2%b0%e0%b3%8d%e0%b2%a6%e0%b2%b0%e0%b3%8d%e0%b2%ab%e0%b2%b0%e0%b3%8d%e0%b2%a1%e0%b3%8d-%e0%b2%95%e0%b2%82%e0%b2%a1-%e0%b2%aa%e0%b2%b0%e0%b2%ae%e0%b2%be%e0%b2%a3%e0%b3%81/feed/</wfw:commentRss>
		<slash:comments>7</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2011/07/rutherford.jpg" medium="image">
			<media:title type="html">ರುದರ್ಫರ್ಡ್ ನ್ಯೂಕ್ಲಿಯರ್   ವಿಜ್ಞಾನದ ಜನಕ  </media:title>
		</media:content>

		<media:content url="http://apkrishna.files.wordpress.com/2011/07/180px-rutherford_crocodile.jpg" medium="image">
			<media:title type="html">180px-Rutherford_crocodile</media:title>
		</media:content>

		<media:content url="http://apkrishna.files.wordpress.com/2011/07/thompson.jpg?w=300" medium="image">
			<media:title type="html">ಜೆಜೆ ಥಾಮ್ಸನ್ ಪ್ರಯೋಗ ನಿರತ </media:title>
		</media:content>

		<media:content url="http://apkrishna.files.wordpress.com/2011/07/geigerrutherford.jpg?w=300" medium="image">
			<media:title type="html">ರುದರ್ಫರ್ಡ್ ಮತ್ತು ಹ್ಯಾನ್ಸ್ ಗೀಗರ್ </media:title>
		</media:content>

		<media:content url="http://apkrishna.files.wordpress.com/2011/07/ruther.gif?w=300" medium="image">
			<media:title type="html">ಆಲ್ಫಾ ಚದರಿಕೆ ಪ್ರಯೋಗ  </media:title>
		</media:content>

		<media:content url="http://apkrishna.files.wordpress.com/2011/07/images.jpg" medium="image">
			<media:title type="html">images</media:title>
		</media:content>

		<media:content url="http://apkrishna.files.wordpress.com/2011/07/the-future-of-particle-accelerators-2.jpg?w=300" medium="image">
			<media:title type="html">The-Future-of-Particle-Accelerators-2</media:title>
		</media:content>
	</item>
		<item>
		<title>ಗೋ ಸಾಕಣೆಯ ತಲ್ಲಣಗಳು</title>
		<link>http://apkrishna.wordpress.com/2011/04/18/%e0%b2%97%e0%b3%8b-%e0%b2%b8%e0%b2%be%e0%b2%95%e0%b2%a3%e0%b3%86%e0%b2%af-%e0%b2%a4%e0%b2%b2%e0%b3%8d%e0%b2%b2%e0%b2%a3%e0%b2%97%e0%b2%b3%e0%b3%81/</link>
		<comments>http://apkrishna.wordpress.com/2011/04/18/%e0%b2%97%e0%b3%8b-%e0%b2%b8%e0%b2%be%e0%b2%95%e0%b2%a3%e0%b3%86%e0%b2%af-%e0%b2%a4%e0%b2%b2%e0%b3%8d%e0%b2%b2%e0%b2%a3%e0%b2%97%e0%b2%b3%e0%b3%81/#comments</comments>
		<pubDate>Mon, 18 Apr 2011 15:01:04 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=533</guid>
		<description><![CDATA[ಚಿಕ್ಕವನಾಗಿದ್ದಾಗಿನಿಂದ ಇಂದಿನ ತನಕ &#8211; ಅಂದರೆ ಸುಮಾರು ನಾಲ್ಕು ದಶಕಗಳಿಂದ ಜಾನುವಾರು ಅಥವಾ ಗೋಸಾಕಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬೆಳೆದವನು. ಗೋ ಸಾಕಣೆಯಲ್ಲಿ ಆಸಕ್ತಿ  ಹುಟ್ಟಲು ಕಾರಣ ನನ್ನಮ್ಮ. ಬಾಲ್ಯವನ್ನು ಮುಂಬಯಿಯಂಥ ದೊಡ್ದ ಪೇಟೆಗಳಲ್ಲಿ ಕಳೆದ ಅವಳು ಮದುವೆಯಾಗಿ ಬಂದದ್ದು ಪುತ್ತೂರಿನ ಹಳ್ಳಿ ಮನೆಗೆ. ಪೇಟೆಯ ಬೆಡಗಿ ಹಳ್ಳಿಗೆ ಎಷ್ಟು ಹೊಂದಿಕೊಂಡಳೆಂದರೆ, ಬೆಳಗ್ಗೆ &#8211; ಸಂಜೆ ಹಾಲು ಕರೆಯುವುದರಿಂದ ಹಿಡಿದು ಹಸುಗಳನ್ನು ಪ್ರೀತಿಯಿಂದ ಸಾಕುವುದು ಸಾಹಿತ್ಯ ಬರವಣಿಗೆಯಷ್ಟೇ ಅವಳಿಗೆ ಪ್ರಿಯ ಹವ್ಯಾಸವಾಗಿ ಹೋಯಿತು. ಇಂಥ ಪ್ರೀತಿಯೇ ಪ್ರಾಯಶ: ನನ್ನಲ್ಲೂ  [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=533&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p>ಚಿಕ್ಕವನಾಗಿದ್ದಾಗಿನಿಂದ ಇಂದಿನ ತನಕ &#8211; ಅಂದರೆ ಸುಮಾರು ನಾಲ್ಕು ದಶಕಗಳಿಂದ ಜಾನುವಾರು ಅಥವಾ ಗೋಸಾಕಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬೆಳೆದವನು. ಗೋ ಸಾಕಣೆಯಲ್ಲಿ ಆಸಕ್ತಿ  ಹುಟ್ಟಲು ಕಾರಣ ನನ್ನಮ್ಮ. ಬಾಲ್ಯವನ್ನು ಮುಂಬಯಿಯಂಥ ದೊಡ್ದ ಪೇಟೆಗಳಲ್ಲಿ ಕಳೆದ ಅವಳು ಮದುವೆಯಾಗಿ ಬಂದದ್ದು ಪುತ್ತೂರಿನ ಹಳ್ಳಿ ಮನೆಗೆ. ಪೇಟೆಯ ಬೆಡಗಿ ಹಳ್ಳಿಗೆ ಎಷ್ಟು ಹೊಂದಿಕೊಂಡಳೆಂದರೆ, ಬೆಳಗ್ಗೆ &#8211; ಸಂಜೆ ಹಾಲು ಕರೆಯುವುದರಿಂದ ಹಿಡಿದು ಹಸುಗಳನ್ನು ಪ್ರೀತಿಯಿಂದ ಸಾಕುವುದು ಸಾಹಿತ್ಯ ಬರವಣಿಗೆಯಷ್ಟೇ ಅವಳಿಗೆ ಪ್ರಿಯ ಹವ್ಯಾಸವಾಗಿ ಹೋಯಿತು. ಇಂಥ ಪ್ರೀತಿಯೇ ಪ್ರಾಯಶ: ನನ್ನಲ್ಲೂ  ಗೋವುಗಳ ಬಗ್ಗೆ ಒಂದಿಷ್ಟು ಆಸಕ್ತಿ ಹುಟ್ಟಿಸಲು ಕಾರಣವಾಯಿತೇನೋ. <span id="more-533"></span></p>
<p>ನನ್ನ ಮತ್ತು ತರವಾಡು ಮನೆಯಲ್ಲಿ ಚಿಕ್ಕ ಪ್ರಮಾಣದ ಡೈರಿ ಇನ್ನೂ ಉಳಿದುಕೊಂಡಿದೆ. ನನ್ನ ದೊಡ್ದಪ್ಪ ನಾಲ್ಕು ದಶಕಗಳ ಹಿಂದೆಯೇ ದೊಡ್ದ ಪ್ರಮಾಣದಲ್ಲಿ ಹಟ್ಟಿಯನ್ನು ಕಟ್ಟಿ ವೃತ್ತಿಪರತೆ ತೋರಿ ನಮಗೆ ಆದರ್ಶರಾದವರು. ಅವರ ಬಾಚಟ್ಟಿಯ ಹಟ್ಟಿ ಸುಮಾರು ಐವತ್ತು ಮೀಟರ್ ಉದ್ದವಿದೆ. ಆದರೆ ನಮ್ಮ ಹೆಚ್ಚಿನವರ ಡೈರಿ ಹಾಲು ಮಾರಾಟಕ್ಕಿಂತ ಹೆಚ್ಚಿಗೆ ಕೃಷಿಗೆ ಬೇಕಾದ ಗೊಬ್ಬರಕ್ಕಾಗಿ ಮತ್ತು ಗೋಬರ್ ಅನಿಲಕ್ಕಾಗಿ.</p>
<p><a href="http://apkrishna.files.wordpress.com/2011/04/hatti.jpg"><img class="alignright size-large wp-image-539" title="ನಮ್ಮ ದನದ ಕೊಟ್ಟಿಗೆ " src="http://apkrishna.files.wordpress.com/2011/04/hatti.jpg?w=280&#038;h=210" alt="" width="280" height="210" /></a></p>
<p>೧೯೭೦ರ ಹೊತ್ತಿಗೇ ನಮ್ಮ ಮನೆಗೆ  ಗೋಬರ್ ಅನಿಲ ಸ್ಥಾವರ ಬಂತು. ಆ ಸ್ಥಾವರದ ರಚನೆ ತುಂಬ ವೈಶಿಷ್ಟ್ಯವಾದದ್ದು. ಸ್ಥಾವರದಲ್ಲಿ ಕಬ್ಬಿಣದ ಡ್ರಮ್ ಸೆಗಣಿಯಲ್ಲಿ ಮುಳುಗೇಳುವ ಬದಲಿಗೆ,  ಹೊರ ಬಳೆಯ ಎಣ್ಣೆಯಲ್ಲಿ ಮುಳುಗೇಳುತ್ತದೆ.  ಡ್ರಮ್ಮಿಗೆ ಸೆಗಣಿಯ ಸೋಕಿಲ್ಲದೇ  ಇರುವ ಕಾರಣದಿಂದ ತುಕ್ಕಿನ ಅಪಾಯವಿಲ್ಲ. ಮೂವತ್ತೈದು ವರ್ಷಗಳಲ್ಲಿ ಇದು ತನಕ ಒಂದೇ ಒಂದು ಬಾರಿಯೂ ಡ್ರಮ್ಮನ್ನು  ಎತ್ತಿಲ್ಲ. ಡ್ರಮ್ ತೂತಾಗಿಲ್ಲ. ಅನಿಲ ಸ್ಥಾವರ ಮನೆಗೆ ನಿರಂತರ ಅನಿಲ ಉತ್ಪಾದನೆ ಮಾಡುತ್ತಿದೆ. ಖಾದಿ ಗ್ರಾಮೋದ್ಯೋಗ ಮುಂದಿನ ದಿನಗಳಲ್ಲಿ ಈ ರಚನೆಯನ್ನು ಕೈ ಬಿಟ್ಟಿತೆಂದು ಕೇಳಿದ್ದೇನೆ &#8211; ಯಾಕೋ ತಿಳಿಯದು.<a href="http://apkrishna.files.wordpress.com/2011/04/gobar-plant.jpg"><img class="alignleft size-large wp-image-536" title="ಗೋಬರ್ ಅನಿಲ ಸ್ಥಾವರ " src="http://apkrishna.files.wordpress.com/2011/04/gobar-plant.jpg?w=463&#038;h=346" alt="" width="463" height="346" /></a></p>
<p>ಎಲ್ಲ ಕೃಷಿಕರ ಮನೆಯಲ್ಲಿ ಗೋ ಅನಿಲ ಸ್ಥಾವರವಿರಬೇಕು. ಅಷ್ಟರ ಮಟ್ಟಿಗೆ ನಾವು ಸ್ವಾವಲಂಬಿಗಳಾಗುತ್ತ ಇಂಧನ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಆದರೆ ಇದಕ್ಕೆ ಮನೆಗಳಲ್ಲಿ ಹಸುಗಳಿರಬೇಕಾಗುತ್ತದೆ.</p>
<p>ಹಿಂದೆ ನಮ್ಮ ಹಟ್ಟಿಯಲ್ಲಿ ಗಿಡ್ಡ ಕಾಲಿನ, ಚಿಕ್ಕ ಗಾತ್ರದ, ಕಿರು ಕೆಚ್ಚಲಿನ,  ರೋಗ ಬಾಧೆಗೆ ತುತ್ತಾಗದ ನಾಡ ತಳಿಗಳ ಹಸುಗಳು, ಮುರ, ಸೂರ್ತಿ ಎಮ್ಮೆಗಳಿದ್ದುವು. ಶಿಲೆ ಹಾಸಿನ ಬದಲಿಗೆ ಸೊಪ್ಪಿನ ಹಟ್ಟಿ. ಮನೆ ತುಂಬ ಝೋಂಯ್ಯುಗುಟ್ಟುತ್ತ ಮೂಗು ಕಿವಿಗಳೆನ್ನದೇ ಎಲ್ಲೆಡೆ ನುಗ್ಗುವ ನೊಣಗಳ ಕಾಟ. ಹಳ್ಳಿಯ ತಾಪತ್ರಯ.</p>
<p>ನಿಧಾನವಾಗಿ ನಾಡ ತಳಿಗಳ  ಜಾಗದಲ್ಲಿ ಹಾಲ್‌ಸ್ಟೀನ್, ಜೆರ್ಸಿ, ರಡ್‌ಡೇಯಿನ್ ಮೊದಲಾದ ಭಾರೀ ಗಾತ್ರದ ವಿದೇಶೀ ತಳಿಗಳು ಬಂದುವು. ಹಟ್ಟಿಯಲ್ಲಿ ಶಿಲೆ ಹಾಸು &#8211; ಬಾಚಟ್ಟಿ ವ್ಯವಸ್ಥೆ ಬಂತು. ಗುಡ್ಡ ಬೆಟ್ಟಗಳಲ್ಲಿ, ಹುಲ್ಲುಗಾವಲುಗಳಲ್ಲಿ ಸುತ್ತಾಡಿ ಗೋಧೂಳಿಗೆ ಹಟ್ಟಿ ಸೇರುವ ದಿನಗಳು ಹಿನ್ನೆಲೆಗೆ ಸರಿದು, ಹಗ್ಗ ಸರಪಳಿಗಳಲ್ಲಿಯೇ ಹಸುಗಳು ಬಂದಿಯಾದುವು. ಅವುಗಳೊಂದಿಗೆ ನಾವೂ ಕೂಡ.</p>
<p>ಡೈರಿ ಅನ್ನುವುದು ಇದ್ದರೆ ಮನೆ ಮಂದಿಗೆ ಬೇರೆ ಬಂದೀಖಾನೆ ಬೇಕಿಲ್ಲ. ಕೃಷಿಯ ಬೇರೆ ಕೆಲಸಗಳನ್ನು ಒಂದೆರಡು ದಿನ ಮುಂದೂಡಬಹುದು. ಆದರೆ ಡೈರಿಯ ಕೆಲಸ ಮಾತ್ರ ಆ ದಿನದ್ದು ಆ ದಿನ ಆಗಲೇ ಬೇಕು. ಕೆಚ್ಚಲಲ್ಲಿ ಹಾಲು ಉಳಿದು ಗಟ್ಟಿಕಟ್ಟಿದರೆ  ಮತ್ತೆ ಗೋವಿಂದನೇ ಬರಬೇಕು!</p>
<p>ಹೈಬ್ರಿಡ್ ತಳಿಗಳಿಗೆ ಬರುವ ರೋಗಗಳು ಕೂಡ ಒಂದು ಬಗೆಯಲ್ಲಿ ಹೈಬ್ರಿಡ್ಡೇ. ಅವು ಡೈರಿ ಮಾಡುವ ನಮ ಉತ್ಸಾಹವನ್ನು ನಡುಗಿಸಿ ಬಿಡುತ್ತವೆ. ಕೆಲವು ವರ್ಷಗಳ ಹಿಂದೆ ಕಾಲು-ಬಾಯಿ ರೋಗಕ್ಕೆ ತುತ್ತಾಗಿ ನನ್ನ ಚಿಕ್ಕಪ್ಪನ ಮನೆಯಲ್ಲಿ ಭಾರೀ ಗಾತ್ರದ ನಾಲ್ಕೈದು ಹಾಲ್‌ಸ್ಟೀನ್ ದನಗಳು ಸತ್ತೇ ಹೋದುವು &#8211; ಯಾವ ಮದ್ದಿಗೂ ರೋಗ ಜಗ್ಗಲಿಲ್ಲ. ಸತ್ತ ಅವುಗಳ ಸಂಸ್ಕಾರ ಸುಲಭವೇ?  ಹಸುಗಳ ಭಾರೀ ಗಾತ್ರಕ್ಕೆ ಸಮನಾಗಿ ಏಳೆಂಟು ಅಡಿ ಉದ್ದ ಮತ್ತು ಆಳದ ಗುಂಡಿಗಳಾಗಬೇಕು. ಅರ್ಧ ಟನ್ನಿಗೂ ಮಿಕ್ಕಿದ ತೂಕವಿರುವ ಹಸುವಿನ ಕಳೇಬರವನ್ನು ಹಟ್ಟಿಯಿಂದ ಹಾಗೂ ಹೀಗೂ ಹೊತ್ತು, ಎಳೆದು ಗುಂಡಿಗೆ ಹಾಕುವಾಗ ಜೀವವೇ ಬಾಯಿಗೆ ಬಂದಂತಾಗಿತ್ತು. ಜನ ಬಲವಿಲ್ಲದೇ ಇಂಥ ಕೆಲಸಗಳು ಸಾಧ್ಯವಾಗದು.</p>
<p>ಒಂದೂವರೆ ವರ್ಷಗಳ ಹಿಂದೆ. ನನ್ನ ಹಟ್ಟಿಗೇ ಶೋಭಾಯಮಾನವಾಗಿರುವ ಘನ ಗಾಂಭೀರ್ಯದ ಶಹಿವಾಲ್ ದನ ನಡು ರಾತ್ರೆ ಕರು ಹಾಕಿತು. (ಹೆಚ್ಚಾಗಿ ಹಸುಗಳು ರಾತ್ರೆಯೇ ಕರು ಹಾಕುತ್ತವೆ. ಅಂದರೆ ಮನೆ ಮಂದಿಗೆ ಜಾಗರಣೆ). ಬೆಳಗ್ಗೆ ನೋಡುತ್ತೇನೆ &#8211; ಕರು ಹೊರಗೆ ಬಿದ್ದಿದ್ದೆನೋ ನಿಜ, ಅದರೊಂದಿಗೆ ಕರುವಿನ ಆಕಾರದಲ್ಲಿರುವ, ಮೈಮೇಲಲ್ಲೆಲ್ಲ ಗಂಟುಗಳಿದ್ದ ಗರ್ಭಕೋಶ ಕೂಡ ಹೊರಗೆ ಬಂದಿತ್ತು. ಪುಣ್ಯ, ಅರುವತ್ತೈದರ ಎಳೆಹರೆಯದ ಪಶುವೈದ್ಯರು (ಡಾ.ಸದಾಶಿವ ಭಟ್ , ಮುದ್ಲಜೆ) ಬೆಳ್ಳಂಬೆಳಗ್ಗೆ ಧಾವಿಸಿ ಬಂದರು ನನ್ನ ಕರೆಗೆ. ಅವರೂ, ನಾನೂ, ನನ್ನ ಕೆಲಸದಾಳುಗಳೂ ಸೇರಿ ಗರ್ಭಕೋಶವನ್ನು ಒಳ ಸೇರಿಸಿ, ಮತ್ತೆ ಪುನ: ಹೊರ ಜಾರದಂತೆ ಹೊಲಿಗೆ ಹಾಕಿ, ಕೆಲಸ ಮುಗಿಸುವಾಗ ಬರೋಬ್ಬರಿ ಮೂರು ಗಂಟೆಗಳು ಕಳೆದಿತ್ತು. ದನದೊಂದಿಗೆ ನಾವೂ ಜನರು ಸುಸ್ತು. ಗಟ್ಟಿ ಜೀವವಾದರೂ ಈ ಎಲ್ಲ ಎಳೆದಾಟದಿಂದ ದನ ಜ್ವರಪೀಡಿತವಾಯಿತು. ನಾನಿನ್ನು ಏಳಲಾರೆ ಎಂದು ಹಠ ಹಿಡಿಯಬೇಕೇ? ದನ ಏಳದೇ ಹೋದರೆ ಅದು ಅಪಾಯಕಾರೀ ಲಕ್ಷಣ. ಗಂಟೆಗಳಲ್ಲಿ ಹೊಟ್ಟೆ ಉಬ್ಬರಿಸಿ ಜೀವ ಬಿಡುವುದಕ್ಕೆ ಸನ್ನದ್ಧವಾಗುತ್ತದೆ. ಮತ್ತೆ ಅಗಾಧ ಗಾತ್ರದ ದನವನ್ನು ಏಳಿಸುವ,  ನಿಲ್ಲಿಸುವ ಸಾಹಸ ಶುರು. ಜತೆ ಜತೆಯಲ್ಲಿ ಹುಳಗಳಾಗದಂತೆ ಬೇವಿನ ಎಣ್ಣೆ, ಕರ್ಪೂರದ ಹುಡಿಯ ಸಿಂಪರಣೆ. ಎಲ್ಲ ಒಟ್ಟು ಸೇರಿ ಇಡೀ ಹಟ್ಟಿಯಲ್ಲಿ ಒಂದು ಬಗೆಯ ವಿಶಿಷ್ಟ ಮೂರಿ. ಹಾಗೂ ಹೀಗೂ ವಾರದಲ್ಲಿ ದನ ಹುಷಾರಾದಾಗ ಓಹ್, ಅದೆಂಥ ಆನಂದ,  ಕೃತಾರ್ಥ ಭಾವ.</p>
<p>ಮುಂದಿನ ಬಾರಿ ಏನಾಗಬಹುದು ಎಂಬ ಆತಂಕ ಇನ್ನೂ ಕಾಡುತ್ತಿದೆ. &#8220;ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ&#8221; ದೊಡ್ದದೆರಡು ಚೆಂಬು ತುಂಬ ಹಾಲು ಕೊಡುವ (ಹದಿನೈದು ಲೀಟರ್!) ಈ ಪುಣ್ಯಕೋಟಿಯನ್ನು ಕೊಡುವುದಕ್ಕೆ ಮನ ಹೇಗೆ ಬಂದೀತು? ಹಲವರು ದನವನ್ನು ಕೊಟ್ಟು ಬಿಡಿ ಅಂದರೂ ಮನಸ್ಸಾಗದೇ ಉಳಿಸಿಕೊಂಡಿದ್ದೇನೆ. ಇದೀಗ ಅದಕ್ಕೆ ನಾಲ್ಕು ತಿಂಗಳು ಗಬ್ಬ.  ಧೈರ್ಯ ಮಾಡಿದ್ದೇನೆ. ಒಮ್ಮೆ ಆದದ್ದು ಎಲ್ಲ ಸಮಯದಲ್ಲೂ ಆಗಬೇಕೆಂದಿಲ್ಲ ತಾನೇ.</p>
<p><a href="http://apkrishna.files.wordpress.com/2011/04/shahival1.jpg"><img class="alignright size-large wp-image-538" title="ಶಹಿವಾಲ್ ಹಟ್ಟಿಗೇ ಶೋಭಾಯಮಾನ " src="http://apkrishna.files.wordpress.com/2011/04/shahival1.jpg?w=484&#038;h=362" alt="" width="484" height="362" /></a>ಯಾವುದೇ ದನ ಕರು ಹಾಕುವ ಕಾಲಕ್ಕೆ ಆತಂಕ ಶುರುವಾಗುತ್ತದೆ.  ಕಾಲು ಕೈ ಒಳಕ್ಕೆ ಸಿಕ್ಕಿಕೊಂಡು, ಅಥವಾ ಕರುವಿನ ಗಾತ್ರ ಅಗಾಧವಾಗಿರು ಹಾಕಲು ಕಷ್ಟವಾಗಿ ಕರು &#8211; ದನ ಗತಪ್ರಾಣವಾದದ್ದೂ ಇದೆ ನಮ್ಮ ಹಟ್ಟಿಯಲ್ಲಿ. ಹೊರಕ್ಕೆ ಬಾರದೇ ಗರ್ಭದೊಳಗೇ ಸಿಕ್ಕಿಕೊಂಡ ಕರುವನ್ನು ತೆಗೆಯಲು ಕರುವಿನ ಭುಜದ ಭಾಗಕ್ಕೆ ಹಗ್ಗವನ್ನು ಬಿಗಿದು, ಇನ್ನೊಂದು ತುದಿಗೆ ಬಡಿಗೆ ಸಿಕ್ಕಿಸಿ ಎರಡು ಮೂರು ಮಂದಿ ಸೇರಿ ಎಳೆದೆಳೆದು ಹೊರ ತೆಗೆವ ಗಲಾಟೆಯಲ್ಲಿ, ಕರು ಸತ್ತು ದನದ ಪಕ್ಕೆಗೆ ಪೆಟ್ಟಾಗಿ ಅದು ಮೇಲೇಳದ ಸ್ಥಿತಿಗೆ ಬಂದ ಉದಾಹರಣೆಗಳು ಎಷ್ಟೋ ಇವೆ. ಬಸರಿ ಮರದ ಸೊಪ್ಪು  ತಿಂದು ನಮ್ಮ ಹಟ್ಟಿಯಲ್ಲಿ ಎರಡು ದನಗಳು ಸತ್ತದ್ದು ನೆನಪಾಗುತ್ತಿದೆ.</p>
<p>ಸುಮಾರು ಆರೇಳು ತಿಂಗಳಾಯಿತು. ಒಂದು ದಿನ ಬೆಳಗ್ಗೆ ಐದರ ಹೊತ್ತಿಗೆ ಎಂದಿನಂತೆ ಹಟ್ಟಿಯ ಕೆಲಸ ಮುಗಿಸಿ ತುಸು ವೇಗದಲ್ಲಿ ಹೆಜ್ಜೆ ಹಾಕಿದೆ. ತಲೆ ಎಲ್ಲಿತ್ತೋ ಗೊತ್ತಿಲ್ಲ &#8211; ಅಂಗಾತ &#8211; ಬೆನ್ನಿನ ಮೇಲೆ ಅಪ್ಪಳಿಸಿದ್ದಷ್ಟೇ ಗೊತ್ತು. ತುಸು ಹೊತ್ತು ಕಣ್ಣು ಕವಿಯಿತು. ಅಸಾಧ್ಯ ನೋವು. ಹಾಗೂ ಹೀಗೂ ಮನೆ ಸೇರಿದೆ. ಬೆನ್ನು ಮೂಳೆಗಳು ಮುರಿಯದೇ ಇದ್ದದ್ದು ನನ್ನ ಅದೃಷ್ಟ. ತಿಂಗಳುಗಳ ಕಾಲ ಅಸಾಧ್ಯ ನೋವು. ಇನ್ನೂ ಉಳಿದಿದೆ ಅದರ ಶೇಷ ಅಷ್ಟಿಷ್ಟು. ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ ಗೋ ಸಾಕಣೆ ಸಹನೆ ಮತ್ತು ಶ್ರಮ ಎರಡನ್ನೂ ಬೇಡುತ್ತದೆ.</p>
<p>ಇಂದು ಗೋ ಸಾಕಣೆ ಅರ್ಥಿಕವಾಗಿ ಹಿಂದೆಂದಿಗಿಂತ ತೀವ್ರವಾಗಿ ದುಬಾರಿಯಾಗುತ್ತಿದೆ. ಹಿಂಡಿಯ ಕ್ರಯ ದಿನದಿಂದ ದಿನಕ್ಕೆ ಲಂಗುಲಗಾಮಿಲ್ಲದೇ ಏರುತ್ತಿದೆ. ಕರಾವಳಿಯ ನಮ್ಮ ಗದ್ದೆಗಳು ಅಡಿಕೆಯ ತೋಟಗಳಾಗಿವೆ, ಇಲ್ಲವೇ ಬಂಜರು ಬಿದ್ದಿವೆ. ಹಾಗಾಗಿ ನಾವು ಒಣ ಮೇವಿಗಾಗಿ ಘಟ್ಟ ಅಥವಾ ಬಯಲು ಸೀಮೆಯನ್ನು ಆಶ್ರಯಿಸಬೇಕಾಗಿದೆ. ಅಲ್ಲಾದರೂ ಅಷ್ಟೇ. ಭತ್ತ, ಜೋಳದ ಗದ್ದೆಗಳಲ್ಲಿ ಕಬ್ಬು ಅಥವಾ ಅಡಿಕೆ, ಅರಷಿಣ, ಶುಂಠಿ ಏಳುತ್ತಿವೆ. ಪರಿಣಾಮವಾಗಿ ಒಣ ಹುಲ್ಲು ಸಿಗುವುದು ದುರ್ಭರವಾಗಿ ಕ್ರಯ ಊಹಿಸಲಾಗದಷ್ಟು ಹೆಚ್ಚಿದೆ.  ಹಿಡಿ ಗಾತ್ರದ ಬೈಹುಲ್ಲಿನ ಕಂತೆಗೆ ವರ್ಷದ ಹಿಂದೆ ಹನ್ನೆರಡರಿಂದ ಹದಿಮೂರು ರೂಪಾಯಿ ಇದ್ದರೆ ಇಂದು ಬರೋಬ್ಬರಿ ಇಪ್ಪತ್ತು ರೂಪಾಯಿ. ಲಾರಿ ಲೋಡಿಗೆ ನಲುವತ್ತೈದು ಸಾವಿರ ರೂಪಾಯಿ. ನಾನು ವರ್ಷಕ್ಕೆ ಒಂದೂವರೆ ಲೋಡ್ ಬೈಹುಲ್ಲು ಕೊಳ್ಳುತ್ತೇನೆ &#8211; ಇದು ಅನಿವಾರ್ಯ. ತೋಟದ ತುಂಬ ಹಸಿರು ಹುಲ್ಲು ತುಂಬಿದೆ. ದನಗಳನ್ನು ಮೇಯಿಸಲು ಕಂತಾಮುಟ್ಟೆ ತೋಟ. ದನಕ್ಕೂ ನಮಗೂ ಕ್ರಮ ತಪ್ಪಿ ಹೋಗಿದೆ. ಹುಲ್ಲು ಮಾಡಲು ಜನ ಬಲವಿಲ್ಲ.</p>
<p>ಇನ್ನು ಹಿಂಡಿಯ ಕ್ರಯ ಕನಸಿನಲ್ಲೂ ಬೆಚ್ಚಿಸುವಷ್ಟು ಹೆಚ್ಚಿದೆ. ವರ್ಷದ ಹಿಂದೆ ಐವತ್ತು ಕೆಜಿ ಬೂಸಾ ಗೋಣಿಗೆ ಸುಮಾರು ಐನೂರು ರೂಪಾಯಿಗಳಷ್ಟಿತ್ತು. ಇಂದು ಆರೂನೂರೈವತ್ತರ ಗಡಿ ದಾಟಿ ಮತ್ತೂ ಮುನ್ನುಗ್ಗುತ್ತಿದೆ. ಚಿದಂಬರ ಸಾಹೇಬರು ಪೆಟ್ರೋಲ್ &#8211; ಡಿಸೆಲ್ ದರ ಏರಿಸದೇ ಏರಿಸುವ ಸಾಧ್ಯತೆ ಇದೆ ಎಂದರೂ ಸಾಕು &#8211; ಹಿಂಡಿಯ ಕ್ರಯ ಏರುವುದೇ ಚಿದಂಬರ ರಹಸ್ಯ. ಎಷ್ಟು ಏರಿದರೇನು &#8211; ಹಸು ಸಾಕಬೇಕೆಂದರೆ ಕೊಳ್ಳುವುದು ಅನಿವಾರ್ಯ. ಅದು ಹಿಂಡಿಯ ಉತ್ಪಾದಕರಿಗೆ ಚೆನ್ನಾಗಿ ಅರಿವಿದೆ.</p>
<p><a href="http://apkrishna.files.wordpress.com/2011/04/diry.jpg"><img class="alignleft size-medium wp-image-541" title="Diry" src="http://apkrishna.files.wordpress.com/2011/04/diry.jpg?w=300&#038;h=224" alt="" width="300" height="224" /></a></p>
<p>ಹಟ್ಟಿ ಗೊಬ್ಬರ ಅತ್ಯುತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಚೆನ್ನಾಗಿ ಕಳಿತ ಗೊಬ್ಬರದಲ್ಲಿ ಕೃಷಿ ಹಸನಾಗುತ್ತದೆ. ಆದರೆ ಈ ಗೊಬ್ಬರದ ಸೃಷ್ಟಿ ಹಿಂದಿನಷ್ಟು ಸರಳವಾಗಿಲ್ಲ. ನಿರಂತರವಾಗಿ ಸೊಪ್ಪು ತರಬೇಕು. ಇದಕ್ಕೆ ಕಾಡು ಬೇಕು ಮತ್ತು ಜನ ಬೇಕು. ಎರಡಕ್ಕೂ ತೀವ್ರ ಬರ. ಒಂದು ಭಟ್ಟಿ ಹಟ್ಟಿಗೊಬ್ಬರಕ್ಕೆ ಕನಿಷ್ಠ ಇಪ್ಪತ್ತೈದು ರೂಪಾಯಿ ವೆಚ್ಚವಾಗುತ್ತದೆ. ಈ ಎಲ್ಲ ತಾಪತ್ರಯ ಬೇಡವೆಂದು ಹಟ್ಟಿಯ ಗಂಜಲವೆಲ್ಲವನ್ನು ಟ್ಯಾಂಕಿಗಳಲ್ಲಿ ಶೇಖರಿಸಿ ಸಿಂಪರಣೆಯ ಹೊಸ ವ್ಯವಸ್ಥೆಗಳು ಇಂದು ಜನಪ್ರಿಯವಾಗುತ್ತಿವೆ. ಕಾಲಕ್ಕೆ ತಕ್ಕ ಕೋಲದ ಇಂಥ ವ್ಯವಸ್ಥೆಗಳಲ್ಲಿಯೂ ಸಾಕಷ್ಟು ಸಮಸ್ಯೆಗಳಿವೆ. ಸಬ್ಸಿಡಿ ಘೋಷಣೆಯಾದೊಡನೆ ಹಸುಗಳಿಗೆ ಖಾಯಸ್ಸು ಹೆಚ್ಚುತ್ತದೆ. ಸಬ್ಸಿಡಿ ಆಶೆಗೆ ಡೈರಿಗಳನ್ನು ಆರಂಭಿಸುವವರಿದ್ದಾರೆ. ಒಮ್ಮೆಲೇ ದೊಡ್ಡ ಮಟ್ಟದಲ್ಲಿ ಡೈರಿ ಆರಂಭಿಸಿ,  ಒಂದೆರಡು ವರ್ಷಗಳಲ್ಲಿ  ಸದ್ದಿಲ್ಲದೇ ಡೈರಿ ಮುಚ್ಚಿದವರೂ ಹಲವರಿದ್ದಾರೆ. ನಮ್ಮ ಕರಾವಳಿಯ ಹಳ್ಳಿಗಳಲ್ಲಿ ಇಂದು ಮನೆ ಮನೆಗಳಲ್ಲಿ ಗೋವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೈತರ ಮನೆಗಳಲ್ಲಿಯೂ ಪೆಕೇಟು ಹಾಲಿನ ಸಂಸ್ಕೃತಿ ಬಂದಿದೆ. ಹಳ್ಳಿಯ ಮೂಲೆಗಳಲ್ಲಿರುವ ಗೋಡಂಗಡಿಗಳಲ್ಲಿ ಇಂದು ಪೆಕೇಟು ಹಾಲು ಲಭ್ಯ ತಾನೇ. ಎಷ್ಟೋ ದೊಡ್ಡ  ಕೃಷಿಕರಲ್ಲಿ ಇಂದು ಹಸುಗಳಿಲ್ಲ. ಕೃಷಿಗಾಗಿ ಕೋಳಿ, ಕುರಿ, ಆಡು ಅಥವಾ ಹಂದಿಯ ಗೊಬ್ಬರವನ್ನು ಆಶ್ರಯಿಸುತ್ತಿದ್ದಾರೆ. ಡೈರಿ ಸಾಕಣೆಯ ಕರಕರೆ ಇಲ್ಲದೇ ಅಷ್ಟರ ಮಟ್ಟಿಗೆ ನಾವು ಸ್ವತಂತ್ರರೆಂದು ಹೇಳಿಕೊಳ್ಳುವಾಗ ಆ ದನಿಯಲ್ಲಿ ಗಾಢ ನೋವು ಕಾಣಬಹುದು. ಸತ್ಯ ಹೇಳಬೇಕೆಂದರೆ ಅವರ ಸಾಲಿಗೆ ನಾನು ಸೇರಿಕೊಳ್ಳುವ ದಿನ ಯಾವಾಗ ಬರುತ್ತದೋ ತಿಳಿಯದು.</p>
<p><a href="http://apkrishna.files.wordpress.com/2011/04/110.jpg"><img class="alignright size-medium wp-image-542" title="ಮಳೆ ಸುರಿದ ದಿನ " src="http://apkrishna.files.wordpress.com/2011/04/110.jpg?w=300&#038;h=224" alt="" width="300" height="224" /></a>ಹಸುಗಳ ಸಾಕಣೆಯಲ್ಲಿ ಯಾವಾಗ ಕೃತಕ ಗರ್ಭಧಾರಣೆಯ ವ್ಯವಸ್ಥೆ ಬಂತೋ, ವರ್ಷಕ್ಕೊಂದರಂತೆ ಹಸುಗಳು ಕರು ಹಾಕತೊಡಗಿದುವು. ಅವುಗಳ ಸಾಕಣೆಯ ಜತನದಲ್ಲಿ ಒಂದೆರಡೇ ವರ್ಷಗಳಲ್ಲಿ ಹಟ್ಟಿ ಹಸುಗಳಿಂದ ತುಂಬಿ ತುಳುಕುತ್ತದೆ. ಹಾಗಾಗಿ ಕೆಲವನ್ನು ಮಾರಾಟ ಮಾಡುವುದು ಅನಿವಾರ್ಯ. ಮಾರದೇ ಎಲ್ಲ ಉಳಿಸಿಕೊಂಡರೆ ಆತ ಅವೆಲ್ಲವನ್ನು ಸಾಕಲು ತನ್ನ ಜಾಗವನ್ನು ಇಂಚು ಇಂಚಾಗಿ ಮಾರಬೇಕಾದೀತು! ಅಂಥ ಪರಿಸ್ಥಿಗೆ ಬಂದವರಿದ್ದಾರೆ ಕೂಡ.</p>
<p>ನಿಜ, ಗೋ ಹತ್ಯೆ ತುಂಬ ವೇದನೆ ತರುತ್ತದೆ ಮನಸ್ಸಿಗೆ. ದನ-ಕರುಗಳ ಮಾರಾಟ ಮಾಡುವ ಆ ದಿನಗಳಲ್ಲಿ ಮನ ಭಾರವಾಗುತ್ತದೆ. ಇವ್ಯಾವುವೂ ಬೇಡ ಅನ್ನಿಸುತ್ತದೆ. ಭಾವನಾತ್ಮಕ ಪ್ರಪಂಚ ಬೇರೆ; ವಾಸ್ತವ ಪ್ರಪಂಚ ಬೇರೆಯೇ. ಹಾಗಾಗಿ ಇಂದಿಗೂ ಕುಂಟುತ್ತ ಏಗುತ್ತ ಸಾಗುತ್ತಿದೆ ನಮ್ಮ ಮನೆಯಲ್ಲಿ ಡೈರಿ.</p>
<p>ಗೋವುಗಳನ್ನು ಮಾಂಸವಾಗಿ ಕೊಲ್ಲುವ ಅಥವಾ ತಿನ್ನುವ ಎಲ್ಲರೂ ಕಟುಕರೆಂದು ಭಾವಿಸಬಾರದು. ನಮ್ಮದಲ್ಲದ ಆಯ್ಕೆಯ ಕಾರಣದಿಂದ ಹುಟ್ಟಿದ ಧರ್ಮದಲ್ಲಿ ಗೋ ಮಾಂಸ ಭಕ್ಷಣೆ ನಿಷಿದ್ಧವೆಂದಾದರೆ, ಅದುವೇ ಅಂತಿಮ ಶಾಸನವಾಗಿ ಎಲ್ಲರ ಮೇಲೆ ಹೇರುವ ಹಕ್ಕು ನಮಗಿಲ್ಲ. ತಳವಾರು ಝಳಪಿಸಿಕೊಂಡು ಕಂಡ ಕಂಡಲ್ಲಿ ಗೋವುಗಳ ಬೇಟೆಯಾಡುತ್ತ ಹೋದಾಗ ನಾವು ವಿರೋಧಿಸುವುದರಲ್ಲಿ ಅರ್ಥವಿದೆ. ಕೇವಲ ಮಾಂಸಕ್ಕಾಗಿಯೇ ದನ ಸಾಕುವ ಮಂದಿ ಇದ್ದರೂ ಇರಬಹುದು. ಅಪ್ಪಟ ಸಸ್ಯಹಾರೀ ಬ್ರಾಹ್ಮಣರು ಕೂಡ ಹೈಬ್ರಿಡ್ ಆಡುಗಳ ಸಾಕಣೆಯನ್ನು, ಕೋಳಿ ಫಾರ್ಮುಗಳನ್ನು, ಸಿಗಡಿ ಕೃಷಿಯನ್ನು ಮಾಡುತ್ತಿರುವ ಮತ್ತು ಅದರಲ್ಲಿ ಯಶಸ್ಸು ಕಂಡ ಉದಾಹರಣೆಗಳೂ ಉಂಟು.   ಇದು  ಬದುಕಿನ ವೈವಿದ್ಯತೆ.</p>
<p>ಸುಮಾರು ಮೂರು ತಿಂಗಳುಗಳಾಯಿತು. ಒಂದು ದಿನ &#8220;ಬೆಳ್ಳಂಬೆಳೀಗೆ&#8221;  ನಮ್ಮ ಮನೆಯ ಸನಿಹದಲ್ಲೇ ಸಾಗುವ ಹೆದ್ದಾರಿಯಲ್ಲಿ ಗಲಾಟೆ. ರಸ್ತೆಯ &#8220;ತಿರ್ಗಾಸಿನಲ್ಲಿ&#8221; ಲಾರಿಯೊಂದು ಪಲ್ಟಿಯಾಗಿ ಅದರೊಳಗೆ ಇದ್ದ ನಾಲ್ಕೈದು ದನಗಳು ಸತ್ತರೆ, ಉಳಿದವು ಬದುಕಿದೆಯಾ ಬಡ ಜೀವವೇ ಎನ್ನುತ್ತ ಬಾಲ ಎತ್ತಿ ಓಡಿ ಪಾರಾದುವು. ಆದದ್ದಿಷ್ಟು. ದನಗಳನ್ನು ಒಯ್ಯುತ್ತಿದ್ದ ಲಾರಿಯನ್ನು ಬೆಂಬತ್ತಿ ಬರುತ್ತಿದ್ದರು ಪೋಲೀಸರು. ತಿರ್ಗಾಸಿನಲ್ಲಿ ಲಾರಿ ಆಯ ತಪ್ಪಿ ಉರುಳಿತು. ಚಾಲಕ ಮತ್ತಿತರರು ಓಡಿ ಮರೆಯಾದರು. ಲಾರಿಯಿಂದ ಸಾಯದೇ, ಓಡದೇ ಉಳಿದ ನಾಲ್ಕೈದು ಕರುಗಳನ್ನು ಊರಿನ ಕೆಲವರಿಗೆ ಪೋಲೀಸರು ದಾನವಾಗಿ ಇತ್ತರು. ಆ ಕರುಗಳನ್ನು ಸಾಕುವುದು ಆ ಹೊತ್ತಿಗೆ ಅವರಿಗೆ ಅಭಿಮಾನದ, ಖುಷಿಯ ಸಂಗತಿಯಾದದ್ದು ಸುಳ್ಳಲ್ಲ. ತಿಂಗಳೊಳಗೆ ಸುಸ್ತಾದರು. ಇಂದು ಕರುಗಳು ಬೇರೆ ಬೇರೆ ಕಡೆಗೆ ಸಾಗಿವೆ.</p>
<p>ನಿಜ, ಹಸುಗಳನ್ನು ತೀವ್ರ ಪೈಶಾಚಿಕ ಬಗೆಯಲ್ಲಿ ಕೊಲ್ಲುತ್ತಾರೆನ್ನುವುದನ್ನು ಅಲ್ಲಗಳೆಯಲಾರೆ. ಮಾಂಸಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವಲ್ಲೂ ಇಂಥದೇ ಪರಮಾವಧಿ ಕ್ರೌರ್ಯ ಇರಬಹುದು. ಕೋಳಿಗಳನ್ನು ಲಾರಿಗಳಲ್ಲಿ ತುಂಬಿ ಸಾಗಿಸುವ ರೀತಿಯನ್ನು ಕಂಡಾಗ, ಕ್ಯಾಬೇಜು ಮಾರಾಟ ಮಾಡಿದಂತೆ ಸೈಕಲ್ಲಿನಲ್ಲಿ ಕೋಳಿಗಳನ್ನು ತಲೆಕೆಳಗಾಗಿ ನೇತು ಹಾಕಿಕೊಂಡು ಮಾರಾಟ ಮಾಡುವ ಹೊಸ ಬಗೆಯನ್ನು ನೋಡಿದಾಗ ಮನಸ್ಸು ಕಲಕುತ್ತದೆ. ಪ್ರಾಣಿ ಹತ್ಯೆ ಬಿಟ್ಟು ಮಾಂಸಾಹಾರವನ್ನು ಜನರು ಎಷ್ಟು ತ್ಯಜಿಸುತ್ತಾರೋ ಅಷ್ಟಷ್ಟು ಒಳ್ಳೆಯದು. ಇದು ಕೂಡ ಒಂದು ಬಗೆಯಲ್ಲಿ  ಭಾವನಾತ್ಮಕವಾದ ಸಾಪೇಕ್ಷ ನಿಲುವೇ ಆಗಿದೆ.  ಪ್ರಾಯಶ: ಗೋಹತ್ಯೆ ನಿಷೇಧದ ಕಾನೂನಿಗಿಂತ, ಗೋವುಗಳ ಹತ್ಯೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಕ್ರೌರ್ಯದಲ್ಲಿ, ಸಹನೀಯ ವಿಧಾನಗಳಲ್ಲಿ ಮಾಡುವಂತೆ ಕ್ರಮ ಕೈಗೊಳ್ಳುವುದು ಹೆಚ್ಚು ಸಮಂಜಸವೆಂದು ನನಗೆ ಅನ್ನಿಸುತ್ತದೆ. ನೀವೇನನ್ನುತ್ತೀರಿ?</p>
<p>(ಇದು ಕೆಂಡ ಸಂಪಿಗೆಯಲ್ಲಿ ಪ್ರಕಟವಾದ ಬರಹ. ದಾಖಲೆಗಾಗಿ ಇಲ್ಲಿದೆ.<a href="http://kendasampige.com/article.php?id=3435"> http://kendasampige.com/article.php?id=3435</a>)</p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/533/"><img alt="" border="0" src="http://feeds.wordpress.com/1.0/comments/apkrishna.wordpress.com/533/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/533/"><img alt="" border="0" src="http://feeds.wordpress.com/1.0/delicious/apkrishna.wordpress.com/533/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/533/"><img alt="" border="0" src="http://feeds.wordpress.com/1.0/facebook/apkrishna.wordpress.com/533/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/533/"><img alt="" border="0" src="http://feeds.wordpress.com/1.0/twitter/apkrishna.wordpress.com/533/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/533/"><img alt="" border="0" src="http://feeds.wordpress.com/1.0/stumble/apkrishna.wordpress.com/533/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/533/"><img alt="" border="0" src="http://feeds.wordpress.com/1.0/digg/apkrishna.wordpress.com/533/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/533/"><img alt="" border="0" src="http://feeds.wordpress.com/1.0/reddit/apkrishna.wordpress.com/533/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=533&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/04/18/%e0%b2%97%e0%b3%8b-%e0%b2%b8%e0%b2%be%e0%b2%95%e0%b2%a3%e0%b3%86%e0%b2%af-%e0%b2%a4%e0%b2%b2%e0%b3%8d%e0%b2%b2%e0%b2%a3%e0%b2%97%e0%b2%b3%e0%b3%81/feed/</wfw:commentRss>
		<slash:comments>7</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2011/04/hatti.jpg?w=1024" medium="image">
			<media:title type="html">ನಮ್ಮ ದನದ ಕೊಟ್ಟಿಗೆ </media:title>
		</media:content>

		<media:content url="http://apkrishna.files.wordpress.com/2011/04/gobar-plant.jpg?w=1024" medium="image">
			<media:title type="html">ಗೋಬರ್ ಅನಿಲ ಸ್ಥಾವರ </media:title>
		</media:content>

		<media:content url="http://apkrishna.files.wordpress.com/2011/04/shahival1.jpg?w=1024" medium="image">
			<media:title type="html">ಶಹಿವಾಲ್ ಹಟ್ಟಿಗೇ ಶೋಭಾಯಮಾನ </media:title>
		</media:content>

		<media:content url="http://apkrishna.files.wordpress.com/2011/04/diry.jpg?w=300" medium="image">
			<media:title type="html">Diry</media:title>
		</media:content>

		<media:content url="http://apkrishna.files.wordpress.com/2011/04/110.jpg?w=300" medium="image">
			<media:title type="html">ಮಳೆ ಸುರಿದ ದಿನ </media:title>
		</media:content>
	</item>
		<item>
		<title>ರಂಗು ರಂಗಿನ ಕ್ರಿಕೆಟ್</title>
		<link>http://apkrishna.wordpress.com/2011/04/14/%e0%b2%b0%e0%b2%82%e0%b2%97%e0%b3%81-%e0%b2%b0%e0%b2%82%e0%b2%97%e0%b2%bf%e0%b2%a8-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d/</link>
		<comments>http://apkrishna.wordpress.com/2011/04/14/%e0%b2%b0%e0%b2%82%e0%b2%97%e0%b3%81-%e0%b2%b0%e0%b2%82%e0%b2%97%e0%b2%bf%e0%b2%a8-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d/#comments</comments>
		<pubDate>Thu, 14 Apr 2011 06:12:45 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=499</guid>
		<description><![CDATA[ಭಾರತಕ್ಕೆ ವಿಶ್ವಕಪ್ ಒಲಿದಿದೆ. ಕ್ರಿಕೆಟಿನ ದೇವರಿಗೆ ದೇವರು ಕಣ್ಣು ಬಿಟ್ಟಿದ್ದಾನೆ. ಈ ಹೊತ್ತು ಅಯಾಚಿತವಾಗಿ ನೆನಪಿನ ಅಲೆಗಳು ಏಳುತ್ತಿವೆ. ಹೇಳಿ ಕೇಳಿ ನಾನೂ ಕ್ರಿಕೆಟ್ ಪ್ರಿಯ.  ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚು ಅಂಟಿಕೊಂಡಿತು. ನಡೆಯುತ್ತಿದ್ದಾಗಲೆಲ್ಲ ಬಲದ ಕೈಯ ಮಣಿಗಂಟನ್ನು  ತಿರುಗಿಸುತ್ತ ಹೋಗುತ್ತಿದ್ದ ನನ್ನನ್ನು ತಮಾಷೆ ಮಾಡುತ್ತಿದ್ದುದುಂಟು ಮನೆ ಮಂದಿ &#8211; &#8220;ಅಗೋ ಅಲ್ಲಿ ಚಂದ್ರಶೇಖರ್ ಬಂದ&#8221;. ಆ  ಕಾಲದಲ್ಲಿ ಚಂದ್ರಶೇಖರ್ ಬಲು ದೊಡ್ಡ ಲೆಗ್ ಸ್ಪಿನ್ನರ್, ಚಾಣಕ್ಷ್ಯ ಗೂಗ್ಲೀ ಬೌಲರ್. ಕೊತ್ತಳಿಗೆಯ ಬ್ಯಾಟು. ತೆಂಗಿನ ಒಣ ಮಡಲಿನ ಬುಡವನ್ನೇ [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=499&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://apkrishna.files.wordpress.com/2011/04/635271.jpg"></a><a href="http://apkrishna.files.wordpress.com/2011/04/1191054160311.jpg"></a><a href="http://apkrishna.files.wordpress.com/2011/04/vishwanath1.jpg"></a><a href="http://apkrishna.files.wordpress.com/2011/04/india-won-the-world-cup-2011-e1301858296602.jpg"><img class="alignright size-medium wp-image-505" title="India-Won-The-World-Cup-2011-e1301858296602" src="http://apkrishna.files.wordpress.com/2011/04/india-won-the-world-cup-2011-e1301858296602.jpg?w=300&#038;h=167" alt="" width="300" height="167" /></a><a href="http://apkrishna.files.wordpress.com/2011/04/635272.jpg"></a><a href="http://apkrishna.files.wordpress.com/2011/04/100636.jpg"></a><a href="http://apkrishna.files.wordpress.com/2011/04/kapildev.jpg"></a><a href="http://apkrishna.files.wordpress.com/2011/04/teamceleb3x2_get.jpg"></a><a href="http://apkrishna.files.wordpress.com/2011/04/a_07062000_050-15ih20b.jpg"></a><a href="http://apkrishna.files.wordpress.com/2011/04/clive_lloyd.jpg"></a><a href="http://apkrishna.files.wordpress.com/2011/04/courtney_walsh.jpg"></a><a href="http://apkrishna.files.wordpress.com/2011/04/dscn24451.jpg"></a></p>
<p>ಭಾರತಕ್ಕೆ ವಿಶ್ವಕಪ್ ಒಲಿದಿದೆ. ಕ್ರಿಕೆಟಿನ ದೇವರಿಗೆ ದೇವರು ಕಣ್ಣು ಬಿಟ್ಟಿದ್ದಾನೆ. ಈ ಹೊತ್ತು ಅಯಾಚಿತವಾಗಿ ನೆನಪಿನ ಅಲೆಗಳು ಏಳುತ್ತಿವೆ.</p>
<p>ಹೇಳಿ ಕೇಳಿ ನಾನೂ ಕ್ರಿಕೆಟ್ ಪ್ರಿಯ.  ಬಾಲ್ಯದಿಂದಲೇ ಕ್ರಿಕೆಟ್ ಹುಚ್ಚು ಅಂಟಿಕೊಂಡಿತು. ನಡೆಯುತ್ತಿದ್ದಾಗಲೆಲ್ಲ ಬಲದ ಕೈಯ ಮಣಿಗಂಟನ್ನು  ತಿರುಗಿಸುತ್ತ ಹೋಗುತ್ತಿದ್ದ ನನ್ನನ್ನು ತಮಾಷೆ ಮಾಡುತ್ತಿದ್ದುದುಂಟು ಮನೆ ಮಂದಿ &#8211; &#8220;ಅಗೋ ಅಲ್ಲಿ ಚಂದ್ರಶೇಖರ್ ಬಂದ&#8221;. ಆ  ಕಾಲದಲ್ಲಿ ಚಂದ್ರಶೇಖರ್ ಬಲು ದೊಡ್ಡ ಲೆಗ್ ಸ್ಪಿನ್ನರ್, ಚಾಣಕ್ಷ್ಯ ಗೂಗ್ಲೀ ಬೌಲರ್.<a href="http://apkrishna.files.wordpress.com/2011/04/635272.jpg"><img title="63527" src="http://apkrishna.files.wordpress.com/2011/04/635272.jpg?w=188&#038;h=300" alt="" width="188" height="300" /></a></p>
<p><span id="more-499"></span></p>
<p>ಕೊತ್ತಳಿಗೆಯ ಬ್ಯಾಟು. ತೆಂಗಿನ ಒಣ ಮಡಲಿನ ಬುಡವನ್ನೇ ಕತ್ತರಿಸಿ ತುಸು ಒಪ್ಪ ಮಾಡಿದರೆ ಕ್ಷಣ ಮಾತ್ರದಲ್ಲಿ ಬ್ಯಾಟು ರೆಡಿ, ಆಟ ಶುರು. ರಜೆಯ ದಿನಗಳಲ್ಲಿ ಮನೆಯ ಚಿಕ್ಕ ಅಂಗಳವೇ &#8220;ಚಿನ್ನಸಾಮಿ&#8221; ಸ್ಟೇಡಿಯಮ್. ಕ್ರಿಕೆಟ್ಟೋ ಕ್ರಿಕೆಟ್ಟು. ನಮ್ಮ ಆಟದ ಗದ್ದಲ ಎಷ್ಟೇ ಮೇರೆ ಮೀರಿದರೂ ಸ್ವಾತಂತ್ರ್ಯಕ್ಕೆ ಭಂಗ ಬಂದದ್ದಿಲ್ಲ. ಹೊಡೆದ ಚೆಂಡು ಬಹು ಬಾರಿ ತೋಟಕ್ಕೆ, ಕೆಳಗೆ ಹರಿವ ತೋಡಿಗೆ. ಆಟಕ್ಕಿಂತ ಹೆಚ್ಚು ಚೆಂಡಿಗಾಗಿ ಬಲ್ಲೆಯೊಳಗೆಲ್ಲ ಹುಡುಕಾಟ. ನಡುನಡುವೆ ಮಜ್ಜಿಗೆಯ ಸಮಾರಾಧನೆ<a href="http://apkrishna.files.wordpress.com/2011/04/dscn24451.jpg"><img title="DSCN2445" src="http://apkrishna.files.wordpress.com/2011/04/dscn24451.jpg?w=340&#038;h=233" alt="" width="340" height="233" /></a></p>
<p><a href="http://apkrishna.files.wordpress.com/2011/04/1191054160311.jpg"></a></p>
<p>ಸಂಟ್ಯಾರೆಂಬೋ ನಮ್ಮ ಹಳ್ಳಿಯಲ್ಲಿ ನಮ್ಮದೇ ಆದ ಕ್ರಿಕೆಟ್ ತಂಡವಿತ್ತು. ಶಾಲೆ ಮುಗಿದ ಮೇಲೆ ಇರುಳು ಕವಿಯುವ ತನಕ ಆಟ. ಶನಿವಾರ, ಆದಿತ್ಯವಾರಗಳಂದು  ಕ್ರಿಕೆಟ್ ಮ್ಯಾಚ್.  ಸೋಲಾದಾಗ ಜೀವನದಲ್ಲಿ ಎಲ್ಲವನ್ನು ಕಳಕೊಂಡ ಹತಾಶೆ, ಗೆದ್ದಾಗ ಜಗವನ್ನೆ ಗೆದ್ದ ಸಂತಸ &#8211; ಆಟ ಹಲವು ಗೆಳೆಯರನ್ನು ಗಳಿಸಿಕೊಟ್ಟ ಆ ದಿನಗಳು ಇಂದಿಗೂ ಹಸಿರು.</p>
<p>ಕ್ರಿಕೆಟ್ ಹುಚ್ಚು ಹೆಚ್ಚಾಗುತ್ತ ನಮ್ಮ ಆದಿತ್ಯವಾರದ ಸರ್ಕೀಟು ನಿಧಾನವಾಗಿ ವಿಸ್ತಾರವಾಗುತ್ತ ಬಂದ ಒಂದು ಆದಿತ್ಯವಾರ ಅಪ್ಪ ಕೇಳಿಯೇ ಬಿಟ್ಟರು &#8220;ಎಲ್ಲಿಗೆ ಸವಾರಿ? &#8221; ನಾನು ಉಸುರಿದೆ &#8220;ಇಲ್ಲೆ ಮಾವಿನಕಟ್ಟೆಗೆ&#8221;. ಅಪ್ಪ ಅಪರೂಪಕ್ಕೆಂಬಂತೆ ಗುಡುಗಿದರು &#8220;ಸಾಕು ಕ್ರಿಕೆಟ್, ನೀನೇನೂ ಗವಾಸ್ಕರ್ ಆಗುವುದು ಬೇಡ. ಇಂದೇ ಕೊನೆಯಾಗಬೇಕು&#8221;. ಅಪ್ಪನ ಮಾತು ಮೀರದ ಮಗ ನಾನಾಗಿದ್ದೆ. ಮತ್ತೆ ಮುಂದುವರಿಸಲಿಲ್ಲ &#8211; ಅಲ್ಲಿಗೆ ಗವಾಸ್ಕರ್  ಒಬ್ಬ ಪ್ರತಿಸ್ಪರ್ಧಿಯನ್ನು ಕಳೆದುಕೊಂಡ!.</p>
<p>ನನಗೆ ಇನ್ನೂ ನೆನಪಿದೆ. ಆ ದಿನಗಳಲ್ಲಿ (೧೯೭೫) ಕಸ್ತೂರಿಯ ಪುಸ್ತಕ ಪುರವಣಿಯಲ್ಲಿ ಕ್ರಿಕೆಟ್ ಬಗ್ಗೆ ಸುದೀರ್ಘ ಲೇಖನವೊಂದು ಪ್ರಕಟವಾಯಿತು. ವೆಸ್ಟ್ ಇಂಡೀಸಿಗೆ ತೆರಳಿದ ಭಾರತ ತಂಡದ ಅಮೋಘ ಸಾಧನೆಯ ವಿವರಗಳು ಅಲ್ಲಿದುವು. ಅಜಿತ್‌ವಾಡೇಕರ್ ನೇತೃತ್ವದಲ್ಲಿ ವೆಸ್ಟ್‌ಇಂಡೀಸಿಗೆ ತೆರಳಿದ ಭಾರತ ತಂಡ ಅಲ್ಲಿ ಟೆಸ್ಟ್ ಮ್ಯಾಚ್ ಗೆದ್ದು ಇತಿಹಾಸ ಬರೆಯಿತು. ಗವಾಸ್ಕರ್ ಎಂಬ ಪ್ರತಿಭೆ ಉದಯಿಸಿದ್ದು ಆ ಸರಣಿಯಲ್ಲಿ.  ಗವಾಸ್ಕರ್,  ದಿಲೀಪ್ ಸರ್ದೇಸಾಯಿ, ಸೋಲ್ಕರ್ ಆಟದ ವಿವರಗಳು, ಚಂದ್ರಶೇಖರ್ ಎಂಬ ಮಾಂತ್ರಿಕನ ಕೈಚಳಕ.. ಎಲ್ಲವನ್ನು ವಿವರವಾಗಿ ಬಣ್ಣಿಸುವ ಆ ಲೇಖನವನ್ನು ಯಾರು ಬರೆದದ್ದೆಂದು ಈಗ ನೆನಪಾಗುತ್ತಿಲ್ಲ. ಇಂದು ಮುರಳೀಧರನ್ ಹೇಗೋ ಪ್ರಾಯಶ: ಚಂದ್ರಶೇಖರ್ ಅಂದು ಇದ್ದರು. ಅವರ ಬಲಗೈ ಮಣಿಗಂಟು ಹೇಗೆ ಬೇಕಾದರೂ ತಿರುಗುತ್ತಿದ್ದುದರಿಂದ &#8211; ಅವರೆಸೆದ ಚೆಂಡು ದಾಂಡಿಗನಿಗೆ (ಬ್ಯಾಟ್ಸ್‌ಮ್ಯಾನ್) ಬೆರಗಾಗುವ ಪರಿಯಲ್ಲಿ ಸರಕ್ಕನೆ ತಿರುಗುತ್ತಿತ್ತಂತೆ.</p>
<p><a href="http://apkrishna.files.wordpress.com/2011/04/1191054160311.jpg"><img title="1191054160311" src="http://apkrishna.files.wordpress.com/2011/04/1191054160311.jpg?w=300&#038;h=270" alt="" width="300" height="270" /></a></p>
<p>ಅಂದು ಟಿವಿ ಇರಲಿಲ್ಲ. ಏನಿದ್ದರೂ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ವೀಕ್ಷಕ ವಿವರಣೆ ಮಾತ್ರ. ಅವು ದೇಶದೊಳಗೆ ಅಥವಾ ಖಂಡಾತರದಾಚೆಯ ಯಾವುದೋ ಅಂಗಣದಲ್ಲಿ ನಡೆಯುತ್ತಿದ್ದ ಕ್ರಿಕೇಟ್ ಆಟವನ್ನು ಬಣ್ಣಿಸುತ್ತ ನಮ್ಮಲ್ಲಿ ಅನೂಹ್ಯ ಕಲ್ಪನೆಗಳನ್ನು ಕಟ್ಟಿಕೊಡುತ್ತಿದ್ದುವು.  ವೆಸ್ಟ್‌ಇಂಡೀಸ್ ಧ್ವೀಪ, ಅಲ್ಲಿನ ವೇಗದ ಅಂಗಣ, ದೈತ್ಯಾಕಾರದ ಬೌಲರುಗಳು, ಅವರೆನ್ನೆದುರಿಸುವ ನಮ್ಮ ಆರಾಧ್ಯ ಆಟಗಾರರು -  ಕಲ್ಪನೆಯ ಮೂಸೆಯಲ್ಲಿ ಬೆರಗಿನ ರಂಗುಗಳು.</p>
<p>ನಮ್ಮ ಬಾಲ್ಯದ ದಿನಗಳಲ್ಲಿ ವಿಶ್ವನಾಥ್, ಗವಾಸ್ಕರ್, ಮೋಹೀಂದರ್,  ಪ್ರಸನ್ನ, ಚಂದ್ರಶೇಖರ್, ಬೇಡಿ, .. ಇವರೆಲ್ಲ ಆರಾಧ್ಯ ಆಟಗಾರರು. ಅವರೆಲ್ಲ ಹೀಗೆ ವರ್ಷವರ್ಷಗಳು ಉರುಳುರುಳಿದರೂ ಆಟವಾಡುತ್ತಲೇ ಇರುವ ಅಜರಾಮರರೆಂದೇ ತಿಳಿದಿದ್ದ ಮುಗ್ದ ದಿನಗಳು. &#8221; ಪ್ರಸನ್ನ ವಿಕೆಟ್ ಬಳಿ ಇಟ್ಟ ಒಂದು ನಾಣ್ಯವನ್ನಿರಿಸಿದರೆ ಎಲ್ಲ ಚೆಂಡುಗಳನ್ನು ಅದರ ಮೇಲೆಸೆದು ತಿರುಗಿಸುವ ಸ್ಪಿನ್ನರ್&#8221; ಎಂಬ ಹಾಗೆ ನನ್ನ ಅಣ್ಣ ತಾನೇ ಸ್ವತ: ಪ್ರಸನ್ನನ ಆಟ ನೋಡಿ ಬಂದವರ ಹಾಗೆ ವಿವರಿಸುತ್ತಿದ್ದಾಗ ಬೆಕ್ಕಸಬೆರಗಾಗಿ ಕೇಳುತ್ತಿದ್ದೆವು. ವಿಶ್ವನಾಥ್ ಬಗೆಗೆ ಎಲ್ಲಿಲ್ಲದ ಅಭಿಮಾನ. ಅವರೊಬ್ಬ ಕಲಾತ್ಮಕ ಆಟಗಾರ, ಆಪದ್ಭಾಂಧವ, ಅಪ್ಪಟ ಸಜ್ಜನ .. ಎಂಬಿತ್ಯಾದಿ ವಿವರಗಳು ಪತ್ರಿಕೆಯಲ್ಲೆಲ್ಲ ಪ್ರಕಟವಾಗುತ್ತಿದ್ದುವು. ಕಾನ್ಪುರದ ಅಂಗಣದಿಂದ ಶತಕದೊಂದಿಗೆ ಅಡಿ ಇಟ್ಟ ಗುಂಡಪ್ಪ ಕ್ರಿಕೇಟ್ ಮಟ್ಟಿಗೆ ಕವಿಯೇ ಆದಂತಿದ್ದ. ರಾಜನ್ ಬಾಲಾ, ಆರ್ ಮೋಹನ್, ನಿರ್ಮಲ್‌ಶೇಖರ್ ಬರೆಯುತ್ತಿದ್ದ ವರದಿಗಳಿಂದ,  ಸುರೇಶ್ ಸರಯ್ಯ, ಅನಂತ್ ಸೆಟ್ಲವಾಡ್, ದೋಷಿ ಕಮೆಂಟ್ರಿಯಿಂದ ನಮ್ಮ ಆರಾಧ್ಯ ಮೂರ್ತಿಗಳ ಆಟವನ್ನು ಊಹಿಸಿಕೊಂಡು ಮುದಗೊಳ್ಳುತ್ತಿದ್ದ ದಿನಗಳನ್ನು ಈಗ ನೆನಪಿಸಿಕೊಂಡಾಗ ಕೊಡುವ ಖುಷಿ ಅನನ್ಯವಾದದ್ದು.</p>
<p>೧೯೭೫ರ ಸರಣಿ ಇರಬೇಕು.  ವೆಸ್ಟಿಂಡೀಸಿನ ತಂಡ ಭಾರತಕ್ಕೆ ಬಂತು. ಕ್ಲೈವ್‌ಲಾಯ್ಡ್ ಎಂಬ ದಿಗ್ಗಜ ಮುಂಬೈಯಲ್ಲಿ ಟೆಸ್ಟಿನಲ್ಲಿ ಇನ್ನೂರೈವತ್ತು ರನ್ನು ಬಾರಿಸಿದ್ದು ಅಂದು ದೊಡ್ಡ ಸುದ್ದಿಯಾಯಿತು. ಕಲ್ಕತ್ತಾದಲ್ಲಿ ವಿಶ್ವನಾಥ್ ಗಳಿಸಿದ ಶತಕ, ವಿವಿಯನ್ ರಿಚರ್ಡ್ಸ್ ಎಂಬ ಪ್ರತಿಭೆ ಬಾರಿಸಿದ ಶತಕಗಳು ಪತ್ರಿಕೆಗಳಲ್ಲೆಲ್ಲ ರಾರಾಜಿಸಿದುವು. ಇವೆಲ್ಲವುಗಳನ್ನು ಮೀರಿಸಿದ ಕಲಾತ್ಮಕ ಆಟವೊಂದನ್ನು ವಿಶ್ವನಾಥ್ ಆಡಿದ್ದು ಮದ್ರಾಸಿನ ಚಿಪಾಕ್ ಅಂಗಣದಲ್ಲಿ.  ಅಂದು ವೆಸ್ಟ್‌ಇಂಡೀಸಿನಲ್ಲಿತ್ತು ಪೇಸ್ ಬ್ಯಾಟರೀ (ವೇಗದ ಬೌಲರುಗಳ ದಂಡು). ಆಂಡೀ ರಾಬರ್ಟ್ಸ್, ಜೋಯೆಲ್ ಗಾರ್ನರ್, ಮೈಕ್ ಹೋಲ್ಡಿಂಗ್, ಮಾರ್ಷಲ್!   ಪುಟಿದೆದ್ದು ಬರುತ್ತಿರುವ ಬೌನ್ಸರುಗಳನ್ನೆದುರಿಸಿ ಆಡಬೇಕಾಗಿತ್ತು &#8211; ಭುಜಕ್ಕೆ, ಪಕ್ಕೆಗೆ ಪ್ಯಾಡ್ ಕಟ್ಟಿಕೊಳ್ಳದೇ, ತಲೆಗೆ ಹೆಲ್ಮೆಟ್ ಧರಿಸಿಸದೇ. ತಲೆಗೆ ಚೆಂಡು ಬಡಿದರೆ ಕಥೆ ಮುಗಿದ ಹಾಗೆಯೇ (ನಾರೀಕಂಟ್ರಾಕ್ಟರ್ ತಲೆ ಒಡೆದುಕೊಂಡಡ್ಡು,  ಚ್ಯಾಟ್ಫೇಲ್ದ್ ಕ್ರಿಕೆಟಿಗೆ ವಿದಾಯ ಹೇಳಿದ್ದು, ಫೀಲ್ದಿಂಗ್ ಮಾಡುತ್ತಿದ್ದ ರಮನ್ ಲಂಬಾ ಇಹವನ್ನೇ ತ್ಯಜಿಸಿದ್ದು ಕಲ್ಲಿನಂಥ ಕ್ರಿಕೆಟ್ ಚೆಂಡಿನ ಬಡಿತಕ್ಕೆ)  ಅಂಥ ಘಟಾನುಘಟಿಗಳ  ವಿರುದ್ಧ ಗುಂಡಪ್ಪ ವಿಶ್ವನಾಥ್ ಅಜೇಯ ೯೭ ರನ್ನು ಹೊಡೆದರು. ಅದೊಂದು ಬಣ್ಣಿಸುವುದಕ್ಕೆ ನಿಲುಕದ  ಆಟವೆಂದು ಅಂದು ಎಲ್ಲ ಪತ್ರಿಕೆಗಳು  ಬರೆದುವು. ಇಂದು ಟಿವಿಯಲ್ಲಿ ನೋಡುತ್ತೇವೆ ಒಬ್ಬ ಬ್ಯಾಟ್ಸ್‌ಮ್ಯಾನ್ ಐವತ್ತು ರನ್ನುಗಳನ್ನು ಹೊಡೆದಾಗ ಪರದೆಯಲ್ಲಿ ಆತ ಗಳಿಸಿದ ರನ್ನುಗಳನ್ನು ಬಣ್ಣಿಸುವ &#8220;ವ್ಯಾಗನ್ ವೀಲು&#8221; ಕಾಣಿಸುತ್ತದೆ. ಅದೇ ಬಗೆಯಲ್ಲಿ   ಅಂದು ವಿಶ್ವನಾಥ್</p>
<p>ಹೊಡೆದ ರನ್ನುಗಳ ವಿವರಗಳು &#8220;ಪ್ರಜಾಮತ ಪತ್ರಿಕೆಯಲ್ಲಿ&#8221; ಪ್ರಕಟವಾಗಿದ್ದು ಈ ಹೊತ್ತಿನಲ್ಲಿ ನೆನಪಾಗುತ್ತಿದೆ.</p>
<p><a href="http://apkrishna.files.wordpress.com/2011/04/vishwanath1.jpg"><img title="vishwanath" src="http://apkrishna.files.wordpress.com/2011/04/vishwanath1.jpg?w=267&#038;h=300" alt="" width="267" height="300" /></a><a href="http://apkrishna.files.wordpress.com/2011/04/vishwanath1.jpg"></a></p>
<p><a href="http://apkrishna.files.wordpress.com/2011/04/415.jpg"><img class="size-medium wp-image-508 alignleft" title="Richards " src="http://apkrishna.files.wordpress.com/2011/04/415.jpg?w=300&#038;h=183" alt="" width="300" height="183" /></a></p>
<p><a href="http://apkrishna.files.wordpress.com/2011/04/415.jpg"></a></p>
<p>ಬಲಿಷ್ಟ ವೆಸ್ಟ್‌ಇಂಡೀಸ್ ವಿರುದ್ಧ ಅದರ ನೆಲದಲ್ಲಿಯೇ &#8211; ಫೋರ್ಟ್‌ಆಫ್ ಸ್ಪೇಯಿನಲ್ಲಿ &#8211; ಭಾರತ ಗಳಿಸಿದ  ಅತ್ಯಧ್ಬುತ ಗೆಲುವು ರೋಚಕ ಅನುಭವ ಕಟ್ಟಿಕೊಟ್ಟಿತು. ದಿನವೊಂದರಲ್ಲಿ &#8211; ಅಂದರೆ ಸುಮಾರು ಮುನ್ನೂರೆಂಬತ್ತು ನಿಮಿಷಗಳಲ್ಲಿ &#8211; ಭಾರತದ ಗೆಲುವಿಗೆ ೪೦೪ ರನ್ನುಗಳ ಸವಾಲನ್ನು ವೆಸ್ಟ್‌ಇಂಡೀಸ್ ಒಡ್ಡಿತು. ಸಂಜೆ ಎಂಟರ ಹೊತ್ತಿಗೆ ರೇಡಿಯೋದಲ್ಲಿ ಕಮೆಂಟ್ರಿ ಆರಂಭ.  ಟೊನೀಕೋಝಿಯರ್, ಸುರೇಶ್ ಸರಯ್ಯ, ಅನಂತ್ ಸೆಟ್ಲ್‌ವಾಡ್ ಫೋರ್ಟ್‌ಆಫ್ ಸ್ಪೇಯಿನ ಆಟವನ್ನು ಬಿತ್ತರಿಸುತ್ತಿರುವಂತೆ ಗವಾಸ್ಕರ್, ಅಮರನಾಥ್ ದಿಟ್ಟತನದಿಂದ ರನ್ನು ಪೇರಿಸತೊಡಗಿದರು. ಹೊತ್ತು ಕಳೆದಂತೆ ಇಲ್ಲಿ ನಮಗೆ ನಿದ್ರೆ ಕೇಳಬೇಕಲ್ಲ. ನಿದ್ದೆಗೆ ಜಾರಿದೆವು. ಬೆಳ್ಳಂಬೆಳಗ್ಗೆ ಎದ್ದು ರೇಡಿಯೋ ಆನ್ ಮಾಡಿದರೆ, ಆಶ್ಚರ್ಯ &#8211; ಭಾರತ ಗೆಲುವಿನಂಚಿಗೆ ಬಂದಿತ್ತು -  ಬಿರುಸಿನ ಆಟಗಾರ ಬ್ರಿಜೇಶ್ ಪಟೇಲ್ ಆಡುತ್ತಿದ್ದ. ನೋಡುತ್ತಿರುವಂತೆ &#8211; ಅಲ್ಲಲ್ಲ ಕೇಳುತ್ತಿರುವಂತೆ -  ಬ್ರಿಜೇಶ್ ಆಟ ಗೆಲುವು ತಂದೇ ಬಿಟ್ಟಿತು. ಆ ಐತಿಹಾಸಿಕ &#8220;ರನ್ ಚೇಸ್ ಆಟ&#8221;ದಲ್ಲಿ ಗವಾಸ್ಕರ್ ಮತ್ತು ವಿಶ್ವನಾಥ್ ಇಬ್ಬರೂ ಶತಕ ಬಾರಿಸಿದರೆ,  ಮೊಹಿಂದರ್ ಎಂಬತ್ತರ ಆಸು ಪಾಸಿನ ರನ್ನು ಗಳಿಸಿದರು.</p>
<p><a href="http://apkrishna.files.wordpress.com/2011/04/415.jpg"></a><a href="http://apkrishna.files.wordpress.com/2011/04/100636.jpg"><img title="ES Prsanna " src="http://apkrishna.files.wordpress.com/2011/04/100636.jpg?w=214&#038;h=275" alt="" width="214" height="275" /></a></p>
<p><a href="http://apkrishna.files.wordpress.com/2011/04/100636.jpg"></a></p>
<p>ಎಂಬತ್ತರ ದಶಕದಲ್ಲಿ ಭಾರತ ಪಾಕಿಸ್ಥಾನಕ್ಕೆ ತೆರಳಿತು. ಅದೊಂದು ಎರಡು ದೇಶಗಳ ನಡುವೆ ಪೂರ್ಣ ಪ್ರಮಾಣದ ಕ್ರಿಕೆಟ್ ಸರಣಿ. ಮುದಸ್ಸರ್ ನಝರ್, ಜಹೀರ್ ಅಬ್ಬಾಸ್, ಜವೇದ್ ಮಿಯಂದಾದ್‌ರಂಥ ಅಪ್ರತಿಮ ದಾಂಡಿಗರಿದ್ದ, ಇಮ್ರಾನ್ ಖಾನ್, ಸರ್‌ಫ್ರಾಜ್ ನವಾಜ್, ಸಿಕಂದರ್ ಭಕ್ತ್‌ರಂಥ ಶ್ರೇಷ್ಠ ವೇಗದ ಬೌಲರುಗಳಿದ್ದ ಪಾಕಿಸ್ಥಾನ ತಂಡದೆದುರು ಹೆಚ್ಚಿನ ಎಲ್ಲ ಟೆಸ್ಟ್‌ಗಳಲ್ಲಿ &#8211; ನನಗೆ ನೆನಪಿರುವ ಹಾಗೆ &#8211; ಭಾರತ ಹೀನಾಯವಾಗಿ ಸೋಲು ಗಳಿಸುವುದರೊಂದಿಗೆ ಬೇಡಿ, ಚಂದ್ರಶೇಖರ್ .. ಎಂಬ ಸ್ಪಿನ್ನರುಗಳ ಯುಗಾಂತ್ಯವಾಯಿತು. ವಿಶ್ವನಾಥ್ ಎಂಬ ಕಲಾತ್ಮಕ ಆಟಗಾರ ನೇಪಥ್ಯಕ್ಕೆ ಸರಿಯಬೇಕಾಯಿತು.</p>
<p>ಆ ಹೊತ್ತಿಗೆ ನಮ್ಮೂರುಗಳಲ್ಲಿ ಅಲ್ಲಲ್ಲಿ ಟಿವಿ ಬಂದುವು.  ದೂರದೆಲ್ಲೆಲ್ಲೋ ನಡೆಯುವ ಆಟಗಳು ಟಿವಿಯಲ್ಲಿ ಕಾಣಿಸಿಳಿಸಿಕೊಳ್ಳತೊಡಗಿದುವು. ಐವತ್ತು ಓವರುಗಳ ಒನ್‌ಡೇ ಮ್ಯಾಚುಗಳ ಅವತಾರವಾಯಿತು. ನಮಗೆ ಹೊಸ ಕುತೂಹಲ, ಅಚ್ಚರಿ. ಟಿವಿ ಇರುವಲ್ಲಿ ಜನ ಸೇರತೊಡಗಿದರು. ಅಲ್ಲಿಯೇ ಮಹಾಭಾರತ ಮತ್ತು ರಾಮಾಯಣ. ಕಮೆಂಟ್ರಿ ಕೇಳಿಯೇ ಬೆಳೆದ ಮಂದಿಗೆ ಗೊಂದಲ.  ಟಿವಿಯಲ್ಲಿ ಆಟ ಪ್ರಸಾರವಾಗುತ್ತಿದ್ದಾಗ, ಅದರಲ್ಲಿ ಬರುವ ವೀಕ್ಷಕ ವಿವರಣೆಯನ್ನು ಸ್ತಬ್ದಗೊಳಿಸಿ, ರೇಡಿಯೋ ಕಮೆಂಟ್ರಿ ಹಾಕಿಕೊಂಡು  ಎಷ್ಟೋ ಮಂದಿ ಕ್ರಿಕೇಟ್ ಆಟ ಸವಿಯುತ್ತಿದ್ದುದುಂಟು!</p>
<p>ಏಕದಿನ ಕ್ರಿಕೆಟ್ ಆರಂಭವಾದಾಗ ನಮ್ಮದೇಶ ಈ ಹೊಸ ಬಗೆಯ ಕ್ರಿಕೆಟ್ಟಿಗೆ ನಿಧಾನವಾಗಿ ಓಗ್ಗಿಕೊಳ್ಳತೊಡಗಿತು. ಆರಂಭದ ವಿಶ್ವಕಪ್‌ಗಳಲ್ಲಿ ನಮ್ಮದು ತೀರ ಸಾಮಾನ್ಯ ಪ್ರದರ್ಶನ. ಗವಾಸ್ಕರ್ ಅಂತ ಮಹಾನ್ ಆಟಗಾರ ಇಡೀ ಐವತ್ತು ಓವರುಗಳ ಆಟವಾಡಿ ಬರೋಬ್ಬರಿ ಮೂವತ್ತೈದರ ಆಸುಪಾಸಿನಷ್ಟು ರನ್ನು ಗಳಿಸಿದ್ದಕ್ಕೆ ಟೀಕೆಗಳ ಮಹಾಪೂರವೇ ಬಂತು.</p>
<p><img src="http://www.clbuzz.com/wp-content/uploads/2010/02/Sachin-Tendulkar.jpg" alt="" /></p>
<p>ಈ ನಡುವೆ ೧೯೮೩ರ ವಿಶ್ವಕಪ್ ನಲ್ಲಿ ಇಂಗ್ಲೆಂಡಿನಲ್ಲಿ ಭಾರತ ತಂಡ ಅಸಾಧಾರಣ ಪ್ರದರ್ಶನ ನೀಡಿತು &#8211; ಕಪಿಲ್‌ದೇವ್ ಎಂಬ ಸುಂಟರಗಾಳಿಯ ನೇತೃತ್ವದಲ್ಲಿ. ಈ ಸವ್ಯಸಾಚಿ (ಆಲ್‌ರೌಂಡರ್) ಝಿಂಬಾಬ್ವೇ ವಿರುದ್ಧ ದಾಂಡಿಗನಾಗಿ ೧೭೫ರನ್ನುಗಳನ್ನು ಗಳಿಸಿ ಭಾರತಕ್ಕೆ ಅಮೋಘ ಜಯ ತಂದದ್ದು ನಮಗೆ ತಿಳಿದದ್ದು ಮರುದಿನ ಪೇಪರುಗಳಲ್ಲಿ. ಫೈನಲ್ಸ್‌ನಲ್ಲಿ ಬಲಿಷ್ಟ ವೆಸ್ಟ್‌ಇಂಡೀಸ್ ತಂಡವನ್ನು ಮಣಿಸಿ ಭಾರತ ವಿಶ್ವಕಪ್ ಗೆದ್ದಾಗ  ದೇಶ ಸಂಭ್ರಮ ಪಟ್ಟಿತು. ಆದರೆ ಅಂದು ಇಂದಿನಷ್ಟು ಟಿವಿಯ ಮಾಯಾಜಾಲ ವ್ಯಾಪಕವಾಗಿರಲಿಲ್ಲ. ಜಗತ್ತು ಸಾಕಷ್ಟು ದೊಡ್ದದಾಗಿಯೇ ಇತ್ತು. &#8220;ಕಪಿಲ್ದೇವ್ ಡೆವಿಲ್ಸ್&#8221; ವಿಶ್ವಕಪ್ ಗೆದ್ದದ್ದು ನಮ್ಮನ್ನು ತಲುಪಿದ್ದು ಬಾನುಲಿಯ ಮೂಲಕ, ಪತ್ರಿಕೆಗಳ ಮೂಲಕ.</p>
<p><a href="http://apkrishna.files.wordpress.com/2011/04/kapildev.jpg"><img title="KapilDev" src="http://apkrishna.files.wordpress.com/2011/04/kapildev.jpg?w=300&#038;h=234" alt="" width="300" height="234" /></a><a href="http://apkrishna.files.wordpress.com/2011/04/415.jpg"></a></p>
<p><a href="http://apkrishna.files.wordpress.com/2011/04/teamceleb3x2_get.jpg"><img title="teamceleb3x2_get" src="http://apkrishna.files.wordpress.com/2011/04/teamceleb3x2_get.jpg?w=300&#038;h=200" alt="" width="300" height="200" /></a></p>
<p>ನಂತರದ ಕೆಲವೇ ವರ್ಷಗಳಲ್ಲಿ ಜೀವನದ ರೀತಿಯೊಂದಿಗೆ ಕ್ರಿಕೇಟ್ ಸ್ವರೂಪವೇ ಬದಲಾಯಿತು.  ಕಪ್ಪು -ಬಿಳುಪಿನ ಟಿವಿ ಹೋಗಿ  ಬಣ್ಣದ ಟಿವಿಗಳು ಉದಯಿಸಿದುವು. ಬಣ್ಣದ ಟಿವಿಯಲ್ಲಿ ಆಟವೂ ರಂಗು ರಂಗೀನವಾಗಬೇಕು. ಬಿಳಿ ಉಡುಪಿನ ಬದಲಿಗೆ ಬಣ್ಣದ ಉಡುಗೆಗಳು ಬಂದುವು. ಭಾರತ ನೀಲಿಗೆ ಒಪ್ಪಿಕೊಂಡರೆ, ಪಾಕಿಸ್ಥಾನ ಹಸಿರುಡುಗೆಗೆ, ಆಸ್ಟ್ರೇಲಿಯಾ ಹಳದಿಗೆ. ಇನ್ನೂ ಆಟ ರಂಗೇರಲು ಹೊನಲು ಬೆಳಕಿನ ಪಂದ್ಯಗಳು ಆರಂಭವಾದುವು. ಜಾಹಿರಾತು ಮತ್ತು ಹಣದ ಹುಚ್ಚು ಪ್ರವಾಹದಲ್ಲಿ ಕ್ರಿಕೇಟ್ ತೇಲುತ್ತಿದೆ.. ಐದು ದಿನಗಳ ಆಟಕ್ಕೆ ಸಡ್ಡು ಹೊಡೆಯುವಂತೆ ಬಂದ ಸೀಮಿತ ಓವರುಗಳ ಕ್ರಿಕಟಿನ ಹೊಸ ಅವತಾರವಾಗಿ ಇಪ್ಪತ್ತು ಓವರುಗಳ ಪಂದ್ಯಗಳು ಶುರುವಾಗಿವೆ. ಖುಷಿಯ ಮತ್ತೇರಿಸಲು ಹಾಡುಗಳ ನಡುವೆ ಮಾನಿನಿಯರ ನೃತ್ಯವೂ ಮೇಳೈಸಿಕೊಂಡಿದೆ. ವಿಕೆಟ್ ಬಿದ್ದಾಗ, ಶತಕ ಹೊಡೆದಾಗ, ಪಂದ್ಯ ಗೆದ್ದಾಗ ಆಟಗಾರ ಸಂಭ್ರಮ, ಪ್ರೇಕ್ಷಕರ ಖುಷಿಗಳೆಲ್ಲ ಟಿವಿಯ ಮೂಲಕ  ಮನೆ ಮನೆಗೆ ತಲುಪುವ ಹೊತ್ತಿನಲ್ಲಿ ಸಾಕಷ್ಟು ಅಭಿನಯಾವಕಾಶಗಳು ತೆರೆದುಕೊಂಡಿವೆ. ಇವೆಲ್ಲವುಗಳ ನಡುವೆ ಆಟದ ಮುಗ್ದತೆ ಎಲ್ಲೋ ಮಾಯವಾದಂತಿದೆ.</p>
<p>ಉದ್ದಿಮೆಯ ಪ್ರಭುಗಳು ಇಂದು ಕ್ರಿಕೆಟ್ ಆಟಕ್ಕೆ ಹಣ ಸುರಿಯುವುದಷ್ಟೇ ಅಲ್ಲ, ಅಂಗಣದಲ್ಲಿಯೇ ಕಾಣಿಸಿಕೊಳ್ಳತೊಡಗಿದ್ದಾರೆ. ಹೀಗೆಯೇ ಆಟ ಆಡಬೇಕು ಎನ್ನುವ ತಾಕೀತು ತಕರಾರು ಮಾಡತೊಡಗಿದ್ದಾರೆ. ಟಿವಿಯ ಮೂಲಕ ಕೋಟ್ಯಾಂತರ ವೀಕ್ಷಕರನ್ನು ತಲುಪಬಹುದಾದ ಕಾರಣದಿಂದಲೋ ಏನೋ &#8211; ಹಾಲಿವುಡ್, ಬಾಲಿವುಡ್ ಮಂದಿ, ರಾಜಕಾರಣದ ಮಂದಿ ಮಾಗಧರೆಲ್ಲ ಇಂದು ಕ್ರಿಡಾಂಗಣದಲ್ಲಿ ತುಂಬಿ ತುಳುಕುತ್ತಿರುವಾಗ ಕ್ರಿಕೆಟ್ ಆಟದ ನಿಜ ಅಭಿಮಾನಿಯಾದ ಜನಸಾಮಾನ್ಯ ಅಂಗಣದ ಹೊರಗೆ ಬೆರಗಿನಿಂದ ನಿಂತು ನೋಡುತ್ತಿದ್ದಾನೆ &#8211; ಆರ್ ಕೆ. ಲಕ್ಷ್ಮಣ್ ರೂಪಿಸಿದ ಜನಸಾಮಾನ್ಯನ ಹಾಗೆ.</p>
<p><img src="http://mukeshambani.com/wp-content/uploads/2011/02/mukesh-ambanis_reliance.jpg" alt="" width="445" height="321" /></p>
<p>ಟಿವಿಯಲ್ಲಿ ಮೊನ್ನೆ ಮೊನ್ನೆ ವಿಶ್ವಕಪ್ ಮುಗಿಯಿತು. ಭಾರತ ತಂಡ ಗೆದ್ದು ಹರ್ಷದ ಹೊನಲು ಹರಿಯಿಸಿದೆ. ಚ್ಯಾನೆಲ್ಲುಗಳಲ್ಲಿ ಈ ಬಗ್ಗೆ ಭರದಿಂದ ಚರ್ಚೆಗಳು, ಸಂವಾದಗಳು ನಡೆಯುತ್ತಿವೆ. ಅಭಿಮಾನಿಗಳ ಉನ್ಮಾದ ಹುಚ್ಚೇರಿ ಹರಿದಿದೆ.  ಈ ಎಲ್ಲ ಸಂತೋಷ ಅಭಿಮಾನಗಳು ಸಹಜ. ತಪ್ಪೇನೂ ಇಲ್ಲ. ಸದಾ ಗಂಭೀರರಾಗಿಯೇ ಚಿಂತನೆಯಲ್ಲಿ ಇರುವುದು ಅಥವಾ ಚಿಂತೆಯಲ್ಲಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅದರ ಸವಿ ಮುಗಿಯುವುದರೊಳಗೆ ಇನ್ನೊಂದು ಕ್ರಿಕಟ್ ಸರಣಿ &#8211; ಐಪಿಎಲ್ ಆರಂಭವಾಗಲಿದೆ.  ನಮ್ಮ ಮಕ್ಕಳು  ಮತ್ತೆ ತಯಾರಾಗುತ್ತಿದ್ದಾರೆ ಇನ್ನೊಂದು ಕ್ರಿಕೇಟ್ ಜ್ವರ ತಗಲಿಸಿಕೊಳ್ಳಲು!</p>
<p>ಓಹ್, ಅದೆಷ್ಟು ಪಂದ್ಯಗಳು. ಹೆಚ್ಚಿನದೆಲ್ಲವೂ ಹೊನಲು ಬೆಳಕಿನ ಅಹರ್ನಿಶಿ ಪಂದ್ಯಗಳು. ಒಂದೆಡೆ ವಿದ್ಯುತ್ ಬರ, ಇನ್ನೊಂದೆಡೆ ಈ ಆಟಗಳು! ಬಯಲಿಗಿಳಿದು ಆಟವಾಡುವ ಮಕ್ಕಳಿಗೆ ಕುರುಕುರೆ ತಿನ್ನುತ್ತ, ಐಸ್ ಕ್ರೀಮ್ ಕ್ಯಾಡ್‌ಬರೀಯೊಂದಿಗೆ ಪೆಪ್ಸೀ, ಕೊಕ್ ಕುಡಿಯುತ್ತ, ಹೆಗೇಗೋ ಕೈಕಾಲು ಸುತ್ತಿಕೊಂಡು  ಬಿದ್ದುಕೊಂಡು ಟಿವಿಯ ಆಟವನ್ನು ಬಿಡುಗಣ್ಣರಾಗಿ ನೋಡುವ ಸಂಭ್ರಮ. ಬಗೆ ಬಗೆಯ ಆಟೋಟಗಳಿಂದ ತುಂಬ ಬೇಕಾದ ಶಾಲೆ &#8211; ಕಾಲೇಜುಗಳ  ಆಟದ ಬಯಲುಗಳು ಸಂಜೆಯ ಹೊತ್ತಿನಲ್ಲಿಯೂ  ಬಿಕೋ ಎನ್ನುತ್ತಿವೆ. ಎಲ್ಲೋ ಒಂದು ಕಡೆ ನಾವು ಎಡಹುತ್ತಿದ್ದೇವೆ. ಹೆಚ್ಚಾದರೆ ಅಮೃತವೂ ವಿಷ ಅನ್ನುವ ಪ್ರಜ್ಞೆ ಜಾಗೃತವಾಗಿರಬೇಕು.</p>
<p><a href="http://apkrishna.files.wordpress.com/2011/04/415.jpg"></a></p>
<p><a href="http://apkrishna.files.wordpress.com/2011/04/415.jpg"></a></p>
<p><a href="http://apkrishna.files.wordpress.com/2011/04/kapildev.jpg"></a><a href="http://apkrishna.files.wordpress.com/2011/04/415.jpg"></a></p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/499/"><img alt="" border="0" src="http://feeds.wordpress.com/1.0/comments/apkrishna.wordpress.com/499/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/499/"><img alt="" border="0" src="http://feeds.wordpress.com/1.0/delicious/apkrishna.wordpress.com/499/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/499/"><img alt="" border="0" src="http://feeds.wordpress.com/1.0/facebook/apkrishna.wordpress.com/499/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/499/"><img alt="" border="0" src="http://feeds.wordpress.com/1.0/twitter/apkrishna.wordpress.com/499/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/499/"><img alt="" border="0" src="http://feeds.wordpress.com/1.0/stumble/apkrishna.wordpress.com/499/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/499/"><img alt="" border="0" src="http://feeds.wordpress.com/1.0/digg/apkrishna.wordpress.com/499/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/499/"><img alt="" border="0" src="http://feeds.wordpress.com/1.0/reddit/apkrishna.wordpress.com/499/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=499&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/04/14/%e0%b2%b0%e0%b2%82%e0%b2%97%e0%b3%81-%e0%b2%b0%e0%b2%82%e0%b2%97%e0%b2%bf%e0%b2%a8-%e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d/feed/</wfw:commentRss>
		<slash:comments>8</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2011/04/india-won-the-world-cup-2011-e1301858296602.jpg?w=300" medium="image">
			<media:title type="html">India-Won-The-World-Cup-2011-e1301858296602</media:title>
		</media:content>

		<media:content url="http://apkrishna.files.wordpress.com/2011/04/635272.jpg?w=188" medium="image">
			<media:title type="html">63527</media:title>
		</media:content>

		<media:content url="http://apkrishna.files.wordpress.com/2011/04/dscn24451.jpg?w=300" medium="image">
			<media:title type="html">DSCN2445</media:title>
		</media:content>

		<media:content url="http://apkrishna.files.wordpress.com/2011/04/1191054160311.jpg?w=300" medium="image">
			<media:title type="html">1191054160311</media:title>
		</media:content>

		<media:content url="http://apkrishna.files.wordpress.com/2011/04/vishwanath1.jpg?w=267" medium="image">
			<media:title type="html">vishwanath</media:title>
		</media:content>

		<media:content url="http://apkrishna.files.wordpress.com/2011/04/415.jpg?w=300" medium="image">
			<media:title type="html">Richards </media:title>
		</media:content>

		<media:content url="http://apkrishna.files.wordpress.com/2011/04/100636.jpg?w=215" medium="image">
			<media:title type="html">ES Prsanna </media:title>
		</media:content>

		<media:content url="http://www.clbuzz.com/wp-content/uploads/2010/02/Sachin-Tendulkar.jpg" medium="image" />

		<media:content url="http://apkrishna.files.wordpress.com/2011/04/kapildev.jpg?w=300" medium="image">
			<media:title type="html">KapilDev</media:title>
		</media:content>

		<media:content url="http://apkrishna.files.wordpress.com/2011/04/teamceleb3x2_get.jpg" medium="image">
			<media:title type="html">teamceleb3x2_get</media:title>
		</media:content>

		<media:content url="http://mukeshambani.com/wp-content/uploads/2011/02/mukesh-ambanis_reliance.jpg" medium="image" />
	</item>
		<item>
		<title>ಬೆಳ್ಳುಳ್ಳಿ ಮಾಹಾತ್ಮೆ !</title>
		<link>http://apkrishna.wordpress.com/2011/03/27/%e0%b2%ac%e0%b3%86%e0%b2%b3%e0%b3%8d%e0%b2%b3%e0%b3%81%e0%b2%b3%e0%b3%8d%e0%b2%b3%e0%b2%bf-%e0%b2%ae%e0%b2%be%e0%b2%b9%e0%b2%be%e0%b2%a4%e0%b3%8d%e0%b2%ae%e0%b3%86/</link>
		<comments>http://apkrishna.wordpress.com/2011/03/27/%e0%b2%ac%e0%b3%86%e0%b2%b3%e0%b3%8d%e0%b2%b3%e0%b3%81%e0%b2%b3%e0%b3%8d%e0%b2%b3%e0%b2%bf-%e0%b2%ae%e0%b2%be%e0%b2%b9%e0%b2%be%e0%b2%a4%e0%b3%8d%e0%b2%ae%e0%b3%86/#comments</comments>
		<pubDate>Sun, 27 Mar 2011 03:05:36 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=481</guid>
		<description><![CDATA[ಈ ದಿನ ಉದಯವಾಣಿಯಲ್ಲಿ ನೇಮಿಚಂದ್ರ ತಮ್ಮ ಅಂಕಣದಲ್ಲಿ  ಬರೆದಿದ್ದಾರೆ &#8220;ಬೆಳ್ಳುಳ್ಳಿ ಔಷಧಿಗಳ ಸಹಜ ಸಾಗರ&#8221;   ಓದಿ ಮೆಚ್ಚಿ ಅವರಿಗೆ ಅವರಿಗೆ ಪತ್ರ ಬರೆಯುತ್ತ ನನ್ನ ಅನುಭವವನ್ನು ತಿಳಿಸಿದೆ. ಮೆಚ್ಚುವುದಕ್ಕೆ ಕಾರಣವನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆನುವಂಶಿಕವಾಗಿ ಬಂದ ಬಳುವಳಿ ಇರಬೇಕು. ಹೊಟ್ಟೆ ಉರಿ ಅಥವಾ ಎಸಿಡಿಟಿ ನನಗಿರುವ ತೊಂದರೆ.  ಸುಮಾರು ದಶಕಗಳಿಂದ ಎಸಿಡಿಟಿಯಲ್ಲಿ ನರಳತ್ತಿದ್ದೆ. ಖಾರ ಉಂಡರೆ , ಎಣ್ಣೆಯಲ್ಲಿ ಕರಿದ ಗರಿ ಗರಿ ತಿನಿಸು ತಿಂದರೆ ಸಾಕು &#8211; ಒಂದೆರಡು ದಿನಗಳಲ್ಲಿ ಶುರು &#8211; ಉರಿ- ನೋವು [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=481&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p>ಈ ದಿನ ಉದಯವಾಣಿಯಲ್ಲಿ ನೇಮಿಚಂದ್ರ ತಮ್ಮ ಅಂಕಣದಲ್ಲಿ  ಬರೆದಿದ್ದಾರೆ &#8220;ಬೆಳ್ಳುಳ್ಳಿ ಔಷಧಿಗಳ ಸಹಜ ಸಾಗರ&#8221;   ಓದಿ ಮೆಚ್ಚಿ ಅವರಿಗೆ ಅವರಿಗೆ ಪತ್ರ ಬರೆಯುತ್ತ ನನ್ನ ಅನುಭವವನ್ನು ತಿಳಿಸಿದೆ. ಮೆಚ್ಚುವುದಕ್ಕೆ ಕಾರಣವನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.</p>
<p>ಆನುವಂಶಿಕವಾಗಿ ಬಂದ ಬಳುವಳಿ ಇರಬೇಕು<span style="font-family:Tunga;">. </span>ಹೊಟ್ಟೆ ಉರಿ ಅಥವಾ ಎಸಿಡಿಟಿ ನನಗಿರುವ ತೊಂದರೆ.  ಸುಮಾರು ದಶಕಗಳಿಂದ ಎಸಿಡಿಟಿಯಲ್ಲಿ ನರಳತ್ತಿದ್ದೆ. ಖಾರ ಉಂಡರೆ , ಎಣ್ಣೆಯಲ್ಲಿ ಕರಿದ ಗರಿ ಗರಿ ತಿನಿಸು ತಿಂದರೆ ಸಾಕು &#8211; ಒಂದೆರಡು ದಿನಗಳಲ್ಲಿ ಶುರು &#8211; ಉರಿ- ನೋವು ಇತ್ಯಾದಿ.</p>
<p>ಐದಾರು ವರ್ಷಗಳ ಹಿಂದೆ ಗಂಟಲಿನ ಮೂಲಕ ಉದರದರ್ಶಕ ನಳಿಗೆ ಇಳಿಸಿ ಅಲ್ಲೇನಾದರೂ ಹೊಸ ಒಕ್ಕಲು ಆರಂಭವಾಗಿದೆಯೇ ಎಂದು ನೋಡಬೇಕೆಂದು ಹೇಳಿದಾಗ ಹೌಹಾರಿದೆ.  ಸಹಜವಾಗಿಯೇ ಹೆದರಿಕೆ &#8211; ಅಗೋಚರ  ಹೊಟ್ಟೆಯೊಳಗೆ ಮತ್ತೇನಾದರೂ ಗಡ್ಡೆ ಇರಬಹದೆನ್ನುವ ಗುಮಾನಿ. ಈ ನಡುವೆ ಪ್ರಾಯಕ್ಕೆ ಸಹಜವಾಗಿ ಕೊಲೆಸ್ಟೆರಾಲ್ ಇತ್ಯಾದಿ ಪರೀಕ್ಷೆ ಮಾಡಿಸಬೇಕೆಂದು ಹಲವರ ಸಲಹೆ. ಸರಿ ಬೆಳಗ್ಗೆದ್ದು &#8220;ಹಾಸಿಗೆ ಚಾ&#8221; ಏರಿಸದೇ ನಿರಾಹಾರಿಯಾಗಿ ಪುತ್ತೂರಿಗೆ ಧಾವಿಸಿ ರಕ್ತ ಪರೀಕ್ಷೆ  ಮಾಡಿಸಿದಾಗ ಎಲ್ಲವೂ ಒಂದಷ್ಟು ಏರಿದ್ದನ್ನು ಸಾರಿದುವು.</p>
<p>ಕೊಲೆಸ್ಟೆರಾಲ್ ಅನ್ನುವುದು ನಮ್ಮ ದೇಹದಲ್ಲಿರಬೇಕಂತೆ.  ಇರಬೇಕಾದಷ್ಟೇ ಇದ್ದರೆ ಚಂದ ಮಾರಾಯ್ರೇ. ಹೆಚ್ಚಾದರೆ ಗಡಿಬಿಡಿ ಶುರುವಾಗುತ್ತದಂತೆ.  ಪರೀಕ್ಷೆಯಲ್ಲಿ ನಾನು ಗಳಿಸಿದ ಅಂಕಗಳು ಹೀಗಿದ್ದುವು :</p>
<ul>
<li>ಒಟ್ಟು ಕೊಲೆಸ್ಟೆರಾಲ್ ಅಂಕಗಳು : ೨೬೫ (ಸಜವಾಗಿ ಇರಬೇಕಾದದ್ದು ೧೫೦ &#8211; ೨೫೦ ಮಿಲಿಗ್ರಾಂ/ಡೆಸಿಲೀಟರ್)</li>
</ul>
<ul>
<li>ಟ್ರೈಗ್ಗ್ಲಿಸರೈಡ್ : ೨೩೦ (೧೯೦ರ ತನಕ ಹೋಗಬಹುದು &#8211; ವಾಹನಕ್ಕೆ ವೇಗ ಮಿತಿ ಇದ್ದ ಹಾಗೆ)</li>
</ul>
<ul>
<li>ಹೆಚ್ ಡಿ ಎಲ್ ಕೊಲೆಸ್ಟೆರಾಲ್ : ೫೧.೫  (ಇದು ಹಿರೋ ಅಂತೆ, ಗಂಡಸರಲ್ಲಿ ಇದರ ಸಹಜ ಪ್ರಮಾಣ ೩೫-೫೫, ಹೆಂಗಸರಲ್ಲಿ ೪೫ -೬೫)</li>
</ul>
<ul>
<li>ಎಲ್ ಡಿ ಎಲ್ ಕೊಲೆಸ್ಟೆರಾಲ್ : ೧೪೦.೫ ( ೧೦೦ಕ್ಕಿಂತ ಕಡಿಮೆ ಇದ್ದರೆ ಉತ್ತಮ)</li>
</ul>
<p>ಪಡೆದ ಅಂಕಗಳೊಂದಿಗೆ ನಮ್ಮ ವೈದ್ಯರ ಬಳಿಗೆ ಹೋದೆ. ಅವರು ಅಂಕ ಪಟ್ಟಿಯನ್ನು ಗಮನಿಸುತ್ತ ಹೋದಂತೆ ಇಲ್ಲಿ ನನ್ನ ರಕ್ತದೊತ್ತಡ ಏರುತ್ತಿತ್ತು &#8211; ಅಧ್ಯಾಪಕ ಮಹಾಶಯ ವಿದ್ಯಾರ್ಥಿಯ ಉತ್ತರ ಪತ್ರವನ್ನು ಗಮನಿಸಿದರೆ ಹೇಗೋ ಹಾಗೆ.</p>
<p>ಕೊನೆಯಲ್ಲಿ ಅವರು ಹೇಳಿದರು&#8221; ನೋಡಿ ಇಡೀ ಕೊಲೆಸ್ಟೆರಾಲುಗಳಲ್ಲಿ ಟ್ರೈಗ್ಲಿಸರೈಡ್ ಇದ್ದಾನಲ್ಲ ಇವ  ವಿಲನ್. ನಮ್ಮ ರಕ್ತವನ್ನು ಕೊಂಡೊಯ್ಯುವ ಪೈಪುಗಳಲ್ಲಿ ತುಂಬಿಕೊಳ್ಳುತ್ತ ತೊಂದರೆ ಕೊಡುವ ಇವನ ಬಗ್ಗೆ ಎಚ್ಚರ ಬೇಕು ಅಂತ ನೀವು ಪಡೆದಿರುವ ಕೊಲೆಸ್ಟೆರಾಲ್ ಮಾರ್ಕುಗಳು ಹೇಳುತ್ತವೆ.  ಈ ಮಾತ್ರೆ ತೆಗೆದುಕೊಳ್ಳಿ. ಯಾವುದೇ ದುಷ್ಪರಿಣಾಮ ಇಲ್ಲ&#8221;.</p>
<p>ನಾನು ಅಪ್ಪಟ ಸಸ್ಯಹಾರಿ. ಆಹಾರದಲ್ಲಿ ಕಟ್ಟು ನಿಟ್ಟು &#8211; ತಿಂದದ್ದು ಜೀರ್ಣ ಆಗದಿದ್ದರೆ ಕಟ್ಟುನಿಟ್ಟು ಆಗದೇ ಬೇರೇನು ಮಾಡಬೇಕು? ಹೇಳಿ ಕೇಳಿ ಕೃಷ್ಣ &#8211; ತುಸು ಬೆಣ್ಣೆ ಮತ್ತು ಮೊಸರು ಪ್ರಿಯ. ಅವೆರಡನ್ನು ಪೂರ್ಣ ಬಿಟ್ಟೆ.</p>
<p>ಸರಿ ಮಾತ್ರೆ ತೆಗೆದುಕೊಳ್ಳುವುದಕ್ಕೆ ಆರಂಭಿಸಿದೆ ದಿನದೊಳಗೆ ಅದು ತನ್ನ ಕೆಲಸ ಆರಂಭಿಸಿತೋ ತಿಳಿಯದು &#8211; ತಲೆ ಸುತ್ತತೊಡಗಿತು. ಮೈಕೈ ನೋವು. ಮತ್ತೆ ಓಡಿದೆ ವೈದ್ಯರ ಬಳಿಗೆ. ಆ ಮಾತ್ರೆಯನ್ನು ಮತ್ತರ್ಧ ಮಾಡಿ ತೆಗೆದುಕೊಳ್ಳುವುದಕ್ಕೆ ಸೂಚಿಸಿದರು. ಧೈರ್ಯ ಬರಲಿಲ್ಲ. ಪೂರ್ಣ ಬಿಟ್ಟೆ.</p>
<p>ಇದು ಮಾಹಿತಿ ಯುಗ. ಜಾಲಾಡತೊಡಗಿದೆ &#8211; ಮಾಹಿತಿ ಸಾಗರದಲ್ಲಿ &#8211; ಸಹಜ ಪರಿಹಾರಕ್ಕೆ. ಆಗ ನನಗೆ ಸಿಕ್ಕಿದ್ದು ಬೆಳ್ಳುಳ್ಳಿ.  ಬಹು ಸಂಖ್ಯಾತರು ಸೂಚಿಸಿದ್ದು ಬೆಳ್ಳುಳ್ಳಿಯನ್ನು. ಎಸಿಡಿಟಿ ಮತ್ತು ಕೊಲೆಸ್ಟೆರಾಲ್ ಶೇಖರಣೆಯ ತಡೆಗೆ ಬೆಳ್ಳುಳ್ಳಿ ರಾಮ ಬಾಣವೆನ್ನುವ ಸಂಶೋಧನ ಲೇಖನಗಳು ಕೂಡ ಸಿಕ್ಕಿತು. ಇದರೊಂದಿಗೆ ಮೀನಿನೆಣ್ಣೆಯ ಮಾತ್ರೆ &#8211; cod lever tablet &#8211; ಅತ್ಯುತ್ತಮ.</p>
<p>ಪ್ರಯೋಗ ಆರಂಭಿಸಿದೆ. ಪ್ರತಿ ದಿನ ಬೆಳಗ್ಗೆಎದ್ದೊಡನೆ ಮೂರು ಎಸಳು ಹಸಿ ಹಸಿ ಬೆಳ್ಳುಳ್ಳಿ ಜಗಿದು ನುಂಗಿ ನೀರು ಕುಡಿದೆ!. ರಾತ್ರೆ ಒಂದು cod lever ಮಾತ್ರೆ. ಅಪ್ಪಟ ಸಸ್ಯಹಾರಿ ಮಾಂಸಹಾರಿಯಾದೆ! ಇದರೊಂದಿಗೆ ಹಸಿರು ತರಕಾರೀ ಸೇವನೆ ಹೆಚ್ಚಿಸಿದೆ.</p>
<p><img src="http://kidfriendlyja.files.wordpress.com/2011/03/garlic.jpg?w=640&#038;h=480" alt="" width="640" height="480" /></p>
<p>ಬೆಳ್ಳುಳ್ಳಿ ಅದೆಂಥ ಖಾರ ಘಾಟು ಮಾರಾಯ್ರೇ. ಆದರೂ ಆ ಮಾತ್ರೆಗಿಂತ ಇದು ವಾಸಿ. ಹತ್ತಿರ ಬಿಡಿ &#8211; ಸುದೂರ ಇದ್ದವರಿಗೂ ತೊಂದರೆ. ವಾಸನೆ ಕಡಿಮೆ ಮಾಡಲು ಲವಂಗ ಸೇವನೆ. ಲವಂಗ ಕೂಡ ಎಸಿಡಿಟಿ ಹರ ತಾನೇ! ವಾರ ಕಳೆಯುವುದರೊಳಗೆ ಎಸಿಡಿಟಿಯ ತೊಂದರೆಗಳು ಕಡಿಮೆಯಾಗುತ್ತ ಬಂದ ಅನುಭವ. ತಿಂಗಳೊಳಗೆ ಮಂಗ ಮಾಯ. ದಶಕಗಳಿದ ಕಾಡುತ್ತಿದ್ದ ಹೊಟ್ಟೆ ಉರಿ-ನೋವು ಈಗ ಲವಲೇಶವೂ ಇಲ್ಲ.</p>
<p>ಎರಡೆರಡು ಬಾರಿ ರಕ್ತ ಪರೀಕ್ಷೆ ಮಾಡಿಸಿದೆ. ಈ ಬಾರಿ ದೊರೆತ ಅಂಕಗಳು ಹೀಗಿವೆ</p>
<ul>
<li><em>ಒಟ್ಟು ಕೊಲೆಸ್ಟೆರಾಲ್ ಅಂಕಗಳು <span style="font-family:Tunga;">: </span>೧೫೫,  ಟ್ರೈಗ್ಗ್ಲಿಸರೈಡ್ <span style="font-family:Tunga;">: </span>೧೪೫,  ಹೆಚ್ ಡಿ ಎಲ್ ಕೊಲೆಸ್ಟೆರಾಲ್ <span style="font-family:Tunga;">: </span>೪೫,  ಎಲ್ ಡಿ ಎಲ್ ಕೊಲೆಸ್ಟೆರಾಲ್ <span style="font-family:Tunga;">: </span>೯೬</em></li>
</ul>
<p>ಸ್ಪಷ್ಟವಾಗಿ ಕಡಿಮೆಯಾಗಿ ಎಲ್ಲವೂ ಇಂದು ಮಾಮೂಲಿಗೆ ಬಂದು  ಸದ್ಯಕ್ಕೆ ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣನಾಗಿ ಜಗವ ಗೆದ್ದ ಖುಷಿಯಲ್ಲಿದ್ದೇನೆ.</p>
<p>ಈಗ ಬೆಳ್ಳುಳ್ಳಿ ಸೇವಿಸುವುದನ್ನು ಬಿಟ್ಟಿದ್ದೇನೆ &#8211; ತಪ್ಪೋ ಸರಿಯೋ ತಿಳಿಯದು. ಹೊಟ್ಟೆಯ ತಳಮಳವಾದಾಗ ಮತ್ತೆ ಸೇವಿಸಿದೊಡನೆ ಎಲ್ಲ ನಿರಾಳವಾದ ಅನುಭವ.  ಎಂದೇ ಇದೆಲ್ಲವೂ ಬೆಳ್ಳುಳ್ಳಿಯ ಮಹಿಮೆ ಎಂಬ ನಂಬಿಕೆ ನನಗೆ. ಸರಿಯೇ? &#8211; ತಿಳಿಯದು.</p>
<p>ನಿಮ್ಮ ಅನುಭವ ಏನು?</p>
<p>ರಾಧಾಕೃಷ್ಣ</p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/481/"><img alt="" border="0" src="http://feeds.wordpress.com/1.0/comments/apkrishna.wordpress.com/481/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/481/"><img alt="" border="0" src="http://feeds.wordpress.com/1.0/delicious/apkrishna.wordpress.com/481/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/481/"><img alt="" border="0" src="http://feeds.wordpress.com/1.0/facebook/apkrishna.wordpress.com/481/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/481/"><img alt="" border="0" src="http://feeds.wordpress.com/1.0/twitter/apkrishna.wordpress.com/481/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/481/"><img alt="" border="0" src="http://feeds.wordpress.com/1.0/stumble/apkrishna.wordpress.com/481/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/481/"><img alt="" border="0" src="http://feeds.wordpress.com/1.0/digg/apkrishna.wordpress.com/481/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/481/"><img alt="" border="0" src="http://feeds.wordpress.com/1.0/reddit/apkrishna.wordpress.com/481/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=481&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/03/27/%e0%b2%ac%e0%b3%86%e0%b2%b3%e0%b3%8d%e0%b2%b3%e0%b3%81%e0%b2%b3%e0%b3%8d%e0%b2%b3%e0%b2%bf-%e0%b2%ae%e0%b2%be%e0%b2%b9%e0%b2%be%e0%b2%a4%e0%b3%8d%e0%b2%ae%e0%b3%86/feed/</wfw:commentRss>
		<slash:comments>6</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://kidfriendlyja.files.wordpress.com/2011/03/garlic.jpg" medium="image" />
	</item>
		<item>
		<title>ಭೂಕಂಪಕ್ಕೆ ತತ್ತರ ಪರಮಾಣು ಸ್ಥಾವರ</title>
		<link>http://apkrishna.wordpress.com/2011/03/22/%e0%b2%ad%e0%b3%82%e0%b2%95%e0%b2%82%e0%b2%aa%e0%b2%95%e0%b3%8d%e0%b2%95%e0%b3%86-%e0%b2%a4%e0%b2%a4%e0%b3%8d%e0%b2%a4%e0%b2%b0-%e0%b2%aa%e0%b2%b0%e0%b2%ae%e0%b2%be%e0%b2%a3%e0%b3%81-%e0%b2%b8/</link>
		<comments>http://apkrishna.wordpress.com/2011/03/22/%e0%b2%ad%e0%b3%82%e0%b2%95%e0%b2%82%e0%b2%aa%e0%b2%95%e0%b3%8d%e0%b2%95%e0%b3%86-%e0%b2%a4%e0%b2%a4%e0%b3%8d%e0%b2%a4%e0%b2%b0-%e0%b2%aa%e0%b2%b0%e0%b2%ae%e0%b2%be%e0%b2%a3%e0%b3%81-%e0%b2%b8/#comments</comments>
		<pubDate>Tue, 22 Mar 2011 17:36:22 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=466</guid>
		<description><![CDATA[ಎಂಬತ್ತರ ದಶಕ. ನಾವೆಲ್ಲ ಕಾಲೇಜು ವಿದ್ಯಾರ್ಥಿಗಳು. ಉತ್ತರ ಕನ್ನಡದ ಕಾರವಾರ ಸಮೀಪ ಕಾಳೀ ನದಿಯ ತಟದ ಕಾನನ ಪ್ರದೇಶವಾದ ಕೈಗಾದಲ್ಲಿ ಉದ್ಧೇಶಿತ ಪರಮಾಣು ಸ್ಥಾವರದ ವಿರುದ್ಧ ಪರಿಸರವಾದಿಗಳು ನಡೆಸುತ್ತಿದ್ದ ಶಾಂತಿಯುತ ಹೋರಾಟವನ್ನು ಕುತೂಹಲದಿಂದ ಗಮನಿಸುತ್ತಿದ್ದ ಕಾಲ. ಹೋರಾಟದ ಮುಂಚೂಣಿಯಲ್ಲಿದ್ದ ಶಿವರಾಮ ಕಾರಂತರು ಅಂದು ಅಕ್ಷರಶ: ಭಾರ್ಗವನೇ ಆಗಿದ್ದರು. ನಾಗೇಶ್ ಹೆಗ್ಡೆ, ಕಲ್ಕುಳಿ ವಿಠಲ ಹೆಗ್ಡೆ, ಕ್ಲಾಡ್ ಆಲ್ವಾರಿಸ್, ಶಂಪಾ ದೈತೋಟ ಹೀಗೇ ಹಲವು ಮಂದಿ ಪರಿಸರ ಪ್ರಿಯರು ಅಂದು ಕೈಗಾ ವಿರುದ್ಧ ದನಿ ಎತ್ತಿದ್ದರು. ಪರಮಾಣು ಸ್ಥಾವರ [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=466&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://apkrishna.files.wordpress.com/2011/03/20110312_011946_japan-earthquake_002_500.jpg"></a><a href="http://apkrishna.files.wordpress.com/2011/03/japan_tsunami_2011_fujitsika.jpg"></a><a href="http://apkrishna.files.wordpress.com/2011/03/377731178_2ae63b5f24.jpg"></a><a href="http://apkrishna.files.wordpress.com/2011/03/tsunami-dust-wave.jpg"><img class="alignright size-medium wp-image-473" title="ಜಪಾನಿನಲ್ಲಿ ಎದ್ದ ಟ್ಸುನಾಮೀ " src="http://apkrishna.files.wordpress.com/2011/03/tsunami-dust-wave.jpg?w=300&#038;h=198" alt="" width="300" height="198" /></a><a href="http://apkrishna.files.wordpress.com/2011/03/normal1.jpg"></a><a href="http://apkrishna.files.wordpress.com/2011/03/kaiga-plant-india-unit-1-2.jpg"></a><a href="http://apkrishna.files.wordpress.com/2011/03/seismic20zone20map20of20india.jpg"></a>ಎಂಬತ್ತರ ದಶಕ. ನಾವೆಲ್ಲ ಕಾಲೇಜು ವಿದ್ಯಾರ್ಥಿಗಳು. ಉತ್ತರ ಕನ್ನಡದ ಕಾರವಾರ ಸಮೀಪ ಕಾಳೀ ನದಿಯ ತಟದ ಕಾನನ ಪ್ರದೇಶವಾದ ಕೈಗಾದಲ್ಲಿ ಉದ್ಧೇಶಿತ ಪರಮಾಣು ಸ್ಥಾವರದ  ವಿರುದ್ಧ ಪರಿಸರವಾದಿಗಳು ನಡೆಸುತ್ತಿದ್ದ ಶಾಂತಿಯುತ ಹೋರಾಟವನ್ನು ಕುತೂಹಲದಿಂದ ಗಮನಿಸುತ್ತಿದ್ದ ಕಾಲ.  ಹೋರಾಟದ ಮುಂಚೂಣಿಯಲ್ಲಿದ್ದ ಶಿವರಾಮ ಕಾರಂತರು ಅಂದು  ಅಕ್ಷರಶ: ಭಾರ್ಗವನೇ ಆಗಿದ್ದರು. ನಾಗೇಶ್ ಹೆಗ್ಡೆ, ಕಲ್ಕುಳಿ ವಿಠಲ ಹೆಗ್ಡೆ, ಕ್ಲಾಡ್ ಆಲ್ವಾರಿಸ್, ಶಂಪಾ ದೈತೋಟ ಹೀಗೇ ಹಲವು ಮಂದಿ ಪರಿಸರ ಪ್ರಿಯರು ಅಂದು ಕೈಗಾ ವಿರುದ್ಧ ದನಿ ಎತ್ತಿದ್ದರು.  ಪರಮಾಣು ಸ್ಥಾವರ ಅಥವಾ ರಿಯಾಕ್ಟರ್ ಬಗ್ಗೆ ಅಂದು ಪರ ವಿರೋಧದ ಚರ್ಚೆಗಳು ಬಿರುಸಿನಿಂದ ನಡೆಯುತ್ತಿದ್ದುವು. ರಿಯಾಕ್ಟರಿನಿಂದ ಉತ್ಪಾಟನೆಗೊಳ್ಳುವ ಹೊರಸೂಸುವ ವಿಕಿರಣಗಳು, ಅದರ ತ್ಯಾಜ್ಯದ ವಿಲೇವಾರಿಯ ಸಮಸ್ಯೆ, ವಿಕಿರಣಶೀಲ ರಾಸಾಯನಿಕಗಳು ವರ್ಷಗಟ್ಟಲೆ ಉಳಿದು ಜೈವಿಕ ಪರಿಣಾಮವನ್ನು ಬೀರುವ ಅಪಾಯಗಳ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದುವು ಸಭೆಗಳಲ್ಲಿ, ಪತ್ರಿಕೆಗಳಲ್ಲಿ. ಭೂಕಂಪ ಸಂಭವಿಸಿ ಪರಮಾಣು ಸ್ಥಾವರ ತೀವ್ರ ಅವಘಡಕ್ಕೆ ಒಳಗಾಗುವ ಅಪಾಯದ ಕುರಿತು ಹೆಚ್ಚಿನ ಚರ್ಚೆಗಳಲ್ಲಿ ಪ್ರಸ್ತಾವವಾಗುತ್ತಿತ್ತು. ಪರಮಾಣು ಸ್ಥಾವರದ ಪರವಾಗಿ ವಾದಿಸುತ್ತಿದ್ದ ತಜ್ಞರು &#8220;ಅಂಥ ಅಪಾಯವೇನೂ ಬರದು ಮತ್ತು ಅದಕ್ಕಾಗಿ ಎಲ್ಲ ಎಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗುತ್ತದೆ’ ಎನ್ನುತ್ತ ಜಪಾನನ್ನು ಉದಾಹರಿಸುತ್ತಿದ್ದರು.</p>
<p><span id="more-466"></span>ಅದಕ್ಕೆ ಕಾರಣವೂ ಇತ್ತು. ಎರಡನೇ ಮಹಾಯುದ್ಧ ಕಾಲದಲ್ಲಿ (೧೯೪೫, ಅಗೋಸ್ಟ್ ೬ ಮತ್ತು ೮) ತನ್ನ ನಗರಗಳಾದ ಹಿರೋಶಿಮಾ, ನಾಗಸಾಕಿಗಳಲ್ಲಿ ನಡೆದ ಪರಮಾಣು ಬಾಂಬಿನ ದಾಳಿಗೆ ತತ್ತರಿಸಿ ಹೋದ ಜಪಾನಿಗೆ ಪರಮಾಣುಶಕ್ತಿಯ ದೈತ್ಯ ಸಾಮರ್ಥ್ಯವೇನುನ್ನವ ಅನುಭವ ಚೆನ್ನಾಗಿಯೇ ತಿಳಿದಿದೆ. ಅಂದು ಆ ದಾಳಿಗೆ ಬಲಿಯಾದವರ ಸಂಖ್ಯೆ ಎರಡೂವರೆ ಲಕ್ಷ. ತೀವ್ರ ವಿಕಿರಣಕ್ಕೆ ತುತ್ತಾಗಿ  ಆನುವಂಶಿಕ ವೈಕಲ್ಯಕ್ಕೆ ಒಳಗಾದ ಹಿಬಾಕುಷ್ ಸಂತತಿಗಳುಳ್ಳ ಜಪಾನ್ ಕೆಲವೇ ದಶಕಗಳಲ್ಲಿ ಪರಮಾದ್ಭುತವಾಗಿ ಚೇತರಿಸಿಕೊಂಡು ನಳನಳಿಸುವ ಬಗೆಯೇ ಅದ್ಭುತ. ಇದಕ್ಕಿಂತ ಸೋಜಿಗವೆಂದರೆ ವಿದ್ಯುದುತ್ಪಾದನೆಗೆ ಜಪಾನ್ ಮತ್ತೆ ನೆಚ್ಚಿಕೊಂಡದ್ದು  ಪರಮಾಣು ಶಕ್ತಿಯನ್ನೇ!</p>
<p>ಜಪಾನ್ ಪುಟ್ಟ ದೇಶ. ನಮ್ಮ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶಕ್ಕಿಂತ ತುಸು ಹೆಚ್ಚು ವಿಸ್ತೀರ್ಣದ ಈ  ದೇಶದ ತುಂಬ ಹರಡಿ ಹೋಗಿವೆ &#8211; ಒಂದೆರಡಲ್ಲ ಐವತ್ತೈದು ರಿಯಾಕ್ಟರುಗಳು!. ಇವು ಸುಮಾರು ಐವತ್ತು ಸಾವಿರ ಮೆಗಾವಾಟ್ ವಿದ್ಯುದುತ್ಪಾದನೆ ಮಾಡುತ್ತ ಜಪಾನಿಗೆ ಅಗತ್ಯವಾಗಿರುವ ವಿದ್ಯುತ್ತಿನಲ್ಲಿ ಶೇಕಡಾ ನಲುವತ್ತರಷ್ಟನ್ನು ಪೂರೈಸುತ್ತಿವೆ.  ವಿಜ್ಞಾನ ತಂತ್ರಜ್ಞಾನಗಳಲ್ಲಿ ಅಮೇರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳಿಗೆ ಸರಿ ಮಿಗಿಲಾದ ಸಾಧನೆ ಮಾಡುತ್ತಿರುವ ಜಪಾನಿಗೆ ಸಹಜವಾಗಿಯೇ ಅಗಾಧ ಪ್ರಮಾಣದಲ್ಲಿ ವಿದ್ಯುತ್ ಬೇಕು. ಯಾವ ಮೂಲವಾದರೂ ಅಡ್ಡಿ ಇಲ್ಲ, ವಿದ್ಯುದುತ್ಪಾದನೆ ಅನಿವಾರ್ಯ. ಎಂದೇ ಅದು ಆರಿಸಿಕೊಂಡಿದೆ ಪರಮಾಣು ಶಕ್ತಿಯಿಂದ ವಿದ್ಯುದುತ್ಪಾದನೆಯ ಹಾದಿಯನ್ನು.  ಸದಾ ಕಂಪನ ೧೯೬೯ರಲ್ಲಿ ಮೊದಲ ಪರಮಾಣು ಸ್ಥಾವರ ಕಾರ್ಯಾರಂಭಿಸಿತು. ನಂತರದ ವರ್ಷಗಳಲ್ಲಿ ಎಂಥ ಭೂಕಂಪಕ್ಕೂ ಜಗ್ಗದಂಥ ಪರಮಾಣು ಸ್ಥಾವರಗಳನ್ನು ಸ್ಥಾಪಿಸುತ್ತ ಹೋದರು. ನಡು ನಡುವೆ  ಜಪಾನಿನಲ್ಲಿ ಆಗಾಗ ಭೂಕಂಪನಗಳು ಸಂಭವಿಸಿದರೂ ಈ ಕಂಪನಗಳಿಂದ ಪರಮಾಣು ಸ್ಥಾವರಗಳಿಗೆ ಯಾವುದೇ ತೊಂದರೆ ಸಂಭವಿಸಲಿಲ್ಲ. ಜಪಾನೀಯರಿಗೆ ಇದು ಅಸಹಜವೇನೂ ಅಲ್ಲ. ಏಕೆಂದರೆ ಜಪಾನ್ ಇರುವುದೇ ಭೂಕಂಪ ವಲಯದಲ್ಲಿ.</p>
<p>ಮಾರ್ಚ್ ೧೧ ಶುಕ್ರವಾರ ಮಧ್ಯಾಹ್ನ ಎರಡರ ಹೊತ್ತಿಗೆ ಒಮ್ಮಿಂದೊಮ್ಮೆಗೇ ಜಪಾನಿನಲ್ಲಿ ಸಂಭವಿಸಿದ ಭೂಕಂಪ ಹೈಟಿಯನ್ನೂ ಮೀರಿಸಿ  ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.   ರಿಕ್ಟರ್ ಮಾನಕದಲ್ಲಿ ೯ ಸಂಖ್ಯೆಯ ಭೀಕರ ಭೂಕಂಪ ಸಂಭವಿಸಿದ್ದು ಜಪಾನಿನ ಫುಕುಷಿಮಾ ರಿಯಾಕ್ಟರ್ ಕೇಂದ್ರದ ಸಮೀಪದ ಸಾಗರದಾಳದಲ್ಲಿ. ಇದು ತನಕದ ಭೀಕರ ಭೂಕಂಪಗಳಲ್ಲಿ ನಾಲ್ಕನೇಯ ಸ್ಥಾನವನ್ನು ಅಲಂಕರಿಸಿಕೊಂಡ ಈ ಭಯಾನಕ ಭೂಕಂಪ ಸಾಗರ ಪ್ರದೇಶದಲ್ಲಿ ಸಂಭವಿಸಿ  ದೈತ್ಯ ಅಲೆಗಳನ್ನೆಬ್ಬಿಸಿತು.  ಇಂಥ ದೈತ್ಯ ಅಲೆಗಳಿಗೆ ಜಾಪನೀ ಭಾಷೆಯಲ್ಲಿ ಸುನಾಮೀ ಎಂದು ಹೆಸರು. ೨೦೦೫ರಲ್ಲಿ ಇಂಡೋನೇಶಿಯಾ ಸುಮಾತ್ರಾದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮೀಗೆ ಲಕ್ಷ ಮಂದಿ ಬಲಿಯಾದರು. ಮೊನ್ನೆ ಎದ್ದ ಸುನಾಮೀ ಕೂಡ ಅದೇ ಬಗೆಯಲ್ಲಿ ಪ್ರಳಯಸ್ವರೂಪಿಯಾಯಿತು. ತೀರ ಪ್ರದೇಶದ ನಗರಗಳ ಸಂದಿಗೊಂದಿಗಳಿಗೆಲ್ಲ ನುಗ್ಗುತ್ತ ಎಲ್ಲವನ್ನು ನುಂಗುತ್ತ ಅದು ಮಾಡಿದ ಅನಾಹುತ ಊಹೆಗೂ ನಿಲುಕದಾಗಿತ್ತು. ವಿಮಾನಗಳು, ವಾಹನಗಳು, ದೊಡ್ಡ ದೊಡ್ಡ ಮರದ ಮನೆ-ಕಟ್ಟಡಗಳೆಲ್ಲ ಬೆಂಕಿ ಪೆಟ್ಟಿಗೆಗಳಂತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಆ ದೃಶ್ಯ ಮನ ಕಲಕುತ್ತಿತ್ತು. ಸುಮಾರು ಮೂವತ್ತು ಸಾವಿರ ಮಂದಿ  ಬಲಿಯಾಗಿರಬಹುದು ನಿಸರ್ಗದ ಈ ವಿಕೋಪಕ್ಕೆ.  <a href="http://apkrishna.files.wordpress.com/2011/03/japan_tsunami_2011_fujitsika.jpg"><img title="japan_tsunami_2011_Fujitsika" src="http://apkrishna.files.wordpress.com/2011/03/japan_tsunami_2011_fujitsika.jpg?w=300&#038;h=216" alt="" width="300" height="216" /></a></p>
<p>ಅತ್ಯಂತ ಜನನಿಬಿಡ ನಗರವಾದ ಟೊಕಿಯೋದಿಂದ ಇನ್ನೂರೈವತ್ತು ಕಿಮೀ ಉತ್ತರಕ್ಕಿರುವ ಫುಕುಷಿಮಾ ದೊಡ್ಡ ಪರಮಾಣುಸ್ಥಾವರ ಕೇಂದ್ರ. ಭೂಕಂಪದಲೆಗಳು, ಸುನಾಮೀ ತೆರೆಗಳು ಈ ಪರಮಾಣು ಸ್ಥಾವರಗಳ ಮೇಲೆ, ಅನಿಲ ಸ್ಥಾವರಗಳ ಮೇಲೆ ಅನಿರೀಕ್ಷಿತ ಪ್ರಹಾರ ನಡೆಸಿದುವು. ಅದೆಂಥ ಪ್ರಹಾರವೆಂದರೆ ಪ್ರತಿಕ್ರಿಯಿಸುವುದಕ್ಕೂ ಪುರುಸೊತ್ತಿರಲಿಲ್ಲ. ಅಲ್ಲಿರುವ ಆರು ಸ್ಥಾವರಗಳಲ್ಲಿ ಒಂದು ತೀವ್ರವಾಗಿ ಹಾನಿಗೊಳಗಾಗಿದೆ. ಸ್ಥಾವರದ ಕೇಂದ್ರ ಭಾಗದಲ್ಲಿ ಭೀಕರ ಸ್ಫೋಟಗಳು ನಡೆದು ಮೇಲ್ಕವಚ ಬಿರಿದು ವಿಕಿರಣಶೀಲ ಪದಾರ್ಥಗಳು ಸೋರಿಕೆಯಾಗತೊಡಗಿವೆ. ಇತರ ಮೂರು ಸ್ಥಾವರಗಳು ಕೂಡ ಅದೇ ಹಾದಿಯಲ್ಲಿವೆ. ಅಂದರೆ ಜಪಾನ್ ಮತ್ತೆ ವಿಕಿರಣ ದುರಂತದತ್ತ ಮುಖ ಮಾಡಿದೆ.</p>
<p>ನಿಮಗೆ ತಿಳಿದಿರಬಹುದು, ಪರಮಾಣು ಸ್ಥಾವರ ಅಥವಾ ರಿಯಾಕ್ಟರಿನಲ್ಲಿ ಬಳಸುವ ಇಂಧನವೆಂದರೆ ಯುರೇನಿಯಮ್. ಯುರೇನಿಯಮ್ ಪರಮಾಣುವಿನ ಬೀಜಕೇಂದ್ರ ಅಥವಾ ನ್ಯೂಕ್ಲಿಯಸ್ಸನ್ನು  ನ್ಯೂಟ್ರಾನ್ ಎಂಬ ಕಣದಿಂದ ತಾಡಿಸಿದಾಗ, ಅದು ಒಡೆದು ಕಡಿಮೆ ತೂಕದ ಧಾತುಗಳ ನ್ಯೂಕ್ಲಿಯಸ್ಸುಗಳು ಮೈದಳೆಯುತ್ತವೆ ಮತ್ತು ಅಲ್ಲಿ ನಷ್ಟವಾದ ದ್ರವ್ಯ ಶಕ್ತಿಯಾಗಿ ಬಿಡುಗಡೆಯಾಗುತ್ತದೆ. ಬೈಜಿಕವಿದಳನ (Nuclear fission)  ಎಂಬ ಹೆಸರಿನ ಈ ನ್ಯೂಕ್ಲಿಯರ್ ಕ್ರಿಯೆಯನ್ನು ಆವಿಷ್ಕರಿಸಿದವರು ಜರ್ಮನಿಯ ರಸಾಯನ ವಿಜ್ಞಾನಿಗಳಾದ  ಒಟ್ಟೊಹ್ಯಾನ್ ಮತ್ತು ಸ್ಟ್ರಾಸ್‌ಮನ್ (೧೯೩೯).</p>
<p>ಮಿಲಿಗ್ರಾಮ್ ತೂಕದ ಒಂದು ಚಿಟಿಕೆ ಯುರೇನಿಯಮ್ ದ್ರವ್ಯದಲ್ಲಿ ಕೋಟಿಗಟ್ಟಲೆ ಯುರೇನಿಯಮ್ ಪರಮಾಣುಗಳು ಇರುತ್ತವೆ. ಇವೆಲ್ಲವೂ ಕ್ಷಣ ಮಾತ್ರದಲ್ಲಿ ವಿದಳನಗೊಂಡರೆ ಏನಾಗಬಹುದು? ಬಿಡುಗಡೆಯಾಗುವ ಶಕ್ತಿ ಅಪಾರ.  ಆ ದೈತ್ಯ ಶಕ್ತಿಯನ್ನು ಪರಮಾಣು ಬಾಂಬಿನಂಥ ಮಾರಕಾಸ್ತ್ರವಾಗಿ ರೂಪಿಸಬಹುದು, ಅಥವಾ ವಿದ್ಯುಚ್ಛಕ್ತಿಯ ಉತ್ಪಾದನೆಗೆ ಬಳಸಬಹುದು &#8211; ನಮ್ಮಲ್ಲಿರಬಹುದಾದ ಚೂರಿಯನ್ನು ಬಳಸುವುದರಲ್ಲಿದೆ ಬುದ್ಧಿವಂತಿಕೆ!   ಯುರೇನಿಯಮ್ ರಾಸಾಯನಿಕದಲ್ಲಿ ಒಂದು ಪರಮಾಣುಬೀಜ ನ್ಯೂಟ್ರಾನಿನಿಂದ ವಿದಳನಗೊಂಡಾಗ ಅಲ್ಲಿ ಎರಡು ಅಥವಾ ಮೂರು ನ್ಯೂಟ್ರಾನುಗಳು ಬಿಡುಗಡೆಯಾಗುತ್ತವೆ. ಸನ್ನಿವೇಶ ಅನುಕೂಲವಿದ್ದಲ್ಲಿ &#8211; ಅಂದರೆ ರಾಸಾಯನಿಕದ ದ್ರವ್ಯರಾಶಿ ಒಂದು ಕನಿಷ್ಠ ಮಿತಿಗಿಂತ ಹೆಚ್ಚಿದ್ದಲ್ಲಿ &#8211; ಬಿಡುಗಡೆಗೊಂಡ  ನ್ಯೂಟ್ರಾನುಗಳಿಂದ ಬೇರೆ ಯುರೇನಿಯಮ್ ನ್ಯೂಕ್ಲಿಯಸ್ಸುಗಳು ವಿದಳನಗೊಳ್ಳುತ್ತವೆ. ಪರಿಣಾಮವಾಗಿ ಮತ್ತೆ ಹಲವು ನ್ಯೂಟ್ರಾನುಗಳ ಸೃಷ್ಟಿ. ಇವುಗಳಿಂದ ಇನ್ನಷ್ಟು ವಿದಳನ. ಇದಕ್ಕೆ ವಿಜ್ಞಾನದ ಪರಿಭಾಷೆಯಲ್ಲಿ ಶೃಂಖಲಾ ಕ್ರಿಯೆ (chain reaction ) ಅನ್ನುತ್ತಾರೆ.</p>
<p>ಒಂದು ವೇಳೆ ಶೃಂಖಲಾಕ್ರಿಯೆಯ ಮೇಲೆ  ಯಾವುದೇ  ಹತೋಟಿ ಇಲ್ಲದೇ ಹೋದರೆ ಏನಾಗಬಹುದು? ಅದೊಂದು ಹರಾಕಿರಿ. ಕ್ಷಣ ಮಾತ್ರದಲ್ಲಿ ಬಿಲಿಯಗಟ್ಟಲೆ ಪರಮಾಣುಗಳು  ವಿದಳನಗೊಂಡು ಊಹಾತೀತ ಪ್ರಮಾಣದಲ್ಲಿ ಶಕ್ತಿಯ ಮಹಾಸ್ಫೋಟವಾಗುತ್ತದೆ. ಇದುವೇ ನ್ಯೂಕ್ಲಿಯರ್ ಅಥವಾ ಪರಮಾಣು ಬಾಂಬ್. ಇಂಥದೊಂದು ಶಸ್ತ್ರವನ್ನು ಸಮರಾಂಗಣದಲ್ಲಿ ಪ್ರಯೋಗಿಸಿದರೆ ಅದು ಬ್ರಹ್ಮಾಸ್ತ್ರವೇ ಸರಿ. ಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ತಾಡಿಸಿದ ಪರಮಾಣು ಬಾಂಬ್ ಅದಕ್ಕೆ ದಿವ್ಯ ನಿದರ್ಶನ.  ಇದರ ಬದಲಾಗಿ ನಡೆಯುವ ವಿದಳನ ಕ್ರಿಯೆಯನ್ನು ನಿಯಂತ್ರಿಸಿದಲ್ಲಿ ಆ ಶಕ್ತಿಯನ್ನು ನಮ್ಮ ಅನುಕೂಲಕ್ಕೆ ಸರಿಯಾಗಿ ಬಳಸಿಕೊಳ್ಳಬಹುದು; ವಿದ್ಯುದುತ್ಪಾದನೆ ಮಾಡಬಹುದು. ಇದು ಸಾಧ್ಯವಾಗುವುದು ಪರಮಾಣು ಸ್ಥಾವರದಲ್ಲಿ.</p>
<p><a href="http://apkrishna.files.wordpress.com/2011/03/normal1.jpg"><img title="ರಿಯಾಕ್ತರಿನ ಸರಳ ನಿರೂಪಣೆ " src="http://apkrishna.files.wordpress.com/2011/03/normal1.jpg?w=300&#038;h=219" alt="" width="300" height="219" /></a><a href="http://apkrishna.files.wordpress.com/2011/03/tsunami-dust-wave.jpg"></a></p>
<p>ಬೈಜಿಕ ವಿದಳನ ಕ್ರಿಯೆಯನ್ನು ನಿಯಂತ್ರಿಸುವ ಸಂಕೀರ್ಣ ವ್ಯವಸ್ಥೆ ಸ್ಥಾವರದಲ್ಲಿರುತ್ತದೆ.  ಸರಣಿ ವಿದಳನ ಕ್ರಿಯೆಯನ್ನು ಪ್ರೇರಿಸಿ, ಕ್ರಿಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವ ಮೂಲಕ ಪರಮಾಣು ಸ್ಥಾವರವೊಂದು ಆರಂಭವಾದದ್ದು ೧೯೪೨ರಲ್ಲಿ. ಅದರ ನೇತೃತ್ವವನ್ನು ವಹಿಸಿದವರು ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತ ವಿಜ್ಞಾನಿ ಎನ್ರಿಕೋ ಫರ್ಮಿ. ಫರ್ಮಿ ನಿರ್ಮಿಸಿದ ಸ್ಥಾವರ ತುಂಬ ಚಿಕ್ಕದು &#8211; ಬ್ಯಾಡ್ಮಿಂಟನ್ ಅಂಗಣದಷ್ಟೇ ಇತ್ತು. ೧೯೪೫, ಜುಲೈ ೧೬ರಂದು ಅಮೇರಿಕ ಮತ್ತು ಮಿತ್ರರಾಷ್ಟ್ರಗಳು ಪ್ರಪ್ರಥಮ ಪರಮಾಣು ಬಾಂಬಿನ ಯಶಸ್ವೀ ಸ್ಫೋಟದ ಪರೀಕ್ಷೆ ನಡೆಸಿತು. ೧೯೪೫ ಅಗೋಸ್ಟ್ ೬ ಮತ್ತು ೯ರಂದು ಅನುಕ್ರಮವಾಗಿ ಹಿರೋಶಿಮಾ ಮತ್ತು ನಾಗಸಾಕಿಗಳ ಮೇಲೆ ಪರಮಾಣು ಬಾಂಬಿನ ತಾಡನೆಯೊಂದಿಗೆ ಪರಮಾಣು ಗರ್ಭದಲ್ಲಿರುವ ದೈತ್ಯ ಶಕ್ತಿಯ ಅನಾವರಣವಾಯಿತು.   ಹೀಗಿರುತ್ತದೆ  ಸಾಮಾನ್ಯವಾಗಿ ರಿಯಾಕ್ಟರುಗಳಲ್ಲಿ ಯುರೇನಿಯಮ್, ಪ್ಲುಟೋನಿಯಮ್ ಅಥವಾ ಇವೆರಡರ ಮಿಶ್ರಣವನ್ನು ಬೈಜಿಕ ವಿದಳನ  ಇಂಧನವಾಗಿ ಬಳಸುತ್ತಾರೆ. ನೈಸರ್ಗಿಕವಾಗಿ ದೊರೆವ ಯುರೇನಿಯಮ್ಮಿನಲ್ಲಿ ಯುರೇನಿಯಮ್ &#8211; ೨೩೩, ಯುರೇನಿಯಮ್ &#8211; ೨೩೫ ಮತ್ತು ಯುರೇನಿಯಮ್ &#8211; ೨೩೮ ಎಂಬ ಮೂರು ಬಗೆಯ ಐಸೋಟೋಪುಗಳಿವೆ.</p>
<p>ಇವುಗಳಲ್ಲಿ ಮೊದಲೆರಡರ ಪ್ರಮಾಣ ಶೇಕಡಾ ಒಂದಕ್ಕಿಂತಲೂ ಕಡಿಮೆ. ಆದರೆ ಇವುಗಳು ಅತ್ಯಂತ ಸುಲಭದಲ್ಲಿ ವಿದಳನಗೊಳ್ಳುತ್ತವೆ. ಹಾಗಾಗಿ ಇವುಗಳನ್ನೇ ಹೆಚ್ಚಾಗಿ ವಿದಳನ ದ್ರವ್ಯವನ್ನಾಗಿ ಬಳಸುತ್ತಾರೆ. ಯುರೇನಿಯಮ್ ಅದಿರು ಭೂಮಿಯ ಎಲ್ಲ ಕಡೆ ಸಮಾನವಾಗಿ ಪಸರಿಸಿಲ್ಲ. ರಷ್ಯಾ ಮತ್ತು ಅಮೇರಿಕಗಳಲ್ಲಿ ಹೆಚ್ಚಿನ ಯುರೇನಿಯಮ್ ಅದಿರು ನಿಕ್ಷೇಪಗಳಿವೆ. ನಮ್ಮಲ್ಲಿ ಬಿಹಾರದ ಜಾದುಗುಡ ಎಂಬಲ್ಲಿ ಯುರೇಮಿಯಮ್ ನಿಕ್ಷೇಪವಿದೆ. ತೀರ ಇತ್ತೀಚೆಗೆ ಗುಲ್ಬರ್ಗಾದ ಗೂಗಿ ಎಂಬಲ್ಲಿ ಹೇರಳ ಪ್ರಮಾಣದಲ್ಲಿ ಯುರೇನಿಯಮ್ ನಿಕ್ಷೇಪವನ್ನು ಪತ್ತೆ ಮಾಡಿದ್ದಾರೆ.</p>
<p>ಭೂಮಿಯಿಂದ ಬಗೆದು ತೆಗೆವ ನೈಸರ್ಗಿಕ ಯುರೇನಿಯಮ್ಮನ್ನು ಮೊದಲ ಹಂತದಲ್ಲಿ ಸಂಸ್ಕರಿಸಿ,  ಪರಿಶುದ್ಧ ಇಂಧನವನ್ನು ಝಿರ್ಕೋನಿಯಮ್ ನಳಿಗೆಗಳಲ್ಲಿ ಭರ್ತಿ ಮಾಡಿ ಇಂಧನ ಕೊಳವೆಗಳನ್ನು ನಿರ್ಮಿಸುತ್ತಾರೆ. ಒಂದು ರಿಯಾಕ್ಟರಿನೊಳಗಡೆ ಇಂಥ ನೂರಾರು ಸರಳುಗಳು ಇರುತ್ತವೆ &#8211; ಹಿಡಿಸೂಡಿಯ ಹಾಗೆ. ಈ ಸರಳುಗಳಲ್ಲಿ ಮಂದಗತಿಯ ಮತ್ತು ಕಡಿಮೆ ಶಕ್ತಿಯ ನ್ಯೂಟ್ರಾನಿಂದ  ಬೈಜಿಕ ವಿದಳನದ ಶೃಂಖಲಾ ಕ್ರಿಯೆಯನ್ನು ಪ್ರೇರಿಸಿದಾಗ ಅಲ್ಲಿ ಆರಂಭವಾಗುತ್ತದೆ ಅನುಸ್ಯೂತ ಬೈಜಿಕ ವಿದಳನ ಪ್ರಕ್ರಿಯೆ ಮತ್ತು ಅಗಾಧ ಶಕ್ತಿಯ ಬಿಡುಗಡೆ. ವಿದಳನಕ್ರಿಯೆಯನ್ನು ಹತೋಟಿಯಲ್ಲಿಡುವುದು ಇಲ್ಲಿ ಅತ್ಯಂತ ಮುಖ್ಯವಾದದ್ದು. ಅಂದರೆ ರಿಯಾಕ್ಟರ್ ಗರ್ಭದಲ್ಲಿ ಸೃಷ್ಟಿಯಾಗುವ ನ್ಯೂಟ್ರಾನುಗಳ ಸಂಖ್ಯೆಯ ಮೇಲೆ ನಿಯಂತ್ರಣವಿರಬೇಕಾಗುತ್ತದೆ. ಇದಕ್ಕಾಗಿ ಇಂಧನ ಕೊಳವೆಗಳ ನಡುನಡುವೆ  ನ್ಯೂಟ್ರಾನುಗಳನ್ನು ಹೀರಿಕೊಳ್ಳುವುದಕ್ಕಾಗಿ ಕ್ಯಾಡ್ಮಿಯಮ್ ಅಥವಾ ಬೋರಾನ್ ಸರಳುಗಳಿರುತ್ತವೆ. ಯಾವುದೆ ಕಾರಣಕ್ಕೆ ನ್ಯೂಟ್ರಾನುಗಳ ಸಂಖ್ಯೆ ಹೆಚ್ಚುತ್ತ ವಿದದಳನ ಕ್ರಿಯಾ ಗತಿ ಅಂಕೆ ಮೀರಿದರೆ, ಅಂಕುಶ ಹಾಕಲು ನಿಯಂತ್ರಕ ಸರಳುಗಳನ್ನು ಇಂಧನ ಕೊಳವೆಗಳ  ನಡುವೆ ಲೆಕ್ಕ ಹಾಹಾಕಿದ ಆಳಕ್ಕೆ ಇಳಿಸುತ್ತಾರೆ &#8211; ಹತೋಟಿ ಮೀರಲು ತೊಡಗಿದ ದೊಂಬಿ ನಿರತರನ್ನು ಲಾಠಿ ರುಚಿ ತೋರಿಸಿ ನಿಯಂತ್ರಿಸುವ ಹಾಗೆ. ಚೆರ್ನೋಬಿಲ್ ದುರಂತವಾದದ್ದು ಇಂಥ ನಿಯಂತ್ರಕ ಕುಸಿದ ಕಾರಣದಿಂದ.</p>
<p>ಬೈಜಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ನ್ಯೂಟ್ರಾನುಗಳಾದರೋ ಅತ್ಯಂತ ವೇಗದ ನ್ಯೂಟ್ರಾನುಗಳು.  ಶರ ವೇಗದಲ್ಲಿ ಸಾಗುವ ಇವುಗಳನ್ನು ಮಂದಗತಿಯಲ್ಲಿ ಚಲಿಸುವಂತೆ ಮಾಡದೇ ಹೋದರೆ ಕ್ರಿಯೆ ಅನುಸ್ಯೂತವಾಗಿ ಮುಂದುವರಿಯಲಾರದು. ಅದಕ್ಕಾಗಿಯೇ  ಗ್ರಾಫೈಟ್ ಅಥವಾ ಭಾರಜಲ (heavy water )ವನ್ನು ಬಳಸುತ್ತಾರೆ. ಈ ದ್ರವ್ಯಗಳ ವೇಗದ ನ್ಯೂಟ್ರಾನುಗಳು ಸಾಗುವಾಗ ವೇಗ ಕುಂಠಿತಗೊಳ್ಳುತ್ತವೆ &#8211; ಕಿಕ್ಕಿರಿದ ಪೇಟೆಯ ಜನಸಂದಣಿಯ ನಡುವೆ ಓಟ ಓಡುವ ಹಾಗೆ. ಮಂದ ಗತಿಯ ನ್ಯೂಟ್ರಾನುಗಳು ವಿದಳನ ಕ್ರಿಯೆಯಲ್ಲಿ ಭಾಗಿಯಾಗುತ್ತವೆ.</p>
<p>ಒಂದು ಲೆಕ್ಕಾಚಾರ ಪ್ರಕಾರ ಒಂದು ಕೆಜಿಯಷ್ಟು ಕಲ್ಲಿದ್ದಲು ಗಂಟೆಗೆ ಎರಡು ಕಿಲೋವಾಟ್ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಿದರೆ, ಒಂದು ಕೆಜಿ ಯುರೇನಿಯಮ್ಮಿನಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಪ್ರಮಾಣ ಗಂಟೆಗೆ ಒಂದು ಲಕ್ಷದ ನಲುವತ್ತು ಸಾವಿರ ಕಿಲೋವಾಟ್, ಮತ್ತು ಅತ್ಯಾಧುನಿಕ ಬ್ರೀಡರ್ ರಿಯಾಕ್ಟರಿನಿಂದ ಬಿಡುಗಡೆಯಾಗುವ ವಿದ್ಯುಚ್ಛಕ್ತಿಯ ಪ್ರಮಾಣ ಗಂಟೆಗೆ ನಾಲ್ಕು ಲಕ್ಷ ಕಿಲೋವಾಟ್. ಈ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯೇ ಪರಮಾಣು ವಿದ್ಯುದ್ ಸ್ಥಾವರಗಳನ್ನು ನಿರ್ಮಿಸಲು ಕಾರಣ. ಎಲ್ಲ ಸುಸೂತ್ರವಾಗಿ ನಡೆದರೆ ಇದೊಂದು ಶಕ್ತಿಯ ಮಹಾ ಘನಿ.  ಬ್ರೀಡರ್ ರಿಯಾಕ್ಟರುಗಳಲ್ಲಿ ಥೋರಿಮ್ &#8211; ೨೩೨, ಅಥವಾ ಯುರೇನಿಯಮ್ &#8211; ೨೩೮ ಐಸೊಟೋಪುಗಳನ್ನು ಬಳಸುತ್ತಾರೆ ಇಂಧನವಾಗಿ.</p>
<p>ಭಾರತದಲ್ಲಿ ಯುರೇನಿಯಮ್ ನಿಕ್ಷೇಪ ಕಡಿಮೆ. ಆದರೆ ಥೋರಿಯಮ್ ಹೇರಳವಾಗಿದೆ &#8211; ಪೂರ್ವ ಮತ್ತು ಕೇರಳ ಕರಾವಳಿ ಪ್ರದೇಶಗಳಲ್ಲಿ &#8211;  ಕರಿ ಬಣ್ಣದ ಮರಳಿನೊಂದಿಗೆ ಮಿಶ್ರವಾಗಿ. ಹಾಗಾಗಿಯೇ ಆ ಕರಾವಳಿಯಲ್ಲಿ ನೈಸರ್ಗಿಕವಾಗಿ ವಿಕಿರಣ  ಪ್ರಮಾಣ ಇತರೆಡೆಗಿಂತ ಹಲವು ಪಟ್ಟು ಜಾಸ್ತಿ. ಈ ಥೋರಿಯಮ್ ನಿಕ್ಷೇಪ ನಮ್ಮ ಭವಿಷ್ಯದ ಬ್ರೀಡರ್ ರಿಯಾಕ್ಟರುಗಳ ಬಲು ಮುಖ್ಯ ಇಂಧನ.  ಕೇವಲ ವಿದ್ಯುಚ್ಛಕ್ತಿಗಷ್ಟೇ ಅಲ್ಲ, ಬಗೆ ಬಗೆಯ ವಿಕಿರಣಪಟುತ್ವ  ಐಸೊಟೋಪುಗಳ ಉತ್ಪಾದನೆಯಲ್ಲಿ ಕೂಡ ರಿಯಾಕ್ಟರುಗಳನ್ನು ಬಳಸುತ್ತಾರೆ. ವೈದ್ಯಕೀಯ ರಂಗದಲ್ಲಿ ಇಂದು ವಿಕಿರಣ ಚಿಕಿತ್ಸೆಗೆ ಬಳಸುವ ವಿಕಿರಣಪಟುತ್ವ ಐಸೊಟೋಪುಗಳಾದ ಕೊಬಾಲ್ಟ್ &#8211; ೬೦, ಅಯೋಡಿನ್ -೧೩೧, ಸೀಸಿಯಮ್ -೧೩೭ ಇತ್ಯಾದಿಗಳು ರಿಯಾಕ್ಟರಿನ ಉಪೋತ್ಪನ್ನಗಳು. ಇವೆಲ್ಲವೂ ಬೇರೆ ಇನ್ನಿತರ ಕ್ಷೇತ್ರಗಳಲ್ಲೂ ಬಳಕೆಯಲ್ಲಿವೆ. ಎಂದೇ ಇವುಗಳ ಉತ್ಪಾದನೆ ಮತ್ತು ಬಳಕೆ ಬೇರೆಯೇ ಉದ್ದಿಮೆಯ ಆಯಾಮವನ್ನು ಪಡೆದುಕೊಂಡಿವೆ.</p>
<p>ಇದಕ್ಕಾಗಿಯೇ ಪುಟ್ಟದಾದ ಸಂಶೋಧಕ ರಿಯಾಕ್ಟರುಗಳು ನಮ್ಮಲ್ಲಿವೆ. ಧ್ರುವ, ಅಪ್ಸರಾ, ಕಾಮಿನಿ, ಝರ್ಲಿನಾ ಮೊದಲಾದುವು ನಮ್ಮ ದೇಶದಲ್ಲಿರುವ ಸಂಶೋಧನಾ ರಿಯಾಕ್ಟರುಗಳು.  ಬೈಜಿಕ ವಿದಳನದಿಂದ ಪರಮಾಣು ಸ್ಥಾವರದ ಕೇಂದ್ರದಲ್ಲಿ  ಸಾವಿರ ಡಿಗ್ರಿಗಗಳಷ್ಟು ಉಷ್ಣತೆ ಏರುತ್ತದೆ. ಬಿಸಿಯಿಂದ ಕುದಿವ ಕೇಂದ್ರದ ಸುತ್ತ ಕೊಳವೆಯಲ್ಲಿ ಸಾಗುವ ತಣ್ಣಗಿನ ನೀರು ಶಾಖವನ್ನು ಹೀರಿಕೊಳ್ಳುತ್ತ ಉಗಿಯಾಗಿ, ಆ ಉಗಿಯು ವಿದ್ಯುತ್ ಟರ್ಬೈನುಗಳನ್ನು ಚಾಲನೆ ಮಾಡುತ್ತ ಅಂತಿಮವಾಗಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಅಂದರೆ ಪರಮಾಣು ಸ್ಥಾವರದ ಉಷ್ಣ ನಿಯಂತ್ರಣಕ್ಕೆ ಮತ್ತು ವಿದ್ಯುದುತ್ಪಾದನೆಗೆ ನೀರು ಅನಿವಾರ್ಯ. ಎಂದೇ ಎಲ್ಲ ಸ್ಥಾವರಗಳು ಸಮದ್ರದ ಅಥವಾ ದೊಡ್ಡ ನದಿಗಳ ತಟದಲ್ಲಿಯೇ ನಿರ್ಮಾಣಗೊಂಡಿರುವುದನ್ನು ಗಮನಿಸಬಹುದು. ಉದಾಹರಣೆಗೆ, ಚೆನ್ನೈಯಿಂದ ನೂರು ಕಿಮೀ ದೂರದ ಕಲ್ಪಾಕ್ಕಮ್ ಸ್ಥಾವರ ಬಂಗಾಳ ಕೊಲ್ಲಿಯ ದಂಡೆಯಲ್ಲಿದ್ದರೆ,  ಕೈಗಾ ಸ್ಥಾವರಗಳು ಕಾಳೀ ನದಿಯ ತಟದಲ್ಲಿವೆ.  ಬೈಜಿಕ ವಿದಳನ ಕ್ರಿಯೆಯಲ್ಲಿ ಅನೇಕ ಬಗೆಯ ವಿಕಿರಣಶೀಲ ಐಸೊಟೋಪುಗಳು ಸೃಷ್ಟಿಯಾಗುತ್ತವೆ. ಉದಾಹರಣೆಗೆ ಪ್ಲುಟೋನಿಯಮ್ -೨೩೯, ಸೀಸಿಯಮ್ -೧೩೭, ಸ್ಟ್ರಾನ್ಷಿಯಮ್ -೮೯, ಅಯೋಡಿನ್ &#8211; ೧೩೧ ಇತ್ಯಾದಿ.</p>
<p>ಇವುಗಳಿಂದ ವಿಕಿರಣ ಉತ್ಸರ್ಜನೆಯಾಗುತ್ತಿರುತ್ತವೆ. ಒಂದು ರಾಸಾಯನಿಕ ವಿಷಕ್ಕೆ ಬಣ್ಣ ಅಥವಾ ವಾಸನೆ ಇರಬಹುದು ಮತ್ತು ಆ ಕಾರಣದಿಂದ ಅವುಗಳ ಇರುವಿಕೆ ನಮ್ಮ ಗಮನಕ್ಕೆ ಬರುತ್ತದೆ. ಆದರೆ ಇಲ್ಲಿ ಪರಿಸ್ಥಿತಿ ಭಿನ್ನ. ವಿಕಿರಣಶೀಲ ಐಸೊಟೋಪುಗಳು ಸೂಸುವ ಅಗೋಚರ ವಿಕಿರಣಕ್ಕೆ ಬಣ್ಣವಿಲ್ಲ, ಸುವಾಸನೆ ಮೊದಲೇ ಇಲ್ಲ. ಅವು ದೇಹದ ಜೀವಕೋಶಗಳನ್ನು ತೂರಿ ಸಾಗುವಾಗ ಮಾಡುವ ಪರಿಣಾಮ ಮಾತ್ರ ಭೀಕರ.  ತೀವ್ರ ವಿಕಿರಣಕ್ಕೆ ತುತ್ತಾದವರಿಗೆ ಕೂದಲು ಉದುರಿ, ನಿಶ್ಯಕ್ತಿ ಅಡರಿ, ತಲೆ ಸುತ್ತು ಬರತೊಡಗಿದಾಗಲಷ್ಟೇ ಏನೋ ಎಡವಟ್ಟಾಗತೊಡಗಿದೆ ಎಂಬ ಅನುಭವ ಬರುತ್ತದೆ. ಹಾಗಾಗಿಯೇ ವಿಕಿರಣಶೀಲ ಪದಾರ್ಥಗಳು ಜೈವಿಕ ಪರಿಸರಕ್ಕೆ ಸೇರದಂತೆ ಎಲ್ಲ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು. ಇಡೀ ರಿಯಾಕ್ಟರನ್ನು ದಪ್ಪ ಕಾಂಕ್ರೀಟಿನ ಕವಚ ಹೊದಿಸಿರುತ್ತಾರೆ.    ಒಮ್ಮೆ ಜೈವಿಕ ಪರಿಸರಕ್ಕೆ ಸೇರಿದ ವಿಕಿರಣ ಪಟುತ್ವ ರಾಸಾಯನಿಕಗಳು ಗಾಳಿ, ನೀರು, ಆಹಾರದ ಮೂಲಕ ಜೀವಿಗಳ ದೇಹವನ್ನು ಸೇರುತ್ತವೆ.  ವಿಕಿರಣಪಟುತ್ವದ ತೀವ್ರತೆ ಯಾವ ಬಗೆಯಲ್ಲಿ ಬದಲಾಗುತ್ತದೆನ್ನುವುದು ರಾಸಾಯನಿಕಗಳ ಗುಣ ವಿಶೇಷವಾದ &#8220;ಅರ್ಧಾಯು&#8221; (Half life ) ಎನ್ನುವುದರ ಮೇಲೆ ಅವಲಂಬಿಸಿದೆ.</p>
<p>ಪ್ಲುಟೋನಿಯಮ್ -೨೩೯ ರ ಅರ್ಧಾಯು ೨೪೦೦೦ ವರ್ಷಗಳು. ಅಂದರೆ ಇಂದು ಇರುವ ಅದರ ವಿಕಿರಣಪಟುತ್ವ ಪ್ರಮಾಣ ಇನ್ನು ೨೪,೦೦೦ ವರ್ಷಗಳಲ್ಲಿ ಅರ್ಧಾಂಶವಾಗುತ್ತದೆ. ಒಂದೊಮ್ಮೆ ಪ್ಲುಟೋನಿಯಮ್ ಬಿಲ್ಲೆಯೊಂದು ಗುಜರಿಗೆ ಸೇರಿತೆಂದು ಭಾವಿಸೋಣ. ಈ ಬಿಲ್ಲೆಯ ವಿಕಿರಣಶೀಲತೆ &#8220;ನಗಣ್ಯ&#8221; ಎನ್ನುವ ಪ್ರಮಾಣವನ್ನು ತಲುಪಬೇಕಾದರೆ ಕನಿಷ್ಠವೆಂದರೂ ಮೂರು ಲಕ್ಷ ವರ್ಷಗಳು ಬೇಕು. ಅದು ತನಕವೂ ಅದರಿಂದ ವಿಕಿರಣವು ಹೊಮ್ಮುತ್ತಲೇ ಇರುತ್ತದೆ.  ಗುಜರಿಯಲ್ಲಿ ಸಿಕ್ಕ ಆ ಬಿಲ್ಲೆ ಮನೆ ಸೇರಿದರೆ  ಮನೆ ಮಂದಿಗೆ ಮುಂದಿನ ತಲೆ ತಲೆಮಾರುಗಳ ತನಕ ವಿಕಿರಣ ಪ್ರಸಾದ ಸಿಗುತ್ತಿರುತ್ತದೆ. ಇದು ಉತ್ಪ್ರೇಕ್ಷಿತ ಊಹೆಯಲ್ಲ. ವರ್ಷದ ಹಿಂದೆ ಇಂಥದೊಂದು ಘಟನೆ ನಡೆದದ್ದು ನೆನಪಿಗೆ ಬಂತು.   ಒಂದು ವೇಳೆ ಪರಮಾಣು ಸ್ಥಾವರದಲ್ಲಿ ವಿದಳನ ಕ್ರಿಯೆಯನ್ನು ಮತ್ತು ಶಾಖವನ್ನು ಹತೋಟಿಯಲ್ಲಿಡುವ ನಿಯಂತ್ರಕಗಳು ಸ್ಥಗಿತಗೊಂಡರೆ ಏನಾಗಬಹುದು? ಅದೊಂದು ಹರಾಕಿರಿ. ಸ್ಥಾವರದ  ಕೇಂದ್ರದಲ್ಲಿ ಬೈಜಿಕ ಕ್ರಿಯೆ ಎಗ್ಗಿಲ್ಲದೇ ಸಾಗುತ್ತ ಇಡೀ ಸ್ಥಾವರ ಸ್ಫೋಟಗೊಂಡು ವಿಕಿರಣಶೀಲ ದ್ರವ್ಯ ಹೊರ ಚಿಮ್ಮುತ್ತದೆ. ಪರಮಾಣು ಸ್ಥಾವರಗಳ ಕಿರಿದಾದ ಇತಿಹಾಸದಲ್ಲಿ ಇಂಥ ಗಂಭೀರ ಅವಘಡಗಳು ಈಗಾಗಲೇ ಸಂಭವಿಸಿವೆ.</p>
<p>೧೯೭೯, ಎಪ್ರಿಲ್ ೧ರಂದು ಅಮೇರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ತ್ರೀಮೈಲ್ ಐಲ್ಯಾಂಡ್ ಎಂಬಲ್ಲಿ ಪರಮಾಣು ಸ್ಥಾವರ ಅಪಘಾತ ಸಂಭವಿಸಿತು. ಇದಕ್ಕಿಂತ  ಭೀಕರ ದುರ್ಘಟನೆ ನಡೆದದ್ದು ರಷ್ಯಾದ ಚೆರ್ನೋಬಿಲ್ ಎಂಬ ಪರಮಾಣು ಸ್ಥಾವರದಲ್ಲಿ. ೧೯೮೬, ಎಪ್ರಿಲ್೨೬ರಂದು ಸೊವಿಯತ್ ರಷ್ಯಾದ ಉಕ್ರೇನ್ ಪ್ರಾಂತ್ಯದ  ಚೆರ್ನೋಬಿಲ್ ಪರಮಾಣು ಸ್ಥಾವರದಲ್ಲಿ ಕ್ರಿಯಾ ನಿಯಂತ್ರಕಗಳು ಸ್ಥಗಿತಗೊಂಡು ಇಡೀ ಸ್ಥಾವರ ಸ್ಫೋಟಗೊಂಡು ಅಗಾಧ ಪ್ರಮಾಣದಲ್ಲಿ ವಿಕಿರಣಪಟುತ್ವ ರಾಸಾಯನಿಕಗಳು ಪರಿಸರಕ್ಕೆ ಉತ್ಪಾಟನೆಗೊಂಡುವು.</p>
<p><a href="http://apkrishna.files.wordpress.com/2011/03/377731178_2ae63b5f24.jpg"><img title="377731178_2ae63b5f24" src="http://apkrishna.files.wordpress.com/2011/03/377731178_2ae63b5f24.jpg?w=300&#038;h=219" alt="" width="300" height="219" /></a></p>
<p>ಇಂದಿನಂತೆ ಇಂಟರ್ನೆಟ್ ಯುಗವಲ್ಲದ ಅಂದಿನ ದಿನಗಳಲ್ಲಿ, ಇಂಥದೊಂದು ಅವಘಡ ಸಂಭವಿಸಲೇ ಇಲ್ಲ ಎಂದು ರಷ್ಯಾ ಹೇಳಿತಾದರೂ, ನೆರೆಯ ಪೊಲೆಂಡ್, ಹಂಗೆರಿ ಮೊದಲಾದ ರಾಷ್ಟ್ರಗಳಲ್ಲಿದ್ದ  ವಿಕಿರಣ ಪತ್ತೆದರ್ಶಕಗಳು ಸುಳ್ಳು ಹೇಳಲಿಲ್ಲ. ಅವು ಸಾರತೊಡಗಿದುವು &#8211; ಸನಿಹದಲ್ಲೆಲ್ಲೋ ಗಂಭೀರ ಅಪಘಾತ ಸಂಭವಿಸಿದೆ ಎನ್ನುವುದನ್ನು. ಏಕೆಂದರೆ ವಿಕಿರಣಪಟುತ್ವ ರಾಸಾಯನಿಕಗಳು ವಾತಾವರಣ ಸೇರಿ ಸಾಗುತ್ತವೆ ದೇಶಗಳ ಎಲ್ಲೆ ಮೀರಿ ಪ್ರಪಂಚದ ಎಲ್ಲ ಕಡೆಗೆ &#8211; ದಿಗ್ದಿಗಂತಗಳನ್ನಳೆಯುವುದಕ್ಕೆ.   ಚೆರ್ನೊಬಿಲ್ ರಿಯಾಕ್ಟರಿನ ಸುತ್ತ ವಾಸಿಸುತ್ತಿದ್ದ ಜನರನ್ನು ಬೇರೆ ಕಡೆ ಸ್ಥಾನಾಂತರಿಸುವುದರಿಂದ ತೊಡಗಿ ಸುತ್ತಲಿನ ಹಲವು ನೂರು ಕಿಮೀ ಪ್ರದೇಶದಲ್ಲಿದ್ದ ತೀವ್ರ ವಿಕಿರಣಶೀಲ ದ್ರವ್ಯವನ್ನು ಬಗೆದು ತೆಗೆದು ದೋಡ್ಡ ಪೀಪಾಯಿಗಳಲ್ಲೆಲ್ಲ ತುಂಬಿ ನೆಲದಾಳದಲ್ಲಿ ಹೂತು ಹಾಕುವ ತನಕ ನಡೆಸಿದ ಪ್ರಯತ್ನಗಳು ಹರಸಾಹಸ. ಇಂದು ಆ ಸ್ಥಾವರ ದೆವ್ವದ ಮನೆಯಂತೆ ಭೀಕರ ಘಟನೆಗೆ ಸಾಕ್ಷೀ ರೂಪದಲ್ಲಿದೆ; ಸನಿಹದ ಪಟ್ಟಣವೂ ಕೂಡ.</p>
<p>ಫುಕುಷಿಮಾದಲ್ಲಿ ರಿಕ್ಟರ್ ಮಾನಕದಲ್ಲಿ ೮.೨ ಅಂಕೆಯ ಭೂಕಂಪವನ್ನು ತಡೆದುಕೋಳ್ಳುವ ಸಾಮರ್ಥ್ಯವುಳ್ಳ ಪರಮಾಣು ಸ್ಥಾವರಗಳನ್ನು ಜಪಾನೀಯರು ನಿರ್ಮಿಸಿದ್ದರು. ಆದರೆ ಮೊನ್ನೆ ಮಾತ್ರ ಪೂರ್ವ ಸೂಚನೆ ಕೊಡದೇ ಹಟಾತ್ತನೆ ಎರಗಿದ ಭೂಕಂಪವು ೮.೯ ಅಂಕೆಯದು. ನೀವನ್ನಬಹುದು &#8211; ವ್ಯತ್ಯಾಸ ೦.೭ ರಿಕ್ಟರ್ ಅಂಕೆ ಮಾತ್ರ. ಆದರಲ್ಲೇನಿದೆ ವಿಶೇಷ. ವಿಶೇಷ ಇರುವುದೇ ಅಲ್ಲಿ.  ರಿಕ್ಟರ್ ಅಂಕೆ ಲಗಾರಿಥಮಿಕ್ ಸ್ಕೇಲ್ &#8211; ಒಂದು ಅಂಕೆಯ ವ್ಯತ್ಯಾಸವೆಂದರೆ ಕಂಪನದ ತೀವ್ರತೆ ಹತ್ತು ಪಟ್ಟು ಅಧಿಕ ಮತ್ತು ಬಿಡುಗಡೆಯಾಗುವ ಶಕ್ತಿ ಮೂವತ್ತೆರಡು ಪಟ್ಟು ಹೆಚ್ಚುತ್ತದೆ. ಎಂಟು ರಿಕ್ಟರ್ ಅಂಕೆಯ ಭೂಕಂಪ ಆರು ಅಂಕೆಯದ್ದಕ್ಕಿಂತ ಸಾವಿರಪಟ್ಟು ಶಕ್ತಿ ಬಿಡುಗಡೆ ಮಾಡುತ್ತದೆ. ಅಂದರೆ ಪುಕುಶಿಮಾದ ಸ್ಥಾವರಗಳು ತುತ್ತಾದ ಭೂಕಂಪ ಸುಮಾರು ಹನ್ನೊಂದು ಪಟ್ಟು ಅಧಿಕ ಶಕ್ತಿಯದ್ದಾಗಿತ್ತು.</p>
<p>ಹಾಗಿದ್ದರೂ ಆ ಸ್ಥಾವರಗಳು ಭೂಕಂಪಕ್ಕೆ ಬಿರುಕುಗೊಳ್ಳಲಿಲ್ಲ. ಕುಸಿಯಲಿಲ್ಲ. ಅದು ಸುಭಧ್ರವಾಗಿಯೇ ಉಳಿಯಿತು. ಇಂಥ ವಿಷಮ ಸ್ಥಿತಿಯಲ್ಲಿಯೂ ನಿಯಂತ್ರಕ ವ್ಯವಸ್ಥೆ ಪರಿಪೂರ್ಣವಾಗಿ ಕಾರ್ಯ ನಿರ್ವಹಿಸಿದುವು ಅನ್ನುವುದು ಹೆಚ್ಚುಗಾರಿಕೆ. ಪರಮಾಣು ಸ್ಥಾವರಗಳು ಕೂಡಲೇ ಸ್ಥಗಿತಗೊಂಡುವು. ಹಾಗಿದ್ದರೂ ಸ್ಥಾವರದೊಳಗಡೆ ವಿಕಿರಣ ಪದಾರ್ಥಗಳಿಂದ ಸುಮಾರು ಶೇಕಡಾ ಮೂರರಷ್ಟು ಉಳಿದುಕೊಂಡ ಉಳಿಕೆ ಉಷ್ಣವಿದೆಯಲ್ಲ ಅದನ್ನು ತೆಗೆದುಬಿಟ್ಟಿದ್ದರೆ ಎಲ್ಲ ಸುಸೂತ್ರವಾಗುತ್ತಿತ್ತು. ಆದರೆ ಇಲ್ಲೇ ಎಡವಟ್ಟಾಯಿತು. ಸ್ಥಾವರಕ್ಕೆ ತಂಪು ನೀರನ್ನು ಊಡುವ ಯಂತ್ರಗಳು ಸುನಾಮಿಯ ಹುಚ್ಚು ಹೊಡೆತಕ್ಕೆ ಕೊಚ್ಚಿಕೊಂಡು ಹೋಗಿಬಿಟ್ಟಿವು.  ವಿದ್ಯುತ್ ಕೈಕೊಟ್ಟಿತು. ಡಿಸೆಲ್ ಜನರೇಟರುಗಳು ಮುರಿದು ಬಿದ್ದಿದ್ದುವು. ಎಲ್ಲಿಂದಲೋ ಜನೇರಟರುಗಳು ಬಂದುವು. ಅವುಗಳನ್ನು ಜೋಡಿಸುವ ಪ್ರಯತ್ನಗಳು ನಡೆದರೂ ಎದುರಾದ ತೊಂದರೆಗಳು ನೂರಾರು.. ಸ್ಥಾವರದ ಹೊಣೆ ಹೊತ್ತ ಮಂದಿ ಕಾಲದೊಂದಿಗೆ, ಏರುತ್ತಿರುವ ಉಷ್ಣತೆಯ ನಡುವೆ, ಜೀವದ ಹಂಗು ತೊರೆದು  ಹೆಣಗಾಡತೊಡಗಿದರು. ಈ ಹೋರಾಟದಲ್ಲಿ ಒಂದಿಬ್ಬರು ಸತ್ತರೆ ಇನ್ನು ಕೆಲವರು ತೀವ್ರವಾಗಿ ಘಾಸಿಗೊಳಗಾದರು. ಸ್ಥಾವರದ ಉಷ್ಣತೆ ಹೆಚ್ಚತೊಡಗಿತು. ಒಳಗಿನ ಒತ್ತಡವನ್ನು ಕಡಿಮೆ ಮಾಡಲು ಸಂಗ್ರಹವಾದ ಉಗಿಯನ್ನು ನಿಯಂತ್ರಕಗಳಿಂದ ಹೊರ ಬಿಟ್ಟರು &#8211; ಅದು ಹಬ್ಬಿತು ಬೆಳ್ಳಗಿನ ಧೂಮವಾಗಿ &#8211; ಸ್ಥಾವರವೇ ಹೊತ್ತಿ ಉರಿದಂತೆ. ನಡು ನಡುವೆ ಸ್ಥಾವರದ ಹೊರ ಒಂದಷ್ಟು ಸ್ಫೋಟಗಳು ಸಂಭವಿಸಿದುವು.  ಇದೀಗ ಹೊರಗಿನಿಂದ ದೊಡ್ಡ ದೊಡ್ದ ಕೊಳವೆಗಳಲ್ಲಿ ಸ್ಥಾವರದ ಮೇಲೆ ನೀರು ಹರಿಯಿಸಲಾಗುತ್ತದೆ &#8211;  ಹೇಗಾದರೂ ತಂಪುಗೊಳಿಸುವುದಕ್ಕಾಗಿ.  ಫುಕುಶಿಮಾ ಪರಮಾಣು ಸ್ಥಾವರಗಳು ವಿಕಿರಣವನ್ನು ಸೂಸುತ್ತಿವೆ.</p>
<p><a href="http://apkrishna.files.wordpress.com/2011/03/20110312_011946_japan-earthquake_002_500.jpg"><img title="20110312_011946_Japan-Earthquake_002_500" src="http://apkrishna.files.wordpress.com/2011/03/20110312_011946_japan-earthquake_002_500.jpg?w=300&#038;h=198" alt="" width="300" height="198" /></a><a href="http://apkrishna.files.wordpress.com/2011/03/20110312_011946_japan-earthquake_002_500.jpg"></a></p>
<p>ವಿಕಿರಣದ  ಪ್ರಮಾಣವನ್ನು ಅಳೆಯಲು ಬಳಸುವ ಮಾನಕವೇ ಸೀವರ್ಟ್. ಸೀವರ್ಟ್ ಅನ್ನುವುದು ದೊಡ್ದದಾದ ಮಾನಕ. ಹಾಗಾಗಿ ಮಿಲಿಸೀವರ್ಟ್ ಬಳಸುತ್ತಾರೆ. ಯಾವುದೋ ಕಾರಣಕ್ಕೆ ವೈದ್ಯರು  ನಿಮ್ಮ ಕಂಕಾಲದ ಎಕ್ಸ್ ರೇ ಚಿತ್ರ ತೆಗೆದರೆ, ನೀವು ತುತ್ತಾದ ವಿಕಿರಣದ ಪ್ರಮಾಣ ಸುಮಾರು ೦.೨ ಮಿಲಿಸೀವರ್ಟ್. ಪ್ರಕೃತಿಯಲ್ಲಿ ಬಗೆ ಬಗೆ ಬಗೆಯ ವಿಕಿರಣ ಆಕರಗಳಿವೆ. ಭೂಮಿಯ ಮೇಲೆ ಸುರಿವ ವಿಶ್ವಕಿರಣಗಳು, ಭೂಮಿಯಲ್ಲಿರುವ ಯುರೇನಿಯಮ್, ಥೋರಿಯಮ್ ಮೊದಲಾದ ವಿಕಿರ ಪಟು ಧಾತುಗಳು ಮತ್ತು ಐಸೊಟೋಪುಗಳು.. ಹಾಗಾಗಿ ವಿಕಿರಣದಿಂದ ಅತೀತನಾಗಿ ಇರುವುದಕ್ಕೆ ಸಾಧ್ಯವಾಗದು &#8211; ಸಂತೆಯಲ್ಲಿದ್ದವ ಶಬ್ದಕ್ಕಂಜಿದಡೆಂತಯ್ಯ!  ಹಾಗೆ ನೋಡಿದರೆ ದೇಹವೇ ಒಂದು ವಿಕಿರಣದ ಆಕರ! ದೇಹದಲ್ಲಿರುವ ಪೊಟ್ಯಾಸಿಯಮ್ &#8211; ೪೦ ವಿಕಿರಣವನ್ನು ಸೂಸುತ್ತದೆ &#8211; ಎಂದೇ ವಿಕಿರಣ ದರ್ಶಕವನ್ನು ನಮ್ಮ ಬಳಿ ತೆಗೆದುಕೊಂದು ಬಂದರೆ, ಪಾಪ ಅದು ಬೊಬ್ಬೆ ಹೊಡೆಯುತ್ತೆ. ಎಲ್ಲ ನೈಸರ್ಗಿಕ ವಿಕಿರಣಗಳ ಒಟ್ಟು ಪ್ರಮಾಣ ವರ್ಷಕ್ಕೆ ಒಂದು ಮಿಲಿಸೀವರ್ಟ್ ಒಳಗೆ ಇರಬೇಕೆಂದು ವಿಕಿರಣ ತಜ್ಞರು ವಿಧಿಸಿದ್ದಾರೆ. ಅದನ್ನು ಮೀರಿ ವಿಕಿರಣಕ್ಕೆ ತುತ್ತಾಗುವುದು ಒಳ್ಳೆಯದಲ್ಲ.</p>
<p>ಫುಕುಶಿಮಾ ಪರಮಾಣು ಸ್ಥಾವರದ ಸುತ್ತ ಸಾಮಾನ್ಯವಾಗಿ ಇರುವ ವಿಕಿರಣಕ್ಕಿಂತ ಸಾವಿರಪಟ್ಟು ವಿಕಿರಣ ಪ್ರಮಾಣ ಕಂಡು ಬಂದಿತ್ತು. ಆದರೆ ಇತ್ತೀಚೆಗಿನ ವರದಿಗಳು ಹೇಳುವಂತೆ ಸ್ಥಾವರಗಳು ತಣಿಯುತ್ತಿವೆ. ವಿಕಿರಣದ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಸಮಾಧಾನದ ವಿಷಯ.    ಆದರೆ ಜಪಾನ್ ಸರಕಾರ ಈಗಾಗಲೇ ಪರಮಾಣು ಸ್ಥಾವರದ ಸುತ್ತುಮುತ್ತಲಿನ ಜನರನ್ನು ಸ್ಥಳಾಂತರಿಸಿದೆ. ಹೀಗೆ ಸ್ಥಳಾಂತರಿಸಲ್ಪಟ್ಟ ಜನರ ಸಂಖ್ಯೆಯೇ ಒಂದೂವರೆ ಲಕ್ಷವಂತೆ. ಇದುವೇ ಸಾಕು ಪರಿಸ್ಥಿತಿ ಎಷ್ಟೊಂದು ಗಂಭೀರವೆಂದು ಹೇಳುವುದಕ್ಕೆ.   ಜಪಾನ್ ಮತ್ತಿತರ ದೇಶಗಳಿಗೆ ಪರಮಾಣು ಸ್ಥಾವರಗಳಿಗಾದ ಗಂಭೀರ ಹಾನಿ ಇಂದು ಭೂಕಂಪ ಅಥವಾ ಸುನಾಮೀಯ ವಿನಾಶಕ್ಕಿಂತ ಅಧಿಕ ಚಿಂತೆಯನ್ನು ತಂದಿದೆ.</p>
<p>ಇಂದು ಪ್ರಪಂಚದಾದ್ಯಂತ ಭಾರತ ಮತ್ತು ಪಾಕಿಸ್ಥಾನವೂ ಸೇರಿದಂತೆ  ಮೂವತ್ತು ದೇಶಗಳಲ್ಲಿ ಒಟ್ಟು ೪೪೦ ಪರಮಾಣು ಸ್ಥಾವರಗಳಿವೆ. ಒಟ್ಟು ವಿದ್ಯುತ್ತಿನ ಶೇಕಡಾ ಹದಿನೈದರಷ್ಟನ್ನು ಈ ಸ್ಥಾವರಗಳ ಕೊಡುಗೆ. ಫ್ರಾನ್ಸಿನಲ್ಲಿ ಬೃಹತ್ ಸಾಮರ್ಥ್ಯದ ೫೯ ರಿಯಾಕ್ಟರುಗಳಿಂದ ಶೇಕಡಾ ೭೮ರಷ್ಟು (೬೫,೦೦೦ ಮೆಗಾವಾಟ್) ವಿದ್ಯುತ್ ಬರುತ್ತಿದ್ದು ಪರಮಾಣು ಶಕ್ತಿಯಿಂದ ವಿದ್ಯುದುತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅಮೇರಿಕಾ, ರಷ್ಯಾ, ಇಂಗ್ಲೆಂಡಿನಲ್ಲಿ ಇದರ ಪ್ರಮಾಣ ಶೇಕಡಾ ೨೦.  ಇವುಗಳಿಗೆ ಹೋಲಿಸಿದರೆ ಭಾರತದ ಓಟ ನಿಧಾನಗತಿಯದು.  ಇಲ್ಲಿ ೨೧ ಪರಮಾಣು ಸ್ಥಾವರಗಳಿಂದ ಸುಮಾರು ೬೫೦೦ಮೆಗಾವಾಟ್ ವಿದ್ಯುತ್ತು ಉತ್ಪಾದನೆಯಾಗುತ್ತಿದೆ &#8211; ಶೇಕಡಾ ಮೂರರಷ್ಟು. ಇವುಗಲಲ್ಲಿ ಅತ್ಯಂತ ಹಳೆಯದು &#8211; ಮಹರಾಷ್ಟ್ರದ ತಾರಾಪುರದಲ್ಲಿದ್ದರೆ (೧೯೬೯, ಅಕ್ಟೋಬರ್) ಇತ್ತೇಚೆಗಿನದು ಕೈಗಾದಲ್ಲಿದೆ (೨೦೦೭, ಮೇ).  ತಮಿಳುನಾಡಿನ ತಿರುನ್ವೇಲಿಯ ಕುಡಂಕುಲಮ್ಮಿನಲ್ಲಿ ಪ್ರಸ್ತುತ ಭಾರತದಲ್ಲಿರುವ  ಇನ್ನೂರೈವತ್ತು ಮೆಗಾವಾಟ್ ಸಾಮರ್ಥ್ಯದ ರಿಯಾಕ್ಟರುಗಳನ್ನೆಲ್ಲ ಮೀರಿಸಿ ಸಾವಿರ ಮೆಗಾವಾಟ್ ಸಾಮರ್ಥ್ಯದ  ಬೃಹದ್ ರಿಯಾಕ್ಟರುಗಳು ವರ್ಷದೊಳಗೆ ಕಾರ್ಯಾಚರಣೆಗೆ ಸಿದ್ಧವಾಗುತ್ತಿವೆ.  ಮುಂದಿನೆರಡು ದಶಕದೊಳಗೆ ಸುಮಾರು ಮೂವತ್ತು ರಿಯಾಕ್ಟರುಗಳ ಸ್ಥಾಪನೆಯ ಕನಸಿನ ಯೋಜನೆ ನ್ಯೂಕ್ಲಿಯರ್ ಪವರ್ ಕಾರ್ಪರೇಶನ್ ಲಿಮಿಟೆಡ್ ಮುಂದಿದೆ.</p>
<p><a href="http://apkrishna.files.wordpress.com/2011/03/kaiga-plant-india-unit-1-2.jpg"><img title="ಕೈಗಾ ಪರಮಾಣು ಸ್ಥಾವರಗಳ ವಿಹಂಗಮ ನೋಟ - ಹಿನ್ನೆಲೆಯಲ್ಲಿ ಕಾಳೀ " src="http://apkrishna.files.wordpress.com/2011/03/kaiga-plant-india-unit-1-2.jpg?w=300&#038;h=201" alt="" width="300" height="201" /></a></p>
<p><a href="http://apkrishna.files.wordpress.com/2011/03/kaiga-plant-india-unit-1-2.jpg"></a></p>
<p>ಆಂಧ್ರಪ್ರದೇಶದ ಕೋವಡಾ, ಮಹಾರಾಷ್ಟ್ರದ ಜೈತಾಪುರ, ಹರ್ಯಾನದ ಗೋರಗ್‌ಪುರ, ಒರಿಸ್ಸಾದ ಸೋನಾಮರ್ ಹೀಗೆ ಹಲವೆಡೆ ತಲೆ ಎತ್ತಲಿರುವ ಈ ಸ್ಥಾವರಗಳ ವಿರುದ್ಧ  ಸ್ಥಳೀಯ ಮಂದಿ ಹೋರಾಟದ ಹಾದಿ ಹಿಡಿದಿದ್ದಾರೆ. ಜಪಾನ್ ಘಟನೆಯ ಪರಿಣಾಮ ಆ ಕೂಗಿಗೆ ಇನ್ನಷ್ಟು ಬಲ ಕೊಡಬಹುದು.  ಒಂದು ನೆಮ್ಮದಿಯೆಂದರೆ ಇದು ತನಕ ಅಭಿವೃದ್ಧಿಶೀಲ ಭಾರತದಲ್ಲಿ ಗಂಭೀರ ಪರಮಾಣು ಸ್ಥಾವರ ದುರಂತಗಳು ಸಂಭವಿಸಿಲ್ಲ.  ಎಲ್ಲ ದುರಂತಗಳು ಆಗಿರುವುದು ಅಭಿವೃದ್ಧಿ ಹೊಂದಿರುವ ಅಮೇರಿಕ, ಇಂಗ್ಲೆಂಡ್, ಜಪಾನ್, ಫ್ರಾನ್ಸ್ ಮೊದಲಾದೆಡೆ!. ಸ್ಥಾವರಗಳು ಅತ್ಯಧಿಕ ಸಂಖ್ಯೆಯಲ್ಲಿರುವುದು ಮತ್ತು ಸಂತತವಾಗಿ ಅವು ಕಾರ್ಯಾಚರಿಸುತ್ತಿರುವುದು ಇದಕ್ಕೆ ಕಾರಣವಿರಲೂಬಹುದು.</p>
<p>ನಾವು ಯಾವ ಕಾರಣಕ್ಕೂ ನಿರ್ಲಕ್ಷ್ಯ ತಾಳುವಂತಿಲ್ಲ.  ಒಂದು ಭೋಪಾಲ್ ದುರಂತವೇ ನಮಗೆ ಪಾಠ ಕಲಿಸಿದೆ. ಆದರೆ ರಿಯಾಕ್ಟರ್ ದುರಂತ ಹಾಗಲ್ಲ.  ಇದರ ಅಪಾಯಗಳು ದೀರ್ಘಕಾಲದ್ದು ಮತ್ತು ತಲೆ ತಲಾಂತರಕ್ಕೆ ಸಂದು ಹೋಗುವದ್ದು. ಈ ದೈತ್ಯ ಶಕ್ತಿಯನ್ನು ನಿರ್ವಹಿಸುವಲ್ಲಿ ಕೊಂಚ ತಪ್ಪಿದರೂ ಸಾಕು -ಅದು ಅಸಹನೀಯವೆನ್ನುವುದನ್ನು ಇತಿಹಾಸದ ದುರಂತಗಳು ಮತ್ತು ಜಪಾನಿನ ವರ್ತಮಾನದ ದುರಂತ ಹೇಳುತ್ತಿವೆ.  ಭವಿಷ್ಯದಲ್ಲಿ ಹಲವು ಪರಮಾಣು ಸ್ಥಾವರಗಳನ್ನು ಸ್ಥಾಪಿಸುವಾಗ ನಿಭಾಯಿಸಬೇಕಾದ ಹೊಣೆಗಳು ಯೋಜಕರ  ವಿಶ್ವಾಸಾರ್ಹ ಬದ್ಧತೆ ಮೇಲಿದೆ.</p>
<p>ಒಂದೊಮ್ಮೆ ಭೂಕಂಪನದಂಥ ನೈಸರ್ಗಿಕ ಕಾರಣಕ್ಕೆ ಅಥವಾ ಮನುಷ್ಯ ದೌರ್ಬಲ್ಯದ ಕಾರಣಕ್ಕೆ ಪರಮಾಣು ಸ್ಥಾವರದಲ್ಲಿ ದುರ್ಘಟನೆ ಸಂಭವಿಸಿದರೆ ವಿಕಿರಣ ಆಪತ್ತನ್ನು ಎದುರಿಸುವ ಬಗೆ ಹೇಗೆ? ನಾವು ಆ ಮಹಾ ಪ್ರಮಾಣದ ವಿಪತ್ತನ್ನು ಎದುರಿಸಲು ಸಜ್ಜಾಗಿರುತ್ತೇವೆಯೇ? ಜನರು ತುಂಬಿ ತುಳುಕಿ ಉಕ್ಕೇರಿ ಹರಿವ ದೇಶದಲ್ಲಿ ಆ ದುರ್ಘಟನೆಗಳು ಉಂಟುಮಾಡುವ ಪರಿಣಾಮಗಳು, ಸಾಮಾಜಿಕ ಆಯಾಮಗಳ ಬಗ್ಗೆ ಕೂಡ ಚಿಂತನೆ ಬೇಕಾಗುತ್ತದೆ.  ಜಪಾನ್ ದುರಂತದ ಹಿನ್ನೆಲೆಯಲ್ಲಿ &#8220;ಭಾರತದ ೨೧ ಪರಮಾಣು ಸ್ಥಾವರಗಳು ಭೂಕಂಪ ವಲಯದಲ್ಲಿಲ್ಲ. ಆದರೂ ಭೂಕಂಪವಾದಲ್ಲಿ ಯಾವುದೇ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸಂಪೂರ್ಣ ಸನ್ನದ್ಧರಾಗಿದ್ದೇವೆ&#8221; ಎಂಬ ಅಭಯವನ್ನು ನ್ಯೂಕ್ಲಿಯರ್ ಪವರ್ ಕಾರ್ಪರೇಶನ್ ಲಿಮಿಟೆಡ್ ನೀಡಿದೆ.</p>
<p><a href="http://apkrishna.files.wordpress.com/2011/03/seismic20zone20map20of20india.jpg"></a></p>
<p><a href="http://apkrishna.files.wordpress.com/2011/03/seismic20zone20map20of20india.jpg"><img title="ಭೂಕಂಪ ವಲಯಗಳು " src="http://apkrishna.files.wordpress.com/2011/03/seismic20zone20map20of20india.jpg?w=276&#038;h=300" alt="" width="276" height="300" /></a></p>
<p>ಇಲ್ಲಿ ನಾವು ಗಮನಿಸಬೇಕು &#8211; ಹಲವು ವರ್ಷಗಳ ಅಧ್ಯಯನದಿಂದ ನಮ್ಮ ದೇಶವನ್ನು ಭೂಕಂಪಕ್ಕೆ ಸಂಬಂಧಿಸಿದ ಹಾಗೆ ಐದು ವಲಯಗಳಾಗಿ ವಿಂಗಡಿಸಲಾಗಿದೆ. ಒಂದನೇಯ ವಲಯದಲ್ಲಿ ಭೂಕಂಪದ ಸಾಧ್ಯತೆ ತೀರ ಕನಿಷ್ಠವಾದರೆ, ಐದನೇ ವಲಯದಲ್ಲಿ ಅತ್ಯಂತ ಗರಿಷ್ಠ. ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳು ಮೊದಲ ವಲಯದಲ್ಲಿ ಬರುವ ಕಾರಣದಿಂದಲೇ ಇರಬೇಕು &#8211; ಹಲವು ಯೋಜಿತ ಪರಮಾಣು ಸ್ಥಾವರಗಳು ಈ ರಾಜ್ಯಗಳಲ್ಲಿ ಬರಲಿವೆ. ಕೈಗಾ ಸ್ಥಾವರಗಳು ವಲಯ ಮೂರರಲ್ಲಿವೆ.  ಈಗಾಗಲೇಸ್ಥಾಪಿತವಾಗಿರುವ ನರೋರಾ ಪರಮಾಣು ಸ್ಥಾವರಗಳು ಮಾತ್ರ ನಾಲ್ಕನೇಯ ವಲಯದಲ್ಲಿದೆ &#8211; ಇದು ಚಿಂತನೆಗೆ ಮತ್ತು ಚಿಂತೆಗೆ ಸಕಾಲ.  ಜಪಾನಿನಲ್ಲಿ ಪರಮಾಣು ಸ್ಥಾವರಗಳ ಪರಿಸ್ಥಿತಿ ತೀವ್ರ ದುರ್ಭರವೆಂದು ಜಪಾನಿನ ಸರಕಾರ ಪ್ರಾಂಜಲವಾಗಿ ಒಪ್ಪಿಕೊಂಡಿದೆ. ದೇಶವನ್ನು ಉದ್ಧೇಶಿಸುತ್ತ  ಮಾಡಿದ ಭಾಷಣದಲ್ಲಿ ಪ್ರಧಾನ ಮಂತ್ರಿ ನಓಟೋಕಾನ್ ಹೇಳಿದ್ದಾರೆ &#8220;ಜಪಾನ್ ದ್ವಿತೀಯ ಮಹಾಯುದ್ಧದ ನಂತರ ಅತ್ಯಂತ ಭೀಕರ ಸಮಸ್ಯೆಯೊಂದನ್ನು ಎದುರಿಸುತ್ತಿದೆ. ಆದರೆ ಒಂದು ದೇಶವಾಗಿ ನಾವೆಲ್ಲ ಒಟ್ಟಾಗಿ ಈ ಸಮಸ್ಯೆಯಿಂದ ಹೊರ ಬರುತ್ತೇವೆನ್ನುವ ಬಗ್ಗೆ ನನಗೆ ಭರವಸೆ ಇದೆ &#8221;  ಆ ಭರವಸೆಯ ಬೆಳಕು ಬಹು ಬೇಗೆ ಬರಲಿ.<a href="http://apkrishna.files.wordpress.com/2011/03/seismic20zone20map20of20india.jpg"></a><a href="http://apkrishna.files.wordpress.com/2011/03/tsunami-dust-wave.jpg"></a><a href="http://apkrishna.files.wordpress.com/2011/03/normal.jpg"></a></p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/466/"><img alt="" border="0" src="http://feeds.wordpress.com/1.0/comments/apkrishna.wordpress.com/466/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/466/"><img alt="" border="0" src="http://feeds.wordpress.com/1.0/delicious/apkrishna.wordpress.com/466/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/466/"><img alt="" border="0" src="http://feeds.wordpress.com/1.0/facebook/apkrishna.wordpress.com/466/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/466/"><img alt="" border="0" src="http://feeds.wordpress.com/1.0/twitter/apkrishna.wordpress.com/466/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/466/"><img alt="" border="0" src="http://feeds.wordpress.com/1.0/stumble/apkrishna.wordpress.com/466/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/466/"><img alt="" border="0" src="http://feeds.wordpress.com/1.0/digg/apkrishna.wordpress.com/466/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/466/"><img alt="" border="0" src="http://feeds.wordpress.com/1.0/reddit/apkrishna.wordpress.com/466/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=466&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2011/03/22/%e0%b2%ad%e0%b3%82%e0%b2%95%e0%b2%82%e0%b2%aa%e0%b2%95%e0%b3%8d%e0%b2%95%e0%b3%86-%e0%b2%a4%e0%b2%a4%e0%b3%8d%e0%b2%a4%e0%b2%b0-%e0%b2%aa%e0%b2%b0%e0%b2%ae%e0%b2%be%e0%b2%a3%e0%b3%81-%e0%b2%b8/feed/</wfw:commentRss>
		<slash:comments>10</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2011/03/tsunami-dust-wave.jpg?w=300" medium="image">
			<media:title type="html">ಜಪಾನಿನಲ್ಲಿ ಎದ್ದ ಟ್ಸುನಾಮೀ </media:title>
		</media:content>

		<media:content url="http://apkrishna.files.wordpress.com/2011/03/japan_tsunami_2011_fujitsika.jpg?w=300" medium="image">
			<media:title type="html">japan_tsunami_2011_Fujitsika</media:title>
		</media:content>

		<media:content url="http://apkrishna.files.wordpress.com/2011/03/normal1.jpg?w=300" medium="image">
			<media:title type="html">ರಿಯಾಕ್ತರಿನ ಸರಳ ನಿರೂಪಣೆ </media:title>
		</media:content>

		<media:content url="http://apkrishna.files.wordpress.com/2011/03/377731178_2ae63b5f24.jpg?w=300" medium="image">
			<media:title type="html">377731178_2ae63b5f24</media:title>
		</media:content>

		<media:content url="http://apkrishna.files.wordpress.com/2011/03/20110312_011946_japan-earthquake_002_500.jpg?w=300" medium="image">
			<media:title type="html">20110312_011946_Japan-Earthquake_002_500</media:title>
		</media:content>

		<media:content url="http://apkrishna.files.wordpress.com/2011/03/kaiga-plant-india-unit-1-2.jpg" medium="image">
			<media:title type="html">ಕೈಗಾ ಪರಮಾಣು ಸ್ಥಾವರಗಳ ವಿಹಂಗಮ ನೋಟ - ಹಿನ್ನೆಲೆಯಲ್ಲಿ ಕಾಳೀ </media:title>
		</media:content>

		<media:content url="http://apkrishna.files.wordpress.com/2011/03/seismic20zone20map20of20india.jpg?w=276" medium="image">
			<media:title type="html">ಭೂಕಂಪ ವಲಯಗಳು </media:title>
		</media:content>
	</item>
		<item>
		<title>ಚಂದ್ರ ಶತಮಾನೋತ್ಸವ</title>
		<link>http://apkrishna.wordpress.com/2010/10/17/%e0%b2%9a%e0%b2%82%e0%b2%a6%e0%b3%8d%e0%b2%b0-%e0%b2%b6%e0%b2%a4%e0%b2%ae%e0%b2%be%e0%b2%a8%e0%b3%8b%e0%b2%a4%e0%b3%8d%e0%b2%b8%e0%b2%b5/</link>
		<comments>http://apkrishna.wordpress.com/2010/10/17/%e0%b2%9a%e0%b2%82%e0%b2%a6%e0%b3%8d%e0%b2%b0-%e0%b2%b6%e0%b2%a4%e0%b2%ae%e0%b2%be%e0%b2%a8%e0%b3%8b%e0%b2%a4%e0%b3%8d%e0%b2%b8%e0%b2%b5/#comments</comments>
		<pubDate>Sun, 17 Oct 2010 17:56:53 +0000</pubDate>
		<dc:creator>apkrishna</dc:creator>
				<category><![CDATA[ಖಗೋಳವಿಜ್ಞಾನ]]></category>
		<category><![CDATA[ವಿಜ್ಞಾನ ಲೇಖನಗಳು]]></category>
		<category><![CDATA[ವ್ಯಕ್ತಿ - ಜೀವನ]]></category>

		<guid isPermaLink="false">http://apkrishna.wordpress.com/?p=429</guid>
		<description><![CDATA[ನಿಮಗೆ ನೆನಪಿಸುತ್ತಿದ್ದೇನೆ, ಅಷ್ಟೇ. ಇಪ್ಪತ್ತನೇ ಶತಮಾನದ ಖಗೋಳವಿಜ್ಞಾನ ರಂಗ ಕಂಡ ಅದ್ವಿತೀಯ ತಾರೆಯ ಜನ್ಮದಿನ ಬಂದಿದೆ. ತನ್ನ ಕಾಲದಲ್ಲಿಯೇ ದಂತಕಥೆಯಾದ ಇವರನ್ನು ವಿಜ್ಞಾನ ಲೇಖಕ ಮಿಲ್ಲರ್ &#8220;ನಕ್ಷತ್ರಲೋಕದ ಚಕ್ರವರ್ತಿ&#8221; ಎಂದು ಕರೆದಿದ್ದಾರೆ. ಈ ಅನಭಿಷಕ್ತ ಚಕ್ರವರ್ತಿಯೇ ಪ್ರೊ. ಎಸ್.ಚಂದ್ರಶೇಖರ್ - ಅತ್ಮೀಯರ ಪಾಲಿಗೆ ಚಂದ್ರ. ಹತ್ತೊಂಬತ್ತರ ಹರೆಯದಲ್ಲಿಯೇ ಇವರು ಸಾಗಿದ್ದು ಸಾಗರದಾಚೆಯ ಇಂಗ್ಲೆಂಡಿಗೆ ನಕ್ಷತ್ರಗಳ ಸಂಕೀರ್ಣ ಸಂರಚನೆಯ ಬಗ್ಗೆ ಅತ್ಯುನ್ನತ ಸಂಶೋಧನೆಗೆ. ರಾಯಲ್ ಸೊಸೈಟಿಯ ವಿದ್ವನ್ಮಣಿಗಳ ಸಭೆಯಲ್ಲಿ ತನ್ನ ನೂತನ ಸಿದ್ಧಾಂತವನ್ನು ಮಂಡಿಸಿ ಘನಂದಾರಿ ವಿಜ್ಞಾನಿಗಳಿಗೆ ಸಡ್ಡು [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=429&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p><span style="font-family:Tunga;"><a href="http://apkrishna.files.wordpress.com/2010/10/chandra_72.jpg"><img class="alignleft size-medium wp-image-436" title="chandra_72" src="http://apkrishna.files.wordpress.com/2010/10/chandra_72.jpg?w=254&#038;h=341" alt="" width="254" height="341" /></a></span>ನಿಮಗೆ ನೆನಪಿಸುತ್ತಿದ್ದೇನೆ<span style="font-family:Tunga;">, </span>ಅಷ್ಟೇ<span style="font-family:Tunga;">. </span>ಇಪ್ಪತ್ತನೇ ಶತಮಾನದ ಖಗೋಳವಿಜ್ಞಾನ ರಂಗ ಕಂಡ ಅದ್ವಿತೀಯ ತಾರೆಯ ಜನ್ಮದಿನ ಬಂದಿದೆ<span style="font-family:Tunga;">. </span>ತನ್ನ ಕಾಲದಲ್ಲಿಯೇ ದಂತಕಥೆಯಾದ ಇವರನ್ನು ವಿಜ್ಞಾನ ಲೇಖಕ ಮಿಲ್ಲರ್ <span style="font-family:Tunga;">&#8220;</span>ನಕ್ಷತ್ರಲೋಕದ ಚಕ್ರವರ್ತಿ<span style="font-family:Tunga;">&#8221; </span>ಎಂದು ಕರೆದಿದ್ದಾರೆ. ಈ ಅನಭಿಷಕ್ತ ಚಕ್ರವರ್ತಿಯೇ ಪ್ರೊ<span style="font-family:Tunga;">. </span>ಎಸ್<span style="font-family:Tunga;">.</span>ಚಂದ್ರಶೇಖರ್ <span style="font-family:Tunga;">- </span>ಅತ್ಮೀಯರ ಪಾಲಿಗೆ ಚಂದ್ರ<span style="font-family:Tunga;">. </span>ಹತ್ತೊಂಬತ್ತರ ಹರೆಯದಲ್ಲಿಯೇ ಇವರು ಸಾಗಿದ್ದು ಸಾಗರದಾಚೆಯ ಇಂಗ್ಲೆಂಡಿಗೆ ನಕ್ಷತ್ರಗಳ ಸಂಕೀರ್ಣ ಸಂರಚನೆಯ ಬಗ್ಗೆ ಅತ್ಯುನ್ನತ ಸಂಶೋಧನೆಗೆ<span style="font-family:Tunga;">. </span>ರಾಯಲ್ ಸೊಸೈಟಿಯ ವಿದ್ವನ್ಮಣಿಗಳ ಸಭೆಯಲ್ಲಿ ತನ್ನ ನೂತನ ಸಿದ್ಧಾಂತವನ್ನು ಮಂಡಿಸಿ ಘನಂದಾರಿ ವಿಜ್ಞಾನಿಗಳಿಗೆ ಸಡ್ಡು ಹೊಡೆದರು<span style="font-family:Tunga;">; </span>ಬಿಳಿ ದೊರೆಗಳ ಆಳ್ವಿಕೆಯ ದಿನಗಳ ಕೀಳರಿಮೆಯನ್ನು ತೊಡೆದು ಭಾರತೀಯ ಅಸ್ಮಿತೆಯನ್ನು ಪ್ರಪಂಚ ಮುಖಕ್ಕೆ ತೋರಿದರು<span style="font-family:Tunga;">. </span>ಸಜ್ಜನಿಕೆಯ ಸಾಕಾರವಾಗಿದ್ದ ಇವರ ಜೀವನ <span style="font-family:Tunga;">- </span>ಸಾಧನೆ ಎಲ್ಲವೂ ರೋಚಕ <span style="font-family:Tunga;">- </span>ತಮ್ಮ ಕಾಲದಲ್ಲಿಯೆ ದಂತ ಕಥೆಯಾಗಿ ಹೋದರು<span style="font-family:Tunga;">. </span>ಇರುತ್ತಿದ್ದರೆ ಇವರಿಗೆ ನೂರು ವರ್ಷಗಳಾಗುತ್ತಿದ್ದುವು<span style="font-family:Tunga;">. </span>ಅಂದರೆ ವಿಜ್ಞಾನ ಪ್ರಿಯರಿಗೆ ಚಂದ್ರಶೇಖರ್ ಜನ್ಮ ಶತಮಾನೋತ್ಸವದ ಆಚರಣೆಯ ಸಂಭ್ರಮ. ಆ ಮೂಲಕ ಇನ್ನಷ್ಟು ವಿಜ್ಞಾನ ಚಿಂತನ ಮಂಥನಕ್ಕೊಂದು ಅವಕಾಶ.<span style="font-family:Tunga;"><span id="more-429"></span></span><strong><span style="color:#0000ff;">ಅರಳಿದ ಪ್ರತಿಭೆ</span></strong></p>
<p>ಚಂದ್ರಶೇಖರ್ ಹುಟ್ಟಿದ್ದು ೧೯೧೦<span style="font-family:Tunga;">, </span>ಅಕ್ಟೋಬರ್ ೧೯ ರಂದು<span style="font-family:Tunga;">, </span>ಅವಿಭಕ್ತ ಭಾರತದ ಲಾಹೋರಿನ ಸುಸಂಸ್ಕೃತ ಕುಟುಂಬದಲ್ಲಿ<span style="font-family:Tunga;">. </span>ತಂದೆ <span style="font-family:Tunga;">- </span>ಸುಬ್ರಹ್ಮಣ್ಯನ್ ಅಯ್ಯರ್<span style="font-family:Tunga;">, </span>ಅಂದಿನ ಬ್ರಿಟಿಷ್ ಸರಕಾರದಲ್ಲಿ ಡೆಪ್ಯೂಟಿ ಅಕೌಂಟೆಂಟ್ ಜನರಲ್ ಆಗಿದ್ದವರು<span style="font-family:Tunga;">. </span>ತಾಯಿ <span style="font-family:Tunga;">- </span>ಸೀತಾಲಕ್ಷ್ಮಿ <span style="font-family:Tunga;">- </span>ಸಹನೆಯೇ ಮೈವೆತ್ತಂತಿದ್ದವರು<span style="font-family:Tunga;">. </span>ಈ ದಂಪತಿಗಳಿಗೆ ಹತ್ತುಜನ ಮಕ್ಕಳು<span style="font-family:Tunga;">. </span>ಇವರಲ್ಲಿ ಚಂದ್ರಶೇಖರ್ ಮೂರನೇಯವರು<span style="font-family:Tunga;">. </span>ಮನೆಯಲ್ಲಿ ಪ್ರೀತಿಯಿಂದ ಇವರನ್ನು ಕರೆಯುತ್ತಿದ್ದುದು <span style="font-family:Tunga;">- </span>ಚಂದ್ರ<span style="font-family:Tunga;">. </span>ಮುಂದೆ ಆತ್ಮೀಯ ವಲಯದಲ್ಲಿ ಕೂಡ ಎಲ್ಲರೂ ಚಂದ್ರ ಎಂದೇ ಕರೆಯುತ್ತಿದ್ದರು<span style="font-family:Tunga;">.</span></p>
<p>ಇನ್ನು ಚಿಕ್ಕಪ್ಪ <span style="font-family:Tunga;">- </span>ಪ್ರೊಫೆಸರ್<span style="font-family:Tunga;">. </span>ಸಿ<span style="font-family:Tunga;">.</span>ವಿ<span style="font-family:Tunga;">.</span>ರಾಮನ್ <span style="font-family:Tunga;">(</span>೧೮೮೮<span style="font-family:Tunga;">-</span>೧೯೭೦<span style="font-family:Tunga;">) </span>ರಾಮನ್ ಪರಿಣಾಮದ ಆವಿಷ್ಕಾರಕ್ಕೆ ೧೯೩೦ರಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು<span style="font-family:Tunga;">. </span>ಬಾಲ್ಯದಿಂದಲೇ ಚಂದ್ರರಿಗೆ ಗಣಿತ ಮತ್ತು ಭೌತ ವಿಜ್ಞಾನದ ಬಗ್ಗೆ ಒಲವು<span style="font-family:Tunga;">. </span>ಇವರ ತಂದೆ ತಮ್ಮ ಪರಿಚಿತರಲ್ಲಿ ಹೆಮ್ಮೆಯಿಂದ ಹೇಳುತ್ತಿದ್ದರಂತೆ <span style="font-family:Tunga;">&#8220;</span>ನೋಡಿ<span style="font-family:Tunga;">, </span>ನಮ್ಮ ಚಂದ್ರ ಒಂದು ದಿನ ನನ್ನ ತಮ್ಮ ರಾಮನ್‌ನನ್ನೂ ಮೀರಿಸುತ್ತಾನೆ<span style="font-family:Tunga;">&#8220;. </span>ಅವರ ಊಹೆ ಸುಳ್ಳಾಗಲಿಲ್ಲ<span style="font-family:Tunga;">.</span></p>
<p>ಮನೆಯಲ್ಲಿತ್ತು ಸುಸಜ್ಜಿತ ಗ್ರಂಥ ಭಂಡಾರ<span style="font-family:Tunga;">. </span>ಆಟಕ್ಕಿಂತ ಪಾಠದಲ್ಲಿಯೇ ತಲ್ಲಿನ<span style="font-family:Tunga;">. </span>ಅಜ್ಜನ ಕಾಲದಿಂದ ಶೇಖರವಾಗಿದ್ದ ಗಣಿತ ಮತ್ತು ವಿಜ್ಞಾನ ಪುಸ್ತಕಗಳೆಲ್ಲವನ್ನು ಹೈಸ್ಕೂಲು ಮೆಟ್ಟಲೇರುವ ಮೊದಲೇ ಚಂದ್ರ ಸ್ವಾಂಗೀಕರಿಸಿಕೊಂಡ<span style="font-family:Tunga;">. </span>ಒಮ್ಮೆ ಓದಿದರೆ ಪುಟ ಪುಟಗಳಲ್ಲಿ ಏನಿದೆ ಎನ್ನುವುದನ್ನು ಕರಾರುವಾಕ್ಕಾಗಿ ಹೇಳಬಲ್ಲ ಆಸಾಧಾರಣ ನೆನಪು ಶಕ್ತಿ<span style="font-family:Tunga;">. </span>ಸಹಜವಾಗಿಯೇ ತರಗತಿಯಲ್ಲಿ ಮೊದಲ ಸ್ಥಾನ<span style="font-family:Tunga;">. </span>ಗಣಿತ<span style="font-family:Tunga;">, </span>ವಿಜ್ಞಾನ ಬಿಟ್ಟರೆ ಆಸಕ್ತಿ ಇದ್ದುದು <span style="font-family:Tunga;">- </span>ಇಂಗ್ಲೀಷ್ ಸಾಹಿತ್ಯದಲ್ಲಿ<span style="font-family:Tunga;">. </span>ಇಂಗ್ಲೀಷಿನ ಉದ್ದಾಮ ಸಾಹಿತಿಗಳ ಕೃತಿಗಳೆಲ್ಲವನ್ನು ಅರಗಿಸಿಕೊಂಡ ಕಾರಣದಿಂದಲೇ ಚಂದ್ರಶೇಖರ್ ವೈಜ್ಞಾನಿಕ ಬರಹದಲ್ಲಿ ಸಾಹಿತ್ಯದ ಸೊಗಡಿರುತ್ತಿತ್ತು<span style="font-family:Tunga;">. </span>ಎಂದೇ ನೊಬೆಲ್ ಪ್ರಶಸ್ತಿ ವಿಜೇತ ಹ್ಯಾನ್ಸ್ ಬೇಥ್ ಬರೆಯುತ್ತಾರೆ <span style="font-family:Tunga;">&#8221; </span>ಚಂದ್ರ ಅವರ ಬರಹವೆಂದರೆ ವಿಕ್ಟೋರಿಯನ್ ಯುಗದ ಸೌಂದರ್ಯ<span style="font-family:Tunga;">&#8220;. </span></p>
<p>ಸಂಶೋಧನ ಪ್ರಪಂಚಕ್ಕೆ ಚಂದ್ರಶೇಖರ್ ಆಗಮನವಾದದ್ದು ಹದಿ ಹರಯದಲ್ಲಿ<span style="font-family:Tunga;">. </span>೧೯೨೮<span style="font-family:Tunga;">. </span>ಆಗ ಅವರಿಗೆ ಹದಿನೆಂಟು ವರ್ಷ<span style="font-family:Tunga;">. </span>ಮದ್ರಾಸಿನ ಮದ್ರಾಸಿನ ಪ್ರಸೆಡಿನ್ಸಿ ಕಾಲೇಜಿನಲ್ಲಿ ಬಿ<span style="font-family:Tunga;">.</span>ಎಸ್<span style="font-family:Tunga;">.</span>ಸಿ<span style="font-family:Tunga;">. </span>ವಿದ್ಯಾರ್ಥಿ<span style="font-family:Tunga;">. </span>ಬೇಸಗೆಯ ರಜೆಯಲ್ಲಿ ಕಲಕತ್ತೆಯಲ್ಲಿ ತನ್ನ ಚಿಕ್ಕಪ್ಪ ರಾಮನ್ ಅವರ ಸಂಶೋಧನ ಕೇಂದ್ರಕ್ಕೆ ಹೋದರು<span style="font-family:Tunga;">. </span>ಅಲ್ಲಿಯ ಅನುಭವವನ್ನು ಚಂದ್ರಶೇಖರ್ ವರ್ಣಿಸುತ್ತಾರೆ <span style="font-family:Tunga;">&#8220;</span>೧೯೨೮ ರ ಬೇಸಗೆಯಲ್ಲಿ ನಾನು ಸುಮಾರು ಎರಡು ತಿಂಗಳ ಕಾಲ ರಾಮನ್ ಅವರ ಪ್ರಯೋಗಾಲಯದಲ್ಲಿ ಕಳೆದೆ<span style="font-family:Tunga;">. </span>ಆ ದಿನಗಳಲ್ಲಿ ಹಲವು ತರುಣ ಪ್ರತಿಭಾನ್ವಿತರು ರಾಮನ್ ಅವರ ನೂತನ ಆವಿಷ್ಕಾರಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುತ್ತಿದ್ದರು<span style="font-family:Tunga;">. </span>ಅವರಲ್ಲಿ ಹಲವರು ಮುಂದೆ ಭಾರತೀಯ ವಿಜ್ಞಾನ ರಂಗದಲ್ಲಿ ಉನ್ನತ ಸ್ತರವನ್ನು ಅಲಂಕರಿಸಿದರು<span style="font-family:Tunga;">. </span>ಈ ಎಲ್ಲರು ನೂತನಾ ಆವಿಷ್ಕಾರದಿಂದ ಸ೦ಭ್ರಮೋತ್ಸಾಹದಲ್ಲಿದ್ದರು<span style="font-family:Tunga;">. </span>ನನ್ನಂಥ ತರುಣನಿಗೆ ಅದೊಂದು ಅನನ್ಯ ಅನುಭವವಾಗಿತ್ತು<span style="font-family:Tunga;">&#8221; </span></p>
<p><span style="font-family:Tunga;"><a href="http://apkrishna.files.wordpress.com/2010/10/raman_prince_big1.jpg"><img class="size-medium wp-image-441 alignleft" title="raman_prince_big" src="http://apkrishna.files.wordpress.com/2010/10/raman_prince_big1.jpg?w=256&#038;h=342" alt="" width="256" height="342" /></a></span>ಆ ದಿನಗಳು ಇಂದಿನಂತೆ ಮಾಹಿತಿ ಯುಗವಲ್ಲ<span style="font-family:Tunga;">. </span>ಅಂತಾರಾಷ್ಟ್ರೀಯ ಪತ್ರಿಕೆಗಳು ಅತ್ಯಂತ ಕಷ್ಟದಲ್ಲಿ ದೊರೆಯುತ್ತಿದ್ದುವು<span style="font-family:Tunga;">, </span>ಅಷ್ಟೇ<span style="font-family:Tunga;">. </span>ಚಂದ್ರ ಒಂದೆಡೆ ಹೇಳಿದ್ದಾರೆ <span style="font-family:Tunga;">&#8221; </span>ಪ್ರತಿ ತಿಂಗಳಿನ ನಿರ್ದಿಷ್ಟ ದಿನದಂದು ಹಡಗು ಬರುತ್ತಿತ್ತು <span style="font-family:Tunga;">- </span>ನಾನು ಕಾಯುತ್ತಿದ್ದೆ ಕಾತರದಿಂದ ಅ ಹಡಗಿಗಾಗಿ<span style="font-family:Tunga;">, </span>ಅದರಲ್ಲಿ ಬರುತ್ತಿದ್ದ ನೇಚರ್<span style="font-family:Tunga;">, </span>ಫಿಲಾಸಾಫಿಕಲ್ ಮ್ಯಾಗಝೀನಿನ ಪ್ರತಿಗಳಿಗಾಗಿ<span style="font-family:Tunga;">&#8221; </span></p>
<p>೧೯೨೯<span style="font-family:Tunga;">, </span>ಜನವರಿಯಲ್ಲಿ ಭಾರತೀಯ ವಿಜ್ಞಾನ ಮೇಳ ಮದ್ರಾಸಿನಲ್ಲಿ ನಡೆದಾಗ ಪ್ರಸಿಡೆನ್ಸಿ ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿಯಾಗಿದ್ದ ಚಂದ್ರಶೇಖರ್ ತಮ್ಮ ಸಂಶೋಧನ ಲೇಖನವನ್ನು ಮಂಡಿಸಿ ಗಮನ ಸೆಳೆದರು<span style="font-family:Tunga;">. </span>ಕೆಲವು ವರ್ಷಗಳ ಹಿಂದೆ ಆವಿಷ್ಕಾರವಾಗಿದ್ದ ಕಾಂಪ್ಟನ್ ಪರಿಣಾಮದ ಸಿದ್ಧಾಂತವನ್ನು ನಕ್ಷತ್ರಗಳ ಅಂತರಾಳಕ್ಕೆ ಅನ್ವಯಿಸಿ ಬರೆದ ಸಂಶೋಧನ ಪ್ರಬಂಧ <span style="font-family:Tunga;">(Thermodynamics of Compton Scattering with reference to the Interiors of Stars) </span>ಅದಾಗಿತ್ತು<span style="font-family:Tunga;">. </span></p>
<p>ಪ್ರಬಂಧ ಮಂಡನೆಗೆ ಬಹುಮಾನವಾಗಿ ದೊರೆತದ್ದು ಖಗೋಳವಿಜ್ಞಾನಿ ಅರ್ಥರ್ ಎಡಿಂಗ್ಟನ್ ಬರೆದ <span style="font-family:Tunga;">- &#8220;</span>ನಕ್ಷತ್ರಗಳ ಆಂತರಿಕ ರಚನೆ<span style="font-family:Tunga;">&#8221; (The Internal Constitution of the Stars) </span>ಎಂಬ ಗ್ರಂಥ<span style="font-family:Tunga;">. </span>ನಕ್ಷತ್ರಗಳ ಜನನ ಮತ್ತು ವಿಕಾಸದ ಬೇರೆ ಬೇರೆ ಹಂತಗಳನ್ನು ವಿವರಿಸುವ ಆ ಗ್ರಂಥ ಎಳೆಯ ಚಂದ್ರನ ಮೇಲೆ ಗಾಢ ಪ್ರಭಾವ ಬೀರಿತು<span style="font-family:Tunga;">. </span></p>
<p><span style="font-family:Tunga;"><a href="http://apkrishna.files.wordpress.com/2010/10/eddington-79843-050-479a91a4.jpg"><img class="alignleft size-medium wp-image-437" title="Eddington 79843-050-479A91A4" src="http://apkrishna.files.wordpress.com/2010/10/eddington-79843-050-479a91a4.jpg?w=255&#038;h=189" alt="" width="255" height="189" /></a></span>ಇದೇ ಸಮಯದಲ್ಲಿ ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಬಂದ ಜರ್ಮನಿಯ ಭೌತವಿಜ್ಞಾನಿಗಳಾದ ಸೊಮರ್‌ಫೆಲ್ಡ್ ಮತ್ತು ಹೈಸೆನ್‌ಬರ್ಗ್ ಅವರ ಉಪನ್ಯಾಸಗಳು ಚಂದ್ರಶೇಖರ್ ಆಸಕ್ತಿಗೆ ಮತ್ತಷ್ಟು ಉತ್ತೇಜನ ನೀಡಿದುವು<span style="font-family:Tunga;">. </span>ನಕ್ಷತ್ರಗಳಲ್ಲಿ ವಿಕಿರಣದ ಚದರಿಕೆ ಬಗ್ಗೆ ಇನ್ನಷ್ಟು ವಿಸ್ತಾರವಾದ ಸಂಶೋಧನ ಲೇಖನ ಸಿದ್ಧಪಡಿಸಿ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ರಾಲ್ಫ್‌ಫೌಲರ್ <span style="font-family:Tunga;">(</span>೧೮೮೯ <span style="font-family:Tunga;">-</span>೧೯೪೪<span style="font-family:Tunga;">) </span>ಅವರಿಗೆ ಕಳುಹಿಸಿದರು<span style="font-family:Tunga;">. -</span>ರಾಯಲ್ ಸೊಸೈಟಿಯ ಸಂಶೋಧನ ಪತ್ರಿಕೆಯಲ್ಲಿ ಪ್ರಕಟಣೆಗಾಗಿ<span style="font-family:Tunga;">. </span>ಲೇಖನದ ಪುಟ ಪುಟಗಳಲ್ಲಿ ಪುಟಿಯುತ್ತಿದ್ದುವು ನವ ನವೀನ ಭಾವಗಳು<span style="font-family:Tunga;">; </span>ಅಜ್ಞಾತ ತರುಣನ ಅದ್ವಿತೀಯ ಪ್ರತಿಭೆ<span style="font-family:Tunga;">. </span>ಫೌಲರ್ ತಡಮಾಡಲಿಲ್ಲ<span style="font-family:Tunga;">. Proceedings of Royal Society </span>ಗೆ ಪ್ರಬಂಧವನ್ನು ರವಾನಿಸಿದರು ಮತ್ತು ಆ ಲೇಖನ ಪ್ರಕಟವಾಗಿಯೇ ಬಿಟ್ಟಿತು<span style="font-family:Tunga;">. </span></p>
<p>ತರಗತಿಗಳಿಗಿಂತ ಹೆಚ್ಚಾಗಿ ಗ್ರಂಥಾಲಯದಲ್ಲೇ ಇರುತ್ತಿದ್ದ ಚಂದ್ರ ಅವರ ಇನ್ನಷ್ಟು ಸಂಶೋಧನ ಲೇಖನಗಳು ಪ್ರಕಟವಾದುವು ಕಾಲೇಜು ದಿನಗಳಲ್ಲಿಯೇ<span style="font-family:Tunga;">. </span>ಮದ್ರಾಸ್ ವಿಶ್ವವಿದ್ಯಾಲಯದಿಂದ ದಾಖಲೆ ಅಂಕಗಳೊಂದಿಗೆ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚಂದ್ರ<span style="font-family:Tunga;">, </span>ಇಂಗ್ಲೆಂಡಿನ ಕ್ಯಾಂಬ್ರಿಡ್ಜಿನಲ್ಲಿ ಉನ್ನತ ಅಧ್ಯಯನಕ್ಕೆ ಆಯ್ಕೆಯಾದರು<span style="font-family:Tunga;">. </span></p>
<p>ಆಗ ಚಂದ್ರರ ತಾಯಿ ಸೀತಾಲಕ್ಷ್ಮಿ ಕರುಳು ಹುಣ್ಣಿನಿಂದ ತೀವ್ರವಾಗಿ ಬಳಲುತ್ತಿದ್ದರು<span style="font-family:Tunga;">. </span>ಹಾಗಾಗಿ ಇಂಗ್ಲೆಂಡಿಗೆ ಹೋಗುವ ಬಗ್ಗೆ ಚಂದ್ರ ಗೊಂದಲಕ್ಕೀಡಾದರು<span style="font-family:Tunga;">. </span>ತಂದೆ ಸಿ<span style="font-family:Tunga;">.</span>ಎಸ್<span style="font-family:Tunga;">.</span>ಅಯ್ಯರ್ ಹೇಳಿದರು <span style="font-family:Tunga;">&#8220;</span>ನೀನು ಹೋಗಬೇಕಾದ ಅಗತ್ಯವಿಲ್ಲ<span style="font-family:Tunga;">. </span>ಇಲ್ಲೇ ಸಾಧಿಸಬಹುದು ನಿನ್ನ ಚಿಕ್ಕಪ್ಪ ರಾಮನ್‌ನಂತೆ<span style="font-family:Tunga;">&#8220;. </span>ಹೆಚ್ಚಿನ ಬಂಧುಗಳು ಕೂಡ ಇದೇ ಧಾಟಿಯ ಬಿಟ್ಟಿ ಸಲಹೆ ಕೊಟ್ಟರೆ<span style="font-family:Tunga;">, </span>ತಾಯಿ ಮಾತ್ರ ಮಾತ್ರ ಉಜ್ವಲ ಭವಿಷ್ಯ ಕ್ಕಾಗಿ ಚಂದ್ರ ಇಂಗ್ಲೆಂಡಿಗೆ ಹೋಗಲೇಬೇಕೆಂದು ಹಠ ಹಿಡಿದಳು <span style="font-family:Tunga;">&#8220;</span>ಕಳವಳಪಡಬೇಡ<span style="font-family:Tunga;">. </span>ನೀನು ಹೋಗಲೇಬೇಕು ಮತ್ತು ಚಿಕ್ಕಪ್ಪ ರಾಮನ್ ಅವರ ಕಕ್ಷೆಯಿಂದ ಹೊರಬಂದು ಪ್ರಕಾಶಿಸುವ ನಕ್ಷತ್ರವಾಗಬೇಕು<span style="font-family:Tunga;">, </span>ನನಗೇನೂ ಆಗದು<span style="font-family:Tunga;">.&#8221;</span></p>
<blockquote><p>ಆದರೆ ಹಾಗಾಗಲಿಲ್ಲ<span style="font-family:Tunga;">. </span>ಹೊರಡುವ ದಿನಕ್ಕೆ ಆರೋಗ್ಯ ಇನ್ನಷ್ಟು ಹದಗೆಟ್ಟಿತು<span style="font-family:Tunga;">. </span>ಮನೆಯ ಗೇಟಿನಲ್ಲಿಯೇ ನಿಂತು ಹನಿ ದುಂಬಿಂದ ಕಂಗಳಿಂದ ಆ ತಾಯಿ ಮಗನನ್ನು ಕಳುಹಿಸಿಕೊಟ್ಟಳು<span style="font-family:Tunga;">. </span>ಅದು ಮಾತ್ರ ಅವಳ ಪಾಲಿಗೆ ಅಂತಿಮ ವಿದಾಯವಾಗಿತ್ತು<span style="font-family:Tunga;">.</span></p></blockquote>
<p><span style="font-family:Tunga;"> </span>ಇಂದಿನಂತೆ ವಿಮಾನ ಯಾನದ ಸೌಲಭ್ಯವಿರದಿದ್ದ ಕಾಲ<span style="font-family:Tunga;">. </span>ಹಡಗಿನಲ್ಲಿಯೇ ನಕ್ಷತ್ರಗಳ ಉಗಮ ಮತ್ತು ಬೆಳವಣಿಗೆಗಳ ಬಗ್ಗೆ ಚಿಂತಿಸುತ್ತ ತಮ್ಮ ಹೊಸ ಸಿದ್ಧಾಂತವನ್ನು ರೂಪಿಸಿದರು<span style="font-family:Tunga;">. </span>ಎರಡು ತಿಂಗಳುಗಳ ಸಾಗರ ಯಾನ ಮಾಡಿ ಇಂಗ್ಲೆಂಡಿನಲ್ಲಿ ಬಂದಿಳಿಯುವ ಮುನ್ನವೇ ಚಂದ್ರಶೇಖರ್ ಅವರಿಗೆ ತಮ್ಮ ಹೊಸ ಸಿದ್ದಾಂತದ ರೂಪುರೇಖೆಗಳು ಸ್ಪಷ್ಟವಾಗಿದ್ದುವು<span style="font-family:Tunga;">. </span></p>
<p>ಪತ್ರ ಮುಖೇನ ಆ ಮೊದಲೇ ಪರಿಚಿತರಾಗಿದ್ದ ಫೌಲರ್ ಅವರೊಂದಿಗೆ ನಕ್ಷತ್ರಗಳ ವಿಕಾಸದ ಬಗ್ಗೆ ಸಂಶೋಧನೆಯಲ್ಲಿ ತೊಡಗಿದರು<span style="font-family:Tunga;">. </span>ರಾಯಲ್ ಎಸ್ಟ್ರೊನೊಮಿಕಲ್ ಸೊಸೈಟಿಯ ಪತ್ರಿಕೆಯಲ್ಲಿ ಇವರ ಲೇಖನಗಳು ನಿಯತವಾಗಿ ಪ್ರಕಟವಾಗುತ್ತ ಬಂದಂತೆ ಇಂಡಿಯಾದಿಂದ ಬಂದ ಹುಡುಗನ ಹೆಸರು ಖಗೋಳ ವಿಜ್ಞಾನ ವಲಯದಲ್ಲಿ ಸಾಕಷ್ಟು ಕೇಳಿ ಬರತೊಡಗಿತು<span style="font-family:Tunga;">. </span></p>
<p>ಚಂದ್ರಶೇಖರ್ ಡಾಕ್ಟರೇಟ್ ಪದವಿ ಪಡೆದಾಗ ಇನ್ನೂ ಇಪ್ಪತ್ತಮೂರರ ಹರಯ <span style="font-family:Tunga;">(</span>೧೯೩೩<span style="font-family:Tunga;">). </span>ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಫೆಲೋಶಿಪ್ ಅವಧಿ ಮುಗಿಯುತ್ತ ಬಂದಿತ್ತು<span style="font-family:Tunga;">. </span>ಪ್ರತಿಷ್ಟಿತ ಟ್ರ್ರಿನಿಟಿ ಕಾಲೇಜಿನ ಫೆಲೋಶಿಪ್ಪಿಗೆ ಅರ್ಜಿ ಹಾಕಿದರು<span style="font-family:Tunga;">. </span>ಆ ಶಿಷ್ಯ ವೇತನಕ್ಕೆ ತುರುಸಿನ ಸ್ಪರ್ಧೆ ಇತ್ತು<span style="font-family:Tunga;">. </span>ಆದರೆ ಚಂದ್ರಶೇಖರ್ ಫೆಲೋಶಿಪ್ಪಿಗೆ ಆಯ್ಕೆಯಾದರು<span style="font-family:Tunga;">. </span>ರಾಮಾನುಜನ್ ಅವರಿಗೂ ಇದೇ ಪೆಲೋಶಿಪ್ ದೊರಕಿತ್ತೆನ್ನುವುದನ್ನು ನಾವು ಸ್ಮರಿಸಬಹುದು<span style="font-family:Tunga;">. </span></p>
<p>ಚಂದ್ರಶೇಖರ್ ತಮ್ಮ ಸಂಶೋಧನೆಯಲ್ಲಿ ತೀವ್ರವಾಗಿ ನಿರತರಾಗಿದ್ದ ಅದೊಂದು ದಿನ <span style="font-family:Tunga;">(</span>೧೯<span style="font-family:Tunga;">-</span>೧೦<span style="font-family:Tunga;">- </span>೧೯೩೦<span style="font-family:Tunga;">) </span>ತವರಿನಿಂದ ಬಂತು ಟೆಲಿಗ್ರಾಂ <span style="font-family:Tunga;">- </span>ತಾಯಿ ತೀರಿಕೊಂಡ ದು<span style="font-family:Tunga;">:</span>ಖದ ವಾರ್ತೆ ಹೊತ್ತು<span style="font-family:Tunga;">. </span>ತಾಯಿಯನ್ನು ಇನ್ನಿಲ್ಲದಂತೆ ನೆಚ್ಚಿಕೊಂಡ ಎಳೆಯ ಮನಸ್ಸಿಗೆ ಅದೆಂಥ ತೀವ್ರ ಆಘಾತ ಆಗಿರಬೇಡ<span style="font-family:Tunga;">. </span>ಚಂದ್ರ ರವಾನಿಸಿದ ತಂತಿ ಹೀಗಿತ್ತು <span style="font-family:Tunga;">&#8220;</span>ಅದು ನಿಜವೆಂದು ಭಾವಿಸುವುದು ಘೋರ<span style="font-family:Tunga;">. </span>ಸಮಾಧಾನವೆಲ್ಲಿದೆ<span style="font-family:Tunga;">? </span>ಅತ್ಯಂತ ದು<span style="font-family:Tunga;">:</span>ಖಿತನಾದ ನಾನು ಏನು ಸಮಾಧಾನ ನೀಡಲಿ<span style="font-family:Tunga;">? </span>ನಾವೆಲ್ಲರೂ ಇದನ್ನು ಸಹನೆಯಿಂದ ಸಹಿಸಿಕೊಳ್ಳಬೇಕು<span style="font-family:Tunga;">, </span>ಆಷ್ಟೇ<span style="font-family:Tunga;">&#8221; </span></p>
<p><strong>ಎಡಿಂಗ್ಟನ್ನರೊಂದಿಗೆ ತಿಕ್ಕಾಟ</strong></p>
<p>ಚಂದ್ರ ತಮ್ಮ ಸಂಶೋಧನೆ ಪ್ರಾರಂಭಿಸುವ ಕಾಲಕ್ಕೆ ನಕ್ಷತ್ರಗಳ ಉಗಮ ಮತ್ತು ಬೆಳವಣಿಗೆಗಳ ಬಗ್ಗೆ ಪ್ರಾಥಮಿಕ ನೆಲೆಯ ಸಿದ್ಧಾಂತ ರೂಪಿತವಾಗಿತ್ತು<span style="font-family:Tunga;">. </span>ಅಗಾಧ ವಿಶ್ವದ ಮೂಲದ್ರವ್ಯ <span style="font-family:Tunga;">- </span>ಹೈಡ್ರೋಜನ್ ಅಥವಾ ಜಲಜನಕ<span style="font-family:Tunga;">. </span>ಆದರೆ ವಿಶ್ವದ ಅಸೀಮ ವಿಸ್ತಾರದಲ್ಲಿ ಈ ಅನಿಲ ಸಮಾನವಾಗಿ ಪಸರಿಸಿಲ್ಲ<span style="font-family:Tunga;">. </span>ಕೆಲವೆಡೆ ಹೆಚ್ಚು ದಟ್ಟೈಸಿದೆ <span style="font-family:Tunga;">- </span>ಬಾನಿನಲ್ಲಿ ಮೋಡಗಳು ಒಟ್ಟೈಸಿದ೦ತೆ<span style="font-family:Tunga;">. </span>ಇ೦ಥ ಹೈಡ್ರೋಜನ್ ಅನಿಲ ಮೋಡಕ್ಕೆ ನಿಹಾರಿಕೆ <span style="font-family:Tunga;">(Nebula) </span>ಎನ್ನುತ್ತಾರೆ<span style="font-family:Tunga;">. </span>ನಿಹಾರಿಕೆ ನಕ್ಷತ್ರದ ಉಗಮ ಸ್ಥಳ <span style="font-family:Tunga;">- </span>ತವರು ಮನೆ<span style="font-family:Tunga;">. </span></p>
<p>ನಿಹಾರಿಕೆಯಲ್ಲಿ ದಟ್ಟೈಸಿದ ಹೈಡ್ರೋಜನ್ ಅನಿಲ ರಾಶಿಯು ತನ್ನ ಅಗಾಧ ದ್ರವ್ಯರಾಶಿಯ ಕಾರಣದಿ೦ದ ಉ೦ಟಾಗುವ ಗುರುತ್ವ ಬಲದ ಒತ್ತಡಕ್ಕೆ ಸಿಲುಕಿ ಕುಗ್ಗಲಾರ೦ಭಿಸುತ್ತದೆ<span style="font-family:Tunga;">. </span>ಗಾತ್ರ ಕುಗ್ಗಿದ೦ತೆ ಉಷ್ಣತೆ ಏರುತ್ತದೆ <span style="font-family:Tunga;">- </span>೧೦೦ ಡಿಗ್ರಿ ೨೦೦ ಡಿಗ್ರಿ <span style="font-family:Tunga;">.. </span>೫೦೦ ಡಿಗ್ರಿ<span style="font-family:Tunga;">&#8230; </span>೧೦೦೦ ಡಿಗ್ರಿ<span style="font-family:Tunga;">.. </span>೧೦೦೦೦ <span style="font-family:Tunga;">&#8230; </span>ಡಿಗ್ರಿ<span style="font-family:Tunga;">. </span>ಅನಿಲರಾಶಿಯ ಉಷ್ಣತೆ ಒ೦ದು ಕೋಟಿ ಡಿಗ್ರಿ ಸೆ೦ಟಿಗ್ರೇಡುಗಳಿಗೇರಿದಾಗ ಹೈಡ್ರೋಜನ್ ಪರಮಾಣುಗಳ ಬೀಜ ಅಥವಾ ನ್ಯೂಕ್ಲಿಯಸ್ಸುಗಳು ಪರಸ್ಪರ ಡಿಕ್ಕಿಯಾಗಿ ಒಟ್ಟಾಗುವ <span style="font-family:Tunga;">&#8221; </span>ಬೈಜಿಕ ಸ೦ಲಯನ ಕ್ರಿಯೆ <span style="font-family:Tunga;">&#8221; (Nuclear Fusion Reaction) </span>ಪ್ರಾರ೦ಭವಾಗುತ್ತದೆ<span style="font-family:Tunga;">. </span>ಒ೦ದು ಸ೦ಲಯನ ಕ್ರಿಯೆಯೆಯಲ್ಲಿ ಎರಡು ಹೈಡ್ರೋಜನ್ ನ್ಯೂಕ್ಲಿಯಸ್ಸುಗಳು ಸ೦ಲಯನಗೊ೦ಡು ಇನ್ನಷ್ಟು ತೂಕದ ಹೀಲಿಯಮ್ ನ್ಯೂಕ್ಲಿಯಸ್ ಸೃಷ್ಟಿಯಾಗುತ್ತದೆ<span style="font-family:Tunga;">. </span>ಕ್ರಿಯೆಯಲ್ಲಿ ನಷ್ಟವಾದ ದ್ರವ್ಯ ಶಕ್ತಿಯಾಗಿ ಬಿಡುಗಡೆಯಾಗುತ್ತದೆ<span style="font-family:Tunga;">.</span></p>
<p><span style="font-family:Tunga;"><a href="http://apkrishna.files.wordpress.com/2010/10/universe-deep-as-seen-by-chandra-telescope1.jpg"><img class="size-medium wp-image-442 alignleft" title="Universe deep as seen by Chandra Telescope" src="http://apkrishna.files.wordpress.com/2010/10/universe-deep-as-seen-by-chandra-telescope1.jpg?w=255&#038;h=193" alt="" width="255" height="193" /></a></span>ಸೆಕು೦ಡಿಗೆ ಹಲವು ಕೋಟಿ ಟನ್ ಪ್ರಮಾಣದಲ್ಲಿ ಹ್ಯೆಡ್ರೋಜನ್ ಹೀಲಿಯಮ್ ಆಗಿ ಪರಿವರ್ತನೆ ಹೊ೦ದುವ ಬೈಜಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅಗಾಧ ಪ್ರಮಾಣದ ಶಕ್ತಿಯು ಹೈಡ್ರೊಜನ್ ಅನಿಲರಾಶಿಯನ್ನು ವ್ಯಾಕೋಚಿಸಿದರೆ ಗುರುತ್ವಬಲ ಸ೦ಕೋಚಿಸುತ್ತದೆ<span style="font-family:Tunga;">. </span>ಈ ಎರಡು ವಿರುದ್ಢ ಬಲಗಳ ನಡುವೆ ಸಮತೋಲನವೇರ್ಪಟ್ಟಾಗ ಅದೋ ಅಲ್ಲಿ ಮೈದಳೆಯುತ್ತದೊ೦ದು ನಕ್ಷತ್ರ<span style="font-family:Tunga;">. </span>ನಮ್ಮ ಸೂರ್ಯ ಜನಿಸಿದ್ದು ಹೀಗೆಯೇ <span style="font-family:Tunga;">- </span>೫ ಬಿಲಿಯ ಅಥವಾ ೫೦೦ ಕೋಟಿ ವರ್ಷಗಳ ಹಿ೦ದೆ<span style="font-family:Tunga;">. </span>ಸೂರ್ಯ ಮಾತ್ರವಲ್ಲ<span style="font-family:Tunga;">. </span>ಎಲ್ಲ ನಕ್ಷತ್ರಗಳು ಜನಿಸಿದ್ದು <span style="font-family:Tunga;">, </span>ಜನಿಸುವುದು ಹೀಗೆಯೇ<span style="font-family:Tunga;">. </span></p>
<p><span style="font-family:Tunga;"><a href="http://apkrishna.files.wordpress.com/2010/10/21101-050-8b0f9de9.jpg"><img class="alignleft size-medium wp-image-439" title="21101-050-8B0F9DE9" src="http://apkrishna.files.wordpress.com/2010/10/21101-050-8b0f9de9.jpg?w=256&#038;h=381" alt="" width="256" height="381" /></a></span>ಕಾಲಾ೦ತರದಲ್ಲಿ ಹೆಚ್ಚಿನ ಹೈಡ್ರೋಜನ್ ಹೀಲಿಯಮ್ ಆಗಿ ಪರಿವರ್ತಿತವಾದಾಗ ತಾರೆಯಲ್ಲಿ ಅಸ್ಥಿರತೆ ತೋರುತ್ತದೆ<span style="font-family:Tunga;">. </span>ತಿರುಳಿನಲ್ಲಿ ಹೀಲಿಯಮ್ ಸಾ೦ದ್ರೀಕೃತವಾಗಿದ್ದರೆ<span style="font-family:Tunga;">, </span>ಹೊರ ಆವರಣದಲ್ಲಿ ಹೈಡ್ರೋಜನ್ನಿನ ಆಧಿಕ್ಯ<span style="font-family:Tunga;">. </span>ತಿರುಳು ತನ್ನ ದ್ರವ್ಯ ರಾಶಿಯ ಪರಿಣಾಮವಾಗಿ ಇನ್ನಷ್ಟು ಕುಗ್ಗುತ್ತದೆ ಮತ್ತು ಉಷ್ಣತೆ ಸುಮಾರು ಹತ್ತು ಕೋಟಿ ಡಿಗ್ರಿಗಳಾದಾಗ ಹೀಲಿಯಮ್ ನ್ಯೂಕ್ಲಿಯಸ್ಸುಗಳು ಸ೦ಲಯನಗೊಳ್ಳುವ ಬೈಜಿಕ ಕ್ರಿಯೆ ಪ್ರಾರ೦ಭವಾಗುತ್ತದೆ<span style="font-family:Tunga;">. </span>ಇದರ ಪರಿಣಾಮವಾಗಿ ಒಟ್ಟು ನಕ್ಷತ್ರ ಅಸಾಧಾರಣವಾಗಿ ಹಿಗ್ಗುತ್ತದೆ <span style="font-family:Tunga;">- </span>ಗಾಳಿಯೂದಿದ ಬುಗ್ಗೆಯ೦ತೆ<span style="font-family:Tunga;">. </span>ಲ೦ಬಿತ ಗಾತ್ರದಿ೦ದ ಉಷ್ಣತೆ ಬಹಳಷ್ಟು ಕಡಿಮೆಯಾಗಿ ಕೆ೦ಪು ಬಣ್ಣದಿ೦ದ ಗೋಚರಿಸುವ ಇ೦ಥ ನಕ್ಷತ್ರಕ್ಕೆ ರಕ್ತ ದೈತ್ಯ <span style="font-family:Tunga;">(Red Giant) </span>ಎ೦ದು ಹೆಸರು<span style="font-family:Tunga;">. </span>ಆಕಾಶದಲ್ಲಿ ಹಲವು ರಕ್ತ ದೈತ್ಯ ನಕ್ಷತ್ರಗಳನ್ನು ನೋಡಬಹುದು<span style="font-family:Tunga;">. </span></p>
<p>ಸ೦ಲಯನ ಕ್ರಿಯೆ ಮು೦ದುವರಿದ೦ತೆ ರಕ್ತ ದೈತ್ಯನ ಒಡಲಲ್ಲಿ ಅಪಾರ ಒತ್ತಡ ಸ೦ಜನಿಸಿ ಹೊರ ಆವರಣ ಸಿಡಿದು ಹಾರಿ ಹೋಗಿ ಅಲ್ಲಿ ಉಳಿಯುವುದೇನಿದ್ದರೂ ಬಹುಪಾಲು ಕಾರ್ಬನ್ ಅಥವಾ ಇ೦ಗಾಲದ ನ್ಯೂಕ್ಲಿಯಸ್ಸುಗಳ ತಿರುಳು <span style="font-family:Tunga;">- </span>ಚಿಕ್ಕ ತಾರೆ<span style="font-family:Tunga;">. </span>ತನ್ನ ಅಧಿಕ ಉಷ್ಣತೆಯ ಕಾರಣವಾಗಿ ಬಿಳಿ ಬಣ್ಣದಿ೦ದ ಗೋಚರಿಸುವ ಈ ಪುಟ್ಟ ತಾರೆಗೆ ಶ್ವೇತ ಕುಬ್ಜ <span style="font-family:Tunga;">( White Dwarf ) </span>ಎ೦ದು ಹೆಸರು<span style="font-family:Tunga;">. </span>ಶ್ವೇತ ಕುಬ್ಜ ನಕ್ಷತ್ರವೊ೦ದರ ಅ೦ತಿಮ ಸ್ಥಿತಿ ಎ೦ದು ಅಂದಿನ ಖಗೋಳ ಪಂಡಿತೋತ್ತಮ ಎಡಿಂಗ್ಟನ್ ಅವರ ನಂಬುಗೆಯಾಗಿತ್ತು<span style="font-family:Tunga;">. </span>ಅವು ಉರಿಯುತ್ತ ಉರಿಯುತ್ತ ಕೆಲವು ಲಕ್ಷ ವರ್ಷಗಳಲ್ಲಿ ಇ೦ಗಾಲದ ಕಿಟ್ಟವಾಗಿ ವಿಶ್ವದ ಅ೦ತರಾಳದಲ್ಲಿ ಮಾಯವಾಗುತ್ತವೆ೦ದು ಅವರು ನ೦ಬಿದ್ದರು<span style="font-family:Tunga;">. </span>ಅಂದರೆ ಶ್ವೇತ ಕುಬ್ಜ ಎಲ್ಲ ನಕ್ಷತ್ರಗಳ ಅಂತಿಮ ಸ್ಥಿತಿ ಎನ್ನುವ ಪರಿಕಲ್ಪನೆ ಅಂದು ಸಾರ್ವತ್ರಿಕವಾಗಿ ಪ್ರಚಲಿತವಾಗಿತ್ತು<span style="font-family:Tunga;">, </span>ಮತ್ತು ಅದಕ್ಕೆ ಪ್ರಾಜ್ಞರ ಸಮ್ಮತವಿತ್ತು<span style="font-family:Tunga;">. </span></p>
<p>ಎಡಿಂಗ್ಟನ್ ಪುಸ್ತಕದಲ್ಲಿದ್ದ ಈ ಎಲ್ಲ ವಿವರಗಳನ್ನು ಓದಿದಾಗಲೇ ಚ೦ದ್ರಶೇಖರ್ ಮನದಲ್ಲಿ <span style="font-family:Tunga;">&#8220;</span>ಇದೇಕೆ ಹೀಗೆ<span style="font-family:Tunga;">&#8221; </span>ಎಂಬ ಪ್ರಶ್ನೆ ಹುಟ್ಟಿಕೊ೦ಡಿತು<span style="font-family:Tunga;">. </span>ಶ್ವೇತಕುಬ್ಜ ತಾರೆಯೇ ಎಲ್ಲ ತಾರೆಗಳ ಅಂತಿಮ ಸ್ಥಿತಿ ಎನ್ನುವುದನ್ನು ಅವರು ಒಪ್ಪಿಕೊಳ್ಳಲಿಲ್ಲ<span style="font-family:Tunga;">. </span>ಶ್ವೇತ ಕುಬ್ಜದ ಅಗಾಧ ಉಷ್ಣತೆಯಲ್ಲಿ ಅದರ ದ್ರವ್ಯವೆಲ್ಲವೂ ಅಯಾನೀಕೃತವಾಗಿ ಅಲ್ಲಿ ಎಲೆಕ್ಟ್ರಾನುಗಳೇ ತುಂಬಿರುತ್ತವೆ ಮತ್ತು ಅವು ಸರಿ ಸುಮಾರು ಬೆಳಕಿನ ವೇಗದಲ್ಲಿ ಚಲಿಸುತ್ತಿರುತ್ತವೆ<span style="font-family:Tunga;">. </span>ಆಗಷ್ಟೇ ಮಂಡಿಸಲ್ಪಟ್ಟಿದ್ದ ಫರ್ಮಿ <span style="font-family:Tunga;">- </span>ಡಿರಾಕ್ ಸಂಖ್ಯಾಕಲನ <span style="font-family:Tunga;">(Fermi Dirac Statistics) </span>ಮತ್ತು ಐನ್‌ಸ್ಟೈನ್ ಅವರ ವಿಶೇಷ ಸಾಪೇಕ್ಷತಾ ಸಿದ್ದಾಂತ <span style="font-family:Tunga;">(Special theory of Relativity) </span>ವನ್ನು ಚಂದ್ರ ಬಳಸಿಕೊಂಡು ಶ್ವೇತಕುಬ್ಜದ ನಂತರವೂ ನಕ್ಷತ್ರ ಬೇರೆ ಬೇರೆ ಹಂತವನ್ನು<span style="font-family:Tunga;">, </span>ವಿಕಾಸದ ಮಜಲುಗಳನ್ನು ತಲುಪುತ್ತದೆನ್ನುವ ಸತ್ಯವನ್ನು ಕಂಡರು<span style="font-family:Tunga;">. </span>ಗಣಿತೀಯವಾಗಿ <span style="font-family:Tunga;">&#8220;</span>ಯಾವುದೇ ಕಾರಣಕ್ಕೆ ಶ್ವೇತ ಕುಬ್ಜವೊಂದರ ದ್ರವ್ಯರಾಶಿ ಸೂರ್ಯನ ಸೂರ್ಯನ ರಾಶಿಗಿ೦ತ ೧<span style="font-family:Tunga;">.</span>೪ ಪಟ್ಟು ಅಥವಾ ಅದಕ್ಕಿ೦ತ ಹೆಚ್ಚಾದರೆ ಆ ತಾರೆ ಶ್ವೇತ ಕುಬ್ಜ ಸ್ಥಿತಿಯಲ್ಲೇ ಇರಲಾರದು<span style="font-family:Tunga;">. </span>ಅದು ಮತ್ತೂ ಮು೦ದಿನ ಹ೦ತಗಳನ್ನು ಕಾಣುತ್ತದೆ<span style="font-family:Tunga;">&#8221; </span>ಎಂಬ ನಿರ್ಧಾರಕ್ಕೆ ಬಂದರು<span style="font-family:Tunga;">. </span>ಶ್ವೇತಕುಬ್ಜಕ್ಕೆ ಸ೦ಬ೦ಧಿಸಿದ೦ತೆ ದ್ರವ್ಯರಾಶಿಯ ಈ ಪರಿಮಿತಿಯು <span style="font-family:Tunga;">&#8220;</span>ಚ೦ದ್ರಶೇಖರ್ ಪರಿಮಿತಿ<span style="font-family:Tunga;">&#8221; (Chandrashekhar Limit) </span>ಎ೦ದೇ ಸುಪ್ರಸಿದ್ದವಾಯಿತು<span style="font-family:Tunga;">. </span>ನಾವು ಮುಖ್ಯವಾಗಿ ಗಮನಿಸಬೇಕಾದದ್ದು <span style="font-family:Tunga;">- </span>ನಕ್ಷತ್ರವೊ೦ದರ ಮೂಲ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಗಿ೦ತ ಸುಮಾರು ೮ ಪಟ್ಟು ಇದ್ದರೆ ಆ ನಕ್ಷತ್ರ ಚ೦ದ್ರಶೇಖರ್ ಪರಿಮಿತಿಯನ್ನು ಮೀರುತ್ತದೆ<span style="font-family:Tunga;">. </span>ವಿಶ್ವದಲ್ಲಿ ಇ೦ಥ ಹಲವು ಬೃಹನ್ನಕ್ಷತ್ರಗಳಿವೆ<span style="font-family:Tunga;">. </span>ಇವು ಶ್ವೇತಕುಬ್ಜಗಳಾಗದೇ ಬೇರೆ ಹಾದಿ ಹಿಡಿಯುತ್ತವೆ ಎನ್ನುವುದು ಚಂದ್ರ ಅವರ ಚಿಂತನೆಯಾಗಿತ್ತು</p>
<p><span style="font-family:Tunga;">ಚ೦ದ್ರಶೇಖರ್ ತಮ್ಮ ಹೊಸ ಸಿದ್ದಾಂತವನ್ನು ಕ್ಯಾಂಬ್ರಿಡ್ಜನ ಸುಪ್ರಸಿದ್ದ ಖಗೋಳ ವಿಜ್ಞಾನಿಗಳಾದ ಫೌಲರ್<span style="font-family:Tunga;">, </span>ಮಿಲ್ನ್ ಮತ್ತು ಎಡಿಂಗ್ಟನ್ ಅವರಿಗೆ ತೋರಿಸಿದರು <span style="font-family:Tunga;">- </span>ಪ್ರತಿಕ್ರಿಯೆಗಾಗಿ<span style="font-family:Tunga;">. </span>ಆದರೆ ಅವರಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ<span style="font-family:Tunga;">. </span>ಆದರೆ ಚಂದ್ರಶೇಖರ್ ಅವರಿಗೆ ತನ್ನ ಹೊಸ ಸಿದ್ದಾಂತದ ತಥ್ಯದ ಬಗ್ಗೆ ಎಳ್ಳಷ್ಟೂ ಸಂಶಯವಿರಲಿಲ್ಲ<span style="font-family:Tunga;">. </span>ಲಂಡನ್ನಿನ ರಾಯಲ್ ಸೊಸೈಟಿಯ ವಾರದ ಸಭೆಯಲ್ಲಿ ತಮ್ಮ ಸಿದ್ದಾಂತವನ್ನು ಮಂಡಿಸುವ ಇರಾದೆಯಿಂದ ಚಂದ್ರಶೇಖರ್ ಪ್ರಬಂಧವನ್ನು ಕಳುಹಿಸಿದರು<span style="font-family:Tunga;">. </span></span></p>
<div><span style="font-family:Tunga;"> </span>ಅವರ ಪ್ರಬಂಧ ಮಂಡನೆಗೆ ಸ್ವೀಕಾರವಾಯಿತು<span style="font-family:Tunga;">. </span>ಆದರೆ ಚಂದ್ರ ಅವರಿಗೆ ಅಚ್ಚರಿಯೊಂದು ಕಾದಿತ್ತು<span style="font-family:Tunga;">. </span>ಅವರ ನಂತರ ಎಡಿಂಗ್ಟನ್ ತಮ್ಮ ಪ್ರಬಂಧವನ್ನು ಮಂಡಿಸಲಿದ್ದರು<span style="font-family:Tunga;">. </span>ಜನವರಿ ೧೧<span style="font-family:Tunga;">. </span>೧೯೩೫<span style="font-family:Tunga;">. </span>ತರುಣ ಚಂದ್ರಶೇಖರ್ ಲಂಡನ್ನಿಗೆ ಆಗಮಿಸಿದರು<span style="font-family:Tunga;">- </span>ಆತ್ಮವಿಶ್ವಾಸ ಮತ್ತು ವಿಜ್ಞಾನ ರಂಗ ತನ್ನ ಪರಿಕಲ್ಪನೆಯನ್ನು ಒಪ್ಪುವ ಭರವಸೆಯೊಂದಿಗೆ<span style="font-family:Tunga;">. </span></div>
<p>ಸಭೆಯ ಮುನ್ನ ಹಜಾರದಲ್ಲಿ ಸಿಕ್ಕಿದಾಗ ಎಡಿಂಗ್ಟನ್ ಚಂದ್ರರನ್ನು ಬದಿಗೆ ಕರೆದು <span style="font-family:Tunga;">&#8221; </span>ನಿಮಗೆ ಒಂದು ಅಚ್ಚರಿ ಕಾದಿದೆ<span style="font-family:Tunga;">&#8221; </span>ಎನ್ನುತ್ತ ಕಣ್ಣು ಮಿಟುಕಿಸಿದರು<span style="font-family:Tunga;">. </span>ಅದೇನು ಅಚ್ಚರಿ<span style="font-family:Tunga;">? </span>ಗೊಂದಲಕ್ಕೀಡಾದರು<span style="font-family:Tunga;">. </span>ಪ್ರಾಯಶ<span style="font-family:Tunga;">: </span>ತನ್ನ ಸಿದ್ಧಾಂತವನ್ನು ಒಪ್ಪಿಕೊಂಡ ಮತ್ತು ಇನ್ನಷ್ಟು ವಿಸ್ತರಿಸಿದ ಪ್ರಬಂಧ ಅವರದ್ದು ಇರಬಹುದೆಂದು ಚಂದ್ರಶೇಖರ್ ಊಹಿಸಿ ಸಮಾಧಾನ ತಳೆದರು<span style="font-family:Tunga;">. </span>ಸಭೆ ಆರಂಭವಾಯಿತು<span style="font-family:Tunga;">. </span>ಚಂದ್ರಶೇಖರ್ ತಮ್ಮ ಹೊಸ ಸಿದ್ದಾಂತವನ್ನು ಮಂಡಿಸಿದರು<span style="font-family:Tunga;">. </span>ಶ್ವೇತಕುಬ್ಜ ಅಸಾಮಾನ್ಯ ನಕ್ಷತ್ರ<span style="font-family:Tunga;">. </span>ಸೂರ್ಯನಲ್ಲಿರುವ ಒತ್ತಡದ ಲಕ್ಷ ಪಟ್ಟು ಒತ್ತಡ ಮತ್ತು ಸಾಂದ್ರತೆ ಇರುವ ಸ್ಥಿತಿಯಲ್ಲಿ ಅಲ್ಲಿರುವ ದ್ರವ್ಯದ ಪರಿಸ್ಥಿತಿ ಹೇಗಿರುತ್ತದೆ<span style="font-family:Tunga;">? </span>ಎಡಿಂಗ್ಟನ್ ಮತ್ತಿತರ ಸಮಕಾಲೀನ ಭೌತ ವಿಜ್ಞಾನಿಗಳು ನ್ಯೂಟನ್ ಬಲವಿಜ್ಞಾನ ಅಥವಾ ಅಭಿಜಾತ ಭೌತ ವಿಜ್ಞಾನವನ್ನು ಬಳಸಿಕೊಂಡು ಶ್ವೇತಕುಬ್ಜದಲ್ಲಿ ದ್ರವ್ಯ ಹೇಗಿರುತ್ತದೆಂದು ವಿವರಿಸಿದರು<span style="font-family:Tunga;">. </span>ಈ ಜಾಡಿನ ಬಗ್ಗೆ ಚಂದ್ರಶೇಖರ್ ಅವರಿಗೆ ತೃಪ್ತಿ ಇರಲಿಲ್ಲ<span style="font-family:Tunga;">. </span>ಅವರು ಹೊಸ ಹಾದಿ ಹಿಡಿದರು<span style="font-family:Tunga;">. </span>ಚಂದ್ರಶೇಖರ್ ಮಾಡಿದ್ದೇನು<span style="font-family:Tunga;">? </span></p>
<p><a href="http://apkrishna.files.wordpress.com/2010/10/faraday1.jpg"><img class="size-medium wp-image-454 alignleft" title="faraday" src="http://apkrishna.files.wordpress.com/2010/10/faraday1.jpg?w=257&#038;h=184" alt="" width="257" height="184" /></a>ನಿಮಗೆ ತಿಳಿದಿದೆ<span style="font-family:Tunga;">, </span>ಪರಮಾಣುವಿನ ಬೀಜ ಕೇಂದ್ರದ ಸುತ್ತ ಎಲೆಕ್ಟ್ರಾನುಗಳು ನಿರ್ದಿಷ್ಟ ದೂರದ ಕಕ್ಷೆಯಲ್ಲಿ ಪರಿಭ್ರಮಿಸುತ್ತವೆ<span style="font-family:Tunga;">. </span>ಪ್ರತಿಯೊಂದು ಕಕ್ಷೆಯೂ ಶಕ್ತಿಯ ಮಟ್ಟಗಳು ಅಥವಾ ಮೆಟ್ಟಿಲುಗಳು<span style="font-family:Tunga;">. </span>ಯಾವುದೇ ಎರಡು ಎಲೆಕ್ಟ್ರಾನುಗಳು ಒಂದೇ ಶಕ್ತಿ ಮಟ್ಟದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ <span style="font-family:Tunga;">- </span>ಚಿತ್ರಮಂದಿರದಲ್ಲಿ ಪ್ರತಿಯೊಬ್ಬ ಪ್ರೇಕ್ಷಕ ಪ್ರತ್ಯೇಕ ಕುರ್ಚಿಯಲ್ಲಿ ಆಸೀನನಾಗಬೇಕೆಂಬ ನಿಬಂಧನೆ ಇರುವಂತೆ<span style="font-family:Tunga;">. </span>ಇಂಥ ನಿಯಮವನ್ನು ಸೈದ್ಧಾಂತಿಕವಾಗಿ ರೂಪಿಸಿದ್ದು ಆಸ್ಟ್ರಿಯಾದ ಭೌತ ವಿಜ್ಞಾನಿ ವೂಲ್ಫ್ ಗಾಂಗ್ ಪೌಲಿ <span style="font-family:Tunga;">(</span>೧೯೦೦ <span style="font-family:Tunga;">-</span>೧೯೫೮<span style="font-family:Tunga;">), </span>೧೯೨೫<span style="font-family:Tunga;">.</span>ರಲ್ಲಿ<span style="font-family:Tunga;">. </span>ಇದುವೇ ಪೌಲಿಯ ಬಹಿಷ್ಕರಣ ತತ್ವ<span style="font-family:Tunga;">. </span></p>
<p>ದ್ರವ್ಯಕ್ಕೆ ನಾಲ್ಕು ಸ್ಥಿತಿಗಳಿವೆ<span style="font-family:Tunga;">. </span>ಘನ<span style="font-family:Tunga;">, </span>ದ್ರವ<span style="font-family:Tunga;">, </span>ಅನಿಲ ಮತ್ತು ಪ್ಲಾಸ್ಮಾ<span style="font-family:Tunga;">. </span>ಪರಮಾಣುಗಳ ನಿಬಿಡತೆ ಹೇಗಿರುತ್ತದೆನ್ನುವುದರ ಮೇಲೆ ದ್ರವ್ಯ ಈ ಸ್ಥಿತಿಗಳನ್ನು ಕಾಣುತ್ತದೆ<span style="font-family:Tunga;">. </span>ಘನ ಸ್ಥಿತಿಯಲ್ಲಿ ಪರಮಾಣುಗಳು ಒತ್ತೊತ್ತಾಗಿ ಅಳ್ಳಕವಾಗಿದ್ದರೆ<span style="font-family:Tunga;">, </span>ದ್ರವದಲ್ಲಿ ಸಾಕಷ್ಟು ಸ್ವತಂತ್ರವಾಗಿರುತ್ತವೆ<span style="font-family:Tunga;">. </span>ಇನ್ನು ಅನಿಲದಲ್ಲಾದರೋ ಸರ್ವ ಸ್ವತಂತ್ರ<span style="font-family:Tunga;">. </span>ಇನ್ನು ಪ್ಲಾಸ್ಮದಲ್ಲಿ ಪರಮಾಣುವಿನ ಸುತ್ತ ಬಂದಿಯಾಗಿರುವ ಎಲೆಕ್ಟ್ರಾನುಗಳು ಬಿಡುಗಡೆಗಡೆಗೊಂಡು ಧನ ವಿದ್ಯುದಂಶ ಉಳ್ಳ ಪರಮಾಣು ಮತ್ತು ಋಣ ವಿದ್ಯುದಾವಿಷ್ಟ ಎಲೆಕ್ಟ್ರಾನುಗಳಿರುವ ಆಯಾನುಗಳದ್ದೇ ಬಾಹುಳ್ಯ<span style="font-family:Tunga;">. </span>ಎಲೆಕ್ಟ್ರಾನುಗಳು ಪರಮಾಣುಗಳಿಂದ ತಪ್ಪಿಸಿಕೊಂಡು ಸ್ವತಂತ್ರವಾಗಿರುತ್ತವೆ <span style="font-family:Tunga;">-</span>ಹಗ್ಗ ಕಡಿದುಕೊಂಡು ಓಡುವ ಕರುಗಳ ಹಾಗೆ<span style="font-family:Tunga;">. </span>ಸಾಮಾನ್ಯ ಒತ್ತಡದ ಸೂರ್ಯನಂಥ ನಕ್ಷತ್ರಗಳಲ್ಲಿ ದ್ರವ್ಯ ಇಂಥ ಪ್ಲಾಸ್ಮಾ ಸ್ಥಿತಿಯಲ್ಲಿರುತ್ತದೆ<span style="font-family:Tunga;">. </span></p>
<p>ಆದರೆ ಶ್ವೇತಕುಬ್ಜ ಅಸಾಮಾನ್ಯ ನಕ್ಷತ್ರ<span style="font-family:Tunga;">. </span>ಅಲ್ಲಿ ಎಲೆಕ್ಟ್ರಾನುಗಳು ಸರಿ ಸುಮಾರು ಬೆಳಕಿನ ವೇಗದಲ್ಲಿ <span style="font-family:Tunga;">(</span>೦<span style="font-family:Tunga;">.</span>೬ <span style="font-family:Tunga;">C, </span>ಇಲ್ಲಿ <span style="font-family:Tunga;">C </span>ಬೆಳಕಿನ ಸೂಚಕ<span style="font-family:Tunga;">) </span>ಚಲಿಸುತ್ತಿರುತ್ತವೆ<span style="font-family:Tunga;">. </span>ಹಾಗಾಗಿ ಇವುಗಳ ವಿವರಣೆಗೆ ಸಾಪೇಕ್ಷತಾ ಸಿದ್ಧಾಂತ ಬೇಕಾಗುತ್ತದೆ<span style="font-family:Tunga;">. </span>ಸಾಮಾನ್ಯ ಒತ್ತಡದಲ್ಲಿ ಪೌಲಿಯ ಬಹಿಷ್ಕರಣ ತತ್ವವನ್ನು ಅನೂಚಾನವಾಗಿ ಅನುಸರಿಸುವ ಎಲೆಕ್ಟ್ರಾನುಗಳ ಮೇಲೆ ಅದೆಂಥ ಒತ್ತಡ ಹೇರಲ್ಪಡುತ್ತದೆಂದರೆ<span style="font-family:Tunga;">, </span>ಒಂದೇ ಶಕ್ತಿ ಮಟ್ಟದಲ್ಲಿ ಹಲವು ಎಲೆಕ್ಟ್ರಾನುಗಳು ತುಂಬಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ<span style="font-family:Tunga;">. </span>ಅರ್ಥಾತ್ ಪೌಲಿಯ ಬಹಿಷ್ಕರಣ ತತ್ವವೇ ಧಿಕ್ಕರಿಸಲ್ಪಟ್ಟ ಸ್ಥಿತಿ<span style="font-family:Tunga;">. </span>ದ್ರವ್ಯದ ಇಂಥ ಸ್ಥಿತಿಯನ್ನು ವೈಜ್ಞಾನಿಕ ಪರಿಭಾಷೆಯಲ್ಲಿ <span style="font-family:Tunga;">‘</span>ಸಾಪೇಕ್ಷಾತಾತ್ಮಕ ವಿಕೃತತ್ವ<span style="font-family:Tunga;">’ (relativistc degeneracy) </span>ಎನ್ನುವುದುಂಟು<span style="font-family:Tunga;">. </span>ಐನ್‌ಸ್ಟೈನರ ಸಾಪೇಕ್ಷತಾ ಸಿದ್ದಾಂತ ಮತ್ತು ವರ್ತಮಾನದ ಕ್ವಾಂಟಂ ಸಿದ್ದಾಂತವನ್ನು ಬಳಸಿಕೊಂಡು<span style="font-family:Tunga;">, </span>ಹೇಗೆ ಶ್ವೇತಕುಬ್ಜದ ದ್ರವ್ಯರಾಶಿ ಸೂರ್ಯ ರಾಶಿಯ ೧<span style="font-family:Tunga;">.</span>೪ ಪಟ್ಟು ಅಥವಾ ಹೆಚ್ಚಿಗೆ ಇದ್ದದ್ದಾದರೆ ಅದು ಮುಂದಿನ ಹಂತಗಳನ್ನು ಕಾಣುತ್ತದೆಂದು ಚಂದ್ರಶೇಖರ್ ವಿವರಿಸಿದರು<span style="font-family:Tunga;">. </span>ಚಂದ್ರ ಅವರ ಉಪನ್ಯಾಸದ ವೈಖರಿಯೇ ಹಾಗೆ <span style="font-family:Tunga;">- </span>ಎಲ್ಲವೂ ನೇರ<span style="font-family:Tunga;">, </span>ಸುಸ್ಪಷ್ಟ<span style="font-family:Tunga;">. </span>ಆ ತನಕ ಎಡಿಂಗ್ಟನ್ ಏನು ಹೇಳಿದ್ದರೋ ಅದನ್ನು ಚಂದ್ರಶೇಖರ್ ನಯವಾಗಿ ಧಿಕ್ಕರಿಸಿದ್ದರು.</p>
<blockquote><p>ಇದೀಗ ಬಂತು ಎಡಿಂಗ್ಟನ್ ಸರದಿ<span style="font-family:Tunga;">. </span>೫೫ ವರ್ಷದ ಧೀಮಂತ ಖಗೋಳ ವಿಜ್ಞಾನಿ ತಮ್ಮ ಪ್ರಬಂಧವನ್ನು ಮಂಡಿಸುವ ಬದಲಿಗೆ ಬೇರೆಯೇ ಜಾಡು ತುಳಿದರು<span style="font-family:Tunga;">. </span>ಎಡಿಂಗ್ಟನ್ ಪ್ರಾರಂಭಿಸಿದರು</p>
<div><em><span style="font-family:Tunga;"><span style="font-family:Tunga;">&#8220;</span></span></em><em><span style="font-family:Tunga;"><span style="font-family:Tunga;">ನಾನು ಈ ಸಭೆಯಿಂದ ಜೀವ ಸಹಿತ ಪಾರಾಗುತ್ತೇನೋ ಇಲ್ಲವೋ ಹೇಳಲಾರೆ<span style="font-family:Tunga;">. </span>ಆದರೆ ನನ್ನ ಲೇಖನದ ಸಾರವೆಂದರೆ ಸಾಪೇಕ್ಷತಾ ವಿಕೃತತ್ವ ಎನ್ನುವುದೇ ಇಲ್ಲ ಎನ್ನುವುದು<span style="font-family:Tunga;">. </span>ಡಾ<span style="font-family:Tunga;">.</span>ಚಂದ್ರಶೇಖರ್ ನಿರ್ದಿಷ್ಟ ರಾಶಿ ಪರಿಮಿತಿಯನ್ನು ಮೀರಿದ ನಕ್ಷತ್ರಗಳೆಂದೂ ತಣಿಯಲಾರವು ಎಂದು ಹೇಳಿದ್ದಾರೆ<span style="font-family:Tunga;">. </span>ಅವು ವಿಕಿರಣವನ್ನು ಬೀರುತ್ತ ಹೋಗುತ್ತವೆ ಮತ್ತು ಉಷ್ಣತೆಯನ್ನು ಒಂದೇ ಪ್ರಮಾಣದಲ್ಲಿರಿಸಿಕೊಳ್ಳಲು ಕುಗ್ಗುತ್ತ ಕುಗ್ಗುತ್ತ ಹೋಗುತ್ತವೆ<span style="font-family:Tunga;">. </span>ನಕ್ಷತ್ರದ ತ್ರಿಜ್ಯ ಕೆಲವು ಕಿಲೊಮೀಟರಿಗೆ ಸಂಕೋಚಿಸಿದಾಗ ಗುರುತ್ವಬಲ ಅದೆಷ್ಟಿರುತ್ತದೆಂದರೆ ವಿಕಿರಣವೂ ನಕ್ಷತ್ರದಿಂದ ಹೊರ ಸೂಸದು<span style="font-family:Tunga;">. </span>ನಕ್ಷತ್ರದ ಚರಮ ಶಾಂತಿಯ ಸ್ಥಿತಿ ಇದು<span style="font-family:Tunga;">. </span>ಡಾ<span style="font-family:Tunga;">.</span>ಚಂದ್ರಶೇಖರ್ ಈ ಫಲಿತಾಂಶವನ್ನು ಹಿಂದೆಯೇ ಪಡೆದಿದ್ದರು ಮತ್ತು ಲೇಖನದಲ್ಲಿ ಅದನ್ನೇ ತುರುಕಿದ್ದಾರೆ<span style="font-family:Tunga;">. </span>ಅವರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿದಾಗ ಸಾಪೇಕ್ಷತಾ ವಿಕೃತತ್ವದ ಸೂತ್ರವನ್ನು ಅಸಂಬದ್ಧವಾಗಿ ಬಳಸಿದ್ದಾರೆಂದು ನನಗೆ ಮನವರಿಕೆಯಾಯಿತು<span style="font-family:Tunga;">. </span>ಸೂರ್ಯನಿಗಿಂತ ರಾಶಿಯಲ್ಲಿ ಅಧಿಕ ರಾಶಿ ಇರುವ ಶ್ವೇತ ಕುಬ್ಜಗಳು ಮುಂದಿನ ಹಂತವನ್ನು ಕಾಣಬೇಕೆಂದೇನೂ ಇಲ್ಲ<span style="font-family:Tunga;">. </span>ಅಲ್ಲಿ ಬೇರೆ ಹಲವು ಘಟನೆಗಳು ಸಂಭವಿಸಿ ನಕ್ಷತ್ರದ ಈ ಘೋರ ದುರಂತವನ್ನು ನಿಸರ್ಗ ತಪ್ಪಿಸುತ್ತದೆ೦ಬ ನಂಬಿಕೆ ನನಗಿದೆ<span style="font-family:Tunga;">. </span>ಚಂದ್ರಶೇಖರ್ ಅವರು ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಸಿದ್ಧಾಂತವನ್ನು ಸಮನ್ವೀಕರಿಸಿದ್ದು ಅಸಂಗತ ಮತ್ತು ಅಬದ್ಧ<span style="font-family:Tunga;">. </span>ಇದೊಂದು ನೀತಿ ಬಾಹಿರ ಮದುವೆ<span style="font-family:Tunga;">. </span>ಇಂಥ ಅನೀತಿಯಿಂದ ಹುಟ್ಟಿದ ಗಣಿತವನ್ನು ನಂಬುವುದು ಕಷ್ಟ<span style="font-family:Tunga;">&#8221; </span></span></span></em></div>
<p><em><span style="font-family:Tunga;"><span style="font-family:Tunga;"> </span></span></em>ಚಂದ್ರರ ಒಟ್ಟು ಸಂಶೋಧನೆ ಗಣಿತೀಯವಾಗಿ ಎಷ್ಟೇ ಸರಿ ಮತ್ತು ಸುಂದರವಾಗಿದ್ದರೂ ಅದು ನಿಷ್ಪ್ರಯೋಜಕವೆಂದು ಎಡಿಂಗ್ಟನ್ ಗೇಲಿ ಮಾಡಿದರು<span style="font-family:Tunga;">. </span>ಸುಮಾರು ಅರ್ದ ಗಂಟೆಗಳ ಕಾಲ ಓತಪ್ರೋತವಾಗಿ ಚಂದ್ರರನ್ನು ಹಿಗ್ಗಾ ಮುಗ್ಗ ಟೀಕೆ ಮಾಡಿದರು<span style="font-family:Tunga;">. </span>ಚಂದ್ರ ಪೂರ್ಣ ಹತಾಶರಾದರು<span style="font-family:Tunga;">. </span>ನೆರೆದ ಹೆಚ್ಚಿನ ಮಂದಿ ಚಂದ್ರಶೇಖರರ ಸಿದ್ಧಾಂತ ದೋಷಪೂರಿತವೆಂದು ತಿಳಿದದ್ದು ಸಹಜವೇ ಆಗಿತ್ತು <span style="font-family:Tunga;">- </span>ಏಕೆಂದರೆ ಎಡಿಂಗ್ಟನ್ ಪ್ರಭಾವ ಆ ದಿವಸಗಳಲ್ಲಿ ಅಷ್ಟಿತ್ತು<span style="font-family:Tunga;">. </span></p>
<p>ಆ ದಿನ ಚಂದ್ರಶೇಖರ್ ಮನೋಸ್ಥಿತಿ ಹೇಗಿದ್ದಿರಬಹುದು<span style="font-family:Tunga;">? </span>ಅವರದೇ ಮಾತುಗಳಲ್ಲಿ</p>
<div><span style="font-family:Tunga;"><span style="font-family:Tunga;">ಅತ್ಯಂತ ಪ್ರಾಮುಖ್ಯವಾದದ್ದನ್ನು ನಾನು ಕಂಡುಹಿಡಿದಿದ್ದೇನೆಂದು ಘೋಷಿಸುತ್ತಾರೆಂಬ ನಂಬುಗೆಯಿಂದ ನಾನು ಸಭೆಗೆ ಹೋಗಿದ್ದೆ<span style="font-family:Tunga;">. </span>ಅದರ ಬದಲಿಗೆ<span style="font-family:Tunga;">, </span>ಎಡಿಂಗ್ಟನ್ ನನ್ನನ್ನು ಮೂರ್ಖನನ್ನಾಗಿಸಿದರು<span style="font-family:Tunga;">. </span>ನಾನು ಸಂಪೂರ್ಣ ಹತಾಶನಾದೆ<span style="font-family:Tunga;">. </span>ಜೀವನೋಪಾಯಕ್ಕಾಗಿ ಆರಿಸಿಕೊಂಡದ್ದನ್ನು ಮುಂದವರಿಸುವ ಬಗ್ಗೆಯೇ ನನಗೆ ಸಂಶಯ ಬಂದಿತ್ತು<span style="font-family:Tunga;">. </span>ಆ ದಿನ ತಡ ರಾತ್ರೆ ಕ್ಯಾಂಬ್ರಿಡ್ಜಿಗೆ ಬಂದೆ<span style="font-family:Tunga;">. </span>ಬಹುಶ<span style="font-family:Tunga;">: </span>ರಾತ್ರೆ ಒಂದು ಗಂಟೆಯಾಗಿತ್ತು<span style="font-family:Tunga;">. </span>ನನಗಿನ್ನೂ ನೆನಪಿದೆ <span style="font-family:Tunga;">- </span>ಹಜಾರದಲ್ಲಿ ಅಗ್ಗಿಷ್ಟಿಕೆ ಉರಿಯುತ್ತಿತ್ತು<span style="font-family:Tunga;">. </span>ಅದರೆದುರು ನಾನು ನಿಂತಿದ್ದೆ<span style="font-family:Tunga;">. </span>ಮತ್ತೆ ಮತ್ತೆ ನಾನು ನನ್ನನ್ನಷ್ಟಕ್ಕೆ ಆಲೋಚಿಸುತ್ತಿದ್ದೆ <span style="font-family:Tunga;">‘</span>ಪ್ರಪಂಚ ಕೊನೆಗಾಣುವುದೆಂದರೆ ಹೀಗೆ <span style="font-family:Tunga;">- </span>ಮಹಾ ಅಸ್ಫೋಟನೆಯಲ್ಲಲ್ಲ<span style="font-family:Tunga;">, </span>ನಿಧಾನವಾಗಿ ನಂದುವುದರಲ್ಲಿ<span style="font-family:Tunga;">’&#8221; </span></span></span></div>
</blockquote>
<div><span style="font-family:Tunga;"><span style="font-family:Tunga;"><span style="font-family:Tunga;"> </span></span></span>ಆದರೆ ಚಂದ್ರರಿಗೆ ತಮ್ಮ ಗಣಿತ ಮತ್ತು ಭೌತ ವಿಜ್ಞಾನದ ತರ್ಕದಲ್ಲಿ ಎಳ್ಳಷ್ಟೂ ಸಂಶಯವಿರಲಿಲ್ಲ<span style="font-family:Tunga;">. </span>ಮರುದಿನವೇ ಲೇಖನವನ್ನು ನೀಲ್ಸ್ ಬೋರ್ <span style="font-family:Tunga;">(</span>೧೮೮೫<span style="font-family:Tunga;">-</span>೧೯೬೨<span style="font-family:Tunga;">), </span>ಪಾಲ್‌ಡಿರಾಕ್ <span style="font-family:Tunga;">(</span>೧೯೦೨<span style="font-family:Tunga;">-</span>೧೯೮೪<span style="font-family:Tunga;">), </span>ರೊಸೆನ್‌ಫೆಲ್ಡ್ <span style="font-family:Tunga;">(</span>೧೯೦೪<span style="font-family:Tunga;">-</span>೧೯೭೪<span style="font-family:Tunga;">) </span>ಮೊದಲಾದ ಘನ ಭೌತ ವಿಜ್ಞಾನಿಗಳ ಅವಗಾಹನೆಗೆ ಕಳುಹಿಸಿದರು<span style="font-family:Tunga;">. </span>ಅವರೆಲ್ಲರೂ ಸುಂದರ ಗಣಿತದಲ್ಲಿ ನಿಸರ್ಗದ ಸತ್ಯವನ್ನು ಕಂಡರು<span style="font-family:Tunga;">; </span>ಸಿದ್ಧಾಂತವನ್ನು ಪುರಸ್ಕರಿಸಿದರು</div>
<div>ಮುಂದೊಂದು ದಿನ ಚಂದ್ರಶೇಖರ್ ಅವರನ್ನು ಕೇಳಿದರಂತೆ <span style="font-family:Tunga;">&#8220;</span>ಓಂದು ವೇಳೆ ಎಡಿಂಗ್ಟನ್ ಚಂದ್ರ ಅವರ ಹೊಸ ಸಿದ್ದಾಂತವನ್ನು ರಾಯಲ್ ಸೊಸೈಟಿಯ ಅಂದಿನ ಸಭೆಯಲ್ಲಿ ಒಪ್ಪಿದ್ದರೆ ಏನಾಗುತ್ತಿತ್ತು<span style="font-family:Tunga;">?&#8221; </span>ಚಂದ್ರ ಅತ್ಯಂತ ಮಾರ್ಮಿಕವಾಗಿ ಉತ್ತರಿಸಿದರು.</div>
<div><span style="font-family:Tunga;">&#8221; </span>ಪ್ರಾಯಶ<span style="font-family:Tunga;">: </span>ನಾನು ಖಗೋಲ ವಿಜ್ಞಾನದಲ್ಲಿ ಅಂದೇ ಸುಪ್ರಸಿದ್ದನಾಗುತ್ತಿದ್ದೆ ಮತ್ತು ನನ್ನ ವ್ಯಕ್ತಿತ್ವಕ್ಕೆ ವರ್ಣರಂಜಿತ ಆಯಾಮ ಬರುತ್ತಿತ್ತು<span style="font-family:Tunga;">. </span>ಈ ಹಟಾತ್ತನೆ ಪ್ರಸಿದ್ದಿಗೆ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆಂದು ಊಹಿಸಲಾರೆ<span style="font-family:Tunga;">. </span>ಆದರೆ ಒಂದಂತೂ ಸತ್ಯ <span style="font-family:Tunga;">- </span>ಇಂಥ ಪ್ರಸಿದ್ದಿ ಪಡೆದ ಹಲವರು ಮತ್ತಿನ ದಿನಗಳಲ್ಲಿ ಯಾವ ಸಾಧನೆ ಮಾಡದೇ ಉಳಿದದ್ದುಂಟು</div>
<div>ಎಡಿಂಗ್ಟನ್ ಅವರೊಂದಿಗಿನ ವಿವಾದ ಚಂದ್ರರ ಮೃದು ಮನಸ್ಸಿನ ಮೇಲೆ ತೀವ್ರ ಘಾಸಿ ಒಡ್ಡಿತು<span style="font-family:Tunga;">. </span>ಅವರು ಇಂಗ್ಲೆಂಡನ್ನು ತ್ಯಜಿಸುವ ನಿರ್ಧಾರಕ್ಕೆ ಬಂದರು<span style="font-family:Tunga;">. </span>ಭಾರತಕ್ಕೆ ಮರಳಿ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಸೇರಲು ಆಲೋಚಿಸುತ್ತಿದ್ದಾಗ ಅವರಿಗೆ ಅಮೇರಿಕದ ಶಿಕಾಗೋ ವಿಶ್ವವಿದ್ಯಾಲಯದಿಂದ ಪ್ರಾದ್ಯಾಪಕ ಹುದ್ದೆಗೆ ಕರೆ ಬಂತು<span style="font-family:Tunga;">. </span>ಚಂದ್ರ ಹಾರಿಯೇ ಬಿಟ್ಟರು <span style="font-family:Tunga;">- </span>ಹಲವಾರು ಹೊಸ ನಿರೀಕ್ಷೆಗಳೊಂದಿಗೆ ಅಮೇರಿಕಕ್ಕೆ.</div>
<div><span style="font-family:Tunga;">. </span></div>
<div><span style="font-family:Tunga;"> </span>ಚಂದ್ರಶೇಖರ್ ತಮ್ಮ ಹೊಸ ಪರಿಕಲ್ಪನೆಯನ್ನೆಲ್ಲವನ್ನು ಬಟ್ಟಿ ಇಳಿಸಿ <span style="font-family:Tunga;">-</span> <span style="font-family:Tunga;">Stellar structure of Stars &#8211; </span>ಎಂಬ ಗ್ರಂಥವನ್ನು ೧೯೩೯ ರಲ್ಲಿ ಪ್ರಕಟಿಸಿದರು<span style="font-family:Tunga;">. </span>ನಂತರ ಚಂದ್ರಶೇಖರ್ ಬೇರೆಯೇ ಕ್ಷೇತ್ರವನ್ನು ಆಯ್ದುಕೊಂಡರು<span style="font-family:Tunga;">. </span>ಈ ಬಾರಿ ಅವರು ಅವರು ನಕ್ಷತ್ರಗಳ ಚಲನೆ ಬಗ್ಗೆ ಸಂಶೋಧನೆಗೆ ತೊಡಗಿದರು<span style="font-family:Tunga;">. </span>೧೯೪೯ <span style="font-family:Tunga;">- </span>೪೩ ರ ಅವಧಿಯಲ್ಲಿ ಅವರ ಸಂಶೋಧನ ಲೇಖನಗಳು ನಕ್ಷತ್ರಗಳ ಚಲನೆಯ ಬಗ್ಗೆ ನೂತನ ಕಾಣ್ಕೆ ಒದಗಿಸಿದುವು<span style="font-family:Tunga;">. </span>೧೯೪೩ ರಲ್ಲಿ ಇನ್ನೊಂದು ಗ್ರಂಥವನ್ನು ರಚಿಸಿದರು<span style="font-family:Tunga;">. </span>ಅದರ ಹೆಸರು <span style="font-family:Tunga;">- Stellar Dynamics. </span>ಆ ನಂತರ ಅವರು ಇನ್ನೊಂದು ಹೊಸ ಕ್ಷೇತ್ರವನ್ನು ಆಯ್ದುಕೊಂಡರು<span style="font-family:Tunga;">. </span>ಈ ಬಾರಿ ನಕ್ಷತ್ರಗಳಲ್ಲಿ ವಿಕಿರಣ ಯಾವ ಬಗೆಯಲ್ಲಿ ಪಸರಿಸುತ್ತದೆನ್ನುವ ಬಗ್ಗೆ ಸಂಶೋಧನೆಯಲ್ಲಿ ನಿರತರಾದರು<span style="font-family:Tunga;">. </span>ಇದರ ಫಲವೇ ಅವರ ೧೯೫೦ ರಲ್ಲಿ ಪ್ರಕಟವಾದ <span style="font-family:Tunga;">Radiative Transfer </span>ಎಂಬ ಗ್ರಂಥ</div>
<div>ಚಂದ್ರ ಅವರ ರೀತಿಯೇ ಹಾಗಿತ್ತು<span style="font-family:Tunga;">. </span>ಯಾವುದೇ ಕ್ಷೇತ್ರವನ್ನು ಅವರು ಅಧ್ಯಯನಕ್ಕೆ ಆಯ್ದುಕೊಂಡರೂ ಅದರಲ್ಲಿ ತಲಸ್ಪರ್ಶೀ ಅಧ್ಯಯನ ಮಾಡಿ ಒಂದು ಉದ್ಗ್ರಂಥವನ್ನು ರಚಿಸಿ ಆ ಕ್ಷೇತ್ರವನ್ನು ಶ್ರೀಮಂತ ಗೊಳಿಸಿ ಬೇರೊಂದು ಕ್ಷೇತ್ರಕ್ಕೆ ಜಿಗಿಯುತ್ತಿದ್ದರು<span style="font-family:Tunga;">. Truth and Beauty </span>ಎಂಬ ಪುಸ್ತಕದಲ್ಲಿ ಅವರೇ ಹೇಳುವಂತೆ</div>
<blockquote>
<div><span style="font-family:Tunga;">&#8220;</span>ಒಬ್ಬ ಶಿಲ್ಪಿ ಪರಿಪೂರ್ಣ ಮೂರ್ತಿಯನ್ನು ಕೆಡೆಯಬೇಕೇ ಹೊರತು ಅಲ್ಪ ಸ್ವಲ್ಪ ಕೆತ್ತುವುದಲ್ಲ<span style="font-family:Tunga;">. </span>ಪರಿಪೂರ್ಣತೆಗೆ ಚಂದ್ರ ಅಪಾರ ಪ್ರಾಮುಖ್ಯತೆ ಮತ್ತು ಗಮನ ಕೊಡುತ್ತಿದ್ದರು</div>
</blockquote>
<div>ಚಂದ್ರ ೧೯೩೬ ರಲ್ಲಿ ಭಾರತಕ್ಕೆ ಬಂದಾಗ ಇವರ ವಿವಾಹ ಲಲಿತಾ ದೊರೆಸ್ವಾಮಿಯವರೊಂದಿಗೆ ಸರಳವಾಗಿ ನಡೆಯಿತು<span style="font-family:Tunga;">. </span>ಪ್ರಸಿಡೆನ್ಸಿ ಕಾಲೇಜಿನಲ್ಲಿ ಚಂದ್ರರಿಗಿಂತ ಒಂದು ವರ್ಷ ಕೆಳಗಿನ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಲಲಿತಾ ಅವರ ಮನೆ ಇದ್ದುದು <span style="font-family:Tunga;">- </span>ಚಂದ್ರರ ಮನೆಯಾದ ಚಂದ್ರ ವಿಲಾಸದ ಹತ್ತಿರವೇ<span style="font-family:Tunga;">. </span>ಬಾಲ್ಯದ ಪರಿಚಯ ಮುಂದೆ ಅನುರಕ್ತಿಗೆ ಬದಲಾಯಿತು<span style="font-family:Tunga;">. </span>ಇವರಿಬ್ಬರದು ಮಧುರ<span style="font-family:Tunga;">, </span>ಅನುರೂಪ ದಾಂಪತ್ಯ</div>
<div>ಬಂತು ನೊಬೆಲ್</div>
<p>ಚಂದ್ರ ಅವರನ್ನು ನಿಧಾನವಾಗಿ ಪ್ರಶಸ್ತಿಗಳು ಅರಸಿಕೊಂಡು ಬಂದುವು<span style="font-family:Tunga;">. </span>ರಾಯಲ್ ಸೊಸೈಟಿಯ ಆಜೀವ ಸದಸ್ಯತ್ವ <span style="font-family:Tunga;">(</span>೧೯೪೪<span style="font-family:Tunga;">), </span>ಪ್ರತಿಷ್ಟಿತ ಬ್ರೂಸ್ ಪದಕ <span style="font-family:Tunga;">(</span>೧೯೫೨<span style="font-family:Tunga;">), </span>ಇಂಗ್ಲೆಂಡಿನ ರಾಯಲ್ ಅಸ್ತ್ರಾನಾಮಿಕಲ್ ಸೊಸೈಟಿಯ ಚಿನ್ನದ ಪದಕ <span style="font-family:Tunga;">(</span>೧೯೫೨<span style="font-family:Tunga;">), </span>ಅಮೇರಿಕದ ರಂಫರ್ಡ್ ಪ್ರಶಸ್ತಿ <span style="font-family:Tunga;">(</span>೧೯೫೭<span style="font-family:Tunga;">), </span>ಭಾರತ ಸರಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ <span style="font-family:Tunga;">(</span>೧೯೬೮<span style="font-family:Tunga;">) &#8230;. </span>ಕೊನೆಗೂ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು<span style="font-family:Tunga;">!. </span></p>
<p>ಸಿವಿರಾಮನ್ ೧೯೪೫ರಲ್ಲೇ ಚಂದ್ರಶೇಖರ್ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಸೂಚಿಸಿದಾಗ ಖಗೋಲವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ಬರಲಾರದೆಂದು ರಾಮನ್ ಅವರಿಗೆ ಸ್ವಯಂ ಚಂದ್ರಶೇಖರ್ ಪತ್ರ ಬರೆದರು<span style="font-family:Tunga;">. </span>ಅದು ನಿಜವಾಯಿತು ಕೂಡ<span style="font-family:Tunga;">. </span>ನೊಬೆಲ್ ಬಂದದ್ದು ಬರೋಬ್ಬರಿ ಐವತ್ತು ವರ್ಷಗಳ ಬಳಿಕ<span style="font-family:Tunga;">, </span>ಅಂದರೆ ೧೯೮೫ರಲ್ಲಿ ಚಂದ್ರಶೇಖರ್ ಮತ್ತು ಅಮೇರಿಕದ ವಿಲ್ಲಿ ಫೌಲರ್ ಜಂಟಿಯಾಗಿ ನೊಬೆಲ್ ಪ್ರಶಸ್ತಿ ಪಡೆದರು<span style="font-family:Tunga;">. </span></p>
<p>ಈ ಅವಧಿಯಲ್ಲಿ ಚಂದ್ರಶೇಖರ್ ಪರಿಮಿತಿಯನ್ನು ಮೀರುವ ಶ್ವೇತಕುಬ್ಜಗಳು ಏನಾಗುತ್ತವೆಂಬ ಪ್ರಶ್ನೆಯನ್ನು ಅರಸುತ್ತ ಹೋದ ಖಗೋಳವಿಜ್ಞಾನಿಗಳಿಗೆ ನಕ್ಷತ್ರಗಳ ಒಟ್ಟು ವಿಕಾಸದ ಕಥೆ ಅನಾವರಣಗೊಂಡಿತು<span style="font-family:Tunga;">. </span>ಅದು ಹೀಗೆ ಸಾಗುತ್ತದೆ <span style="font-family:Tunga;">: </span></p>
<p>ಚಂದ್ರಶೇಖರ್ ಪರಿಮಿತಿಯನ್ನು ಮೀರಿದ ಶ್ವೇತಕುಬ್ಜ ಮುಂದಿನ ಹಂತಗಳಲ್ಲಿ ಮಹಾಸ್ಫೋಟಕ್ಕೆ ಒಳಗಾಗುತ್ತದೆ<span style="font-family:Tunga;">. </span>ಇದುವೇ ಸೂಪರ್ನೋವಾ<span style="font-family:Tunga;">. </span>ಸೂಪರ್ನೋವಾ ಅಸ್ಫೋಟನೆಯಲ್ಲಿ ಉಳಿದ ತಿರುಳು <span style="font-family:Tunga;">- </span>ನ್ಯೂಟ್ರಾನುಗಳ ಮುದ್ದೆ<span style="font-family:Tunga;">. </span>ಎ೦ದೇ ಈ ನಕ್ಷತ್ರಕ್ಕೆ ನ್ಯೂಟ್ರ್ರಾನ್ ನಕ್ಷತ್ರವೆ೦ದು ಹೆಸರು<span style="font-family:Tunga;">. </span>ಕೇವಲ ೧೫ ರಿ೦ದ ೨೦ ಕಿಮೀ ವ್ಯಾಸದ ಈ ಪುಟ್ಟ ನಕ್ಷತ್ರದ್ದು ಉಹಾತೀತ ಸಾ೦ದ್ರತೆ<span style="font-family:Tunga;">. </span>ಇದು ಬುಗರಿಯ೦ತೆ ಗಿರ ಗಿರನೆ ಸುತ್ತುತ್ತ ಕಡಿಮೆ ಅಲೆಯುದ್ದದ ರೇಡಿಯೋ ಅಲೆಗಳನ್ನು ಉತ್ಸರ್ಜಿಸುತ್ತದೆ <span style="font-family:Tunga;">- </span>ಹೊತ್ತಿ ನ೦ದುವ ಟಾರ್ಚ್ ಲೈಟಿನ೦ತೆ<span style="font-family:Tunga;">. </span>ಹಾಗಾಗಿ ಇವುಗಳನ್ನು ಪಲ್ಸಾರುಗಳೆ೦ದು ಕರೆಯುತ್ತಾರೆ<span style="font-family:Tunga;">. </span>ನ್ಯೂಟ್ರಾನ್ ನಕ್ಷತ್ರ ನಕ್ಷತ್ರವೊ೦ದರ ಅ೦ತಿಮ ಸ್ಠಿತಿಯೇ <span style="font-family:Tunga;">? </span>ಖ೦ಡಿತವಾಗಿಯೂ ಅಲ್ಲ<span style="font-family:Tunga;">. </span>ನ್ಯೂಟ್ರಾನ್ ನಕ್ಷತ್ರದ ಸಾ೦ದ್ರತೆ ಎಷ್ಟಿರುತ್ತದೆ೦ದರೆ<span style="font-family:Tunga;">, </span>ಅದರ ವಿಮೋಚನ ವೇಗ ಭೂಮಿಯ ವಿಮೋಚನ ವೇಗಕ್ಕಿ೦ತ ಲಕ್ಷಪಟ್ಟು ಜಾಸ್ತಿ.</p>
<div>ನ್ಯೂಟ್ರಾನ್ ನಕ್ಷತ್ರ ಮತ್ತಷ್ಟು ಗುರುತ್ವ ಕುಸಿತಕ್ಕೊಳಗಾದಾಗ ಅದರ ಗಾತ್ರ ಇನ್ನೂ ಕಿರಿದಾಗುತ್ತದೆ<span style="font-family:Tunga;">. </span>ವಿಮೋಚನವೇಗ ಏರುತ್ತದೆ<span style="font-family:Tunga;">. </span>ವಿಮೋಚನ ವೇಗ ಬೆಳಕಿನ ವೇಗವನ್ನು ಮೀರಿದಾಗ <span style="font-family:Tunga;">, </span>ಅ೦ದರೆ ಸೆಕು೦ಡಿಗೆ ಮೂರು ಲಕ್ಷ ಕಿಮಿಟರಿಗಿ೦ತ ಹೆಚ್ಚಾದಾಗ<span style="font-family:Tunga;">, </span>ಆ ನಕ್ಷತ್ರ ಮಾಯವಾಗುತ್ತದೆ<span style="font-family:Tunga;">. </span>ಅದು ಮತ್ತೆ೦ದೂ ಗೋಚರಿಸದು<span style="font-family:Tunga;">. </span>ಏಕೆ೦ದರೆ ಅಲ್ಲಿ೦ದ ಬೆಳಕೂ ಸೇರಿದ೦ತೆ ಯಾವ ಬಗೆಯ ವಿಕಿರಣವೂ ಹೊರಬರದು<span style="font-family:Tunga;">. </span>ಇದು ಎಲ್ಲವನ್ನೂ ಗುಳು೦ಕರಿಸುತ್ತದೆ<span style="font-family:Tunga;">, </span>ಆದರೆ ಯಾವುದನ್ನೂ ಹೊರಬಿಡದು<span style="font-family:Tunga;">. </span>ಇಂಥ ಅನೂಹ್ಯ ಕಾಯಕ್ಕೆ ಕಪ್ಪುರಂದ್ರ ಅಥವಾ ಕೃಷ್ಣ ವಿವರ <span style="font-family:Tunga;">(Black Hole) </span>ಎಂದು ಹೆಸರು<span style="font-family:Tunga;">. </span></div>
<div><span style="font-family:Tunga;"><a href="http://apkrishna.files.wordpress.com/2010/10/ngc6240-chandra-image.jpg"><img class="size-medium wp-image-444 alignleft" title="IDL TIFF file" src="http://apkrishna.files.wordpress.com/2010/10/ngc6240-chandra-image.jpg?w=300&#038;h=257" alt="" width="300" height="257" /></a></span>ವರ್ತಮಾನದ ಖಗೋಳ ವಿಜ್ಞಾನ ಹೇಳುವ೦ತೆ ನಕ್ಷತ್ರವೊ೦ದರ ಅ೦ತಿಮ ಸ್ಥಿತಿಯಿದು<span style="font-family:Tunga;">. </span>ಕೃಷ್ಣ ವಿವರಗಳ ಅಸ್ತಿತ್ವವನ್ನು ಪ್ರಾಯೋಗಿಕವಾಗಿ ಸ್ಥಿರೀಕರಿಸಲಾಗಿದೆ<span style="font-family:Tunga;">. </span>ನಮ್ಮ ಬ್ರಹ್ಮಾಂಡವೂ ಸೇರಿದ ಹಾಗೆ ಹೆಚ್ಚಿನ ಬ್ರಹ್ಮಾಂಡಗಳಲ್ಲಿ ಸೂರ್ಯನ ದ್ರವ್ಯರಾಶಿಗಿಂತ ನೂರಾರು ಲಕ್ಷಪಟ್ಟು ಜಾಸ್ತಿ ದ್ರವ್ಯರಾಶಿ ಇರುವ ದೈತ್ಯ ಕಪ್ಪುರಂದ್ರಗಳು ಇವೆ ಮತ್ತು ಅವು ಒಟ್ಟು ಬ್ರಹ್ಮಾಂಡದ ಗಾತ್ರ<span style="font-family:Tunga;">, </span>ಆಕಾರ<span style="font-family:Tunga;">, </span>ಶಕ್ತಿ ಉತ್ಪಾದನೆಯನ್ನು ನಿಯಂತ್ರಿಸುತ್ತಿವೆ ಎನ್ನುವುದನ್ನು ಆದಹುನಿಕ ಖಗೋಳ ವಿಜ್ಞಾನ ಒಪ್ಪಿಕೊಂಡಿದೆ<span style="font-family:Tunga;">. </span>ಈ ಬಗ್ಗೆ ಹಲವು ಸಂಶೋಧನ ಲೇಖನಗಳನ್ನು ಪ್ರಕಟಿಸಿದ ಚಂದ್ರಶೇಖರ್ ಮತ್ತೊಂದು ಉದ್ಗ್ರಂಥವೊಂದನ್ನು ರಚಿಸಿದರು <span style="font-family:Tunga;">- The Mathematical Theory of Black Holes &#8211; </span>ಕೃಷ್ಣ ವಿವರಗಳ ಗಣಿತ ಸಿದ್ಧಾಂತ<span style="font-family:Tunga;">. </span></div>
<p>ಶಿಕಾಗೋ ವಿಶ್ವವಿದ್ಯಾಲಯ ಪ್ರಕಟಿಸುತ್ತಿದ್ದ ಚಿಕ್ಕ ಸಂಶೋಧನ ಪತ್ರಿಕೆ <span style="font-family:Tunga;">- <em>Astrophysical Journal</em> &#8211; </span>ನ ಚಂದ್ರಶೇಖರ್ ಸಂಪಾದಕತ್ವದ ಹೊಣೆಗಾರಿಕೆ ಬಂತು ಚಂದ್ರಶೇಖರ್ ಪಾಲಿಗೆ <span style="font-family:Tunga;">(</span>೧೯೫೭<span style="font-family:Tunga;">). </span>ಮುಂದಿನ ಇಪ್ಪತ್ತು ವರ್ಷಗಳ ಕಾಲ ಈ ಪತ್ರಿಕೆಯನ್ನು ಮುನ್ನೆಡೆಸಿ ಖಗೋಳವಿಜ್ಞಾನದ ಮುಂಚೂಣಿಯ ಸಂಶೋಧನ ಪತ್ರಿಕೆಯನ್ನಾಗಿ ರೂಪಿಸಿದರು<span style="font-family:Tunga;">. </span></p>
<p>ಚಂದ್ರಶೇಖರ್ ಅತ್ಯುತ್ತಮ ಪ್ರಾದ್ಯಾಪಕರಾಗಿದ್ದರು<span style="font-family:Tunga;">. </span>ಶಿಸ್ತು<span style="font-family:Tunga;">, </span>ಕಾಲ ನಿಷ್ಠೆ ಅವರ ಜೀವನದ ರೀತಿಯಾಗಿತ್ತು<span style="font-family:Tunga;">. </span>ಚಂದ್ರ ಅವರ ಶಿಷ್ಯಂದಿರು ಕೂಡ ಉದ್ದಾಮ ಗಣಿತ ಮತ್ತು ಭೌತ ವಿಜ್ಞಾನಿಗಳಾದದ್ದು ಸಹಜ<span style="font-family:Tunga;">. </span>ಯೇರ್ಕ್ಸ್ ವಿಶ್ವವಿದ್ಯಾಲಯದಲ್ಲಿ ಚಂದ್ರಶೇಖರ್ ತರಗತಿಯನ್ನು ಮಾಡುತ್ತಿದ್ದರಂತೆ<span style="font-family:Tunga;">. </span>ವಾರದಲ್ಲೊಂದು ದಿನ ಚಂದ್ರ ಅವರ ಪಾಠ<span style="font-family:Tunga;">. </span>ಇಬ್ಬರು ವಿದ್ಯಾರ್ಥಿಗಳಿಗಾಗಿ ನೂರು ಕಿಮೀ ದೂರದಿಂದ ತಮ್ಮದೇ ಕಾರಿನಲ್ಲಿ ಅವರು ಬರುತ್ತಿದ್ದರು<span style="font-family:Tunga;">. </span>ಶ್ರಮ ವ್ಯರ್ಥವಾಗಲಿಲ್ಲವೆಂದು ಸ್ವಯಂ ಚಂದ್ರ ಹೇಳಿಕೊಂಡರು<span style="font-family:Tunga;">. </span>ಏಕೆಂದರೆ ಶಿಷ್ಯರಾದ ಲೀ ಮತ್ತು ಯಾಂಗ್ ಅವರಿಗೆ ೧೯೫೭ ರಲ್ಲಿ ನೊಬೆಲ್ ಪ್ರಶಸ್ತಿ ಬ೦ತು<span style="font-family:Tunga;">. </span></p>
<p>ಅರುವತ್ತೈದು ವರ್ಷಗಳ ಕಾಲ ಸಿದ್ಧಾಂತಿಕ ಖಭೌತ ವಿಜ್ಞಾನದಲ್ಲಿ ಸಂಶೋಧನಾ ನಿರತರಾದ ಚಂದ್ರಶೇಖರ್ ೧೯೯೫ ಅಗೋಸ್ತ್<span style="font-family:Tunga;">, </span>೨೧ರ ಮಧ್ಯ ರಾತ್ರೆ ಇನ್ನು ಬಾರದ ಲೋಕಕ್ಕೆ ತೆರಳಿದರು<span style="font-family:Tunga;">. </span>ತೀರಿಹೋಗುವುದಕ್ಕೆ ಕೆಲವು ತಿಂಗಳುಗಳ ಹಿಂದೆ ಜನಸಾಮಾನ್ಯರಿಗೆ ನ್ಯೂಟನ್ನನ ಸೈದ್ಧಾಂತಿಕ ವಿವರಗಳನ್ನು ತಲುಪಿಸುವ ದೃಷ್ಟಿಯ ಮಹತ್ವದ ಕೃತಿಯೊಂದನ್ನು ಚಂದ್ರಶೇಖರ್ ರಚಿಸಿದ್ದು ವಿಜ್ಞಾನದ ಬಗ್ಗೆ ಅವರಿಗಿದ್ದ ಅನನ್ಯ ಬದ್ಧತೆಗೆ ಸಾಕ್ಷಿಯಾಗಿದೆ<span style="font-family:Tunga;">. </span></p>
<p><strong>ಪರಿಪೂರ್ಣ ಚಂದ್ರ</strong></p>
<p><strong>ಚಂದ್ರ ಅವರ ಬಗ್ಗೆ ವಿಜ್ಞಾನ ಪ್ರಪಂಚದಲ್ಲಿತ್ತು ಪರಮ ಗೌರವ<span style="font-family:Tunga;">. </span>ಹ್ಯಾನ್ಸ್ ಬೇಥ್ ಹೇಳಿದ್ದಾರೆ.</strong></p>
<blockquote><p><span style="font-family:Tunga;">&#8220;</span>ಚಂದ್ರ ನಮ್ಮ ಕಾಲದ ಪರಮೋತ್ಕೃಷ್ಟ ಖಭೌತ ವಿಜ್ಞಾನಿ ಮತ್ತು ನನ್ನ ಸಂಪರ್ಕಕ್ಕೆ ಬಂದವರಲ್ಲಿ ಅತ್ಯಂತ ಸೌಹಾರ್ದದ ವ್ಯಕ್ತಿ<span style="font-family:Tunga;">. </span>ನನಗೆ ಅವರ ಪರಿಚಯವಿದ್ದುದು ನನ್ನ ಭಾಗ್ಯ<span style="font-family:Tunga;">&#8221; </span></p></blockquote>
<p><strong>ಅಮೇರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನ ಪ್ರಾದ್ಯಾಪಕ ಮಾರ್ಟಿನ್ ಸ್ಕ್ವಾಶ್ಚೈಲ್ಡ್ ಹೇಳುತ್ತಾರೆ.</strong></p>
<blockquote><p><span style="font-family:Tunga;">&#8221; </span>ಎಲ್ಲ ಖಗೋಳ ವಿಜ್ಞಾನಿಗಳಲ್ಲಿ ಸಹಮತವಿದೆ <span style="font-family:Tunga;">- </span>ನಮ್ಮ ಕಾಲದ ಸರ್ವ ಶ್ರೇಷ್ಟ ಖಗೋಳ ವಿಜ್ಞಾನಿ<span style="font-family:Tunga;">. </span>ವ್ಯಕ್ತಿಯಾಗಿ ಮತ್ತು ಆತ್ಮೀಯ ಸ್ನೇಹಿತನಾಗಿ ನಾನು ಅತ್ಯಂತ ಹೆಚ್ಚು ಪ್ರೀತಿಸಿದ ವ್ಯಕ್ತಿ ಇವರು<span style="font-family:Tunga;">&#8221; </span></p></blockquote>
<p><strong>ಚಂದ್ರ ಅವರ ಶಿಷ್ಯ ಮತ್ತು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾದ್ಯಾಪಕರಾಗಿದ್ದ ನೋರ್ಮನ್ ಲೆಬೋವಿಟ್ಜ್ ಹೇಳುವಂತೆ</strong></p>
<blockquote><p><span style="font-family:Tunga;">&#8221; </span>ಇವರು ಚಿಂತನಶೀಲರಲ್ಲಿ ಅಗ್ರಗಣ್ಯ<span style="font-family:Tunga;">. </span>ವಿಜ್ಞಾನರಂಗದಲ್ಲಿ ದಣಿವಿರದ ಸಾಧಕ<span style="font-family:Tunga;">. </span>ತಾನು ಆಯ್ಕೆ ಮಾಡಿಕೊಂಡ ಯಾವುದೇ ವಿಷಯದ ಬಗ್ಗೆ ಅದರ ತಲಸ್ಪರ್ಶೀ ಅಧ್ಯಯನ ಮಾಡುವುದೇ ಇವರ ಪಾಲಿನ ವಿನೋದವಾಗಿತ್ತು<span style="font-family:Tunga;">. </span>ತಾನು ವಿಜ್ಞಾನದಿಂದ ದೂರ ಉಳಿಯುತ್ತೇನೆಂದು ಕೆಲವೊಮ್ಮೆ ಹೇಳಿದರೂ ಅವರಿಗೆ ಸಾಧ್ಯವಾಗಲಿಲ್ಲ <span style="font-family:Tunga;">- </span>ಏಕೆಂದರೆ ಹೊಸ ಹೊಸ ಸಮಸ್ಯೆಗಳು ಅವರನ್ನು ಆಕರ್ಷಿಸುತ್ತಿದ್ದುವು<span style="font-family:Tunga;">. </span>ಕೊನೆಯ ತನಕವೂ ಪ್ರಖರ ಚಿಂತನೆಯಲ್ಲಿ ತಲ್ಲೀನರಾಗಿದ್ದುದು ಅದ್ಭುತ <span style="font-family:Tunga;">&#8221; </span></p></blockquote>
<p><strong>ಖಗೋಲ ವಿಜ್ಞಾನಿ ಮಾರ್ಟಿನ್ ರೀಸ್ ಪ್ರಕಾರ</strong></p>
<blockquote><p><span style="font-family:Tunga;">&#8221; </span>ಚಂದ್ರಶೇಖರ್ ನಮ್ಮ ಕಾಲದ ಪ್ರಖರವಾದ ಸೃಜನಶೀಲ ಪ್ರತಿಭೆ<span style="font-family:Tunga;">. </span>ಐನ್‌ಸ್ಟೈನ್ ನಂತರ ಇವರಂತೆ ವಿಶ್ವದ ಬಗ್ಗೆ ಆಳ ಚಿಂತನೆ ನಡೆಸಿದವರು ಬೇರೊಬ್ಬರಿಲ್ಲ<span style="font-family:Tunga;">&#8220;. </span></p></blockquote>
<p><strong> ಭೌತ ವಿಜ್ಞಾನಿ ವಿಸ್ಕಾಫ್ ಹೇಳಿದ್ದಾರೆ</strong></p>
<blockquote><p><span style="font-family:Tunga;">&#8220;</span>ಚಂದ್ರನ ಮೇಲಾದರೂ ಕಲೆಗಳಿವೆ<span style="font-family:Tunga;">. </span>ಆದರೆ ಈ ಚಂದ್ರನ ವ್ಯಕ್ತಿತ್ವದಲ್ಲಿ ಒಂದಿನಿತಾದರೂ ಕಲೆ ಇರಲಿಲ್ಲ<span style="font-family:Tunga;">. </span>ಪರಿಪೂರ್ಣ ಸುಸಂಸ್ಕೃತ<span style="font-family:Tunga;">, </span>ಸಜ್ಜನ<span style="font-family:Tunga;">. </span>ಚಂದ್ರ ಅವರಲ್ಲಿ ಟೀಕಿಸುವ ಒಂದೇ ಒಂದು ಗುಣವಿರಲಿಲ್ಲ<span style="font-family:Tunga;">. </span>ಇತರರ ಬಗ್ಗೆ ಹೀಗೆ ಹೇಳುವಂತಿಲ್ಲ<span style="font-family:Tunga;">. </span>ಒಂದೋ ಅವರು ದರ್ಪಿಗಳು<span style="font-family:Tunga;">, </span>ಅಥವಾ ತಮ್ಮ ಸಹದ್ಯೋಗಿಗಳಿಗೆ ಅಪ್ರಿಯರು<span style="font-family:Tunga;">, </span>ಅಥವಾ ವಿಜ್ಞಾನದಲ್ಲಿ ತೀರ ಸಾಮಾನ್ಯ ಮಟ್ಟದ ಕೊಡುಗೆ ನೀಡಿದವರು ಎನ್ನಬಹುದು<span style="font-family:Tunga;">. </span>ಆದರೆ ಚಂದ್ರ ಮಟ್ಟಿಗೆ ಇವ್ಯಾವುವೂ ಲಗಾವಾಗುವುದಿಲ್ಲ<span style="font-family:Tunga;">. </span>ನನ್ನ ಜೀವಮಾನದಲ್ಲಿ ವಿಜ್ಞಾನಿಯಾಗಿನಾನು ಕಂಡ ಅತ್ಯಂತ ಪರಿಪೂರ್ಣ ವ್ಯಕ್ತಿ ಇರುವುದಾದರೆ ಅವರು ಚಂದ್ರಶೇಖರ್<span style="font-family:Tunga;">&#8220;.</span></p></blockquote>
<p><strong>ನಿಜ<span style="font-family:Tunga;">, </span>ಇವರು ವಿಜ್ಞಾನರಂಗದ ಪರಿಪೂರ್ಣ ಚಂದ್ರ<span style="font-family:Tunga;">. </span></strong></p>
<p><strong> </strong></p>
<br />Filed under: <a href='http://apkrishna.wordpress.com/category/%e0%b2%96%e0%b2%97%e0%b3%8b%e0%b2%b3%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8/'>ಖಗೋಳವಿಜ್ಞಾನ</a>, <a href='http://apkrishna.wordpress.com/category/%e0%b2%b5%e0%b2%bf%e0%b2%9c%e0%b3%8d%e0%b2%9e%e0%b2%be%e0%b2%a8-%e0%b2%b2%e0%b3%87%e0%b2%96%e0%b2%a8%e0%b2%97%e0%b2%b3%e0%b3%81/'>ವಿಜ್ಞಾನ ಲೇಖನಗಳು</a>, <a href='http://apkrishna.wordpress.com/category/%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf-%e0%b2%9c%e0%b3%80%e0%b2%b5%e0%b2%a8/'>ವ್ಯಕ್ತಿ - ಜೀವನ</a>  <a rel="nofollow" href="http://feeds.wordpress.com/1.0/gocomments/apkrishna.wordpress.com/429/"><img alt="" border="0" src="http://feeds.wordpress.com/1.0/comments/apkrishna.wordpress.com/429/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/429/"><img alt="" border="0" src="http://feeds.wordpress.com/1.0/delicious/apkrishna.wordpress.com/429/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/429/"><img alt="" border="0" src="http://feeds.wordpress.com/1.0/facebook/apkrishna.wordpress.com/429/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/429/"><img alt="" border="0" src="http://feeds.wordpress.com/1.0/twitter/apkrishna.wordpress.com/429/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/429/"><img alt="" border="0" src="http://feeds.wordpress.com/1.0/stumble/apkrishna.wordpress.com/429/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/429/"><img alt="" border="0" src="http://feeds.wordpress.com/1.0/digg/apkrishna.wordpress.com/429/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/429/"><img alt="" border="0" src="http://feeds.wordpress.com/1.0/reddit/apkrishna.wordpress.com/429/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=429&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2010/10/17/%e0%b2%9a%e0%b2%82%e0%b2%a6%e0%b3%8d%e0%b2%b0-%e0%b2%b6%e0%b2%a4%e0%b2%ae%e0%b2%be%e0%b2%a8%e0%b3%8b%e0%b2%a4%e0%b3%8d%e0%b2%b8%e0%b2%b5/feed/</wfw:commentRss>
		<slash:comments>8</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2010/10/chandra_72.jpg?w=223" medium="image">
			<media:title type="html">chandra_72</media:title>
		</media:content>

		<media:content url="http://apkrishna.files.wordpress.com/2010/10/raman_prince_big1.jpg?w=225" medium="image">
			<media:title type="html">raman_prince_big</media:title>
		</media:content>

		<media:content url="http://apkrishna.files.wordpress.com/2010/10/eddington-79843-050-479a91a4.jpg?w=300" medium="image">
			<media:title type="html">Eddington 79843-050-479A91A4</media:title>
		</media:content>

		<media:content url="http://apkrishna.files.wordpress.com/2010/10/universe-deep-as-seen-by-chandra-telescope1.jpg?w=300" medium="image">
			<media:title type="html">Universe deep as seen by Chandra Telescope</media:title>
		</media:content>

		<media:content url="http://apkrishna.files.wordpress.com/2010/10/21101-050-8b0f9de9.jpg?w=202" medium="image">
			<media:title type="html">21101-050-8B0F9DE9</media:title>
		</media:content>

		<media:content url="http://apkrishna.files.wordpress.com/2010/10/faraday1.jpg?w=300" medium="image">
			<media:title type="html">faraday</media:title>
		</media:content>

		<media:content url="http://apkrishna.files.wordpress.com/2010/10/ngc6240-chandra-image.jpg?w=300" medium="image">
			<media:title type="html">IDL TIFF file</media:title>
		</media:content>
	</item>
		<item>
		<title>ಲೇಸರ್ ಕಿರಣದ ಚಿನ್ನದ ಹಬ್ಬ</title>
		<link>http://apkrishna.wordpress.com/2010/06/27/%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%95%e0%b2%bf%e0%b2%b0%e0%b2%a3%e0%b2%a6-%e0%b2%9a%e0%b2%bf%e0%b2%a8%e0%b3%8d%e0%b2%a8%e0%b2%a6-%e0%b2%b9%e0%b2%ac%e0%b3%8d%e0%b2%ac/</link>
		<comments>http://apkrishna.wordpress.com/2010/06/27/%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%95%e0%b2%bf%e0%b2%b0%e0%b2%a3%e0%b2%a6-%e0%b2%9a%e0%b2%bf%e0%b2%a8%e0%b3%8d%e0%b2%a8%e0%b2%a6-%e0%b2%b9%e0%b2%ac%e0%b3%8d%e0%b2%ac/#comments</comments>
		<pubDate>Sun, 27 Jun 2010 16:39:16 +0000</pubDate>
		<dc:creator>apkrishna</dc:creator>
		
		<guid isPermaLink="false">http://apkrishna.wordpress.com/?p=409</guid>
		<description><![CDATA[ಜಗತ್ಪ್ರಸಿದ್ಧ ವೈಜ್ಞಾನಿಕ ಕಥೆಗಾರ ಹೆಚ್‌ಜಿ ವೆಲ್ಸ್ ತನ್ನ War of Worlds ಎಂಬ ಕಾದಂಬರಿಯಲ್ಲಿ ಪ್ರಖರವಾದ ಬೆಳಕಿನ ಕಿರಣಗಳಿಂದ ಮಂಗಳ ಗ್ರಹದಿಂದ ಬಂದ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡುವ ಕಲ್ಪನೆ ಮಾಡುತ್ತಾನೆ (೧೮೯೮)..  ಅವು ಎಲ್ಲವನ್ನು ಸುಟ್ಟು ನಾಶ ಮಾಡುವ ಮರಣ ಕಿರಣಗಳು. ವೆಲ್ಸನ ಪ್ರಖರ ಬೆಳಕಿನ ಕಿರಣಗಳ ಕಲ್ಪನೆ ಸಾಕಾರಗೊಂಡದ್ದು  ಲೇಸರ್ ರೂಪದಲ್ಲಿ. ಖುಷಿಯ ಸಂಗತಿ ಎಂದರೆ ಲೇಸರ್ ಇಂದು ಬಳಕೆಯಾಗುತ್ತಿರುವುದು ಯುದ್ಧ ರಂಗಕ್ಕಿಂತ ಹೆಚ್ಚಾಗಿ ಜನೋಪಯೋಗೀ ಕೆಲಸಗಳಲ್ಲಿ; ಮನುಕುಲದ ಏಳಿಗೆಯಲ್ಲಿ. ವಿಜ್ಞಾನ -ತಂತ್ರಜ್ಞಾನದ [...]<img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=409&amp;subd=apkrishna&amp;ref=&amp;feed=1" width="1" height="1" />]]></description>
			<content:encoded><![CDATA[<p><a href="http://apkrishna.files.wordpress.com/2010/06/military_laser_experiment.jpg"><img class="alignright size-large wp-image-418" title="Military_laser_experiment" src="http://apkrishna.files.wordpress.com/2010/06/military_laser_experiment.jpg?w=614&#038;h=400" alt="" width="614" height="400" /></a></p>
<p>ಜಗತ್ಪ್ರಸಿದ್ಧ ವೈಜ್ಞಾನಿಕ ಕಥೆಗಾರ ಹೆಚ್‌ಜಿ ವೆಲ್ಸ್ ತನ್ನ War of Worlds ಎಂಬ ಕಾದಂಬರಿಯಲ್ಲಿ ಪ್ರಖರವಾದ ಬೆಳಕಿನ ಕಿರಣಗಳಿಂದ ಮಂಗಳ ಗ್ರಹದಿಂದ ಬಂದ ಜೀವಿಗಳು ಭೂಮಿಯ ಮೇಲೆ ದಾಳಿ ಮಾಡುವ ಕಲ್ಪನೆ ಮಾಡುತ್ತಾನೆ (೧೮೯೮)..  ಅವು ಎಲ್ಲವನ್ನು ಸುಟ್ಟು ನಾಶ ಮಾಡುವ ಮರಣ ಕಿರಣಗಳು. ವೆಲ್ಸನ ಪ್ರಖರ ಬೆಳಕಿನ ಕಿರಣಗಳ ಕಲ್ಪನೆ ಸಾಕಾರಗೊಂಡದ್ದು  ಲೇಸರ್ ರೂಪದಲ್ಲಿ. ಖುಷಿಯ ಸಂಗತಿ ಎಂದರೆ ಲೇಸರ್ ಇಂದು ಬಳಕೆಯಾಗುತ್ತಿರುವುದು ಯುದ್ಧ ರಂಗಕ್ಕಿಂತ ಹೆಚ್ಚಾಗಿ ಜನೋಪಯೋಗೀ ಕೆಲಸಗಳಲ್ಲಿ; ಮನುಕುಲದ ಏಳಿಗೆಯಲ್ಲಿ.<span id="more-409"></span></p>
<p>ವಿಜ್ಞಾನ -ತಂತ್ರಜ್ಞಾನದ ಅದ್ಭುತವಾದ ಲೇಸರ್ ಆವಿಷ್ಕಾರಕ್ಕೆ ಇಂದು ಸುವರ್ಣ ಸಂಭ್ರಮ. ಐವತ್ತು ವರ್ಷಗಳ ಹಿಂದೆ &#8211; ಮೇ ೧೬, ೧೯೬೦, ಅಮೇರಿಕದ ಹ್ಯೂಗ್ಸ್ ಸಂಶೋಧನಾಲಯದ ಮೂವತ್ತೆರಡು ವರ್ಷದ ತರುಣ ಭೌತವಿಜ್ಞಾನೀ ಎಂಜನೀಯರ್ ಲೇಸರ್ ಕಿರಣವನ್ನು ಸೃಷ್ಟಿಸಿ ಹೊಸ ಇತಿಹಾಸ ಬರೆದ. ಅಂದು ಪ್ರಾಯಶ: ಯಾರೂ ಊಹಿಸಿರಲಾರರು -  ಮುಂದೊಂದು  ದಿನ ಜನಜೀವನವನ್ನು ಲೇಸರ್ ಇನ್ನಿಲ್ಲದಂತೆ ಆವಾಹಿಸಿ ಪ್ರಭಾವಿಸುತ್ತದೆಂದು</p>
<p>ಸರ್ವಂತರ್ಯಾಮಿ </p>
<p>ನೀವು ಸಿಡಿ ಅಥವಾ ಡಿವಿಡಿಯಲ್ಲಿರುವ ಸಂಗೀತವನ್ನು ಆಲಿಸುತ್ತಿದ್ದರೆ ಅಥವಾ ಸಿನೆಮಾ ನೋಡುತ್ತಿದ್ದರೆ, ಒಂದು ನಿಮಿಷ ಲೇಸರ್ ಕಿರಣಗಳನ್ನು ನೆನಪಿಸಿಕೊಳ್ಳಿ. ಸಿಡಿ ತಟ್ಟೆಯಲ್ಲಿ ಅವನ್ನೆಲ್ಲ ಕೊರೆದದ್ದು ಲೇಸರ್, ಮತ್ತೆ ಅವುಗಳನ್ನು ನಿಮಗೆ ನೀಡಿದ್ದೂ ಕೂಡ ಲೇಸರ್!</p>
<p>ಇಂದು ನಾವಿದ್ದೇವೆ ಮಾಹಿತಿ ತಂತ್ರಜ್ಞಾನ ಯುಗದಲ್ಲಿ. ಲೋಹದ ತಂತಿಗಳ ಬದಲಿಗೆ ಗಾಜಿನ ದ್ಯುತಿ ಎಳೆಗಳು ಬಂದಿವೆ. ಅವುಗಳಲ್ಲಿ ಅಗಾಧ ಮಾಹಿತಿಗಳನ್ನು  ಲೇಸರ್ ಸಲಾಕೆ ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುತ್ತಿವೆ &#8211; ಬೆಳಕಿನ ವೇಗದಲ್ಲಿ. ಇದು ಮಾಹಿತಿಯ ಮಹಾಪೂರ. ಇಂಟರ್ನೆಟ್ &#8211; ಮೊಬೈಲಿನ ಮಾಯಾಜಾಲವನ್ನು ಲೇಸರ್ ಇಲ್ಲದೇ ಊಹಿಸುವುದು ಅಸಾಧ್ಯ.  <a href="http://apkrishna.files.wordpress.com/2010/06/laser-show.jpg"><img class="alignleft size-medium wp-image-427" title="laser show" src="http://apkrishna.files.wordpress.com/2010/06/laser-show.jpg?w=300&#038;h=225" alt="" width="300" height="225" /></a></p>
<p>ಮಾರುತಿ ಅಥವಾ ಇನ್ನಾವುದೋ ಅತ್ಯಾಧುನಿಕ ಕಾರಿನಲ್ಲಿ ಪಯಣಿಸುತ್ತಿದ್ದೀರಿ. ಒಮ್ಮೆ ನೀವು ನೆನಪು ಮಾಡಿಕೊಳ್ಳಬೇಕು ಲೇಸರ್ ಎಂಬ ವಿಸ್ಮಯವನ್ನು. ಲೋಹದ ಹಾಳೆಯನ್ನು ಬೇಕಾದ ಆಕಾರದಲ್ಲಿ ಕತ್ತರಿಸುವಲ್ಲಿಂದ ತೊಡಗಿ, ಛೇದಿಸುವ, ಜೋಡಿಸುವ, ಮೇಲ್ಮೈಯನ್ನು ನುಣುಪಾಗಿಸುವ ಮತ್ತು ಸುಂದರ ಕಾರನ್ನು ರೂಪಿಸುವ  ಬೇರೆ ಬೇರೆ ಹಂತಗಳಲ್ಲೆಲ್ಲ ಲೇಸರಿನ ಯಥೇಚ್ಚ ಬಳಕೆ ಇದೆ.</p>
<p>ಸುಸ್ಪಷ್ಟವಾದ ಮುದ್ರಣ  ಮಾಡುವ ಪ್ರಿಂಟರುಗಳಲ್ಲಿ ಲೇಸರ್ ಕಿರಣಗಳಿವೆ.  ಉತ್ಸವಾಚರಣೆಯ ಸಂದರ್ಭಗಳಲ್ಲಿ ಆಗಸದಲ್ಲಿ ಮೂಡಿಸುವ ಚಿತ್ತಾಕರ್ಷಕ ಬಣ್ಣಗಳ  ಕುಣಿತದ ದೃಶ್ಯ ಕಾವ್ಯದ ಅನಾವರಣದಲ್ಲಿದೆ ಲೇಸರ್. ಮೂರು ಆಯಾಮದ ಚಿತ್ರಗಳ ನಿರ್ಮಾಣದಲ್ಲಿಯೂ ಲೇಸರ್ ಚಳಕವಿದೆ. ಮನೋರಂಜನೆಗಿಂತ ಹೆಚ್ಚಾಗಿ ಪರಮಾಣು ಪ್ರಪಂಚದ ವಿದ್ಯಮಾನಗಳ ಅಧ್ಯಯನದಲ್ಲಿ ಈ ತಂತ್ರದ್ದು  ಮಹತ್ತರ ಪಾತ್ರ. ಎಂದೇ ಇದರ ಆವಿಷ್ಕರ್ತ ಹಂಗೆರಿಯ ಡೆನ್ನಿಸ್ ಗೇಬರ್ (೧೯೦೦ &#8211; ೧೯೭೯) ನೊಬೆಲ್ ಪ್ರಶಸ್ತಿಗೆ (೧೯೭೧) ಭಾಜನರಾದರು.</p>
<p>ನೀವು ಸರಕಿನ ಮಳಿಗೆಗೆ ಹೊಕ್ಕಿದ್ದೀರಿ. ಕೊಂಡ ಮಾಲಿನ ಮೇಲೆ ಕಪ್ಪು ಗೆರೆಗಳಿರುವುದನ್ನು ಗಮನಿಸಿದ್ದೀರಾ!.  ಇಂಥ ಗೆರೆಗಳಿಗೆ ಬಾರ್ ಕೋಡ್ಸ್ ಅನ್ನುತ್ತಾರೆ. ವಾಸ್ತವವಾಗಿ ಇವು ಸರಕಿನ ಬೆಲೆಯ ಸಂಕೇತಾಕ್ಷರಗಳು.  ಬಾರ್‌ಕೋಡನ್ನು ಚಿಕ್ಕ ಲೇಸರ್ ಉಪಕರಣದ ಮುಂದಿಟ್ಟೊಡನೆ, ಬೆಲೆ ನಮೂದಾಗುತ್ತದೆ. ಅಂದರೆ ನಿಮ್ಮ ಕಿಸೆಗೆ ಕತ್ತರಿ ಹಾಕುವಲ್ಲಿಯೂ ಇದೆ  ಲೇಸರ್ ಮಹಿಮೆ !</p>
<p>ವೈದ್ಯಕೀಯ ಜಗತ್ತಿನಲ್ಲಿ ಲೇಸರಿನ ಉಪಯುಕ್ತತೆಗೆ ಪಾರವೇ ಇಲ್ಲ.  ದಶಕಗಳ ಹಿಂದೆ ಕಿಡ್ನಿಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲುಗಳೆಂದರೆ ಗಂಭೀರ ಸಮಸ್ಯೆಯಾಗಿತ್ತು.  ಇಂದು ಇದೊಂದು ಸಮಸ್ಯೆಯೇ ಅಲ್ಲ. ದ್ಯುತಿನಳಿಗೆಯ (Optical Fibers) ಸಹಕಾರದಿಂದ ಮೂತ್ರಪಿಂಡಕ್ಕೆ  ತೂರಿ ಬಿಡುವ ಪ್ರಖರ ಲೇಸರ್ ಕಿರಣಗಳಿಗೆ ಕಲ್ಲುಗಳು ಚೂರು ಚೂರಾಗಿ  ಹುಡಿಯಾಗಿ ಮೂತ್ರದ ಮೂಲಕ ಹೊರ ಹೋಗುತ್ತವೆ. ಹೊಟ್ಟೆ ಕೊಯ್ತವಿಲ್ಲದ, ರಕ್ತ ಬಸಿತವಿಲ್ಲದ, ಕ್ಷಿಪ್ರವಾಗಿ  ಮುಗಿಯುವ ಶಸ್ತ್ರ ಚಿಕಿತ್ಸೆ.  ಲೇಸರ್ ಆಧಾರಿತ ಲೆಪ್ರೊಸ್ಕೋಪಿ ರೋಗಿಗಳಿಗೊಂದು ವರದಾನ. <a href="http://apkrishna.files.wordpress.com/2010/06/kidney-surgery1.jpg"><img class="size-large wp-image-413 alignleft" title="kidney surgery" src="http://apkrishna.files.wordpress.com/2010/06/kidney-surgery1.jpg?w=146&#038;h=255" alt="" width="146" height="255" /></a></p>
<p>ಪ್ರಾಯ ಸಂದ ಹಾಗೆ ಕಣ್ಣು ಪಾಪೆಯ ಮೇಲೆ ದಪ್ಪನೆಯ ಪೊರೆ ಬೆಳೆದು ದೃಷ್ಟಿ ಮಸುಕಾಗುವುದು ಸರ್ವೇ ಸಾಮಾನ್ಯ. ದಪ್ಪನೆಯ ಪೊರೆಯನ್ನು ಕತ್ತರಿಸಿ ದೃಷ್ಟಿ ಪೊರೆವ ಶಸ್ತ್ರ ಚಿಕಿತ್ಸೆ  ಹಿಂದೆ ಸವಾಲಿನದ್ದಾಗಿತ್ತು. ಕಾಲ ಬದಲಾಗಿದೆ.  ಅತ್ಯಂತ ಕ್ಷಿಪ್ರಾವಧಿಯ ಪ್ರಖರ  ಲೇಸರ್ ಕಿರಣಗಳಿಂದ ಪೊರೆಯನ್ನು ಕತ್ತರಿಸಿ ತೆಗೆವ ವಿಧಾನಗಳು ಬಂದಿವೆ. ಒಂದಿಷ್ಟೂ ರಕ್ತವಿಲ್ಲ; ನೋವಿಲ್ಲ. ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಓಡಾಡುವ ಉಸಾಬರಿ  ಇಲ್ಲ. ಹತ್ತು ಹದಿನೈದು ನಿಮಿಷಗೊಳಗೆ  ಚಿಕಿತ್ಸೆ ಮುಗಿದು ದೃಷ್ಟಿ ನಿಚ್ಚಳ.  ಲೇಸರ್ ಕಿರಣಗಳಿಂದ ಕಣ್ಣಿನ ಮಸೂರವನ್ನು ತಿದ್ದಿ ತೀಡಿ ದೃಷ್ಟಿ ಸರಿಪಡಿಸಿಕೊಂಡು ಕನ್ನಡಕವೆಂಬ ಕರಕರೆಯಿಂದ ಮುಕ್ತರಾಗುತ್ತಿರುವವರು ಇಂದು ಲಕ್ಷಾಂತರ ಮಂದಿ. ಸುಕ್ಕು -ನೆರೆ, ಮೊಡವೆಗಳಿಂದ ಮುಖಾರವಿಂದ ಬಾಡಿದರೆ ಲೇಸರ್ ಚಿಕಿತ್ಸೆಯಿಂದ ಕಳೆ ಏರಿಸುವ ತಂತ್ರಗಳು ಕೂಡ ಬಂದಿವೆ.</p>
<p>ಮಾನವ ದೇಹ ಮೂಳೆ ಮಾಂಸದ ತಡಿಕೆಯಂತೆ. ತಡಿಕೆಯ ಒಳ ಅಂಗಗಳನ್ನು ನೋಡುವ ದೃಷ್ಟಿ ನಮಗಿಲ್ಲ. ಲೇಸರ್ ಅಂಥ ದಿವ್ಯ ದೃಷ್ಟಿಯನ್ನೂ ದಯಪಾಲಿಸಿದೆ. ಸೂಕ್ಷ್ಮವಾದ ಗಾಜಿನ ಎಳೆಗಳಲ್ಲಿ  ಪೂರ್ಣಾಂತರಿಕ ಪ್ರತಿಫಲನಗೊಳ್ಳುತ್ತ ಸಾಗುವ ಲೇಸರ್ ಕಿರಣಗಳಿಂದ ದೇಹದ ಒಳ ಅಂಗಗಳನ್ನು ತಪಾಸಿಸುವ ಬಗೆ ಬಗೆಯ ದ್ಯುತಿ ದರ್ಶಕ ಉಪಕರಣಗಳು ಇಂದು ಲಭ್ಯ.  ಹೃದಯ, ಪಿತ್ತಕೋಶ, ಜಠರ .. ಹೀಗೆ ಅಂಗಾಂಗಗಳ ಸ್ಪಷ್ಟ ಚಿತ್ರ ಕಂಪ್ಯೂಟರ್ ಪರದೆ ಮೇಲೆ ಮೂಡುತ್ತದೆ. ಅಲ್ಲಿಗೆ ಯಾವುದೇ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯ. ಲೇಸರ್ ರೋಹಿತದಿಂದ ಕ್ಯಾನ್ಸರ್ ಪತ್ತೆಯಷ್ಟೇ ಅಲ್ಲ, ದುರ್ಮಾಂಸವನ್ನು ಸುಟ್ಟು ನಾಶ ಮಾಡುವ ಹೊಸ ವಿಧಾನಗಳು ಬರುತ್ತಿವೆ. ರಕ್ತ ಪರಿಚಲನೆ ಇಲ್ಲದೇ  ಸೊರಗಿದ ಹೃದಯಕ್ಕೆ ಸರಾಗವಾಗಿ ರಕ್ತ ಪ್ರವಹಿಸುವಂತೆ ಮಾಡುವ ಅತ್ಯಾಧುನಿಕ ಲೇಸರ್ ವಿಧಾನಗಳು ಚಾಲ್ತಿಗೆ ಬಂದಿವೆ. ನಿಜಕ್ಕೂ ಲೇಸರ್ ಎನ್ನುವುದು ವೈದ್ಯಕೀಯ ರಂಗದಲ್ಲಿ ಅಸಾಧಾರಣ ಕ್ರಾಂತಿಯನ್ನು ತಂದ ಮಾಯಾ ಕಿರಣ. <a href="http://apkrishna.files.wordpress.com/2010/06/kidney-surgery.jpg"></a></p>
<p>ಸಹಜವಾಗಿಯೇ ರಕ್ಷಣಾ ವ್ಯವಸ್ಥೆಯಲ್ಲಿ ಲೇಸರ್ ಮುಖ್ಯ ಪಾತ್ರ ವಹಿಸುತ್ತಿದೆ. ಸಾವಿರಾರು ಕಿಮೀ ದೂರ ಕ್ರಮಿಸಿ ಗುರಿಯನ್ನು   ಕರಾರುವಾಕ್ಕಾಗಿ ಹೊಡೆದುರುಳಿಸುವ ಆಧುನಿಕ ಶಸ್ತ್ರಾಸ್ತ್ರಗಳು &#8211; ಮಿಸೈಲುಗಳು &#8211; ಯುದ್ಧದ ಬಗೆಯನ್ನೇ ಬದಲಾಯಿಸಿವೆ. ಇಂಥ ಅರ್ಜುನಲಕ್ಷ್ಯ ಪ್ರಾಪ್ತವಾಗಿರುವುದು ಲೇಸರ್‌ನಿಂದಾಗಿ.  ಲೇಸರ್ ನಿರ್ದೆಶಿತ ಅಸ್ತ್ರಗಳು ಇರಾಕಿನ ವಿರುದ್ಧ ಅಮೇರಿಕಕ್ಕೆ ಜಯ ತಂದುಕೊಟ್ಟದ್ದು ನಿಮಗೆ ನೆನಪಿರಬಹುದು. <a href="http://apkrishna.files.wordpress.com/2010/06/laser-setup-for-gravity-waves.jpg"><img class="alignleft size-medium wp-image-425" title="Laser setup for gravity waves" src="http://apkrishna.files.wordpress.com/2010/06/laser-setup-for-gravity-waves.jpg?w=300&#038;h=200" alt="" width="300" height="200" /></a></p>
<p>ಬೈಜಿಕ ಸಂಲಯನ ಕ್ರಿಯೆಯನ್ನು ಉದ್ದೀಪಿಸುವ ಯಂತ್ರಗಳಲ್ಲಿ, ಅತ್ಯಂತ ನಿಮ್ನೋಷ್ಣತೆಯನ್ನು ಸೃಷ್ಟಿಸಿ ಅಣುಗಳ ಸಂಕೀರ್ಣ ರಚನೆಯನ್ನು ಅರಿಯುವಲ್ಲಿ,  ಅನೂಹ್ಯ ಗುರುತ್ವಾಕರ್ಷಣ ಅಲೆಗಳ ಪತ್ತೆಯಲ್ಲಿ,  ಅಗಾಧ ವಿಶ್ವದಂತರಾಳಕ್ಕೆ ದೂರದರ್ಶಕಗಳನ್ನು ಅತ್ಯಂತ ನಿಖರವಾಗಿ ಗುರಿ ಹಿಡಿದು ಸುಸ್ಪಷ್ಟ  ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಲೇಸರ್ ಕಿರಣಗಳಿವೆ. ಅತ್ಯಂತ ಕ್ಷಿಪ್ರಾವಧಿಯ ಲೇಸರ್ ಕಿರಣಗಳು (ಫೆಮ್ಟೋ ಸೆಕೆಂಡ್ &#8211; ಅಂದರೆ ಸೆಕೆಂಡಿನ ಮಿಲಿಯದ ಮಿಲಿಯ ಪಾಲು ಅವಧಿಯಲ್ಲಿ ಚಿಮ್ಮುವ ಲೇಸರ್, ಒಟ್ಟೊ ಸೆಕೆಂಡ್ ಲೇಸರ್ ಇತ್ಯಾದಿ) ಹೊಸ  ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿವೆ.</p>
<p>ಪ್ರಖರ ಬೆಳಕು</p>
<p>ಲೇಸರ್ ಅಂದರೆ ಬೆಳಕಿನ ಆಕರ &#8211; ಬುಡ್ಡಿ ದೀಪ ಅಥವಾ ವಿದ್ಯುದ್ದೀಪದಂತೆ. ದೀಪಗಳಿಂದ ಉತ್ಸರ್ಜನೆಯಾಗುವ ಬಿಳಿಯ ಬೆಳಕು ಬೇರೆ ಬೇರೆ ಬಣ್ಣದ ಬೆಳಕಿನ ಅಲೆಗಳ ಮಿಶ್ರಣ. ನೇರಿಳೆಯಿಂದ ತೊಡಗಿ (೪೦೦ ನ್ಯಾನೊ ಮೀಟರ್) ಕೆಂಪಿನ ತನಕ (೮೦೦ ನ್ಯಾನೊ ಮೀಟರ್) ಏಳು ಬೇರೆ ಬೇರೆ ಬಣ್ಣದ ಅಲೆಗಳ ಮಿಶ್ರಣ. ವಿದ್ಯುದ್ದೀಪವೊಂದು ನಿರ್ದಿಷ್ಟ ಬಣ್ಣದ ಬೆಳಕನ್ನು (ಉದಾಹರಣೆಗೆ ಕೆಂಪು ಬೆಳಕು) ನೀಡಿದರೂ, ಅದು  ಪರಿಶುದ್ಧವೇನಲ್ಲ. ಅಲ್ಲಿ ಇನ್ನೂ ಬೇರೆ ಅಲೆಯುದ್ದದ ಬೆಳಕಿನ ಅಲೆಗಳು ಸೇರಿರುತ್ತವೆ. ಆದರೆ ಲೇಸರ್ ಕಿರಣಗಳು ಹಾಗಲ್ಲ. ಅವು ನಿರ್ದಿಷ್ಟ ಅಲೆಯುದ್ದದ ಬೆಳಕು. ಎಂದೇ ಇದು ನಿಜ ಅರ್ಥದಲ್ಲಿ ಏಕವರ್ಣೀ ಬೆಳಕು. ಉದಾಹರಣೆಗೆ ೬೯೪.೩ ನ್ಯಾನೋ ಮೀಟರ್ ಅಲೆಯುದ್ದದ ಕೆಂಪು ಬಣ್ಣದ ಲೇಸರ್ ಕಿರಣಗಳಲ್ಲಿರುವ ಎಲ್ಲ ಬೆಳಕಿನ ಅಲೆಗಳ ಅಲೆಯುದ್ದ ೬೯೪.೩ ನ್ಯಾನೋ ಮೀಟರ್. ಹೆಚ್ಚಿಲ್ಲ, ಕಡಿಮೆ ಇಲ್ಲ. ಅಷ್ಟೊಂದು ಪರಿಶುದ್ಧವಾದ ಅಪ್ಪಟ ಬೆಳಕು.</p>
<p>ಲೇಸರಿಗೆ ಸಾಮಾನ್ಯ ಬೆಳಕಿಗಿಂತ ಭಿನ್ನವಾದ ಅಸಾಮಾನ್ಯ ಗುಣಗಳಿವೆ. ಟಾರ್ಚಿನ ಬೆಳಕನ್ನು ನೀವು ಆಗಸಕ್ಕೆ ಗುರಿ ಹಿಡಿದದ್ದಾದರೆ, ದೂರ ಹೋದಂತೆ ಹರಡಿಕೊಳ್ಳುತ್ತ ಮಸುಕಾಗುತ್ತದೆ. ಆದರೆ ಲೇಸರ್ ಹಾಗಲ್ಲ. ಆಕರದಿಂದ ಕೂದಲೆಳೆಯಂತೆ ಚಿಮ್ಮುವ ಬೆಳಕಿನ ಕಂಬಿ ನೂರಾರು ಕಿಮೀ ದೂರಕ್ಕೆ ಸಾಗಿದರೂ ಅದು ಒಂದಿಷ್ಟೂ ಹರಡಿಕೊಳ್ಳುವುದಿಲ್ಲ.  ಮಾಧ್ಯಮದಲ್ಲಿ ಲೇಸರ್ ಕಿರಣ ಸಾಗುವಾಗ ಚದರಿಕೆ ಅತ್ಯಂತ ಕಡಿಮೆ &#8211; ಎಂದೇ ಇವು  ಹರಡಲಾರವು. ಇದು ಲೇಸರಿನದ್ದಾದ ವೈಶಿಷ್ಟ್ಯ. ಈ ಕಾರಣಕ್ಕಾಗಿಯೇ ಲೇಸರ್ ಬಳಸಿಕೊಂಡು ಭೂಮಿ -  ಚಂದ್ರರ ನಡುವಣ ದೂರವನ್ನು ಅತ್ಯಂತ ನಿಖರವಾಗಿ ಅಳೆಯುವುದಕ್ಕೆ ಸಾಧ್ಯವಾಯಿತು(೧೯೬೯).</p>
<p>ಲೇಸರ್ ಕಿರಣಗಳಲ್ಲಿರುವ ಶಕ್ತಿ ಸಾಂದ್ರತೆ ಅತ್ಯಧಿಕ. ಎಂದೇ ಇವುಗಳಲ್ಲಿ ಅತ್ಯಧಿಕ ಶಕ್ತಿ ನಿಹಿತವಾಗಿರುತ್ತದೆ. ಭೂತಗನ್ನಡಿಯಿಂದ ಸೂರ್ಯ ರಶ್ಮಿಯನ್ನು ಕೇಂದ್ರೀಕರಿಸಿ ಕಾಗದ ಉರಿಸುವ ಆಟ ಆಡಿದ್ದು ನೆನಪಿದೆಯೇ ನಿಮಗೆ? ಪ್ರಖರ ಲೇಸರ್ ಕಿರಣಗಳನ್ನು ಒಂದೆಡೆ ಕೇಂದ್ರೀಕರಿಸಿದ್ದದಾರೆ ಅಲ್ಲಿ ಅಸಾಮಾನ್ಯ ಉಷ್ಣತೆ ಸಂಜನಿಸುತ್ತದೆ. ಭುವಿಯಲ್ಲಿ ಸೂರ್ಯನ ಪ್ರತಿ ಸೃಷ್ಟಿ!</p>
<p>ವಾಸ್ತವವಾಗಿ ಲೇಸರ್ ಅನ್ನುವುದು ಒಂದು ಹೃಸ್ವ ಪದ. ಪದದ ಪ್ರತಿಯೊಂದು ಅಕ್ಷರವನ್ನು ವಿಸ್ತರಿಸಿದರೆ ಲೇಸರ್ ಸೃಷ್ಟಿಯ ಬಗ್ಗೆ  ಹೊಸ ದೃಷ್ಟಿ ಲಭ್ಯವಾಗುತ್ತದೆ. LASER – Light Amplification by Stimulated Emission of Radiation. ಕನ್ನಡದಲ್ಲಿ ಹೇಳುವುದಾದರೆ ವಿಕಿರಣದ ಉದ್ದೀಪಿತ ಉತ್ಸರ್ಜನೆಯಿಂದ ಬೆಳಕಿನ ಸಂವರ್ಧನೆ.  ಲೇಸರ್ ಕಿರಣಗಳು ಹೇಗೆ ಸೃಷ್ಟಿಯಾಗುತ್ತವೆ? ಎಂಬ ಪ್ರಶ್ನಗೆ ಉತ್ತರಿಸಲು ಒಂದಿಷ್ಟು ಭೌತವಿಜ್ಞಾನದ ವಿವರಣೆ ಅವಶ್ಯ.</p>
<p> <a href="http://apkrishna.files.wordpress.com/2010/06/6-13.gif"><img class="alignright size-full wp-image-414" title="6-13" src="http://apkrishna.files.wordpress.com/2010/06/6-13.gif?w=600" alt=""   /></a>ಹಾಗೆ ನೋಡಿದರೆ ಬೆಳಕಿನ ಸೃಷ್ಟಿಯೇ ಅದ್ಬುತ. ಬೆಳಕೆಂದರೆ ಏನು? ಬಗೆ ಬಗೆಯ ಬಣ್ಣಗಳು ಯಾಕಿವೆ? ವಸ್ತು ಬೆಳಕನ್ನು ಉತ್ಸಎಜಿಸುವುದು ಏಕೆ? ಇವೆಲ್ಲ ಮೂಲಭೂತ ಪ್ರಶ್ನೆಗಳು. ಉತ್ತರದ ಹುಡುಕಾಟದಲ್ಲಿ ಭೌತ ವಿಜ್ಞಾನ ಬೆಳೆದಿದೆ. ಇಲ್ಲಿಯ ತನಕ ನಾವು ಬಂದಿದ್ದೇವೆ. ಬೆಳಕು ಸೃಷ್ಟಿಯಾಗುವುದು ಎಲೆಕ್ಟ್ರಾನುಗಳ ನೆಗೆತದಿಂದ, ಕುಣಿತದಿಂದ! ದ್ರವ್ಯದ ಸೂಕ್ಷ್ಮ ರೂಪವಾದ ಪರಮಾಣುವಿನಲ್ಲಿ ಧನ ವಿದ್ಯುದಂಶವಿರುವ ಕೇಂದ್ರ (ನ್ಯೂಕ್ಲಿಯಸ್) ಮತ್ತು ಅದರ ಸುತ್ತ ಬೇರೆ ಬೇರೆ ದೂರಗಳಲ್ಲಿ &#8211; ಅಂದರೆ ಕಕ್ಷೆಗಳಲ್ಲಿ -  ಋಣ ವಿದ್ಯುದಂಶವಿರುವ ಎಲೆಕ್ಟ್ರಾನುಗಳು ಸುತ್ತುತ್ತಿವೆ &#8211; ಸೂರ್ಯನ ಸುತ್ತ ಪರಿಭ್ರಮಿಸುತ್ತಿರುವ ಗ್ರಹಗಳಂತೆ.  ಪ್ರತಿಯೊಂದು ಕಕ್ಷೆಯೂ ನಿರ್ದಿಷ್ಟ ಪ್ರಮಾಣದ ಶಕ್ತಿಮಟ್ಟಗಳು. ಕಕ್ಷೆಗಳಲ್ಲಿ ಎಲೆಕ್ಟ್ರಾನುಗಳು ಒಟ್ಟಾರೆ ತುಂಬಿಲ್ಲ.  ನ್ಯೂಕ್ಲಿಯಸ್ಸಿನ ಸನಿಹದ ಕಕ್ಷೆ ಅತ್ಯಂತ ಕಡಿಮೆ ಶಕ್ತಿ ಮಟ್ಟದ್ದು ಮತ್ತು ಅದರಲ್ಲಿ ಎರಡೇ ಎರಡು ಎಲೆಕ್ಟ್ರಾನುಗಳಿದ್ದರೆ, ನಂತರದ ಕಕ್ಷೆಯಲ್ಲಿ ೮ ಎಲೆಕ್ಟ್ರಾನುಗಳು, ಆಮೇಲಿನದ್ದರಲ್ಲಿ ಹದಿನೆಂಟು  ಇತ್ಯಾದಿ. ಎಲೆಕ್ಟ್ರಾನುಗಳೆಲ್ಲ ನಿಯಮಕ್ಕನುಗುಣವಾಗಿ ಬೇರೆ ಬೇರೆ ಕಕ್ಷೆಗಳಲ್ಲಿ ತುಂಬಿಕೊಂಡ ಪರಮಾಣು ಅತ್ಯಂತ ಸ್ತಿರವಾದದ್ದು. ಇದು ಪರಮಾಣುವಿನ ಸಹಜ ಸ್ಥಿತಿ (Ground State) . ಆದರೆ ಅದು ಹೀಗೆಯೇ ಇರಬೇಕಾಗಿಲ್ಲ.  ಎಲೆಕ್ಟ್ರಾನ್ ಕಡಿಮೆ ಶಕ್ತಿ ಮಟ್ಟದ ಕಕ್ಷೆಯಿಂದ ಮೇಲಿನ ಅಧಿಕ ಶಕ್ತಿ ಮಟ್ಟಕ್ಕೆ  -  ಜಾಗವಿದ್ದರೆ  ನೆಗೆಯಬಹುದು &#8211; ಶಕ್ತಿ ಹೀರಿಕೊಂಡು.  ಅಥವಾ ಮೇಲಿನ ಕಕ್ಷೆಯಿಂದ ಕೆಳಗಿನ ಕಕ್ಷೆಗೆ ಜಿಗಿಯಬಹುದು &#8211; ಶಕ್ತಿಯನ್ನು ವಿಕಿರಿಸುವ ಮೂಲಕ.</p>
<p> ಬಾಹ್ಯ ಆಕರದಿಂದ ಪರಮಾಣುವಿಗೆ ಶಕ್ತಿಯನ್ನು ಊಡಿದಾಗ,   ಎಲೆಕ್ಟ್ರಾನುಗಳು ಕೆಳಗಿನ  ಶಕ್ತಿ ಮಟ್ಟದಿಂದ ಮೇಲಿನ ಮಟ್ಟಕ್ಕೆ  ಜಿಗಿಯುತ್ತವೆ. ಇದು ಪರಮಾಣುವಿನ ಉದ್ರೇಕ ಸ್ಥಿತಿ (Excited states ) &#8211; ಸಾಮಾನ್ಯ ವ್ಯಕ್ತಿಗೆ ನಶೆ ಏರಿದ ಹಾಗೆ.  ಆದರೆ ಪರಮಾಣು ಶಾಶ್ವತವಾಗಿ ಇದೇ ಸ್ಥಿತಿಯಲ್ಲಿರಲಾರದು.  ನಿಸರ್ಗ ಸ್ಥಿರತೆಯನ್ನು ನಿರೀಕ್ಷಿಸುತ್ತದೆ. ಏರಿದವನು ಒಂದಲ್ಲ ಒಮ್ದು ದಿನ ಇಳಿಯಬೇಕು ತಾನೇ! ಎಲೆಕ್ಟ್ರಾನು ಮೇಲಿನ ಅಧಿಕ ಶಕ್ತಿ ಮಟ್ಟದಿಂದ ಕೆಳಗಿನ ಕಡಿಮೆ ಶಕ್ತಿ ಮಟ್ಟಕ್ಕೆ ಜಿಗಿದಾಗ, ಈ ಎರಡು ಶಕ್ತಿ ಮಟ್ಟಗಳ  ನಡುವಣ ಶಕ್ತಿಯ ಅಂತರ ಫೋಟಾನ್ (ಅಂದರೆ ವಿಕಿರಣ) ರೂಪದಲ್ಲಿ  ಬಿಡುಗಡೆಯಾಗುತ್ತದೆ. ಶಕ್ತಿ ಮಟ್ಟಗಳ ನಡುವಣ ಅಂತರವನ್ನು ಅವಲಂಬಿಸಿ ಉತ್ಸರ್ಜನೆಗೊಳ್ಳುವ ವಿಕಿರಣ ನೇರಳಾತೀತ (Ultraviolet )  ಅಥವಾ ಅವಕೆಂಪು (Infra Red) ಅಥವಾ ದೃಷ್ಟಿಗೆ ಗೋಚರಿಸುವ ಬೆಳಕು (Visible Light) ಆಗಿರಬಹುದು.</p>
<p> ಮೇಲಿನ ಶಕ್ತಿ ಮಟ್ಟದಲ್ಲಿರುವ ಎಲೆಕ್ಟ್ರಾನುಗಳು ಕೆಳಗಿನ ಶಕ್ತಿ ಮಟ್ಟಕ್ಕೆ ಶಕ್ತಿಯನ್ನು ವಿಕಿರಿಸುವ ಮೂಲಕ ಜಿಗಿಯುವುದು ಅನೈಚ್ಛಿಕ ಉತ್ಸರ್ಜನೆ (Spontaneous Emision) ಆದರೆ ಹೀಗೆಯೇ ಆಗಬೇಕೆಂದೆನೂ ಇಲ್ಲ ಎಂಬ ಸೂಚನೆಯನ್ನು ಆಲ್ಬರ್ಟ್ ಐನ್‌ಸ್ಟೈನ್ ನೀಡಿದರು (೧೯೧೭). ವಾಸ್ತವವಾಗಿ ಅವರ ಈ ಸೂಚನೆ ಲೇಸರ್ ಹುಡುಕಾಟಕ್ಕೆ ಕಾರಣವಾಯಿತು.</p>
<p>ಐನ್‌ಸ್ಟೈನ್ ನೀಡಿದ ಸೂಚನೆಯ ಅನುಸಾರ ದ್ರವ್ಯದ ಪರಮಾಣುಗಳು ಉದ್ರೇಕ  ಸ್ಥಿತಿಯಲ್ಲಿವೆ ಎಂದು ಭಾವಿಸೋಣ. ಇದೀಗ ಬಾಹ್ಯ ಆಕರದಿಂದ ಶಕ್ತಿಯನ್ನು ಊಡಿದ್ದಾದರೆ, ಅಧಿಕ ಶಕ್ತಿ ಮಟ್ಟದಲ್ಲಿರುವ ಎಲೆಕ್ಟ್ರಾನುಗಳು ವ್ಯತಸ್ತಗೊಂಡು ಅವು ಕಡಿಮೆ ಶಕ್ತಿಯ ಕೆಳಗಿನ ಮಟ್ಟಕ್ಕೆ  ಜಿಗಿಯುತ್ತವೆ -  ಈ ಜಿಗಿತ ಅನೈಚ್ಛಿಕವಲ್ಲ, ಬದಲಾಗಿ ಉದ್ಧೀಪಿತವಾದದ್ದು (Stimulated Emission) . ಉದ್ದೀಪನೆಯಿಂದ ಉತ್ಸರ್ಜನೆಗೊಂಡ ಫೊಟಾನುಗಳು ಇನ್ನು ಹಲವು ಎಲೆಕ್ಟ್ರಾನುಗಳ ಜಿಗಿತವನ್ನು ಉದ್ದೀಪಿಸುತ್ತವೆ &#8211; ಮತ್ತಷ್ಟು ಫೋಟಾನುಗಳ ಸೃಷ್ಟಿಯಾಗುತ್ತವೆ. ಎಲ್ಲ ಫೋಟಾನುಗಳು ಒಂದೇ ದಿಶೆಯಲ್ಲಿ ಸಾಗುತ್ತ ಅಲ್ಲಿ ಮೂಡುತ್ತದೆ ಏಕವರ್ಣೀ ಪ್ರಖರ ಬೆಳಕು. ಆ ಬೆಳಕೇ ಲೇಸರ್.  ಐನ್‌ಸ್ಟೈನ್ ಪರಿಕಲ್ಪನೆ ಲೇಸರ್ ಸಾಧ್ಯತೆಯನ್ನು ಸೂಚಿಸಿದರೂ ಕಾಲ ಪಕ್ವವಾಗಿರಲಿಲ್ಲ. ಲೇಸರ್ ಕನಸು ನನಸಾಗಲು  ಮತ್ತೆ ಮೂರು ದಶಕಗಳು ಬೇಕಾದುವು.</p>
<p>೧೯೨೮ರಲ್ಲಿ ಜರ್ಮನಿಯ ರುಡಾಲ್ಫ್ ಲಾಡೆನ್‌ಬರ್ಗ್ (೧೮೧೨ -೧೯೫೨) ಐನ್‌ಸ್ಟೈನರ ಸೈದ್ಧಾಂತಿಕ ಪರಿಕಲ್ಪನೆಯನ್ನು ಪ್ರಾಯೋಗಿಕವಾಗಿ ರುಜುವಾತು ಮಾಡಿದರೆ, ಸೂಕ್ಷ್ಮ ಅಲೆಗಳನ್ನು ಉದ್ದೀಪಿತ ವಿಕಿರಣದಿಂದ ಇನ್ನಷ್ಟು ಸಂವರ್ಧಿಸಿ ಪ್ರಖರಗೊಳಿಸಬಹುದೆಂದು ರಷ್ಯಾದ ವೆಲೆಂಟೈನ್ ಫ್ಯಾಬ್ರಿಕಾಂಟ್ ವಿವರಿಸಿದರು (೧೯೩೯). ನಿಧಾನವಾಗಿ ಲೇಸರ್ ಎಂಬ ಹೊಸ ಬಗೆಯ ಬೆಳಕು ವಾಸ್ತವವಾಗುವ ದಿನಗಳು ಹತ್ತಿರವಾದುವು.</p>
<p> ಬಂತು ಲೇಸರ್ </p>
<p>ಚಾರ್ಲ್ಸ್‌ಟೌನ್ಸ್ (೧೯೧೫ &#8211; ) ಅಮೇರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಹಿರಿಯ ವಿಜ್ಞಾನಿ. ಡ್ಯೂಕ್‌ವಿಶ್ವವಿದ್ಯಾಲಯ ಮತ್ತು ಕಾಲ್ಟೆಕ್‌ನಲ್ಲಿ ಅಧ್ಯಯನ ಮುಗಿಸಿ, ಪ್ರತಿಷ್ಠಿತ ಬೆಲ್ ಸಂಶೋಧನಾಲಯದಲ್ಲಿ ವೃತ್ತಿ ಜೀವನ ಆರಂಭಿಸಿದ ಟೌನ್ಸ್, ಎರಡನೇ ಮಹಾಯುದ್ದ ಕಾಲದಲ್ಲಿ ರೇಡಾರ್ ನಿಯಂತ್ರಿತ ಬಾಂಬುಗಳ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದರು. ಸೂಕ್ಷ್ಮತರಂಗ ಅಥವಾ ಮೈಕ್ರೋವೇವ್ ರೋಹಿತ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿದ್ದ ಅವರು ಪರಿಶುದ್ಧ ಮೈಕ್ರೋವೇವ್ ಪಡೆಯುವುದಕ್ಕೆ ಬಹಳಷ್ಟು ಹೆಣಗಾಡುತ್ತಿದ್ದ ಸಂದರ್ಭ.   ತನ್ನ ಬಾವ (ತಂಗಿಯ ಗಂಡ) ಮತ್ತು ಸಹದ್ಯೋಗಿಯೂ ಆದ ಅರ್ಥರ್ ಶ್ಚಾವ್ಲೋ (೧೯೨೧-೧೯೯೯) ಜತೆ ವಾಷಿಂಗ್ಟನ್ನಿನ ಸಭೆಗೆ ಹೋದವರು ಹೋಟೇಲಿನಲ್ಲಿ ಉಳಿದುಕೊಂಡರು. ಬೆಳಗ್ಗೆ ಬೇಗನೆ ಎಚ್ಚರಗೊಂಡ ಅವರು ಅಲ್ಲೇ ಹತ್ತಿರವಿದ್ದ ಫ್ರಾಂಕ್ಲಿನ್ ಪಾರ್ಕಿನಲ್ಲಿ  ಸುತ್ತಾಡುತ್ತಿದ್ದಾಗ ಹಟಾತ್ತನೆ ಅವರಿಗೆ ಸ್ಪುರಿಸಿತು ಸಮಸ್ಯೆಗೊಂದು ಪರಿಹಾರ. ಅವರೇ ಹೇಳುವ ಹಾಗೆ</p>
<blockquote>
<p style="text-align:left;">ಬೆಳಗ್ಗಿನ ತಂಪಾದ ಗಾಳಿ ಪ್ರಾಯಶ: ನನ್ನ ಸಮಸ್ಯೆಗೆ ದಾರಿ ತೋರಿಸಿತು. ನಾನು ಕೆಲವೇ ನಿಮಿಷಗಳಲ್ಲಿ ಏನೆಲ್ಲ ಅಗತ್ಯವೆನ್ನುವ ಬಗ್ಗೆ ಟಿಪ್ಪಣಿ ಬರೆದೆ. <a href="http://apkrishna.files.wordpress.com/2010/06/charles-townes-6587.jpg"><img class="size-full wp-image-415 aligncenter" title="Charles Townes 6587" src="http://apkrishna.files.wordpress.com/2010/06/charles-townes-6587.jpg?w=600" alt=""   /></a></p>
</blockquote>
<p>ಎರಡು ವರ್ಷಗಳ ಅಹರ್ನಿಶಿ ಪ್ರಯತ್ನದಲ್ಲಿ ಟೌನ್ಸ್ ಉಪಕರಣವೊಂದನ್ನು ನಿರ್ಮಿಸಿಯೇ ಬಿಟ್ಟರು. ಅದರಲ್ಲಿ ಅವರು ಬಳಸಿದ್ದು ಅಮೋನಿಯಾ ಅನಿಲವನ್ನು. ಅದು ನೀಡಿದ್ದು ೧.೨೫ ಸೆಂಟಿಮೀಟರ್ ಅಲೆಯುದ್ದದ ಪರಿಶುದ್ಧ ಮೈಕ್ರೋವೇವ್ ವಿಕಿರಣವನ್ನು. ಚಾರ್ಲ್ಸ್‌ಟೌನ್ಸ್ ಆ ವಿಕಿರಣವನ್ನು   ಮೇಸರ್ ಎಂದು ಕರೆದರು. ನಂತರದ ದಿನಗಳಲ್ಲಿ ಬೇರೆ ಸಂಶೋಧನಾಲಯಗಳು ಇನ್ನೂ ಹಲವು ಬಗೆಗಳಲ್ಲಿ ಮೇಸರ್ ಕಿರಣಗಳನ್ನು ಪಡೆಯುವಲ್ಲಿ ಯಶಸ್ವಿಯಾದುವು. </p>
<p> ಆದರೆ ಚಾರ್ಲ್ಸ್‌ಟೌನ್ಸ್ ಅವರಿಗೆ ತೃಪ್ತಿ ಇರಲಿಲ್ಲ. ಅಗೋಚರ ವಿಕಿರಣಕ್ಕಿಂತ ಗೋಚರ ಏಕವರ್ಣೀ ಪ್ರಖರ ಬೆಳಕನ್ನು ಪಡೆಯುವುದು ಅವರ ಗುರಿಯಾಗಿತ್ತು.  ಅಂಥದೊಂದು ಸಾಧ್ಯತೆಯನ್ನು ಚರ್ಚಿಸುವ ಮಹತ್ತರ ಸಂಶೋಧನ ಲೇಖನವನ್ನು  ಶ್ಚಾವ್ಲೊ ಜತೆ ಪ್ರತಿಷ್ಠಿತ   ಸಂಶೋಧನ ಪತ್ರಿಕೆಯಾದ ಫಿಸಿಕಲ್ ರಿವ್ಯೂದಲ್ಲಿ ಪ್ರಕಟಿಸಿದರು(೧೯೫೮). ಈ ಲೇಖನ ಲೇಸರ್ ಕಿರಣಗಳನ್ನು ಸೃಷ್ಟಿಸುವ ತುರುಸಿನ ಸ್ಪರ್ಧೆಗೆ ಕಾರಣವಾಯಿತು.</p>
<p> ಇತ್ತ ಸ್ವಯಂ ಟೌನ್ಸ್ ಮತ್ತು ಶ್ಚಾವ್ಲೊ ಲೇಸರ್ ಉಪಕರಣದ ನಿರ್ಮಾಣದಲ್ಲಿ ತೊಡಗಿದ್ದಾಗ, ಅತ್ತ ಹ್ಯೂಗ್ಸ್ ಸಂಶೋಧನಾಲಯದಲ್ಲಿ ಅಜ್ಞಾತ ತರುಣ ಎಂಜನೀಯರ್ ಥಿಯೋಡರ್ ಮೈಮಾನ್ ತಾನು  ಲೇಸರ್ ಉಪಕರಣವನ್ನು ನಿರ್ಮಿಸುವಲ್ಲಿ ಯಶಸ್ಸು ಪಡೆದ್ದೇನೆಂದು  ಘೋಷಿಸಿ ಅಚ್ಚರಿ ಹುಟ್ಟಿಸಿದ.   ಮೈಮಾನ್ ಸಾಮಾನ್ಯನೇನೂ ಅಲ್ಲ. ಕೊಲರೆಡೋ ವಿವಿಯಿಂದ ಎಂಜನೀಯರಿಂಗ್ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಂತರ ಸಾಗಿದ್ದು ಸ್ಟ್ರಾನ್ಫೋರ್ಡ್ ವಿಶ್ವವಿದ್ಯಾಲಯಕ್ಕೆ. ನೊಬೆಲ್ ಪ್ರಶಸ್ತಿ ವಿಜೇತ ಲ್ಯಾಂಬ್ ಮಾರ್ಗದರ್ಶನದಲ್ಲಿ ಹೀಲಿಯಮ್ ರೋಹಿತದ ಕುರಿತು ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿ ಪಡೆದ ಪ್ರತಿಭಾವಂತ.  ವೈಮಾನಿಕ ಸಂಶೋಧನಾ ರಂಗದ ದಿಗ್ಗಜ ಹ್ಯೂಗ್ಸ್ ಸಂಶೋಧನಾಲಯ ಸೇರಿ ಅಲ್ಲಿ ಮೈಕ್ರೋವೇವ್ಸ್ ಮತ್ತು ರೆಡಾರ್  ಬಗ್ಗೆ ಸಂಶೋಧನೆಯಲ್ಲಿ ನಿರತನಾಗಿದ್ದಾಗ, ಟೌನ್ಸ್ ಮತ್ತು ಶ್ಚಾವೋ ಲೇಖನ  ಮೈಮಾನ್ ಗಮನ ಸೆಳೆಯಿತು.  ಪ್ರೇರಿತನಾಗಿ ಲೇಸರ್ ಸೃಷ್ಟಿಗೆ ತೊಡಗಿದ.</p>
<p>ಮೂರು ತಿಂಗಳುಗಳ ಅಹರ್ನಿಶಿ ಪ್ರಯತ್ನದಲ್ಲಿ ಮೈಮಾನ್ ರೂಪಿಸಿದ ಅಂಗೈ ಗಾತ್ರದ ಪುಟ್ಟ ಉಪಕರಣವನ್ನು. ಉಪಕರಣದೊಳಗೆ ಆರು ಸೆಂಟಿಮೀಟರ್ ಉದ್ದದ ನಸುಕೆಂಪು  ಬಣ್ಣದ ರೂಬಿ ಎಂಬ ಹರಳು. ಅದನ್ನಾವರಿಸಿತ್ತು ಸುರುಳಿಯಾಕಾರದ ಕ್ಸೆನಾನ್ ವಿದ್ಯುದ್ದೀಪ. ಗುಂಡಿ ಒತ್ತಿದೊಡನೆ  ಪ್ರಖರ ಬೆಳಕು ದೀಪದಿಂದ ಸೂಸುತ್ತಿತ್ತು. ತುಸು ಕ್ಷಣದ ನಂತರ  ರೂಬಿ ಹರಳಿನ ಒಂದು ತುದಿಯಿಂದ ಕೆಂಪು ಬಣ್ಣದ ಬೆಳಕು ಚಿಮ್ಮಿತು. ಕೂದಲೆಳೆಯಂತೆ ನೇರವಾಗಿ ಸಾಗುತ್ತಿದ್ದ, ೬೯೪.೩ ನ್ಯಾನೋ ಮೀಟರ್ ಅಲೆಯುದ್ದದ ಅಪ್ಪಟ ಕೆಂಪು ಬಣ್ಣದ ಬೆಳಕಿನ ಸಲಾಕೆ.   ಪ್ರಪಂಚದ ಪ್ರಪ್ರಥಮ ಲೇಸರ್ ಕಿರಣ ಅದಾಗಿತ್ತು. ತಡಮಾಡಲಿಲ್ಲ.  ರೂಬಿ ಹರಳಿನಿಂದ ಲೇಸರ್ ಸೃಷ್ಟಿಸಿದ ಯಶಸ್ವೀ ಪ್ರಯತ್ನವನ್ನು ಸಂಶೋಧನ ಲೇಖನವಾಗಿ ಫಿಸಿಕಲ್‌ರಿವ್ಯೂಗೆ ಮೈಮಾನ್ ಕಳುಹಿಸಿದರು. ಅದಾಗಲೇ ಮೇಸರ್ ಕುರಿತ ನೂರಾರು ಲೇಖನಗಳು ಫಿಸಿಕಲ್‌ರಿವ್ಯೂ ಪ್ರಕಟಿಸಿತ್ತು. ಅದೇ ಸಾಲಿಗೆ  ಇಲ್ಲೊಂದು ಲೇಖನವಿದೆ ಎಂದು ತಿಳಿದ ಸಂಪಾದಕ ಮಹಾಶಯ, ಲೇಖನವನ್ನು  ತಣ್ಣಗೆ ತಿರಸ್ಕರಿಸಿಬಿಟ್ಟ. ಮೈಮಾನ್ ಧೃತಿಗೆಡಲಿಲ್ಲ.  ಮುನ್ನೂರು ಪದಗಳ ಕಿರು ಟಿಪ್ಪಣಿಯಾಗಿ ಇಡೀ ಲೇಖನವನ್ನು ಭಟ್ಟಿ ಇಳಿಸಿ ನೇಚರ್ ಪತ್ರಿಕೆಗೆ ಕಳುಹಿಸಿದರು. ಅದು ೧೯೬೦, ಅಗಸ್ಟ್ ತಿಂಗಳಿನಲ್ಲಿ ಪ್ರಕಟವಾಯಿತು.</p>
<p> ಮೈಮಾನ್ ಲೇಸರ್ ಕಿರಣಗಳನ್ನು ಸೃಷ್ಟಿಸಿದ್ದು ಘನ ದ್ರವ್ಯವಾದ ರೂಬಿಯಲ್ಲಿ. ಆರು ತಿಂಗಳೊಳಗೆ ಬೆಲ್ ಸಂಶೋಧನಾಲಯದ ವಿಜ್ಞಾನಿಗಳಾದ ಇರಾನ್ ಮೂಲದ ಆಲಿಜವಾನ್ (೧೯೨೯-) , ವಿಲಿಯಮ್ ಬೆನೆಟ್ (೧೯೩೦ &#8211; ೨೦೦೮) ಮತ್ತು ಡೊನಾಲ್ಡ್ ಹ್ಯಾರಿಯೆಟ್ ಹೀಲಿಯಮ್ ಮತ್ತು ನಿಯಾನ್ ಅನಿಲ ಮಿಶ್ರಣದಿಂದ ಲೇಸರ್ ಕಿರಣಗಳನ್ನು ಸೃಷ್ಟಿಸಿದರು. ನಂತರ ಬಂತು ಕಾರ್ಬನ್ ಡೈಆಕ್ಸೈಡ್ ಲೇಸರ್.  ವೈದ್ಯಕೀಯ ರಂಗದಲ್ಲಿ ವ್ಯಾಪಕ ಬಳಕೆಯಲ್ಲಿರುವ ಈ ಲೇಸರ್ ಕಿರಣಗಳನ್ನು ಸೃಷ್ಟಿಸಿದವರು ಕುಮಾರ್ ಪಟೇಲ್ (೧೯೨೮ -). ಇವರು ಗುಜರಾತಿನ ಬಾರಾಮತಿಯಲ್ಲಿ ಜನಿಸಿ, ಪೂಣೆಯಲ್ಲಿ ಎಂಜನೀಯರಿಂಗ್ ಅಧ್ಯಯನ ಮಾಡಿ, ಅಮೇರಿಕದ ಸ್ಟ್ರಾನ್ಫೋರ್ಡಿನಲ್ಲಿ ಎಂಜನೀಯರಿಂಗ್ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳನ್ನು ಗಳಿಸಿ, ಬೆಲ್ ಸಂಶೋಧನಾಲಯದ ಮೆಟೀರಿಯಲ್ ಸಂಶೋಧನಾಲಯದ ನಿರ್ದೇಶಕರಾದ ಪ್ರತಿಭಾವಂತ ವಿಜ್ಞಾನಿ.</p>
<p><a href="http://apkrishna.files.wordpress.com/2010/06/miman-with-his-ruby-laser.jpg"><img class="alignleft size-full wp-image-416" title="Miman with his Ruby Laser" src="http://apkrishna.files.wordpress.com/2010/06/miman-with-his-ruby-laser.jpg?w=600" alt=""   /></a></p>
<p>ಈ ಕಾಲಕ್ಕೆ ಘನಸ್ಥಿತಿ ಭೌತ ವಿಜ್ಞಾನ (Solid State Physics)  ಬಹಳಷ್ಟು ಮುಂದುವರೆದಿತ್ತು. ಅರೆವಾಹಕಗಳಾದ ಸಿಲಿಕಾನ್, ಜರ್ಮೇನಿಯಮ್ ಮತ್ತು ಇನ್ನಿತರ ಹಲವು ರಾಸಾಯನಿಕಗಳ ಅಧ್ಯಯನಗಳು ಅಂತಿಮವಾಗಿ ಸೆಮಿಕಂಡಕ್ಟರ್ ಲೇಸರ್ ಸೃಷ್ಟಿಗೆ ಕಾರಣವಾಯಿತು.  ಅಮೇರಿಕದ ಜನರಲ್ ಇಲೆಕ್ಟ್ರಿಕಲ್ ಕಂಪೆನಿಯ ರಾಬರ್ಟ್ ಹಾಲ್ (೧೯೧೯ -) ಗ್ಯಾಲಿಯಮ್ ಆರ್ಸೆನೈಡ್ ಎಂಬ ರಾಸಾಯನಿಕದಿಂದ ಲೇಸರ್ ಕಿರಣಗಳನ್ನು ಸೃಷ್ಟಿಸಿದರು (೧೯೬೨). ಗಾಜಿನ ನಳಿಗೆಯ ಕರಕರೆಗಳಿಲ್ಲದೇ ಅತ್ಯಂತ ಸುಲಭದಲ್ಲಿ ಲೇಸರ್ ಕಿರಣಗಳನ್ನು ಪಡೆವ ಈ ವಿಧಾನ  ಲೇಸರ್ ತಂತ್ರಜ್ಞಾನದ ಅಭೂತಪೂರ್ವ ಪ್ರವರ್ಧನೆಗೆ ಕಾರಣವಾಯಿತು. </p>
<p>ಲೇಸರ್ ಸಂಲಯನ</p>
<p>ಲೇಸರ್ ಆಧಾರಿತ ಸಂಲಯನ ಕ್ರಿಯಾಕಾರಿಯ (Fusion Reactor) ಬಗ್ಗೆ ಇಂದು ಸಂಶೋಧನೆಗಳು ನಡೆಯುತ್ತಿವೆ. ಹೈಡ್ರೋಜನ್ ಪರಮಾಣುಗಳ ಸಂಲಯನ ಕ್ರಿಯೆ ಸೂರ್ಯ ಸೇರಿದಂತೆ ಎಲ್ಲ ನಕ್ಷತ್ರಗಳ ಶಕ್ತಿಯ ಗುಟ್ಟು. ಅಲ್ಲಿ ಪ್ರತಿ ಸೆಕುಂಡಿನಲ್ಲಿ ಬಿಲಿಯಗಟ್ಟಲೆ ಹೈಡ್ರೋಜನ್ ಪರಮಾಣು ಬೀಜಗಳು ಸಂಲಯನಗೊಳ್ಳುತ್ತಿವೆ ಮತ್ತು ಅಗಾಧ ಪ್ರಮಾಣದಲ್ಲಿ ಶಕ್ತಿ ಬಿಡುಗಡೆಯಾಗುತ್ತಿದೆ. ಹಾಗಿದ್ದರೆ ಹೈಡ್ರೋಜನ್ ಸಂಲಯನ ಕ್ರಿಯೆಯಿಂದ ಶಕ್ತಿ ಬಸಿಯುವ ಮತ್ತು ವಿದ್ಯುಚ್ಛಕ್ತಿ ಉತ್ಪಾದಿಸುವ ಸಂಲಯನ ಕ್ರಿಯಾಕಾರಿಯನ್ನು ಸ್ಥಾಪಿಸಿದರೆ ಹೇಗೆ? ಏಕೆಂದರೆ ಗಾಳಿಯಲ್ಲಿ, ನೀರಲ್ಲಿ ಸಾಕಷ್ಟು ಹೈಡ್ರೋಜನ್ ಇದೆಯಲ್ಲ! ಇಂಥದೊಂದು ಸ್ಥಾವರಕ್ಕೆ ಇಂಧನದ ಕೊರತೆ ಇರದು.</p>
<p>ಆದರೆ ಸಾಮಾನ್ಯ ಉಷ್ಣತೆಯಲ್ಲಿ ಅಂದರೆ ನೂರಿನ್ನೂರು ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ -ಹೈಡ್ರೋಜನ್ ನ್ಯೂಕ್ಲಿಯಸ್ಸುಗಳು ಪರಸ್ಪರ ಒಟ್ಟಾಗಲಾರವು. ಏಕೆಂದರೆ ಅವುಗಳ ನಡುವೆ ಅತ್ಯಂತ ಪ್ರಬಲ ವಿಕರ್ಷಣೆ (Repulsion) ಇರುತ್ತದೆ.  ವಿಕರ್ಷಣೆಯನ್ನೂ ಮೀರಿ ಅವು ಪರಸ್ಪರ ಸಂಲಯನ ಹೊಂದಬೇಕಾದರೆ ಅವುಗಳಿಗೆ ಶಕ್ತಿ ನೀಡಬೇಕಾಗುತ್ತದೆ. ಈ ಶಕ್ತಿ ಲಭ್ಯವಾಗಲು ಲಕ್ಷ ಡಿಗ್ರಿಗಳನ್ನು ಮೀರಿದ ಉಷ್ಣತೆ  ಅಗತ್ಯ. ನಕ್ಷತ್ರ ಗರ್ಭದಲ್ಲಿದೆ ಇಷ್ಟೊಂದು ಅಗಾಧ ಉಷ್ಣತೆ. ಅಲ್ಲಿ ಅಷ್ಟೊಂದು ಉಷ್ಣತೆ ಸಂಜನಿಸಿದ್ದು ಹೇಗೆ? ಅದೊಂದು ನಕ್ಷತ್ರ ವಿಕಾಸದ ಕಥೆ. ಪ್ರಸ್ತುತ ಆ ಕಥೆ ಇಲ್ಲಿ ಅಪ್ರಸ್ತುತ!<a href="http://apkrishna.files.wordpress.com/2010/06/laser_hi.jpg"><img class="alignleft size-medium wp-image-426" title="laser_hi" src="http://apkrishna.files.wordpress.com/2010/06/laser_hi.jpg?w=300&#038;h=269" alt="" width="300" height="269" /></a></p>
<p>ಅಮೇರಿಕದ ಲಾರೆನ್ಸ್ ಲಿವರ್‌ಮೂರ್ ಸಂಶೋಧನಾಲಯದಲ್ಲಿ ನ್ಯಾಷನಲ್ ಇಗ್ನೀಷನ್ ಫೆಸಿಲಿಟಿ (NIF ) ಎಂಬ ದೈತ್ಯ ಯಂತ್ರವಿದೆ. ಅಲ್ಲಿ ಕಳೆದೊಂದು ದಶಕದಿಂದ ಲೇಸರ್ ಪ್ರೇರಿತ ಸಂಲಯನಕ್ಕಾಗಿ  ಪ್ರಯತ್ನಗಳು  ನಡೆಯುತ್ತಿವೆ. ೧೯೨ ಬೇರೆ ಬೇರೆ ನಳಿಗೆಗಳಿಂದ ಹೊಮ್ಮುವ ಅತ್ಯಂತ  ಪ್ರಖರ ಲೇಸರ್ ಕಿರಣಗಳನ್ನೆಲ್ಲ ಒಂದೆಡೆ ಕೇಂದ್ರೀಕರಿಸಿ ನಕ್ಷತ್ರ  ಸದೃಶ ಸನ್ನಿವೇಶವನ್ನು ಸೃಷ್ಟಿಸಿ, ಅಲ್ಲಿರಿಸಿದ   ಡ್ಯುಟೀರಿಯಮ್- ಟ್ರೀಷಿಯಮ್ (ಹೈಡ್ರೋಜನ್ ಪರಮಾಣುಗಳ ಎರಡು ಬಗೆಗಳು) ಪರಮಾಣುಗಳ ನಿರಂತರ ಸಂಲಯನ ಕ್ರಿಯೆಯನ್ನು ಉಜ್ಜೀವಿಸುವ ಪ್ರಯತ್ನಗಳು ನಡೆಯುತ್ತಿವೆ. ಚಿಕ್ಕ ಲೇಸರ್ ಟಾರ್ಚಿನ ಲೇಸರ್ ಕಿರಣದ ಸಾಮರ್ಥ್ಯ ಮಿಲಿವ್ಯಾಟ್‌ಗಳಷ್ಟಿದ್ದರೆ, ಸಂಲಯನ ಕ್ರಿಯಾಕಾರಿಯಲ್ಲಿ ಬಳಸುವ  ಲೇಸರ್ ಕಿರಣಗಳು ಪೆಟಾ ವ್ಯಾಟ್ &#8211; ಅಂದರೆ ಸಾಮಾನ್ಯ ಬಲ್ಬಿಗಿಂತ ೧೦ ಮಿಲಿಯ ಮಿಲಿಯ ಪಟ್ಟು ಅಧಿಕ ಶಕ್ತಿ ಅಥವಾ ಪ್ರಖರ. ಸುದ್ದಿ ಬಂದಂತೆ ಕಳೆದ ಜನವರಿಯಲ್ಲಿ ಪ್ರಯೋಗಗಳು ಅಂಶಿಕವಾಗಿ ಯಶಸ್ವಿಯಾಗಿವೆ.  ಇದೇ ಬಗೆಯ ಪ್ರಯೋಗ ಸಾಹಸ ಫ್ರಾನ್ಸಿನಲ್ಲಿ, ಜಪಾನಿನಲ್ಲಿಯೂ  ನಡೆಯುತ್ತಿವೆ. <a href="http://apkrishna.files.wordpress.com/2010/06/laser-fusion.jpg"><img class="size-large wp-image-417 alignleft" title="Laser fusion" src="http://apkrishna.files.wordpress.com/2010/06/laser-fusion.jpg?w=234&#038;h=273" alt="" width="234" height="273" /></a></p>
<p>ಲೇಸರ್ ಕಿರಣಗಳ ಕೇಂದ್ರೀಕರಣದಿಂದ ಮೂವತ್ತು ಲಕ್ಷ ಡಿಗ್ರಿಗಳಷ್ಟು ಊಹಾತೀತ ಉಷ್ಣತೆ ಪಡೆಯುವಲ್ಲಿ ಈ ಪ್ರಯೋಗಗಳು ಯಶಸ್ವಿಯಾಗಿವೆ. ಆದರೆ ಅಗಾಧ ಉಷ್ಣತೆಯಲ್ಲಿರುವ  ಹೈಡ್ರೋಜನ್ ಪ್ಲಾಸ್ಮಾವನ್ನು ಹಿಡಿದಿಡುವುದೇ ಮುಂದಿರುವ ದೊಡ್ದ ಸವಾಲು.  ಯಾವುದೇ ಲೋಹದ ಧಾರಕವೂ ನಕ್ಷತ್ರ ಗರ್ಭದ ಉಷ್ಣತೆಯನ್ನು ತಾಳಿಕೊಳ್ಳದು. ಪ್ರಬಲ ಕಾಂತ ಕ್ಷೇತ್ರವನ್ನು ಸೃಷ್ಟಿಸಿ ಹೈಡ್ರೋಜನ್ ಪ್ಲಾಸ್ಮಾವನ್ನು ನಿಯಂತ್ರಿಸುವತ್ತ ಗಮನ ಹರಿಸಿದ್ದಾರೆ. ಮುಂದಿನ ಒಂದೆರಡು ದಶಕಗಳಲ್ಲಿ ಲೇಸರ್ ಪ್ರೇರಿತ ಹೈಡ್ರೋಜನ್ ಸಂಲಯನದಿಂದ ವಿದ್ಯುಚ್ಛಕ್ತಿಯ ನಿರಂತರ ಉತ್ಪಾದನೆಯ ತಂತ್ರಜ್ಞಾನ ಯಶಸ್ವಿಯಾಗುವ ಆಶಾವಾದ ವಿಜ್ಞಾನಿಗಳಿಗಿದೆ. ಪ್ರಾಯಶ: ಅಂದು ಆಧುನಿಕ ಜಗತ್ತನ್ನು ಕಾಡುತ್ತಿರುವ ಶಕ್ತಿ ಸಮಸ್ಯೆಗೊಂದು ಶಾಶ್ವತ ಪರಿಹಾರ ಲಭ್ಯವಾಗುತ್ತದೆ. ಲೇಸರಿನ ಹಿರಿಮೆಗೆ ಅಮೂಲ್ಯ ಗರಿಮೆಯಾಗುತ್ತದೆ.</p>
<br />  <a rel="nofollow" href="http://feeds.wordpress.com/1.0/gocomments/apkrishna.wordpress.com/409/"><img alt="" border="0" src="http://feeds.wordpress.com/1.0/comments/apkrishna.wordpress.com/409/" /></a> <a rel="nofollow" href="http://feeds.wordpress.com/1.0/godelicious/apkrishna.wordpress.com/409/"><img alt="" border="0" src="http://feeds.wordpress.com/1.0/delicious/apkrishna.wordpress.com/409/" /></a> <a rel="nofollow" href="http://feeds.wordpress.com/1.0/gofacebook/apkrishna.wordpress.com/409/"><img alt="" border="0" src="http://feeds.wordpress.com/1.0/facebook/apkrishna.wordpress.com/409/" /></a> <a rel="nofollow" href="http://feeds.wordpress.com/1.0/gotwitter/apkrishna.wordpress.com/409/"><img alt="" border="0" src="http://feeds.wordpress.com/1.0/twitter/apkrishna.wordpress.com/409/" /></a> <a rel="nofollow" href="http://feeds.wordpress.com/1.0/gostumble/apkrishna.wordpress.com/409/"><img alt="" border="0" src="http://feeds.wordpress.com/1.0/stumble/apkrishna.wordpress.com/409/" /></a> <a rel="nofollow" href="http://feeds.wordpress.com/1.0/godigg/apkrishna.wordpress.com/409/"><img alt="" border="0" src="http://feeds.wordpress.com/1.0/digg/apkrishna.wordpress.com/409/" /></a> <a rel="nofollow" href="http://feeds.wordpress.com/1.0/goreddit/apkrishna.wordpress.com/409/"><img alt="" border="0" src="http://feeds.wordpress.com/1.0/reddit/apkrishna.wordpress.com/409/" /></a> <img alt="" border="0" src="http://stats.wordpress.com/b.gif?host=apkrishna.wordpress.com&amp;blog=4125552&amp;post=409&amp;subd=apkrishna&amp;ref=&amp;feed=1" width="1" height="1" />]]></content:encoded>
			<wfw:commentRss>http://apkrishna.wordpress.com/2010/06/27/%e0%b2%b2%e0%b3%87%e0%b2%b8%e0%b2%b0%e0%b3%8d-%e0%b2%95%e0%b2%bf%e0%b2%b0%e0%b2%a3%e0%b2%a6-%e0%b2%9a%e0%b2%bf%e0%b2%a8%e0%b3%8d%e0%b2%a8%e0%b2%a6-%e0%b2%b9%e0%b2%ac%e0%b3%8d%e0%b2%ac/feed/</wfw:commentRss>
		<slash:comments>2</slash:comments>
	
		<media:content url="http://1.gravatar.com/avatar/d018f563e5183fbd7d5a8c8a5ba02dfc?s=96&#38;d=identicon&#38;r=G" medium="image">
			<media:title type="html">apkrishna</media:title>
		</media:content>

		<media:content url="http://apkrishna.files.wordpress.com/2010/06/military_laser_experiment.jpg?w=1024" medium="image">
			<media:title type="html">Military_laser_experiment</media:title>
		</media:content>

		<media:content url="http://apkrishna.files.wordpress.com/2010/06/laser-show.jpg?w=300" medium="image">
			<media:title type="html">laser show</media:title>
		</media:content>

		<media:content url="http://apkrishna.files.wordpress.com/2010/06/kidney-surgery1.jpg?w=1024" medium="image">
			<media:title type="html">kidney surgery</media:title>
		</media:content>

		<media:content url="http://apkrishna.files.wordpress.com/2010/06/laser-setup-for-gravity-waves.jpg?w=300" medium="image">
			<media:title type="html">Laser setup for gravity waves</media:title>
		</media:content>

		<media:content url="http://apkrishna.files.wordpress.com/2010/06/6-13.gif" medium="image">
			<media:title type="html">6-13</media:title>
		</media:content>

		<media:content url="http://apkrishna.files.wordpress.com/2010/06/charles-townes-6587.jpg" medium="image">
			<media:title type="html">Charles Townes 6587</media:title>
		</media:content>

		<media:content url="http://apkrishna.files.wordpress.com/2010/06/miman-with-his-ruby-laser.jpg" medium="image">
			<media:title type="html">Miman with his Ruby Laser</media:title>
		</media:content>

		<media:content url="http://apkrishna.files.wordpress.com/2010/06/laser_hi.jpg?w=300" medium="image">
			<media:title type="html">laser_hi</media:title>
		</media:content>

		<media:content url="http://apkrishna.files.wordpress.com/2010/06/laser-fusion.jpg?w=589" medium="image">
			<media:title type="html">Laser fusion</media:title>
		</media:content>
	</item>
	</channel>
</rss>
